Friday 13 December 2013

ಗಿಳಿ ಬಾಗಿಲು (ಹವ್ಯಕ ಬ್ಲಾಗ್ )-ಅಲ್ಪ ಒಳುದು ಹಾಳು ಹಲಾಕು ಆಯಿದು



“ಅಡಿಗ್ಗೆಯೋವು ಅಲ್ಪ ಮಾಡಿ ಹಾಕಿದ್ದವು . ಅಲ್ಪ ಒಳುದು ಹಾಳು ಹಲಾಕು ಆಯಿದು ಹೇಳುವ ಮಾತಿನ ನಮ್ಮ ಭಾಷೆಲಿ ಸಾಮನ್ಯಾವಾಗಿ ಉಪಯೋಗಿಸುತ್ತವು.ಅನುಪತ್ಯ ಮಾಡಿ ಅಪ್ಪಗ ಕೆಲವು ಸರ್ತಿ ಅಡಿಗೆಯೋರ (ಇದು ಸತ್ಯಣ್ಣನ ಬಗ್ಗೆ ಅಲ್ಲ.ಸತ್ಯಣ್ಣನ ಅಡಿಗೆ ಮೂರನೇ ಹಂತಿಗೆ ಅಲ್ಲಿಂದಲ್ಲಿಗೆ ಹರ ಹರಾ ಆವುತ್ತಡ!!)!ಅಂದಾಜು ತಪ್ಪಿ ಅಶನ, ಕೊದಿಲು,ಮೇಲಾರಂಗ ತುಂಬಾ ಒಳುದು ಹಾಳಪ್ಪದು ಇದ್ದು .ಕೆಲವು ಸರ್ತಿ ಗ್ರೇಶಿದಷ್ಟು ಜನಂಗ ಬಾರದ್ದೆ ಒಳಿವದು ಇದ್ದು .ಇಂಥ ಸಂದರ್ಭಲ್ಲಿ ತುಂಬ ಒಳುದು ಹಾಳಾಯಿದು ಹೇಳುದರ ಅಲ್ಪ /ಅಲ್ಪ ಒಳುದು ಹಾಳಾಯಿದು ಹೇಳಿ ಹೇಳ್ತವು.

ಕನ್ನಡದ ಪ್ರಾದೇಶಿಕ ಉಪ ಭಾಷೆ ಹೇಳಿಯೇ ಗುರುತಿಸಲ್ಪಡುವ ನಮ್ಮ ಭಾಷೆಲಿ ಬಳಕೆಲಿ ಇಪ್ಪ ಕೆಲವು ಕನ್ನಡ ಪದಂಗೊಕ್ಕೆ ನಮ್ಮ ಭಾಷೆಲಿ ವಿರುದ್ಧವಾದ ಅರ್ಥ ಬಳಕೆಲಿ ಇದ್ದು .ಇಂತಾದ್ದೆ ಒಂದು ಪದ ಅಲ್ಪ ಹೇಳುದು .ಕನ್ನಡಲ್ಲಿ ಅಲ್ಪ ಹೇಳ್ರೆ ಕಮ್ಮಿ ಹೇಳಿ ಅರ್ಥ .ಆದರೆ ನಮ್ಮ ಭಾಷೆಲಿ ತುಂಬ ಹೇಳುವ ಅರ್ಥಲ್ಲಿ ಇದು ಬಳಕೆ ಆವುತ್ತು .”ಅವೆಂತ ಒಂದೆರಡು ಜನಂಗಳ?ಅವು ಅಪ್ಪಚ್ಚಿ ದೊಡ್ಡಪ್ಪ ಮಾವ ಅತ್ತೆ ಮಕ್ಕ ಮರಿಗ ಹೇಳಿ ಅಲ್ಪ ಇದ್ದವು” ಹೇಳಿ ದೊಡ್ಡ ಕುಟುಂಬದ ಬಗ್ಗೆ ಹೇಳುದು ಇದ್ದು .

ಸುತ್ತ ಮುತ್ತ ಎಲ್ಲಿ ನೋಡ್ರೂ ಬ್ಯಾರಿಗಳೇ ಕಾಣ್ತಾ ಇಪ್ಪ ಕನ್ಯಾನ ಉಪ್ಪಳದ ನಡುವೆ ಮನೆ ಇಪ್ಪ ಎಂಗಳ ಬೇತದ ಅಜ್ಜ , ”ಅಲ್ಪ ಸಂಖ್ಯಾತರು ಹೇಳಿ ಇವರ ದೆನಿಗೇಳುದು ಸರಿ.ಆದರೆ ಅದು ನಮ್ಮ ಭಾಷೆಯ ಅಲ್ಪ ಕನ್ನಡದ ಅಲ್ಪ ಅಲ್ಲ” ಹೇಳಿ ಎರಡು ಕೈ ಆಕಡೆ ಈ ಕಡೆ ಬಿಡುಸಿ ಅಗಾಲ್ಸಿ ತೋರ್ಸಿ ನೆಗೆ ಮಾಡಿಗೊಂಡು ಇತ್ತಿದವು!

ಅಲ್ಪ ಹೇಳುವ ಪದಕ್ಕೆ ನುಡಿಗಟ್ಟಾಗಿ ಬಳಕೆ ಮಾಡುವಗ ತುಂಬಾ /ಹೆಚ್ಚು ಹೇಳುವ ಅರ್ಥ ಇದ್ದರೂ ಕಮ್ಮಿ ಹೇಳುವ ಸರ್ತ ಅರ್ಥಲ್ಲಿಯೂ ಬಳಕೆ ಆವುತ್ತು ಕೆಲವು ಸರ್ತಿ. “ಅವು ಬರಿ ಅಲ್ಪಂಗ ಅವರ ವ್ಯವಹಾರ ಆಗ ” ಹೇಳುವ ಮಾತು ನಮ್ಮ ಭಾಷೆಲಿ ಬಳಕೆಲಿ ಇದ್ದು.ಇಲ್ಲಿ ಆ ಅಲ್ಪಂಗ ಹೇಳ್ರೆ ಅವು ರಜ್ಜ ಬುದ್ಧಿ ಇಲ್ಲದ್ದೋರು,ನೀತಿ ನಿಯತ್ತು ಇಲ್ಲದ್ದೋರು, ಸಣ್ಣ ಮನಸ್ಸಿನೋರು ಹೇಳುವ ಅರ್ಥ ಇದ್ದು.
ಕೋಳ್ಯೂರು ಸೀಮೆಲಿ ” ಅಲ್ಪ ”ಪದಕ್ಕೆ ಹೀಂಗೆ ಇಪ್ಪ ಅರ್ಥ ಪ್ರಚಲಿತ ಇದ್ದು .ಹವ್ಯಕಲ್ಲಿ ಎಲ್ಲ ಕಡೆಲಿಯೂ ಇಕ್ಕು ಅಲ್ಲದ ?ತಿಳುಸಿ

Tuesday 3 December 2013

ಗಿಳಿ ಬಾಗಿಲು(ಹವ್ಯಕ ಬ್ಲಾಗ್ ) ಪೊಡುಂಬು

ಮೊನ್ನೆ ಒಂದಿನ ಇಲ್ಲೇ ಹತ್ತರೆ ಒಂದು ಮದುವೆಗೆ ಹೋಗಿತ್ತಿದೆ.ಅಲ್ಲಿಗೆ ಬಂದಿದ್ದ ನಮ್ಮೋರು ಒಬ್ಬ್ರು ಪ್ರಾಯದೋರ ಪರಿಚಯ ಆತು .ಅವು ಮಾತಾಡುತ್ತಾ “ಈ ಪೇಟೆ ಬದುಕು ಎಲ್ಲ ನೋಡುಲೆ ಅಬ್ಬರ,ಒಂದು ಬಾಳೆ ಹಣ್ಣು ಬೇಕಾರೆ ಮೂರು ರೂಪಾಯಿ ಕೊಡಕ್ಕು ,ಬೊಂಡಕ್ಕು ಪೈಸೆ ಕೊಡಕ್ಕು ನೀರಿಂಗು ಪೈಸೆ ಕೊಡಕ್ಕು ತಿಂಬಲು ಪೈಸೆ ಕೊಡಕ್ಕು …ಗೂ ಪೈಸೆ ಕೊಡಕ್ಕು ಈ ಪೇಟೆಲಿ ಎಲ್ಲಾ ಹೆರಂದ ನೋಡ್ಲೆ ಎಲ್ಲ ಚಂದ, ಒಳ ಎಂತ ಇಲ್ಲೆ ಬರೀ ಪೊಡುಂಬು ,ಎಂಗೊಗೆ ಇಲ್ಲಿ ಪೇಟೆ ಹವೆ ಸರಿ ಆವುತ್ತಿಲ್ಲೆ ,ಎಂಗ ಬಾಕ್ರ ಬೈಲು ಹತ್ತರೆ ಇಪ್ಪದು, ಮಗ ಸೊಸೆ ಇಲ್ಲಿದ್ದವು,ಹಾಂಗೆ ಎರಡು ದಿನಕ್ಕೆ ಬಂದೋವು ಇಲ್ಲಿ ಮದುವೆಗೆ ಬಂದದು” ಹೇಳಿ ಹೇಳಿದವು .
ಅದು ಸಮ ,ಹಳ್ಳಿಲಿ ಹುಟ್ಟಿ ಬೆಳದೋರಿನ್ಗೆ ಪೇಟೆ ಹೊಂದಾಣಿಕೆ ಅಪ್ಪದು ಕಷ್ಟವೇ ! ಅದು ಬೇರೆ ವಿಚಾರ .ಎನಗೆ ಅವು ಬಳಕೆ ಮಾಡಿದ “ಪೊಡುಂಬು” ಹೇಳುವ ಪದ ರಜ್ಜ ವಿಶಿಷ್ಟ ಹೇಳಿ ಅನ್ಸಿತ್ತು. ಅಂಬಗ ಆನು “ಪೊಡುಂಬು ಹೇಳ್ರೆ ಎಂತ ಅಜ್ಜ “ಹೇಳಿ ಕೇಳಿದೆ. ಅಷ್ಟಪ್ಪಗ ಅವು “ಬಲ ಇಲ್ಲೆ,ಗಟ್ಟಿತನ ಇಲ್ಲೆ,ಸಾರ ಇಲ್ಲೆ”ಹೇಳುವ ಅರ್ಥಂಗಳ ಹೇಳಿದವು !
“ಅವ° ಬರೀ ಪೊಡುಂಬು ,ಎಲ್ಲಾ ಬಾಯಿಲಿ ಅಷ್ಟೇ ,ಒಳಂದ ಎಂತದೂ ಇಲ್ಲೆ” ಈ ಮಾತಿನ ಸಣ್ಣಾ ದಿಪ್ಪಗಂದ ಸುಮಾರು ಸರ್ತಿ ಕೇಳಿದ್ದೆ . ಕೋಳ್ಯೂರು ಕಡೆಯ ಹವ್ಯಕ ಭಾಷೆಲಿ ಈ ನುಡಿಗಟ್ಟಿನ ಬಳಕೆ ಇದ್ದು. ಅವಂದು ಬರೀ ಪೊಡು೦ಬುತನ/ಪೊಡುಂಬು ಬುದ್ಧಿ ಹೇಳಿದರೆ ಅವಂಗೆ ಬುದ್ಧಿವಂತಿಕೆ ಏನೂ ಇಲ್ಲೆ ,ಬುದ್ಧಿವಂತಿಕೆ ಸಾಲ ಹೇಳಿ ಅರ್ಥ .ಆದರೆ ಈ ಶಬ್ದದ ಅರ್ಥ ಎಂತದು ?ಇದರ ಮೂಲ ಎಂತದು ಹೇಳಿ ಗೊಂತಿತ್ತಿಲ್ಲೆ.ಈಗ ಇವು ಪೇಟೆಯ ಒಳ ಎಂತ ಇಲ್ಲೆ ಬರೀ ಪೊಡುಂಬು ಹೇಳಿ ಹೇಳಿದವು! ಅಲ್ಲಿಂದ ಬಂದ ಮೇಲೂ “ಅಂಬಗ ಪೊಡುಂಬು ಹೇಳಿರೆ ಎಂತ” ಹೇಳಿ ಎರಡು ಮೂರು ದಿನಂದ ಆಲೋಚನೆ ಮಾಡಿಗೊಂಡು ಇತ್ತಿದ್ದೆ.
ಎಂಗಳ ಮನೆ ಎದುರಿನ ಮಾರ್ಗದ ಆಚ ಹೊಡೆಲಿ ಒಂದೆರಡು ದಿನ ಮೊದಲು ಯಾವುದೋ ಹೊಸ ಅಂಗಡಿ ಹಾಕಿತ್ತಿದವು .ಆರು ?ಎಂತ ಅಂಗಡಿ ಹೇಳಿ ಆನು ಗಮನಿಸಿತ್ತಿಲ್ಲೆ.ನಿನ್ನೆ ಹೊತ್ತಪ್ಪಗ ಟೆರೇಸ್ ಹತ್ತಿ ಆ ಕಡೆ ಈ ಕಡೆ ಗೆಬ್ಬಾಯಿಸಿಗೊಂಡು ಇಪ್ಪಗ ಎದುರಣ ಹೊಸ ಅಂಗಡಿ ಕಂಡತ್ತು. ಅದು ಒಂದು ಮರ ಕೆಲಸದ ಅಂಗಡಿ .ಆನು ನೋಡುವಗ ಎದುರಿನ ಅಂಗಡಿಯ ಮರ ಕೆಲಸದೋರು ಒಂದು ದೊಡ್ಡ ಮರದ ತುಂಡಿಂದ ಸುಮಾರು ಭಾಗವ ಗೀಸಿ ಗೀಸಿ ತೆಗೆತ್ತಾ ಇತ್ತಿದವು.
ಸಣ್ಣಾದಿಪ್ಪಗ ಎಂಗಳ ಮನೆ ಕೆಲಸಕ್ಕೆ ಬಂದ ಆಚಾರಿಗಳುದೆ ಹೀಂಗೆ ಮರದ ತುಂಡಿಂದ ಸುಮಾರು ಭಾಗವ ತೆಗೆತ್ತಾ ಇತ್ತಿದವು .ಅಂಬಗ ಹೀಂಗೆ ಎಂತಕೆ ಮಾಡುದು ಹೇಳಿ ಕೇಳಿಪ್ಪಗ “ಅದು ಬೊಳುಂಬು ಇಪ್ಪ ಜಾಗೆ ,ಅದು ಎಳತ್ತು ಜಾಗೆ ,ಅದರ ಹಾಂಗೆ ಬಿಟ್ರೆ ಆ ಜಾಗೆ ಕು೦ಬಾಗಿ ಮಂಚ, ಕುರ್ಚಿ ಹಾಳಾವುತ್ತು ,ಅದಕ್ಕೆ ಆ ಜಾಗೆಯ ತೆಗದು ಹಾಕುತ್ತವು “ಹೇಳಿ ಎನ್ನ ಅಜ್ಜ ಹೇಳಿತ್ತಿದವು. ಈಗ ಈ ಅಂಗಡಿಯೋರುದೆ ಹಾಂಗೆ ಬೊಳು೦ಬಿನ ತೆಗೆತ್ತಾ ಇಪ್ಪದು ಆದಿಕ್ಕು ಹೇಳಿ ಅನ್ಸಿತ್ತು ಎನಗೆ .
ಬೊಳುಂಬು ಇಪ್ಪ ಮರ ನೋಡುಲೆ ಮಾತ್ರ ದಪ್ಪ ಕಾಣುತ್ತು .ಅದು ಒಳ ಗಟ್ಟಿ ಇಲ್ಲೆ.ಬೊಳುಂಬು ಎಲ್ಲ ತೆಗದರೆ ಆ ಮರ ತುಂಡಿಲಿ ಉಪಯೋಗಕ್ಕೆ ಸಿಕ್ಕುವ ಭಾಗ ಬರೀ ರಜ್ಜ .ಎಂತಕೋ ಏನೋ ಎನಗೆ ಅಂಬಗ ಬೊಳುಂಬು ಹೇಳುದೆ ಕಾಲಾಂತರಲ್ಲಿ ಪೊಡುಂಬು ಹೇಳಿ ಬದಲಾಗಿ ಈಗ ಎಳಸು /ಕಡಮೆ ಬುದ್ಧಿ ಹೇಳುವ ಅರ್ಥಲ್ಲಿ ಬಳಕೆಗೆ ಬಂದಿಕ್ಕಾ ಏನೋ ಹೇಳಿ ಅನ್ಸಿತ್ತು.ಜೊತೆಗೆ ಒಳ ಟೊಳ್ಳು/ಗಟ್ಟಿ ಇಲ್ಲೆ/ಸತ್ವ ಇಲ್ಲೆ ಹೇಳುವ ಅರ್ಥಲ್ಲಿ ಬಳಕೆಗೆ ಬಂತೋ ಏನೋ ಹೇಳಿ ಅನ್ಸಿತ್ತು. ಭಾಷಾ ವಿಜ್ಞಾನದ ಆಧಾರಲ್ಲಿ ಹೇಳುದಾದರೆ ಳ ಮತ್ತು ಡ ನಡುವೆ ವರ್ಣ ವ್ಯತ್ಯಯ ಸಾಮಾನ್ಯ (ಉದಾ-ಇಳಾ-ಇಡಾ,ಕುಮ್ಬುಳ-ಕುಮ್ಬುಡ,ಬಳುಸು- ಬಡುಸು)ಅಪರೂಪಕ್ಕೆ ಪ ಬ ನಡುವೆ ವರ್ಣ ವ್ಯತ್ಯಯ ಇದ್ದು (ಉದಾ -ಪಡಿವಾರ-ಬಡಿವಾರ )ಹಾಂಗಾಗಿ ಬೊಳುಂಬು- ಪೊಡುಂಬು ಹೇಳಿ ಬಪ್ಪ ಸಾಧ್ಯತೆ ಇದ್ದು . ಪೊಟ್ಟು ಹಮ್ಮು /ಒಣ ಹಮ್ಮು ಹೇಳುದರಿಂದಲೂ ಪೊಡುಂಬು ಪದ ಬಂದಿಪ್ಪ ಸಾಧ್ಯತೆ ಇದ್ದು , ನಿಂಗ ಎಲ್ಲ ಎಂತ ಹೇಳ್ತೀರಿ ?ನಿಂಗಳ ಅಭಿಪ್ರಾಯವ ತಿಳುಸಿ.

Thursday 14 November 2013

ಗಿಳಿ ಬಾಗಿಲು (ಹವ್ಯಕ ಬ್ಲಾಗ್ ) ಅಲ್ಪ ಒಳುದು ಹಾಳು ಹಲಾಕು ಆಯಿದು




“ಅಡಿಗ್ಗೆಯೋವು ಅಲ್ಪ ಮಾಡಿ ಹಾಕಿದ್ದವು . ಅಲ್ಪ ಒಳುದು  ಹಾಳು ಹಲಾಕು ಆಯಿದು ಹೇಳುವ ಮಾತಿನ ನಮ್ಮ ಭಾಷೆಲಿ ಸಾಮನ್ಯಾವಾಗಿ ಉಪಯೋಗಿಸುತ್ತವು.ಅನುಪತ್ಯ ಮಾಡಿ ಅಪ್ಪಗ ಕೆಲವು ಸರ್ತಿ  ಅಡಿಗೆಯೋರ ಅಂದಾಜು ತಪ್ಪಿ ಅಶನ, ಕೊದಿಲು,ಮೇಲಾರಂಗ ತುಂಬಾ ಒಳುದು ಹಾಳಪ್ಪದು ಇದ್ದು .ಕೆಲವು ಸರ್ತಿ ಗ್ರೇಶಿದಷ್ಟು ಜನಂಗ ಬಾರದ್ದೆ ಒಳಿವದು ಇದ್ದು .ಇಂಥ ಸಂದರ್ಭಲ್ಲಿ ತುಂಬ ಒಳುದು ಹಾಳಾಯಿದು ಹೇಳುದರ ಅಲ್ಪ /ಅಲ್ಪಾ ಒಳುದು ಹಾಳಾಯಿದು ಹೇಳಿ ಹೇಳ್ತವು.
ಕನ್ನಡದ ಪ್ರಾದೇಶಿಕ ಉಪ ಭಾಷೆ ಹೇಳಿಯೇ ಗುರುತಿಸಲ್ಪಡುವ ನಮ್ಮ ಭಾಷೆಲಿ  ಬಳಕೆಲಿ ಇಪ್ಪ ಕೆಲವು ಕನ್ನಡ ಪದಂಗೊಕ್ಕೆ ನಮ್ಮ ಭಾಷೆಲಿ ವಿರುದ್ಧವಾದ ಅರ್ಥ ಬಳಕೆಲಿ ಇದ್ದು .ಇಂತಾದ್ದೆ ಒಂದು ಪದ ಅಲ್ಪ ಹೇಳುದು .ಕನ್ನಡಲ್ಲಿ ಅಲ್ಪ ಹೇಳ್ರೆ  ಕಮ್ಮಿ  ಹೇಳಿ ಅರ್ಥ .ಆದರೆ ನಮ್ಮ ಭಾಷೆಲಿ ತುಂಬ ಹೇಳುವ ಅರ್ಥಲ್ಲಿ ಇದು ಬಳಕೆ ಆವುತ್ತು “.ಅವೆಂತ ಒಂದೆರಡು ಜನಂಗಳ?ಅವು ಅಪ್ಪಚ್ಚಿ ದೊಡ್ಡಪ್ಪ ಮಾವ ಅತ್ತೆ ಮಕ್ಕ ಮರಿಗ ಹೇಳಿ ಅಲ್ಪ ಇದ್ದವು” ಹೇಳಿ ದೊಡ್ಡ ಕುಟುಂಬದ ಬಗ್ಗೆ ಹೇಳುದು ಇದ್ದು .
 ಸುತ್ತ ಮುತ್ತ ಎಲ್ಲಿ ನೋಡ್ರೂ ಬ್ಯಾರಿಗಳೇ ಕಾಂತಾ ಇಪ್ಪ ಕನ್ಯಾನ ಉಪ್ಪಳದ ನಡುವೆ ಮನೆ ಇಪ್ಪ  ಎಂಗಳ ಬೇತದ “ಅಜ್ಜ  ಅಲ್ಪ ಸಂಖ್ಯಾತರು ಹೇಳಿ ಇವರ ದೆನಿಗೇಳುದು ಸರಿ.ಆದರೆ ಅದು ನಮ್ಮ ಭಾಷೆಯ ಅಲ್ಪ ಕನ್ನಡದ ಅಲ್ಪ ಅಲ್ಲ” ಹೇಳಿ ಎರಡು ಕೈ ಆಕಡೆ    ಕಡೆ ಬಿಡುಸಿ ಅಗಾಲ್ಸಿ ತೋರ್ಸಿ ನೆಗೆ ಮಾಡಿಗೊಂಡು ಇತ್ತಿದವು!
ಅಲ್ಪ ಹೇಳುವ ಪದಕ್ಕೆ ನುಡಿಗಟ್ಟಾಗಿ ಬಳಕೆ ಮಾಡುವಗ  ತುಂಬಾ /ಹೆಚ್ಚು ಹೇಳುವ ಅರ್ಥ ಇದ್ದರೂ ಕಮ್ಮಿ  ಹೇಳುವ  ಸರ್ತ ಅರ್ಥಲ್ಲಿಯೂ ಬಳಕೆ ಆವುತ್ತು ಕೆಲವು ಸರ್ತಿ. “ಅವು ಬರಿ ಅಲ್ಪಂಗ ಅವರ ವ್ಯವಹಾರ ಆಗ “ಹೇಳುವ ಮಾತು ನಮ್ಮ ಭಾಷೆಲಿ  ಬಳಕೆಲಿ ಇದ್ದು.ಇಲ್ಲಿ ಆ ಅಲ್ಪಂಗ ಹೇಳ್ರೆ ಅವು ರಜ್ಜ ಬುದ್ಧಿ ಇಲ್ಲದ್ದೋರು,ನೀತಿ ನಿಯತ್ತು ಇಲ್ಲದ್ದೋರು, ಸಣ್ಣ ಮನಸ್ಸಿನೋರು ಹೇಳುವ ಅರ್ಥ ಇದ್ದು.
ಎಂಗಳ ಕೋಳ್ಯೂರು ಸೀಮೆಲಿ ಅಲ್ಪ /ಅಲ್ಪಾ ಪದಕ್ಕೆ ಹೀನೆ ಅರ್ಥ ಪ್ರಚಲಿತ ಇದ್ದು .ನಿಂಗಳ ಕಡೆಲಿಯೂ ಇಕ್ಕು ಅಲ್ಲದ ?ತಿಳುಸಿ   

Thursday 31 October 2013

ಗಿಳಿ ಬಾಗಿಲು(ಹವ್ಯಕ ಬ್ಲಾಗ್ ) -ಅವ° ರಜ್ಜ ಸಜ್ಜನ




ಎನ್ನ ಕೋಲೇಜಿಲಿ ಎನ್ನ ಹಾಂಗೆ ಲೆಕ್ಟುರು ಆಗಿಪ್ಪ ಮೇಡಂ ಒಂದಕ್ಕೆ ನಮ್ಮ ಭಾಷೆ ಸುಮಾರಾಗಿ ಮಾತಾಡುಲೆ ಬತ್ತು .ಒಂದಿನ ಎನ್ನತ್ತರೆ ಬಂದು “ಸಜ್ಜನ “ ಹೇಳ್ರೆ ಎಂತ ಅರ್ಥ ಹೇಳಿ ಕೇಳಿತ್ತು .ಇಷ್ಟು ಸುಲಭದ ಪದದ ಅರ್ಥ ಇದಕ್ಕೆ ಗೊಂತಿಲ್ಲೆಯ ಹೇಳಿ ಮನಾಸಿಲಿ ಜ್ಹಾನ್ಸಿಕೊಂಡು “ಸಾಧು ,ಒಳ್ಳೆಯ ವ್ಯಕ್ತಿ” ಹೇಳಿ ಅರ್ಥ ಹೇಳಿದೆ .ಅಷ್ಟಪ್ಪಗ ‘ಸ್ವಲ್ಪ ‘ಹೇಳ್ರೆ ಎಂತ ಕೇಳಿತ್ತು !ಅರೆ !ಹೀಂಗಿಪ್ಪ ಸುಲಭದ ಪದಂಗಳ ಅರ್ಥ ಕೇಳಕ್ಕಾದರೆ ಇದರಲ್ಲಿ ಏನೋ ಇದ್ದು ಹೇಳಿ ವಾಸನೆ ಸಿಕ್ಕಿತ್ತು ಎನಗೆ .ಚೂರು ಜಾಗ್ರತೆಲಿ “ತುಸು ,ಕಡಿಮೆ ,ಅಲ್ಪ” ಇತ್ಯಾದಿ ಅರ್ಥ ಹೇಳಿದೆ .ಸರಿ ಹಾಂಗಾದರೆ “ಸ್ವಲ್ಪ ಸಜ್ಜನ “ಹೇಳ್ರೆ ಎಂತ ಕೇಳಿತ್ತು .ಸ್ವಲ್ಪ ಸಜ್ಜನ ಹೇಳುವ ಪ್ರಯೋಗ ಎನಗೆ ಗೊಂತಿದ್ದಾ೦ಗೆ ಕನ್ನಡಲ್ಲಿ ಇಲ್ಲೆ ಹೇಳಿ ಹೇಳಿದೆ. ಸರಿ ಈ ಬಗ್ಗೆ ನಿನಗೆ ಸಂಶಯ ಹೇಳಿ ಕೇಳಿದೆ .ಅಷ್ಟೊತ್ತಿಂಗೆ ಅದು ಹೇಳಿತ್ತು “.ಅದು ನಿಂಗಳ ಭಾಷೆಲಿ “ಸ್ವಲ್ಪ ಸಜ್ಜನ ” ಹೇಳಿ ಇದ್ದಲ್ಲ ಅದರ ಅರ್ಥ ಬೇಕಾಗಿತ್ತು ಹೇಳಿ ” ಎಂಗಳ ಭಾಷೆಲಿದೆ ಸ್ವಲ್ಪ ಸಜ್ಜನ ಹೇಳಿ ಇಲ್ಲೆ ಹೇಳಿ ಹೇಳಿದೆ .”ಇದ್ದು ಎನ್ನ ಎದುರು ಮನೆಯ ನಿಂಗಳ ಜಾತಿಯ (ಹವ್ಯಕ )ಹೆಮ್ಮಕ್ಕ ಆರನ್ನೋ “ಅವ° ಸ್ವಲ್ಪ ಸಜ್ಜನ ಹೇಳಿ ಹೇಳ್ತಾ ಇತ್ತು “ಹೇಳಿ ಹೇಳಿತ್ತು .ಅಷ್ಟಪ್ಪಗ ಎನಗೆ ರಜ್ಜ ತಲೆಗೆ ಹೋತು !”ರಜ್ಜ ಸಜ್ಜನ “ಹೇಳಿ ಹೇಳಿದ್ದಾ ?ಹೇಳಿ ಕೇಳಿದೆ .ಅಪ್ಪು ಹೇಳಿ ಅದು ಹೇಳಿತ್ತು .ಅದು ನಮ್ಮ ಭಾಷೆಯ ರಜ್ಜ =ಸ್ವಲ್ಪ ಹೇಳುವ ಅರ್ಥವ ತೆಕ್ಕೊಂಡು ರಜ್ಜ ಸಜ್ಜನ ಹೇಳುದರ ಸ್ವಲ್ಪ ಸಜ್ಜನ ಹೇಳಿ ತರ್ಜುಮೆ ಮಾಡಿಗೊಂಡು ಅದರ ಅರ್ಥ ಕೇಳಿತ್ತು !ಸಜ್ಜನ ಹೇಳಿರೆ ಒಳ್ಳೆಯ ಗುಣದೋನು ಹೇಳಿ ಗೊಂತಿತ್ತು ! ರಜ್ಜ ಹೇಳ್ರೆ ಸ್ವಲ್ಪ ಹೇಳುವ ಅರ್ಥವೂ ಅದಕ್ಕೆ ಗೊಂತಿತ್ತು ,ಆದರೆ ರಜ್ಜ ಸಜ್ಜನ =ಸ್ವಲ್ಪ ಸಜ್ಜನ ಹೇಳ್ರೆ ಎಂತ ಹೇಳಿ ಗೊಂತಾಯಿದಿಲ್ಲೆ !
ಅಪ್ಪು ! ಸಾಧು ಸಜ್ಜನ ಹೇಳುವ ಪದಂಗಳ ಅರ್ಥ ಕನ್ನಡ ಗೊಂತಿಪ್ಪ ಎಲ್ಲೋರಿಂಗು ಗೊಂತಿರ್ತು .ಆದರೆ ಆವ° ರಜ್ಜ ಸಜ್ಜನ ,ಅವ° ಬರೀ ಸಜ್ಜನ ಹೇಳ್ರೆ ಎಂತ ಅರ್ಥ ಹೇಳಿ ಗೊಂತಾಯ್ಕಾರೆ ನಮ್ಮ ಭಾಷೆಗೇ ಬರಕ್ಕು .ಆವ° /ಅದು ರಜ್ಜ ಸಾಧು ಹೇಳಿ ನಮ್ಮಲ್ಲಿ ಬಳಕೆ ಇಲ್ಲೆ ; ಆದರೆ ಅದು ಬರೀ ಸಾಧು ಕೂಸು ಹೇಳುದು ಬಳಕೆಲಿದ್ದು .ಇಲ್ಲಿ ಸಾಧು ಹೇಳ್ರೆ ನಿಜವಾಗಿಯೂ ಸಾತ್ವಿಕ ಗುಣದ್ದು ಹೇಳಿ ಅರ್ಥ .ಆದರೆ ಕನ್ನಡಲ್ಲಿ ಸಾಧು ಪದದ ಒಟ್ಟಿಂಗೆ ಬಪ್ಪ ಸಜ್ಜನ ಹೇಳುವ ಪದಕ್ಕೆ ಎಂಗಳ ಕಡೆ ನಮ್ಮ ಭಾಷೆಲಿ ಒಳ್ಳೆಯೋನು ಹೇಳುವ ಅರ್ಥ ಇಲ್ಲೆ .ಅವ° ರಜ್ಜ ಸಜ್ಜನ ,ಅದು ರಜ್ಜ ಸಜ್ಜಂತಿ ಹೇಳ್ರೆ ಅವಕ್ಕೆ ರಜ್ಜ ಬುದ್ಧಿವಂತಿಕೆ ಕಮ್ಮಿ ಹೇಳಿ ಅರ್ಥ . ರಜ್ಜ ಹೆಡ್ಡು ಹೇಳುವ ಬದಲು ರಜ್ಜ ಸಜ್ಜಂತಿ ಹೇಳುದು.ಇನ್ನು ಅವ° ಬರೀ ಸಜ್ಜನ ,ಅದು ಬರೀ ಸಜ್ಜಂತಿ ಹೇಳುವ ಮಾತಿನ ಒಟ್ಟಿಂಗೆ ಅವಂಗೆ /ಅದಕ್ಕೆಬೇರೆಯೋರ ಕುತಂತ್ರಂಗ ಕೊಕ್ಕೆಗ ಎಲ್ಲ ಅರಡಿಯ ಹೇಳುವ ಮಾತುದೆ ಬತ್ತು .ಇಲ್ಲಿ “ಅವಂಗೆ /ಅದಕ್ಕೆ ಇವರ ಕುತಂತ್ರಂಗ ಕೊಕ್ಕೆಗ ಎಲ್ಲ ಅರಡಿಯ” ಹೇಳುವ ಮಾತು, “ಅವ° ಬರೀ ಸಜ್ಜನ ,ಅದು ಬರೀ ಸಜ್ಜಂತಿ ” ಹೇಳುವ ಮಾತಿನ ಅರ್ಥವ ಸ್ಪಷ್ಟ ಪಡುಸುತ್ತು .ಬರೀ ಸಜ್ಜನ /ಸಜ್ಜಂತಿ ಹೇಳುವಲ್ಲಿ ವ್ಯವಹಾರ ಜ್ಞಾನ ಕಮ್ಮಿ ಹೇಳುದರ ಒಟ್ಟಿಂಗೆ ಒಳ್ಳೆಯ ಗುಣದೋರು ಹೇಳುವ ಭಾವ ಎದ್ದು ಕಾಣುತ್ತು .
ಆದರೆ ಎಂಗಳ ಕಡೆ ನಮ್ಮ ಭಾಷೆಲಿ ರಜ್ಜ ಸಜ್ಜನ ,ಅದು ರಜ್ಜ ಸಜ್ಜಂತಿ ಹೇಳುವಲ್ಲಿ ಅದು ಅವ° ಒಳ್ಳೆಯ ಗುಣದೋರು ಹೇಳುವ ಭಾವ ಕಾಣುತ್ತಿಲ್ಲೆ,ಬದಲಿಂಗೆ ರಜ್ಜ ಹೆಡ್ಡು ಹೇಳುವ ಅರ್ಥವೇ ಹೆಚ್ಚು ಕಂಡು ಬತ್ತು .
ಕನ್ನಡಲ್ಲಿ ಸಜ್ಜನ ಹೇಳುವ ಪದಕ್ಕೆ ಸಂವಾದಿಯಾಗಿ ಕೋಳ್ಯೂರು ಸೀಮೆಯ ನಮ್ಮ ಭಾಷೆಲಿ ಅವ° /ಅದು ತುಂಬಾ ಸಾತ್ವಿಕ ಹೇಳುವ ಮಾತು ಬಳಕೆಲಿ ಇದ್ದು .ಅವು ತುಂಬಾ ಒಳ್ಳೆಯೋರು ,ಅದು/ಅವ° ಬಾರೀ ಸಾತ್ವಿಕ ಕೂಸು/ಮಾಣಿ ಹೇಳುವ ಮಾತಿನ ಯಾವಾಗಲು ಬಳಕೆ ಮಾಡುತ್ತವು
ಹೀಂಗಿಪ್ಪ ಸುಮಾರು ನುಡಿಗಟ್ಟುಗ ದಿನ ನಿತ್ಯ ನಮ್ಮ ಮಾತಿನ ನಡುವೆ ಬತ್ತು .ಆದರೆ ನಾವು ಅದರ ಗಮನಿಸುತ್ತಿಲ್ಲೆ.ಎಂತಕೆ ಹೇಳ್ರೆ ಅದು ನಮ್ಮ ಭಾಷೆಲಿ ಸಹಜವಾಗಿ ಇಪ್ಪದು .ಎಂಗಳ ಮೇಡಂ ಈ ಬಗ್ಗೆ ಕೇಳುವ ತನಕ ಎನಗೂ ತಲೆಗೆ ಹೋಗಿತ್ತಿಲ್ಲೆ.ಬೇರೆಯೋರು ಹೇಳಿ ಅಪ್ಪಗ, ಅಪ್ಪಲ್ಲದ ಹೇಳಿ ಅನ್ಸುತ್ತು ಅಲ್ಲದ ?ನಿಂಗ ಎಲ್ಲ ಎಂತ ಹೇಳ್ತೀರಿ ?ನಿಂಗಳ ಅಭಿಪ್ರಾಯ ತಿಳುಸಿ ,

Tuesday 8 October 2013

ಗಿಳಿಬಾಗಿಲು(ಹವ್ಯಕ ಬ್ಲಾಗ್ )-ಎಮ್ಮೆ ಕಂಜಿ ಹಾಂಗೆ


“ಅದು ಮಾಡುದು ನೋಡು ,ನಿದಾನಕ್ಕೆ ಎಮ್ಮೆ ಕಂಜಿ ಹಾಂಗೆ ”

ಹೇಳುವ ಬೈಗಳು ನಿದಾನ ಪ್ರವೃತ್ತಿಯೋರಿ೦ಗೆ ಬಳಕೆ ಮಾಡುತ್ತವು .ಈ ಬೈಗಳಿನ  ಅರ್ಥ ಎಂತದು ಹೇಳಿ ಗೊಂತಾಯಕ್ಕಾದರೆ ಎಮ್ಮೆ ಕಂಜಿಯನ್ನೇ ನೋಡಿರಕ್ಕು .ಅದು ಬಿಟ್ಟು ಬೇರೆ ದಾರಿ ಇಲ್ಲೆ .ಎಂಗ ಸಣ್ಣಾ ದಿಪ್ಪಗ ಅಜ್ಜನ ಮನೇಲಿ ಸುಮಾರು ಎಮ್ಮೆಗಳ, ದನಗಳ ಸಾಂಕಿಗೊಂಡು ಇತ್ತಿದವು .ಅಂಬಗ ಎಮ್ಮೆಗಳ ಕಂಜಿ ಹಾಕುವ ಸಮಯ ಬಂದರೆ ಗುಡ್ಡೆಗೆ ಬಿಟ್ಟುಗೊಂಡು ಇತ್ತಿದವಿಲ್ಲೆ.ದನಗಳ ಕಂಜಿ ಹಾಕುಲೆ ಹತ್ತರೆ ಆದರೂ ಗುಡ್ಡೆಗೆ ಬಿಟ್ಟುಕೊಂಡು ಇತ್ತಿದವು .ಎಷ್ಟೋ ಸರ್ತಿ ದನಗ ಗುಡ್ಡೆಲಿಯೇ ಕಂಜಿ ಹಾಕಿ ಕಂಜಿಗಳ ನಿದಾನಕ್ಕೆ ನಡೆಸಿಗೊಂಡು ಹೊತ್ತಪ್ಪಗ ಮನೆಗೆ ಬತ್ತ ಇತ್ತಿದವು .
ಕೆಲವು ಸರ್ತಿ ಮನೆಯೋರು ಹುಡುಕ್ಕಿ ಗೊಂಡು  ಹೋಗಿ ಕಂಜಿಯನ್ನು ಅದರ ಅಬ್ಬೆಯನ್ನೂ ಎಬ್ಬಿ ಕೊಂಡು  ಬತ್ತಾ ಇತ್ತಿದೆಯ° .ಆದರೆ ಎಮ್ಮೆ ಬಗ್ಗೆ ಹೆಚ್ಚಿನ ಕಾಳಜಿ ಬೇಕಾಗಿತ್ತು .ಅದು ಮನೆಲಿಯೇ ಕಂಜಿ ಹಾಕಿದರೂ ಕೂಡಾ ಕಂಜಿಯ ನೆಗ್ಗಿ ಎಮ್ಮೆಯ ಕೆಚ್ಚಲಿನ ಮೂಸಿಸಿ ಕೆಲವು ಸರ್ತಿ ಅದರ ಬಾಯಿಗೆ ಹಾಲು ಹಿಂಡಿ ರುಚಿ ಹಿಡಿಸಕ್ಕಾಗಿತ್ತು .ದನದ ಕಂಜಿಗ ಅವರಷ್ಟಕ್ಕೆ ಎದ್ದು ನಿಂದುಕೊಂಡು ಇತ್ತಿದವು ( ಈ ಮಾತು ಊರ ದನಗೊಕ್ಕೆ ಮಾತ್ರ ಅನ್ವಯ !).ಅವರಷ್ಟಕ್ಕೆ ಕೆಚ್ಚೆಲುಹುಡುಕಿ ಹಾಲು ಕುಡುಕ್ಕೊಂಡು  ಇತ್ತಿದವು .
ಎಮ್ಮೆ ಕಾಂಜಿಗ ಅಷ್ಟು ಚುರುಕು ಇರ್ತವಿಲ್ಲೆ .ಎಮ್ಮೆ ಕಂಜಿಗ ಅವರಷ್ಟಕ್ಕೆ ಎದ್ದು ನಿಂದು ಹಾಲು ಕುಡಿವಲೆ ಒಂದೆರಡು ಬೇಕಾಗಿ ಕೊಂಡು  ಇತ್ತು .ಅದರ೦ದಾಗಿಯೇ ನಿದಾನ ಪ್ರವೃತ್ತಿಯೋರಿ೦ಗೆ ಎಮ್ಮೆ ಕಂಜಿ ಹಾಂಗೆ ಹೇಳುವ ಮಾತು ಬಂದಿಕ್ಕು ಹೇಳಿ ಎನಗೆ ಅನ್ಸುತ್ತು .ಅದಲ್ಲದ್ದೆ ಚೊಕ್ಕವಾಗಿ ಕೆಲಸ ಮಾಡದ್ದೆ  ತಚಿ ಪಿಚಿ ಮಾಡುವೊರಿಂಗು ಎಮ್ಮೆ ಕಂಜಿ ಹಾಂಗೆ ಹೇಳುವ ಮಾತಿನ ಬಳಕೆ ಮಾಡ್ತವು .ಎಮ್ಮೆ ಕಂಜಿ ಅಲ್ಲಿ ಇಲ್ಲಿ ಬಿದ್ದು ಮನುಗುವ ಕಾರಣ ಈ ಮಾತು ಬಂದಿಕ್ಕು ಹೇಳಿ ಎನಗೆ ಅನ್ಸುತ್ತು .~ಜ್ಎಮ್ಮೆಗಳುದೆ ಪಳ್ಳದ ಕೆಸರು ನೀರಿಲಿ ಬಿದ್ದು ಕೊಂಡರೆ ಅಲ್ಲಿಂದ ಹೆರ ಹೆರಡುಸುದು ಬಾರೀ ಬ೦ಙದ ಕೆಲಸ .ಯಾವಾಗಲು ಮೈಲಿ ಕೆಸರು ಮೆತ್ತಿಗೊಂಡು ಇರ್ತವು .
ಹಾಂಗಾಗಿ ಈ ರೀತಿಯ ತಿರಸ್ಕಾರದ /ನಿಂದನೆಯ ಮಾತು ಬಳಕೆಗೆ ಬಂದಿಕ್ಕು ಹೇಳಿ ಎನಗೆ ಅನ್ಸುತ್ತು ,ನಿಂಗೊ ಎಲ್ಲೊರು ಎಂತ ಹೇಳುತ್ತಿ ?ನಿಂಗಳ ಅಭಿಪ್ರಾಯ ತಿಳಿಸಿ .

Saturday 21 September 2013

ಗಿಳಿ ಬಾಗಿಲು (ಹವ್ಯಕ ಬ್ಲಾಗ್ )-ಅದು/ಅವ ಪಾತಾಳ ಗರಡಿ

"ಅದಕ್ಕೆ ಬೇಡದ್ದ ವಿಚಾರ ಇಲ್ಲೆ ,ಮತ್ತೆ ಮತ್ತೆ ತೊಳಚ್ಚಿ ತೊಳಚ್ಚಿ ತಲೆ ತಿಂತು ,ಅದು ಮಹಾ ಪಾತಾಳ ಗರಡಿ ,ಅದರತ್ತರೆ ಯಾವುದೂ ಗುಟ್ಟು ಮಾಡುಲೆ ಎಡಿಯ"ಹೇಳಿ ಹೇಳುವ ಮಾತಿನ ಆನು ಸುಮಾರು  ಸರ್ತಿ ಅಲ್ಲಿ ಇಲ್ಲಿ ಕೇಳಿದ್ದೆ .ನಿನ್ಗಳೂ ಕೇಳಿಪ್ಪಿ.  .ಪಾತಾಳ ಗರಡಿ ಹೇಳ್ರೆ ಒಂದು   ಸಾಧನ .ಬಾವಿಗೆ ಏನಾರೂ ಕೊಡ ಪಾನ, ಚೆಂಬು ,ಪಾತ್ರಂಗ ಬಿದ್ದರೆ ಪಾತಾಳ ಗರಡಿಯ ಬಾವಿಯ ಬಳ್ಳಿಗೆ ಇಳುಸಿ ಬಿದ್ದ ವಸ್ತುಗಳ ತೆಗೆತ್ತಾ ಇತ್ತಿದವು .ಅದರಲ್ಲಿ ಅನೇಕ ಬೇಕಾದ ಕಡೆಗೆ ಚಲಿಸುವ ,ಬೇರೆ ಬೇರೆ ಗಾತ್ರದ ಕೊಕ್ಕೆಗ ಇದ್ದು .ಆ ಕೊಕ್ಕೆಗೆ ಕೊಡ ಪಾನ ಪಾತ್ರಂಗಳ ಸಿಕ್ಕುಸಿ ಮೇಲೆ ಎಳದು ತೆಗೆತ್ತಾ ಇತ್ತಿದವು ಮೊದಲು ,ಪಾತಾಳ ಗರಡಿಗೆ ಸಿಕ್ಕಿದ್ದಿಲ್ಲೇ ಹೇಳಿ ಆದ್ರೆ ಇನ್ನು ಆ ಕೊದಪ್ಪಾನದ ಆಸೆ ಬಿಡ ಕ್ಕು ಇನ್ನದು ಸಿಕ್ಕ ಹೇಳುವ ಮಾತು ಪ್ರಚಲಿತ ಇತ್ತು .ಪಾತಾಳ ಗರಡಿಯ ರೀತಿಲಿ ಹೆಂಗಾರೂ ಮಾಡಿ ಇನ್ನೊಬ್ಬರ ವಿಚಾರವ ಪತ್ತೆ ಹಚ್ಚಿ ತೆಗವ ಸ್ವಭಾವದೊರಿನ್ಗೆ  ಎಂಗಳ ಕಡೆ ಪಾತಾಳ ಗರಡಿ ಹೇಳಿ ಹೇಳ್ತವು ."ಅವ/ಅದು ಪಾತಾಳ ಗರಡಿ ಅವನ/ಅದರ ಹಿಡಿಪ್ಪಿಂದ ತಪ್ಪಿಸಿಕೊಂಬಲೆ ಎಡಿಯಪ್ಪ" ಹೇಳುವ ಮಾತುದೆ  ಬಳಕೆಲಿ ಇದ್ದು ."ಆವ /ಅದು ಪಾತಾಳ ಗರಡಿ" ಹೇಳುದು ಒಂದು ರೀತಿ ದೂಷಣೆ /ಬೈಗಳು .ಆದರೆ ಪಾತಾಳ ಗರಡಿ ನಿಜವಾಗಿಯೂ ಒಂದು  ಬಹು ಉಪಯುಕ್ತ ಸಾಧನ ,ಆದರೆ  ನುಡಿಗಟ್ಟಾಗಿ ಬಳಸುವಗ ಪಾತಾಳ ಗರಡಿ ಹೇಳುದು ಬೈಗಳಾಗಿ /ದೂಷಣೆಯ ಮಾತಾಗಿ ಬದಲಾವುತ್ತು.ಇಂತಹ ಅನೇಕ ನುಡಿಗಟ್ಟುಗ ನಮ್ಮಲ್ಲಿ ಬಳಕೆಲಿ ಇದ್ದು .ನೆನಪಾದ್ದರ ಆನಿಲ್ಲ್ಲಿ ಬರದ್ದೆ .ನಿಂಗಳ ಅಭಿಪ್ರಾಯ ತಿಳುಸಿ ,
ನಮಸ್ಕಾರ 
ಇನ್ನೊಂದರಿ ಕಾಂಬ 
-ಲಕ್ಷ್ಮೀ ಜಿ ಪ್ರಸಾದ

Sunday 1 September 2013

ಗಿಳಿ ಬಾಗಿಲು (ಹವ್ಯಕ ಬ್ಲಾಗ್ )-ಕಡುದ ಕೈಗೆ ಉಪ್ಪು ಹಾಕದ್ದೋವು

 ಇದೊಂದು ತಿರಸ್ಕಾರವ ಹೆರ ಹಾಕುವ ಮಾತು .ಮನುಷ್ಯರು ಎಲ್ಲೊರು ಒಂದೇ ರೀತಿಯ ಗುಣ ಸ್ವಭಾವದೊರು ಆಗಿ ಇರ್ತವಿಲ್ಲೆ .ಕೆಲವು ಜನಂಗ ಕೊಪಿಷ್ಟಂಗ ,ಕೆಲವು ಜನಂಗ ಸಮಾಧನಿಗ ಕೆಲವು ಜನಂಗ ಧಾರಾಳಿಗ ,ಕೆಲವು ಜನಂಗ ಕುರೆಗ ,ಪಿಟ್ಟಾಸಿಗ ಇರ್ತವು .ಎಂಗಳ ಕಡೆ ಆರಿನ್ಗೊಬ್ಬಂಗೂ ಏನೊಂದೂ ಕೊಡದ್ದ ಜಿಪುಣನ್ಗಳ ಕುರೆಗ ,ಪಿಟ್ಟಾಸಿಗ   ಹೇಳಿ ಹೇಳ್ತವು .ಕುರೆ ಬುದ್ಧಿಯ ಅತಿರೇಕವ ಹೇಳುವ ಮಾತು "ಕಡುದ ಕೈಗೆ ಉಪ್ಪು ಹಾಕದ್ದೋವು ಅವು" ಹೇಳುದು.ಆದರೆ ಈ ಮಾತಿನ ಒಳಾರ್ಥ ಎಂತ ಹೇಳಿ ಎನಗೆ ಗೊಂತಾಯಿದಿಲ್ಲೆ .ಹಾಂಗೆ ಅಮ್ಮಂಗೆ ಫೋನ್ ಮಾಡಿ ಕೇಳಿದೆ ಆನು .ಕಡುದ ಕೈಗೆ ಉಪ್ಪು ಎಂತಕೆ ಹಾಕುದು ?ಇದಕ್ಕೂ ಕುರೆಗೂ ಎಂತ ಸಂಬಂಧ ಹೇಳಿ.  ಎನ್ನ ಅಮ್ಮನ್ಗೂ  ಇದರ ಅರ್ಥ ಗೊಂತಿತ್ತಿಲ್ಲೆಡ .ಸುಮಾರು ೪೦ ವರ್ಷ ಮೊದಲು ಅಮ್ಮ ಮದುವೆ ಆಗಿ ಬಂದ ಹೊಸತರಲ್ಲಿ ಅಜ್ಜಿ ಆರ ಬಗ್ಗೋ ಮಾತಾಡುವಗ  ಈ ಮಾತಿನ ಹೇಳಿದವಡ ,ಅಂಬಗ ಅಮ್ಮ ಅಜ್ಜಿ ಹತ್ತರೆ "ಹಾಂಗೆ ಹೇಳ್ರೆ ಎಂತದು" ಹೇಳಿ ಕೇಳಿತ್ತಿದ ಅಡ.ಅಂಬಗ ಅಜ್ಜಿ ಅಮ್ಮಂಗೆ ಹೇಳಿದ್ದರ ಅಮ್ಮ ಎನಗೆ ಹೇಳಿದ ಇಂದು . ಅದರ ಆನಿಲ್ಲಿ ಈಗ ಹೇಳುತ್ತೆ . ಆರತ್ತರಾದರು ನಮಗೆ ಕೋಪ, ದ್ವೇಷ ಇದ್ದರೆ ಅವು ಹಾಳಾಯಕ್ಕು ಹೇಳಿ ಏನಾರೂ ಮಾಡುವಗ ಏನಾರು ರಜ್ಜ ನಷ್ಟ ಆದರೆ ಅದರ ಬಗ್ಗೆ ಚಿಂತೆ ಮಾಡ್ತವಿಲ್ಲೇ ಆರುದೆ .ನಮಗೆ ನಷ್ಟ ಆದರೂ ಸಮ ಆವಾ ಹಾಲಾಯಕ್ಕು ಹೇಳಿ ಭಾವಿಸಿ ಹೊಣೆತ್ತವು ಎಲ್ಲೊರು .ಆದರೆ ಜಾತಿಕುರೆಗ (ಅತಿ ಜಿಪುಣರು )ಮಾತ್ರ ಯಾವ ಕಾರಣಕ್ಕೂ ನಷ್ಟ ಮಾಡಿಗೊಳ್ಳುತ್ತವಿಲ್ಲೆ .ಅವರ ಪರಮ ಶತ್ರುವಿನ ಕೈಯ ಆರೋ ಕಡುದ್ದವು.ಕಡುದ ಕೈಗೆ ಉಪ್ಪು ಹಾಕುಲಾಗ ,ಉಪ್ಪು ಹಾಕಿರೆ ನೆತ್ತರು ಕಟ್ಟುತ್ತಿಲ್ಲೆ ,ಅಲ್ಲದ್ದೆ ಭಯಂಕರ ಉರಿತ್ತು ಕೂಡಾ .ಆದರೆ ಪರಮ ಶತ್ರುವಿನ ಕೈಯ ಆರಾದರೂ ಕಡುದರೆ ಅವರ ಮೇಲೆ ದ್ವೇಷ ಇಪ್ಪೋರು ಆ ಕೈಗೆ ಉಪ್ಪು ಹಾಕಿ ಅವಕ್ಕೆ ಉರಿ ಅಪ್ಪ ಹಾಂಗೆ ,ನೆತ್ತರು ಕಟ್ದದ್ದ  ಹಾಂಗೆ ಮಾಡಿ ಅವರ ಹಗೆಯ ತೀರಿಸಿಗೊಂಗು! .ಆದರೆ ಜಾತಿ ಕುರೆಗ ಅದನ್ನೂ ಮಾಡವು .ಹಿಂದಣ ಕಾಲಲ್ಲಿ ಉಪ್ಪು ಧರ್ಮಕ್ಕೆ ಸಿಕ್ಕಿಗೊಂಡು ಇದ್ದ ಸಾಮಾನು .ಆದರೆ ಅದರ ಕೂಡ ಹಗೆಗಳ ಕಡುದ ಕೈಗೆ ಹಾಕಿ ಹಾಕಿ ಹಗೆ ತೀರಿಸಿ ಕೊಳ್ಳದ್ದಷ್ಟು ಕುರೆಗ :ಅವು  ಹಗೆ ಸಾಧನೆ ಮಾಡುದಕ್ಕಾಗಿ ಲೇ ಕೂಡಾ .ಧರ್ಮಕ್ಕೆ ಸಿಕ್ಕುವ ವಸ್ತು ಆಗಿಪ್ಪ ಉಪ್ಪ್ಪಿನ ಇಡುಕ್ಕವು ಅಷ್ಟೂ ಕುರೆಗ ಹೇಳ್ರೆ ಜಿಪುಣತನದ ಪರಮಾವಧಿ ಇಪ್ಪೋರ ಬಗ್ಗೆ  ಈ ಆಡು ಮಾತು ತಿಳುಸುತ್ತು .
ಇಂತ ತುಂಬಾ ವಿಶಿಷ್ಟ ಆಡು ಮಾತುಗ ಗಾದೆಗ ನಮ್ಮ ಭಾಷೆಲಿ ಇದ್ದು ,ಇದರ ಒಟ್ಟು ಮಾಡಿ ಮಾಡಿ ಒಂದು ಕಡೆ ಬರದು ಮಡುಗಿದರೆ ಒಳ್ಳೆದು ಅಲ್ಲದ ?ನಿಂಗೆಲ್ಲ ಎಂತ ಹೇಳ್ತಿ ?
ನಿಂಗಳ ಅಭಿಪ್ರಾಯವ ತಿಳುಸಿ ,
ಇನ್ನೊಂದರಿ ಕಾಂಬ ,ನಮಸ್ಕಾರ 
ಡಾ .ಲಕ್ಷ್ಮೀ ಜಿ ಪ್ರಸಾದ

Saturday 24 August 2013

ಗಿಳಿ ಬಾಗಿಲು(ಹವ್ಯಕ ಬ್ಲಾಗ್ ) -ಪೊಡುಂಬು



ಮೊನ್ನೆ ಒಂದಿನ ಇಲ್ಲೇ ಹತ್ತರೆ  ಒಂದು  ಮದುವೆಗೆ ಹೋಗಿತ್ತಿದೆ.ಅಲ್ಲಿಗೆ ಬಂದಿದ್ದ  ನಮ್ಮೋರು ಒಬ್ಬ್ರು ಪ್ರಾಯದೋರ ಪರಿಚಯ ಆತೆನಗೆ .ಅವು ಮಾತಾಡುತ್ತಾ "ಈ ಪೇಟೆ ಬದುಕು ಎಲ್ಲ ನೋಡುಲೆ ಅಬ್ಬರ,ಒಂದು ಬಾಳೆ ಹಣ್ಣು ಬೇಕಾರೆ ೩ ರೂಪಾಯಿ ಕೊಡಕ್ಕು ,ಬೊಂಡಕ್ಕು ಪೈಸೆ ಕೊಡಕ್ಕು ನೀರಿಂಗು ಪೈಸೆ ಕೊಡಕ್ಕು ತಿಂಬಲು ಪೈಸೆ ಕೊಡಕ್ಕು ...ಗೂ ಪೈಸೆ ಕೊಡಕ್ಕು  ಈ ಪೇಟೆಲಿ ಎಲ್ಲಾ ಹೆರಂದ ನೋಡ್ಲೆ ಎಲ್ಲ ಚಂದ, ಒಳ ಎಂತ ಇಲ್ಲೆ ಬರೀ ಪೂಡುಂಬು ,ಎಂಗೊಗೆ ಇಲ್ಲಿ ಪೇಟೆ ಹವೆ ಸರಿ ಆವುತ್ತಿಲ್ಲೆ ,ಎಂಗ ಬಾಕ್ರ ಬೈಲು ಹತ್ತರೆ ಇಪ್ಪದು, ಮಗ ಸೊಸೆ ಇಲ್ಲಿದ್ದವು,ಹಾಂಗೆ ಎರಡು ದಿನಕ್ಕೆ ಬಂದೋವು ಇಲ್ಲಿ ಮದುವೆಗೆ ಬಂದದು ಹೇಳಿ ಹೇಳಿದವು .ಅದು ಸಮ ,ಹಳ್ಳಿಲಿ ಹುಟ್ಟಿ ಬೆಳದೋರಿನ್ಗೆ ಪೇಟೆ ಹೊಂದಾಣಿಕೆ ಅಪ್ಪದು ಕಷ್ಟವೇ !  ಅದು ಬೇರೆ ವಿಚಾರ .ಎನಗೆ ಅವು ಬಳಕೆ ಮಾಡಿದ "ಪೊಡುಂಬು" ಹೇಳುವ ಪದ ರಜ್ಜ ವಿಶಿಷ್ಟ ಹೇಳಿ ಅನ್ಸಿತ್ತು. ಅಂಬಗ ಆನು "ಪೊಡುಂಬು ಹೇಳ್ರೆ ಎಂತ ಅಜ್ಜ "ಹೇಳಿ ಕೇಳಿದೆ. ಅಷ್ಟಪ್ಪಗ ಅವು "ಬಲ ಇಲ್ಲೆ,ಗಟ್ಟಿತನ ಇಲ್ಲೆ,ಸಾರ ಇಲ್ಲೆ"ಹೇಳುವ ಅರ್ಥಂಗಳ ಹೇಳಿದವು !

 "ಅವ ಬರೀ ಪೊಡುಂಬು ,ಎಲ್ಲಾ ಬಾಯಿಲಿ ಅಷ್ಟೇ ,ಒಳಂದ ಎಂತದೂ ಇಲ್ಲೆ" ಈ ಮಾತಿನ ಸಣ್ಣಾ ದಿಪ್ಪಗಂದ ಸುಮಾರು ಸರ್ತಿ ಕೇಳಿದ್ದೆ . ಎಂಗಳ ಕಡೆಯ ಹವ್ಯಕ ಭಾಷೆಲಿ ಈ ಪದದ ಬಳಕೆ ಇದ್ದು.  ಅವಂದು ಬರೀ ಪೊಡುಮ್ಬುತನ/ಪೊಡುಂಬು ಬುದ್ಧಿ  ಹೇಳಿದರೆ ಅವಂಗೆ ಬುದ್ಧಿವಂತಿಕೆ ಏನೂ ಇಲ್ಲೆ ,ಬುದ್ಧಿವಂತಿಕೆ ಸಾಲ ಹೇಳಿ ಅರ್ಥ .ಆದರೆ ಈ ಶಬ್ದದ ಅರ್ಥ ಎಂತದು ?ಇದರ ಮೂಲ ಎಂತದು ಹೇಳಿ ಗೊಂತಿತ್ತಿಲ್ಲೆ.ಈಗ ಇವು ಪೇಟೆಯ ಒಳ ಎಂತ ಇಲ್ಲೆ ಬರೀ ಪೊಡುಂಬು ಹೇಳಿ ಹೇಳಿದವು! ಅಲ್ಲಿಂದ ಬಂದ ಮೇಲೂ "ಅಂಬಗ ಪೊಡುಂಬು ಹೇಳಿರೆ ಎಂತ" ಹೇಳಿ ಎರಡು ಮೂರು ದಿನಂದ ಆಲೋಚನೆ ಮಾಡಿಗೊಂಡು ಇತ್ತಿದೆ
.
ಎಂಗಳ ಮನೆ ಎದುರಿನ ಮಾರ್ಗದ ಆಚ ಹೊಡೆಲಿ ಒಂದೆರಡು ದಿನ ಮೊದಲು ಯಾವುದೋ ಹೊಸ ಅಂಗಡಿ ಹಾಕಿತ್ತಿದವು .ಆರು ?ಎಂತ ಅಂಗಡಿ ಹೇಳಿ ಆನು ಗಮನಿಸಿತ್ತಿಲ್ಲೆ.ನಿನ್ನೆ ಹೊತ್ತಪ್ಪಗ ಟೆರೇಸ್ ಹತ್ತಿ  ಆ ಕಡೆ ಈ ಕಡೆ ಗೆಬ್ಬಾಯಿಸಿ ಗೊಂಡು ಇಪ್ಪಗ ಎದುರಣ ಹೊಸ ಅಂಗಡಿ ಕಂಡತ್ತು. ಅದು  ಒಂದು ಮರ ಕೆಲಸದ ಅಂಗಡಿ .ಆನು ನೋಡುವಗ  ಎದುರಿನ ಅಂಗಡಿಯ  ಮರ ಕೆಲಸದೋರು ಒಂದು ದೊಡ್ಡ ಮರದ ತುಂಡಿಂದ ಸುಮಾರು ಭಾಗವ ಗೀಸಿ ಗೀಸಿ ತೆಗೆತ್ತಾ ಇತ್ತಿದವು.
ಸಣ್ಣಾದಿಪ್ಪಗ ಎಂಗಳ ಮನೆ ಕೆಲಸಕ್ಕೆ ಬಂದ ಆಚಾರಿಗಳುದೆ ಹೀಂಗೆ ಮರದ ತುಂಡಿಂದ ಸುಮಾರು ಭಾಗವ ತೆಗೆತ್ತಾ ಇತ್ತಿದವು .ಅಂಬಗ ಹೀಂಗೆ ಎಂತಕೆ ಮಾಡುದು ಹೇಳಿ ಕೇಳಿಪ್ಪಗ "ಅದು ಬೊಳುಂಬು ಇಪ್ಪ ಜಾಗೆ ,ಅದು ಎಳತ್ತು ಜಾಗೆ ,ಅದರ ಹಾಂಗೆ ಬಿಟ್ರೆ ಆ ಜಾಗೆ ಕುಮ್ಬಾಗಿ ಮಂಚ, ಕುರ್ಚಿ ಹಾಳಾವುತ್ತು ,ಅದಕ್ಕೆ ಆ ಜಾಗೆಯ ತೆಗದು ಹಾಕುತ್ತವು "ಹೇಳಿ ಎನ್ನ  ಅಜ್ಜ ಹೇಳಿತ್ತಿದವು. ಈಗ ಈ ಅಂಗಡಿಯೋರುದೆ ಹಾಂಗೆ ಬೋಳುಮ್ಬಿನ ತೆಗೆತ್ತಾ ಇಪ್ಪದು ಆದಿಕ್ಕು ಹೇಳಿ ಅನ್ಸಿತ್ತು ಎನಗೆ .ಬೊಳುಂಬು ಇಪ್ಪ ಮರ ನೋಡುಲೆ ಮಾತ್ರ ದಪ್ಪ ಕಾಣುತ್ತು .ಅದು ಒಳ ಗಟ್ಟಿ ಇಲ್ಲೆ.ಬೊಳುಂಬು ಎಲ್ಲ ತೆಗದರೆ ಆ ಮರ ತುಂಡಿಲಿ ಉಪಯೋಗಕ್ಕೆ ಸಿಕ್ಕುವ ಭಾಗ ಬರೀ ರಜ್ಜ .ಎಂತಕೋ ಏನೋ ಎನಗೆ ಅಂಬಗ ಬೊಳುಂಬು ಹೇಳುದೆ ಕಾಲಾಂತರಲ್ಲಿ  ಪೊಡುಂಬು ಹೇಳಿ ಬದಲಾಗಿ ಈಗ ಎಳಸು /ಕಡಮೆ ಬುದ್ಧಿ ಹೇಳುವ ಅರ್ಥಲ್ಲಿ ಬಳಕೆಗೆ ಬಂದಿಕ್ಕಾ  ಏನೋ ಹೇಳಿ ಅನ್ಸಿತ್ತು.ಜೊತೆಗೆ ಒಳ ಟೊಳ್ಳು/ಗಟ್ಟಿ ಇಲ್ಲೆ/ಸತ್ವ ಇಲ್ಲೆ ಹೇಳುವ ಅರ್ಥಲ್ಲಿ  ಬಳಕೆಗೆ ಬಂತೋ ಏನೋ ಹೇಳಿ ಅನ್ಸಿತ್ತು. ಭಾಷಾ ವಿಜ್ಞಾನದ ಆಧಾರಲ್ಲಿ ಹೇಳುದಾದರೆ ಳ ಮತ್ತು ಡ  ನಡುವೆ ವರ್ಣ ವ್ಯತ್ಯಯ ಸಾಮಾನ್ಯ (ಉದಾ-ಇಳಾ<>ಇಡಾ,ಕುಮ್ಬುಳ<>ಕುಮ್ಬುಡ,ಬಳುಸು <>ಬಡುಸು)ಅಪರೂಪಕ್ಕೆ ಪ ಬ ನಡುವೆ ವರ್ಣ ವ್ಯತ್ಯಯ ಇದ್ದು (ಉದಾ -ಪಡಿವಾರ<>ಬಡಿವಾರ )ಹಾಂಗಾಗಿ ಬೊಳುಂಬು <>ಪೊಡುಂಬು ಹೇಳಿ ಬಪ್ಪ ಸಾಧ್ಯತೆ ಇದ್ದು .  ನಿಂಗ  ಎಲ್ಲ  ಎಂತ ಹೇಳ್ತೀರಿ ?ನಿಂಗಳ ಅಭಿಪ್ರಾಯವ ತಿಳುಸಿ

ಇನ್ನೊಂದರಿ ಕಾಂಬ
ನಮಸ್ಕಾರ
     ಡಾ. ಲಕ್ಷ್ಮೀ ಜಿ ಪ್ರಸಾದ

Thursday 15 August 2013

ಗಿಳಿ ಬಾಗಿಲು (ಹವ್ಯಕ ಬ್ಲಾಗ್ )-ಅವ ಮಹಾ ತೆಗಲೆ ಕಂಠ

                                                    
"ಅವ ಎಂತಕ್ಕೂ ಆಗ ,ಮಹಾ ತೆಗಲೆ ಕಂಠ " ಈ ಮಾತಿನ ಎಂಗಳ ಕಡೆ ತುಂಬಾ ಸತ್ತಿ ಕೇಳಿದ್ದೆ ಆನು .ಎಂತ ಕೆಲಸವನ್ನೂ ಸಸೂತ್ರ ಮಾಡದ್ದೋರ ಬಗ್ಗೆ ಮಾತಾಡುವಗ ಈ ಮಾತಿನ ಹೇಳ್ತವು .ಸಾಮಾನ್ಯವಾಗಿ ತುಂಬಾ ಉದಾಸೀನ ಪ್ರವೃತ್ತಿಯ ಸೋಮಾರಿಗಳ ಸ್ವಭಾವವ ಈ ಮಾತು ಸೂಚಿಸುತ್ತು.ಇದು ತುಳುವಿಲಿ ಕೂಡ ಚಾಲ್ತಿಲಿ ಇದ್ದು . ತುಳುವಿಲಿ ತಿಗಲೆ ಕಂಟೆ  ಹೇಳಿ ಉದಾಸೀನದ ಮುದ್ದೆಗಳ ಬೈತ್ತವು .ಈ ನುಡಿಗಟ್ಟಿನ ಆನು ಸಣ್ಣಾ ದಿಪ್ಪಗಂದ ಕೇಳುತ್ತಾ ಬಂದಿದ್ದರೂ ಇದರ ಅರ್ಥ ಎಂತ ಹೇಳಿ ಎನಗೆ ತಲೆಗೆ ಹೋಗಿತ್ತಿಲ್ಲೆ .ಆ ಬಗ್ಗೆ ತಲೆ ಕೆಡುಸುಲೆ ಹೋಗಿಯೂ ಇತ್ತಿಲ್ಲೆ ಹೇಳುದು ಬೇರೆ ವಿಚಾರ .ಇಂದು ಸ್ವಾತಂತ್ರ್ಯೋತ್ಸವ ಎಲ್ಲರಿಂಗು ಗೊಂತಿದ್ದನ್ನೆ .ಎಲ್ಲ ಶಾಲಾ ಕಾಲೇಜುಗಳಲ್ಲಿ ಉದಿಯಪ್ಪಗ ಒಂಬತ್ತು ಗಂಟೆ ಒಳ ಧ್ವಜಾರೋಹಣ ಮಾಡಿ ಉತ್ಸವ ಆಚರಣೆ ಮಾಡುತ್ತವು ,ಮಾಡಕ್ಕಾದ್ದೆ ಅನ್ನೆ !
ವಿಷಯ ಅದಲ್ಲ ! ಆನುದೆ ಇಂದು ಉದಿಯಪ್ಪಗ ಬೇಗ 8 ಗಂಟೆಗೆ ಎತ್ತಕ್ಕಾದ ಕಾರಣ ಬೇಗ ಎದ್ದು ೬ ಗಂಟೆಗೆ ಬಸ್ಸು ಹತ್ತಿದೆ .ಎನ್ನ ಹಾಂಗೆ ದೂರಂದ ಶಾಲೆ ಕಾಲೇಜಿನ್ಗೆ ಹೋಗಿ ಬಪ್ಪ  ಸುಮಾರು  ಜನಂಗ ಮಾಸ್ತ್ರಕ್ಕ ಟೀಚರುಗ ಆ ಬಸ್ಸಿಲಿ  ಇತ್ತಿದವು .ಎಲ್ಲರೂ ಎನ್ನ ಹಾಂಗೆ ಉದಿಯಪ್ಪಗ ೪-೫ ಗಂಟೆಗೆ ಎದ್ದು ತಯಾರಾಗಿ ೬  ಗಂಟೆಗೆ ಬಸ್ಸು ಹತ್ತಿದೊರು .ಬೆಂಗಳೂರಿಂದ ದೊಡ್ಡ ಬಳ್ಳಾಪುರ ಹೋಪಲೆ ಸುಮಾರು ಒಂದು ಒನ್ದೂವರೆ ಗಂಟೆ ಬೇಕಾವುತ್ತು .ಆ ಬಸ್ಸಿಲಿದ್ದೊರು ಹೆಚ್ಚಿನೋರು ದೊಡ್ಡ ಬಲ್ಲಾಪುರಕ್ಕೆ ಹೊಪೋರು .ಬಸ್ಸು ಹೆರಟು ೫-೧೦ ನಿಮಿಷಕ್ಕೆ ಎಲ್ಲರೂ ಚಂದಕ್ಕೆ ಬಸ್ಸಿಲಿಯೇ ಒರಗಿದವು !ಎನಗೆ ಬಸ್ಸಿಲಿ ಜಪ್ಪಯ್ಯ ಹೇಳಿರೂ ಒರಕ್ಕು ಬತ್ತಿಲ್ಲೆ .ಹಾಂಗೆ ಅಲ್ಲಿ ಇಲ್ಲಿ ಗೆಬ್ಬಾಯಿಸಿಕೊಂಡು ಇತ್ತಿದೆ.ಹಾಂಗೆ ಎಲ್ಲ ಕಡೆ ನೋಡುವಗ ಅಕ್ಕ ಪಕ್ಕ ಸುತ್ತ ಮುತ್ತ ಇಪ್ಪೋರೆಲ್ಲ ಒರಗಿದ್ದವು ! ಎಲ್ಲರ ಮೋರೆ (ಗಡ್ಡ )ಎದೆಗೆ ತಾಗಿಕೊಂಡು ಇದ್ದು !!ಕೂಡ್ಲೆ ಜ್ಞಾನೋದಯ ಆತು ,ತೆಗಲೆ ಕಂಠ ಹೇಳಿರೆ ಎಂತ ಹೇಳಿ ತಲೆಗೆ ಹೋತು !ತೆಗಲೆ=ಎದೆ ,ಕಂಠ =ಕೊರಳು ,ಕೊರಳು ಎದೆಗೆ ಬಗ್ಗಿ ಒರಗಿಕೊಂಡು ಇಪ್ಪದಕ್ಕೆ ತೆಗಲೆ ಕಂಠ ಹೇಳುದು !ಯಾವ ಕೆಲಸವೂ ಮಾಡದ್ದೆ ಉದಾಸೀನಂದ ಒರಕ್ಕು ತೂಗಿಕೊಂಡು ಇಪ್ಪೋರಿನ್ಗೆ ಒಪ್ಪುವ ಮಾತಿದು ,ಉದಾಸೀನದ ಮುದ್ದೆಗಳ ಬಗ್ಗೆ ಹೇಳುಲೇ ಇದಕ್ಕಿಂತ ಚಂದದ ಪದ ಬೇರೆಲ್ಲ್ಲಿಯೂ ಸಿಕ್ಕ ,ನಿಂಗ ಎಂತ ಹೇಳ್ತೀರಿ ?ನಿಂಗಳ ಅಭಿಪ್ರಾಯ ತಿಳುಸಿ
,ಇನ್ನೊಂದರಿ ಕಾಂಬ ,
                                                    ನಮಸ್ಕಾರ  
                                                                                               
                                                                             ಡಾ. ಲಕ್ಷ್ಮೀ ಜಿ ಪ್ರಸಾದ

Wednesday 7 August 2013

ಗಿಳಿ ಬಾಗಿಲು -ಅವ ದೊಡ್ಡ ಮುಂಡೆಂಗಿ ಕುಜುವೆ

                                                 ಅವ ದೊಡ್ಡ ಮುಂಡೆಂಗಿ ಕುಜುವೆ
ಎನ್ನ ಮಗ ೧೦ನೆಲಿ ಓದ್ತಾ ಇದ್ದ .ಮೊಬೈಲ್ ಲಿ ಫೇಸ್ ಬುಕ್ ಲಿ ಅವನ ಸಹಪಾಟಿ  ಗಳತ್ತರೆ ಮಾತಾಡ್ತಾ ಇರ್ತ .ಒಳ್ಳೆ ಸಾತ್ವಿಕ ಮಾಣಿ ,ಆದರೂ  ಆವ ಆರತ್ತರೆ ಎಂತ ಮಾತಾಡ್ತಾ ಹೇಳುದರ ಗಮನಿಸುತ್ತಾ ಇರ್ತೆ ,ಹಾಂಗೆ ಇಂದು ಅವನ ಫೇಸ್ ಬುಕ್  ತೆಗದು ಆರತ್ತರೆ ಎಂತ ಚಾಟ್  ಮಾಡಿದ್ದ ಹೇಳಿ ನೋಡ್ತಾ ಇತ್ತಿದೆ .ಅವನ ಗೆಳೆಯನೊಟ್ಟಿನ್ಗೆ ಅದು ಇದು ಮಾತಾಡಿದ್ದ .ಅದರಲ್ಲಿ ಒಬ್ಬನ ಹತ್ತರೆ ನಮ್ಮ ಭಾಷೇಲಿ ಮಾತಾಡಿದ್ದ .ಆರನ್ನೊ  ಅವು ಇಬ್ರು ದೂರಿದ್ದವು !ಅದರಲ್ಲಿ ಆರೋ ಒಬ್ಬ ಇವಕ್ಕಿಬ್ರಿಂಗೆ ಎಂಥದೋ ಬೇಕಾದ ಸಹಾಯ ಮಾಡಿದ್ದಾ ಇಲ್ಲೆ .ಅದರ ಎನ್ನ ಮಗ "ಅ ವ ಎಂತಕ್ಕೂ ಆಗ ಮಾರಾಯ"  ಹೇಳಿ ಬರದ್ದ .ಮಗನ ಗೆಳೆಯ " ಅಪ್ಪು ಮಾರಾಯ ಅವ ದೊಡ್ಡ ಮುಂಡೆಂಗಿ ಕುಜುವೆ" ಹೇಳಿ ಬರದ್ದ .ಎನಗೆ ಇದರ ಓದಿ ಭಾರಿ ಕೊಷಿ ಆತು.! ನಮ್ಮ ಭಾಷೆಲಿ ಎಷ್ಟು ಚಂದದ ಪದಂಗಳ ಬಳಕೆ ಇದ್ದು ಹೇಳಿ .ಒತ್ತಿನ್ಗೆ ಈಗಣ ಮಕ್ಕೊಗೂ ಇಂತ ವಿಶಿಷ್ಟ ಪದಂಗಳ ಬಳಕೆ ಗೊಂತಿದ್ದಲ್ಲದಾ ಹೇಳಿ! .ಕುಜುವೆ ಹೇಳಿದರೆ ಹಲಸಿನ ಕಾಯಿ. ಬಹು ಉಪಯೋಗಿ ತರಕಾರಿ ಅದು .ಅದರ ಬೆಂದಿ ಮಾಡುಲೆ, ಆವುತ್ತು ಬೇಳೆ ಯನ್ನೂ ಕೊದಿಲಿನ್ಗೆ ಹಾಕುತ್ತವು ,ಇನ್ನು ರೆಚ್ಚೆ, ಹೊದುಂಕುಳು,ಹೂಸರೆ  ಎಲ್ಲವೂ ದನಗೊಕ್ಕೆ ತಿಮ್ಬಲೆ ಆವುತ್ತು .ಅದರ ಎಲ್ಲ ಭಾಗಂಗಳುದೆ ಉಪಕಾರಿ .ಆದರೆ ಮುಂಡೆಂಗಿ ಕುಜುವೆ ಇದಕ್ಕೆ ತದ್ವಿರುದ್ಧ .ಹಸೆ ಮಡವಲೆ ಉಪಯೋಗಿಸುವ ಮುಂಡೆಂಗಿ  ಸೆಸಿ /ಬಲ್ಲೆಲಿ ಎಷ್ಟುದೆ ಕಾಯಿ ಬಿಡ್ತು. ಇದು ನೋಡುಲೆ ಕುಜುವೆ (ಎಳತ್ತು ಹಲಸಿನ ಕಾಯಿ )ಹಾಂಗೆ ಕಾಣ್ತು .ಹಾಂಗಾಗಿ ಇದರ ಮುಂಡೆಂಗಿ ಕುಜುವೆ ಹೇಳಿ ಹೇಳ್ತವು .ಆದರೆ ಇದು ನಿರರ್ಥಕ ವಸ್ತು .ಇದರಲ್ಲಿ ಸೊಳೆ ,ಬೇಳೆ ಯಾವದೂ ಇಲ್ಲೆ .ಇದರ ದನಗ ಕೂಡ ತಿನ್ತವಿಲ್ಲೆ .ಇದರಲ್ಲಿ ಬೀಜ ಇಲ್ಲೆ ,ಹಾಂಗಾಗಿ ಇನ್ನೊಂದು ಮುಂಡೆಂಗಿ  ಸೆಸಿ ಕೂಡಾ ಇದರಲ್ಲಿ ಹುಟ್ಟುತ್ತಿಲ್ಲೆ. ಹಾಂಗಾಗಿ ಇದರ ಹುಟ್ಟೇ ವ್ಯರ್ಥ .ಅದರಂದ ಆರಿನ್ಗೂ ಒಂದಿನಿತೂ ಉಪಯೋಗ ಆಗ .ಆರೋಬ್ಬಂಗೂ ಏನೊಂದೂ ಉಪಕಾರ ಮಾಡದ್ದೋರಿನ್ಗೆ ನಮ್ಮ  ಭಾಷೆಲಿ " ಅವ ದೊಡ್ಡ ಮುಂಡೆಂಗಿ ಕುಜುವೆ" ಹೇಳಿ ಹೇಳ್ತವು .ಎಷ್ಟು ಚೆಂದದ ಹೋಲಿಕೆ ,ಉಪಮೆ ಅಲ್ಲದ ? ಇದು  ಆಡು ಮಾತಿಲಿ ರೂಪಕವಾಗಿ  ಬತ್ತು .ಇದೊಂದು ಅತ್ಯಂತ ನೈಜವಾದ ಮಾತಿನ ಬಳಕೆ ,ಇಂತ ತುಂಬಾ ಚೆಂದದ ಪದಂಗ ಎಂಗಳ ಭಾಷೆಲಿ ಇದ್ದು ಇತ್ತೀಚೆಗಂಗೆ ಇಂತ ಪದಂಗಳ ಬದಲಿನ್ಗೆ ಆವಾ ಯೂಸ್ಲೆಸ್ ಇತ್ಯಾದಿ ಇಂಗ್ಲಿಷ್ ಪದಂಗ ಬತ್ತಾ ಇದ್ದು ಹೇಳುದು ರಜ್ಜ ಬೇಜಾರಿನ ವಿಷಯ !ಯೂಸ್ಲೆಸ್ ಹೇಳುವ ಪದ ಮುಂಡೆಂಗಿ ಕುಜುವೆ ಯಷ್ಟು ಗಟ್ಟಿ  ಪದ ಅಲ್ಲ !ಇದಕ್ಕೆ ಎಂತ ಹೇಳ್ತಿ ?ನಿಂಗಳ ಅಭಿಪ್ರಾಯ ತಿಳಿಸಿ ,
   
ಇನ್ನೊಂದರಿ ಕಾಂಬ
                           ನಮಸ್ಕಾರ
                                                           ಲಕ್ಷ್ಮೀ ಜಿ ಪ್ರಸಾದ 

Sunday 4 August 2013

ಗಿಳಿ ಬಾಗಿಲು-ಅವ ಹುಳಿ ಬಂದು ಮೊಗಚ್ಚಿದ್ದ

ಗಿಳಿ ಬಾಗಿಲು-ಅವ ಹುಳಿ ಬಂದು ಮೊಗಚ್ಚಿದ್ದ
ಎನ್ನ ಅಮ್ಮಎನಗೆ ಅಮ್ಮ ಮಾತ್ರ ಅಲ್ಲ ಒಳ್ಳೆಯ ಫ್ರೆಂಡ್ ಕೂಡಾ ! ಫ್ರೆಂಡ್ ಗಳ ಹತ್ತರೆ ಗಂಟೆ ಗಟ್ಲೆ ಪಟ್ಟಾಂಗ ಹೊಡವ ಹಾಂಗೆ ಎಂಗ ಹೇಳಿರೆ ಆನುದೇ ಅಮ್ಮಂದೆ ಪಟ್ಟಾಂಗ ಹೊಡೆತ್ತೆಯ.ಎಂಗಳ ಮಾತು ಕತೇಲಿ ಆನು ಓದಿದ ಕಥೆ ಲೇಖನದ ಬಗ್ಗೆ ಚರ್ಚೆ ,ಆನು ಬರದ ಲೇಖನದ ಬಗ್ಗೆ ಆರು ಎಂತ ಹೇಳಿದವು ಹೇಳುವ ವಿಚಾರ ಹಾಂಗೆ ಅಮ್ಮಂಗೆ ಊರಿಲಿ ಸಿಕ್ಕ ವಿಚಾರ ಆರಿಂಗೋ ಮದುವೆ ನಿಘಂಟು ಆದ್ದು ,ಆರೋ ಅಪರೂಪಲ್ಲಿ ಹೆತ್ತದು ಹೀಂಗೆ ಸುಮಾರು ವಿಚಾರಂಗ ಇರ್ತು .ಹೀಂಗೆ ಮೊನ್ನೆ ಒಂದಿನ ಅಮ್ಮ್ಮಂದೆ ಆನುದೆ ಮಾತಾಡ್ತಾ ಇಪ್ಪಗ ಆರೋ ಒಬ್ಬನ ಬಗ್ಗೆ ವಿಚಾರ ಬಂತು.ಆವ ತುಂಬಾ ಒಳ್ಳೆಯ ಕೆಲಸಲ್ಲಿ ಇಪ್ಪೋನು .ಉಪಕಾರಿ ,ಸಹೃದಯಿ ಕೂಡಾ .ಆದರೆ ರಜ್ಜ ತೋರ್ಸಿಗೊಂಬ ಸ್ವಭಾವ .ತಾನು ಮಹಾ ಬ್ಯುಸಿ ,ಬುದ್ದಿವಂತ ಹೇಳುವ ಹಾಂಗೆ ,ಎನಗೆ ಮಾತಾಡಲೇ ಪುರುಸೊತ್ತು ಇಲ್ಲೇ ಎನ್ಗೊಗೆ ಸಮಯ ಭಾರಿ ಮುಖ್ಯ ಹೇಳಿಗೊಂಡು ಅಮ್ಮನತ್ರೆ ಆವ ಗಂಟೆ ಗಟ್ಲೆ ಮಾತಾಡಿದ ಅಡ !!ಈ  ಬಗ್ಗೆ ಅಮ್ಮ ಹೇಳುವಗ "ಅವ ಹುಳಿ ಬಂದು ಮೊಗಚ್ಚಿದ್ದ " ಹೇಳಿ ಹೇಳಿದ !ಎಷ್ಟು ಚೆಂದದ ಭಾಷಾ ಪ್ರಯೋಗ ಅಲ್ಲದ ? ಉದ್ದಿನ ದೋಸೆಗೆ ಅಕ್ಕಿ ಕಡದು ಮಡುಗಿದ್ದು ಮರದಿನಕ್ಕೆ  ಹುಳಿ ಬರಕ್ಕು.ಇಲ್ಲದ್ದರೆ ದೋಸೆ ಮೆಸ್ತಂಗೆ ಆವುತ್ತಿಲ್ಲೆ .ಅದು ಗಟ್ಟಿಯಾಗಿ ಬಲ್ಚಟ್ಟಿ ನ ಹಾಂಗೆ ಆವುತ್ತು .ಹಾಂಗಾಗಿ ಲಾಯ್ಕಕ್ಕೆ ಹುಳಿ ಬರಕ್ಕು ಹೇಳಿ ಬೆಚ್ಚಂಗೆ ಒಲೆಕಟ್ಟೆಲಿ ಮಡುಗುದು ಕ್ರಮ . ಕೆಲವು ಸರ್ತಿ ಜಾಸ್ತಿ ಹುಳಿ ಬತ್ತು . ತುಂಬಾ ಜಾಶ್ತಿ ಹುಳಿ ಬಂದರೆ ಹಿಟ್ಟು ಉಬ್ಬಿ ಮೇಲೆ ಬಂದು ಪಾತ್ರಕ್ಕೆ ಮುಚ್ಚಿದ ಮುಚ್ಚೆಲಿನ ನೂಕಿ ಹಿಟ್ಟೆಲ್ಲ ಹೆರ ಬಂದು ಚೆಲ್ಲುತ್ತು !ಇದಕ್ಕೆ ಹುಳಿ ಬಂದು ಮೊಗಚ್ಚುದು ಹೇಳಿ ಹೇಳುದು ! ಇದರ ಮನುಷ್ಯರ ಸ್ವಭಾವದ ಬಗ್ಗೆ ಹೇಳುವಗ  ಎಂಗಳ ಭಾಷೆಲಿ  ನುಡಿಗಟ್ಟು  ಆಗಿ ಬತ್ತು .ಎಷ್ಟು ಸಹಜವಾದ ಉಪಮೆ ,ಪ್ರತಿಮೆ ಅಲ್ಲದ ?! ಇಂತ  ಚೆಂದದ ಪದಂಗ ಎಂಗಳ ಭಾಷೆಲಿ ತುಂಬಾ  ಇದ್ದು .ನೆನೆಪ್ಪಾದಪ್ಪಗ ,ಪುರುಸೊತ್ತು ಸಿಕ್ಕಿಯಪ್ಪಗ ಬರೆತ್ತೆ ,ಓದಿ ನಿಂಗ ಅಭಿಪ್ರಾಯ ತಿಳಿಸಿ ಇನ್ನೊಂದರಿ ಕಾಂಬ ,ನಮಸ್ಕಾರ
 

Friday 21 June 2013

ಗಿಳಿ ಬಾಗಿಲು- ಗೌಡ ಭಾಷೆಗೆ ಹವ್ಯಕ ಭಾಷೆ ಮೂಲ !

ಮೊನ್ನೆ ಬೆಳ್ಳಾರೆಗೆ ಹೋಗಿತ್ತಿದೆ. ಕಾಲೇಜ್ ಬಿಡುವ ಹೊತ್ತಿಂಗೆ ಜೋರು ಮಳೆ ಬತ್ತಾ  ಇತ್ತು.ಹಾಂಗೆ ಮಳೆ ಕಮ್ಮಿ ಅಪ್ಪಲೇ ಕಾಯ್ತಾ ಮೆಟ್ಲಿನ ಹತ್ತರೆ ನಿಂತಿತ್ತಿದೆ .ಎನ್ನ ಹಾಂಗೆ ಎಂಗಳ ಪ್ರಿನ್ಸಿಪಾಲ್  ಸುಬ್ರಾಯ ಗೌಡ ಮತ್ತೆ ಚಿದಾನಂದಂದೆ ಮಲೆ ಬಿಡಲೇ ಕಾಯ್ತಾ ಇತ್ತಿದವು . ರಜ್ಜ ಹೊತ್ತಿಲಿ ಮಳೆ ಬಿಟ್ಟತ್ತು. ಅಮ್ಬಗ ಎನ್ಗಳ  ಪ್ರಿನ್ಸಿಪಾಲ್ "ಮಳೆ ಬಿಟ್ಟತ್ತು" ಹೇಳಿ ಹೇಳಿದ.ಎನ್ನ ಕೆಮಿ ಕುತ್ತ ಆತು ಎಂತಕೆ ಗೊತಿದ್ದ ಆವ ಎಂಗಳ ಪ್ರಿನ್ಸಿಪಾಲ್ ಗೌಡ ಜನಾನ್ಗದೊನು .ಸುಳ್ಯದ ಗೌಡ ಭಾಷೆದೆ ನಮ್ಮ ಹವ್ಯಕ ಭಾಷೆದೆ ಒಂದೇ ತರ ಕೇಳ್ತು. ಆನು ಸುರುವಿನ್ಗೆ ಬೆಲ್ಲರೆಗೆ ಹೋದಪ್ಪಗ ಎನಗೆ ಗೌಡರು ಆರು ಹವ್ಯಕರು ಆರು ಹೇಳಿ ಪಕ್ಕ ಗೊಂತಾಯಿಕ್ಕೊಂಡು ಇತ್ತಿಲ್ಲೆ ,ಅಷ್ಟರ  ಮತ್ಟ್ಟಿನ್ಗೆ  ಈ ಎರಡು ಭಾಷೆಗ ಒಂದೇ ರೀತಿ ಇದ್ದು .  ಎಂಗಳ ಭಾಷೇಲಿ ಇಪ್ಪ ಹಾಂಗೆ ಆವ, ಅದು,ಅವು  ಹೇಳುವ ಸರ್ವನಾಮಂಗ, ಉಚ್ಚಾರಣೆಯ ಸಾಮ್ಯತೆಗ ಇವೆಲ್ಲವ ನೋಡುವಾಗ ಆಶ್ಚರ್ಯ ಆವುತ್ತು .ಅಕ್ಕನೋವು ಬೈನ್ದವು ಹೋಯ್ದವು ಇತ್ಯಾದಿ ಪದಂಗಳ ಬಳಕೆ ಎಂಗಳ ಭಾಷೇಲಿ ಇಪ್ಪ ಹಾನ್ಗೆಯೇ ಅವರ ಗೌಡ ಭಾಷೆಲಿಯುದೆ ಇದ್ದು .ಎಂಗಳಲ್ಲಿ ಇಪ್ಪ ಒಂದು ವಿಶೇಷ ಪದ ಎಡಿಯ ಹೇಳುದು ಅವರಲ್ಲಿದೆ ಇದ್ದು . ಈ ಬಗ್ಗೆ ಹವ್ಯಕ ಕಣ್ಣನ -ಗೌಡ ಕನ್ನಡ ಭಾಷಾ ಬಾಂಧವ್ಯ ಹೇಳುವ ಒಂದು ಪ್ರಬಂಧವ ಆನು ಕರಾವಳಿ ಕನ್ನಡ ಎಂಬ ವಿಚಾರ ಸಂಕಿರಣಲ್ಲಿ ಮಂಡಿಸಿತ್ತಿದೆ .ಹವ್ಯಕರು ಗೌಡರು ಈ ಎರಡು ಜನಂಗಳುದೆ ಸುಳ್ಯದ ಮೂಲ ನಿವಾಸಿಗ ಅಲ್ಲ ಆದರೆ ಹವ್ಯಕರು ಅಲ್ಲಿಗೆ ಸುಮಾರು ೧೦೦೦ ವರ್ಷದ ಮೊದಲು ಬೈನ್ದವು .ಗೌಡಂಗ ಸುಮಾರು ೫೦೦ ವೇಷ ಮೊದಲು ಬೈನ್ದವು .ಗೌದಂಗಳ ಭಾಷೆ ಕನ್ನಡ ಆಗಿತ್ತು ,ಇಲ್ಲಿಯ ಮೂಲ ನಿವಾಸಿಗಳ ಭಾಷೆ ತುಳು .ಇದರ ಅವಕ್ಕೆ ಅನುಸರಿಸುಲೆ ಕಷ್ಟ ಆದಿಕ್ಕು. ಹಾಂಗಾಗಿ ಅವು ಕನ್ನಡಕ್ಕೆ ಹತ್ತರೆ ಇಪ್ಪ ಹವಿಗನ್ನದವ ವ್ಯವಹಾರಕ್ಕೆ ಬಳಸಿಕ್ಕು .ಅವರ ಕನ್ನಡ ಭಾಷೆಯ ಮೇಲೆ ಹವ್ಯಕ ಕನ್ನಡ ಬೀರಿದ ಪ್ರಭಾವಂದಾಗಿ ಗೌಡ ಕನ್ನಡ ಹೇಳುವ ಹೊಸತೊಂದು ಕನ್ನಡದ ಉಪ ಭಾಷೆ ಹುಟ್ಟಿ ಪ್ಪ ಸಾಧ್ಯತೆ ಜಾಸ್ತಿ ಇದ್ದು.ಹಾಂಗಾಗಿ ಗೌಡ ಭಾಷೆಗೆ ಹವ್ಯಕ ಭಾಷೆಯೇ ಮೂಲ ಆದಿ ಪ್ಪ ಸಾಧ್ಯತೆ ಇದ್ದು  ಹೇಳಿ ಎನ್ನ ಅಭಿಪ್ರಾಯ . ಈ ಬಗ್ಗೆ ಅಧ್ಯಯನ ನಡೆದರೆ ಹೆಚ್ಚು ತಿಳಿವಲೆ  ಎಡಿಗು .ಎಂಥ ಹೇಳ್ತೀರಿ ನಿಂಗ ?
ನಮಸ್ಕಾರ ,ಇನ್ನೊಂದರಿ ಕಾಂಬ -ಡಾ ||ಲಕ್ಷ್ಮಿ  ಜಿ ಪ್ರಸಾದ        

Sunday 26 May 2013

laxmi prasad: ಗಿಳಿ ಬಾಗಿಲು -ಎಂಗಳಲ್ಲಿ ಅಮ್ಮಂಗೆ ಗೌರವ ವಚನ

laxmi prasad: ಗಿಳಿ ಬಾಗಿಲು -ಎಂಗಳಲ್ಲಿ ಅಮ್ಮಂಗೆ ಗೌರವ ವಚನ:   ಎಂಗಳಲ್ಲಿ ಅಮ್ಮಂಗೆ ಅಬ್ಬೆ ಹೇಳಿ  ಹೇಳುದು .ಇತ್ತೀಚಿಗಂಗೆ ೩೦ -೩೫ ವರ್ಷಂಗ ಳಲ್ಲಿ  ಅಬ್ಬೆಯ ಬದಲು ಅಮ್ಮ ಹೇಳುವ ಪದ ರೂಡಿ ಗೆ ಬೈಂದು .ಎನ್ನ ಅಪ್ಪ  ಅಮ್ಮ ಎಲ್ಲ ಅವರ ...

ಗಿಳಿ ಬಾಗಿಲು -ಎಂಗಳಲ್ಲಿ ಅಮ್ಮಂಗೆ ಗೌರವ ವಚನ


 ಎಂಗಳಲ್ಲಿ ಅಮ್ಮಂಗೆ ಅಬ್ಬೆ ಹೇಳಿ  ಹೇಳುದು .ಇತ್ತೀಚಿಗಂಗೆ ೩೦ -೩೫ ವರ್ಷಂಗ ಳಲ್ಲಿ  ಅಬ್ಬೆಯ ಬದಲು ಅಮ್ಮ ಹೇಳುವ ಪದ ರೂಡಿ ಗೆ ಬೈಂದು .ಎನ್ನ ಅಪ್ಪ  ಅಮ್ಮ ಎಲ್ಲ ಅವರ ಅಮ್ಮನ ಹೇಳಿರೆ ಎನ್ನ ಅಜ್ಜ್ಯಕ್ಕಳ ಅಬ್ಬೆ ಹೇಳಿಯೇ ದೆನಿಗೇಳುದು.ಬಹುಷ ಕನ್ನಡ ಭಾಷೆಯ ಪ್ರಭಾವಂದಾಗಿ ಅಬ್ಬೆ ಅಮ್ಮ ಆದ್ದು  ಆದಿಕ್ಕು. ಈಗ ಇಂಗ್ಲೀಷಿನ ಪ್ರಭಾವಂದಾಗಿ ಅಮ್ಮ ಮಮ್ಮಿ ಆದ ಹಾಂಗೆ !
 ಅದು ಏನೇ ಇರಲಿ ,ಎಂಗಳ ಕೋಳ್ಯೂರು ಸೀಮೆಲಿ ಅಮ್ಮಂಗೆ ಏಕವಚನ ಇಲ್ಲೆ .ಹಾಂಗೇಳಿ  ಬಹುವಚನವೂ ಇಲ್ಲೆ.ಏಕವಚನ ಬಹುವಚನಂಗಳ ನಡುವಿಲಿ ಒಂದು ವಿಶಿಷ್ಟ ವಚನ ಇದ್ದು .ಆನು ಅದರ ಗೌರವ ವಚನ ಹೇಳಿ ದೆನಿಗೇಳಿದ್ದೆ .ವಿದ್ವಾಂಸರುಗ ಇದಕ್ಕೆ ಎಂತ ಹೇಳಿ ಹೇಳ್ತವು?ಇದು ಅವರ ಗಮನಕ್ಕೆ ಬೈಂದ ? ಹೇಳಿ ಎನಗೆ ಗೊಂತಿಲ್ಲೆ .
ಎಂಗಳ ಭಾಷೆಲಿ ಪುರುಷರಿಂಗೆ  ಅವರವರ ಸ್ಥಾನಕ್ಕೆ ಅನುಗುಣವಾಗಿ ಏಕವಚನ ಬಹುವಚನ ಇದ್ದು .ಸಾಮಾನ್ಯವಾಗಿ ಅಪ್ಪ ಅಜ್ಜಂಗೆ , ಮಾವುಗಳಿಂಗೆ, ಮಾವನೋರಿಂಗೆ ಮತ್ತೆ ಗುರುಗೊಕ್ಕೆ ಬಹುವಚನ .ಮತ್ತೆ ಒಳುದೋರಿಂಗೆಲ್ಲ ಏಕವಚನವೆ ಇಪ್ಪದು .ಉದಾ -ಅಪ್ಪ ಬಂದವು .ಅಜ್ಜ  ಬೈನ್ದವು  ಇತ್ಯಾದಿ ಅಪ್ಪಂಗೆ ಕೂಡ ಕೆಲವು ಕಡೆ ಏಕವಚನ ಇದ್ದು .   ಅಣ್ಣ ಮಾವ ಅಪ್ಪಚ್ಚಿ ತಮ್ಮ ಎಲ್ಲೊರಿಂಗು ಏಕವಚನ .ಉದಾ-ಅಣ್ಣ ಬಂದ ಮಾವ ಬಕ್ಕು ಇತ್ಯಾದಿ .
ಇನ್ನು ಹೆಮ್ಮಕ್ಕೊಗೆ ಪ್ರಾಣಿಗೊಕ್ಕೆ ಏಕವಚನ ಇಪ್ಪದು ಉದಾ-ಅದು (ಅವಳು )ಬಂತು,  ಅಕ್ಕ ಬಂತು ,ನಾಯಿ ಹೋತು .ಇಲ್ಲಿ ಸ್ತ್ರೀಲಿಗ ಮತ್ತೆ ನಪುಂಸಕ ಲಿಂಗಂಗೊಕ್ಕೆ ಯಾವುದೇ ವ್ಯತ್ಯಾಸ ಇಲ್ಲೇ ಎರಡಕ್ಕೂ ಒಂದೇ ರೀತಿ ಏಕವಚನ .ಹೆಮ್ಮಕ್ಕಳಲ್ಲಿದೆ ಅ ಅತ್ತಿಯೋರು (ಗೆಂಡನ ಅಬ್ಬೆ ),ಅತ್ತೆಗಳು (ಹೆಂಡತಿಯ ಅಬ್ಬೆ ) ಇವಕ್ಕೆ ಬಹುವಚನ ಇದ್ದು . ಉದಾ-ಅತ್ತೆ ಬೈನ್ದವು ,ಹೋದವು ಇತ್ಯಾದಿ   .ಒಳುದ ಹೆಮ್ಮಕ್ಕೊಗೆ ಏಕವಚನ ಉದಾ -ಚಿಕ್ಕಮ್ಮ ಬೈಂದು ,ಹೋಯಿದು ಇತ್ಯಾದಿ . 
ಇದರ ನಡುಗೆ ಅಮ್ಮಂಗೆ  ಅತ್ತಿಗೆಗೆ (ಅಣ್ಣನ ಹೆಂಡತಿ ) ಆನು ವಿಶಿಷ್ಟ ವಚನದ ಬಳಕೆ ಇದ್ದು .ಉದಾ-ಅಮ್ಮ ಬೈಂದ ,ಅಮ್ಮ ದೋಸೆ ತಿಂದಿದ .,ಅಮ್ಮ ಹೋಯಿದ .ಎಂಗಳ ಭಾಷೆಲಿ ಏಕವಚನ ಹೇಳುವಾಗ ಆ ಪದದ ಕಡೆಂಗೆ ಅನುನಾಸಿಕ ಇರ್ತು .ಉದಾ-ಆವಾ ಹೋಯಿದ ಹೇಳಿ ಹೇಳುವಾಗ ಕಡೆಯ ದ ದೊತ್ತಿನ್ಗೆ ಅನುನಾಸಿಕ ಇರ್ತು .ಆದರೆ ಅಮ್ಮ ಹೋಯಿದ ಹೇಳುವಗ  ಕಡೆಂಗೆ ಅನುನಾಸಿಕ ಇಲ್ಲೆ .ಅದೇ ರೀತಿ ಪ್ರಶ್ನಾರ್ಥಕ ವಾಗಿದ್ದರೆ ಅಲ್ಲಿದೆ ಅಮ್ಮಂಗೆ ಸಂಬಂಧಿಸಿ ಕೇಳುವಗ ರಜ್ಜ ವ್ಯತ್ಯಾಸ ಇದ್ದು 
ಉದಾ -ಅಮ್ಮ ಬೈನ್ದಳಾ ?ಅಮ್ಮ ಉಂಡಳಾ ?ಅಮ್ಮ ಒರಗಿದಳಾ ?.ಬೇರೆ ಹೆಮ್ಮಕ್ಕೊಗೆ ಹೇಳುವಗ  ತಂಗೆ ಬೈಂದಾ ?ಅದು ಉಂಡತ್ತಾ ? ಹೇಳಿ ಇರ್ತು .
ಇಲ್ಲಿ ಎನ್ನ ಗಮನಕ್ಕೆ ಬಂದ ವಿಚಾರವ ನಿಂಗಳ ಮುಂದೆ ಮಡುಗಿದ್ದೆ .ನಿಂಗಳ ಅಭಿಪ್ರಾಯವ ತಿಳಿಸಿದರೆ ಸಂತೋಷ .
               ಇನ್ನೊಂದರಿ ಕಾಂಬ 
                                             ನಮಸ್ಕಾರ
                                                                         -ಲಕ್ಷ್ಮಿ ಜಿ ಪ್ರಸಾದ 

Friday 24 May 2013

ಗಿಳಿ ಬಾಗಿಲು : ಎಂಗಳ ಮಕ್ಕಳ ಭಾಷೆ


                               
ಎಂಗಳ ಭಾಷೆಲಿ  ಸಣ್ಣ  ಮಕ್ಕಳತ್ತರೆ ಮಾತನಾಡುವಗ ಬಳಸುವ ಪದಂಗ ಭಾರಿ ಚೆಂದ, ಆದರೆ  ಎಂಗಳ ನಿತ್ಯದ ಬಳಕೆಯ ಪದಂಗಳ ಬದಲಿನ್ಗೆ ಬೇರೆ ಪದಂಗ ಇದ್ದು .ಇದೆಂತಕೆ ಹೀಂಗೆ ? ದೊಡ್ಡೋರ ಮಾತಿಲಿ ಇಲ್ಲದ್ದೆ ಇಪ್ಪ  ಪದಂಗಳ ಮಕ್ಕೊಗೆನ್ತಕೆ ಹೇಳಿಕೊಡುದು ಹೇಳಿ ತುಂಬ ಸರ್ತಿ ಎನಗೆ ಅನ್ಸಿದ್ದು .ಮೂಲತ ಈ ಪದಂಗಗಳೇ   ಎಂಗಳ ಭಾಷೆಲಿ ಇದ್ದದಾದಿಕ್ಕ ?ಕಾಲ ಕ್ರಮೇಣ ದೊಡ್ಡೋರ  ಮಾತಿಲಿ ಈಗ ಇಪ್ಪ ಪದಂಗ ಸೇರಿಗೊಂಡವ ?ಹಾಂಗಾಗಿ ಮಕ್ಕಳತ್ತರೆ ಮಾತಾಡುವಾಗ ಮಾತ್ರ ಮೂಲ ಪದಂಗಳ ಬಳಕೆ ಹಾಂಗೆ ಒಳುತ್ತಾ?ಎನಗೆ ಗೊಂತಿಲ್ಲೆ .ಹೀಂಗೆ ಆದಿಪ್ಪ ಸಾಧ್ಯತೆ ಇದ್ದು .ಈ  ಸಾಧ್ಯತೆಯ ತೀರಾ  ಸಾರಾ ಸಗಟಾಗಿ ಅಲ್ಲಗಳವಲೆ  ಸಾದ್ಯ ಇಲ್ಲೆ ಆನು ಗಮನಿಸಿದ ಕೆಲವು   ಮಕ್ಕಳ ಭಾಷೆಯ ಪದಂಗ ಹೀಂಗೆ ಇದ್ದು 
ಉಜ್ಜಿ :
 ಕಿಚ್ಚಿಂಗೆ ಅಥವಾ ಬೆಶಿಗೆ ಉಜ್ಜಿ ಹೇಳುವ ಪದವ ಮಕ್ಕಳತ್ತರೆ ಮಾತನಾಡುವಗ ಬಳಸುತ್ತೆಯ .  ಕಿಚ್ಚಿನತ್ತರೆ /ಬೆ ಶಿ ಇಪ್ಪಲ್ಲಿಗೆ ಹೋಗಡ ಹೇಳುಲೆ ಉಜ್ಜಿ ಹತ್ತರೆ ಹೋಗಡಾ ಹೇಳಿ  ಎಂಗ ಹೇಳುತ್ತೆಯ .ಉಜ್ಜಿ ಹೇಳುದು ಉಷ್ಣ ಹೇಳುವ ಪದದ ಹವ್ಯಕ ತದ್ಭವ ರೂಪ ಆದಿಕ್ಕು .ಮಕ್ಕೊಗೆ ಉಷ್ಣ ಹೇಳಿ ಹೇಳುಲೆ ಕಷ್ಟ ಅಕ್ಕು ಹೇಳಿ ಉಜ್ಜಿ ಹೇಳುವ ಪದ ಬಳಕೆಗೆ ಬಂದಿಕ್ಕು .ಕಾಲ ಕ್ರಮೇಣ ದೊಡ್ಡೋರ ಮಾತಿಲಿ ಉಷ್ಣದ ಬದಲಿನ್ಗೆ ಬೆಶಿ  ಹೇಳುವ ಪದ ರೂಡಿಗೆ ಬಂದಿರೆಕ್ಕು .ಆದರೆ ಮಕ್ಕಳತ್ತರೆ ಮಾತನಾಡುವಗ  ಉಜ್ಜಿ ಹೇಳುದು ಹಾಂಗೆ ಒಳುದಿರೆಕ್ಕು .
ದೀಜಿ :
 ಎಂಗಳ ಮಕ್ಕಳ ಭಾಷೇಲಿ ನೀರಿಂಗೆ ದೀಜಿ ಹೇಳುವ ಪದ ರೂಡಿಲಿ ಇದ್ದು .ನೀರಿಂಗೆ ದೀಜಿ ಹೇಳುಲೆ ಎಂತ ಕಾರಣ ಇಕ್ಕು ಹೇಳಿ  ಎನಗೆ ತಲೆಗೆ ಹೊವುತ್ತಿಲ್ಲೆ . ಎಂಗಳ ಮಕ್ಕಳ ಬಾಷೆಲಿ   ಬಿಟ್ರೆ ಬೇರೆಲ್ಲಿಯೂ ನೀರಿಂಗೆ ದೀಜಿ ಹೇಳಿ ಇಪ್ಪದು ಎನಗೆ ಗೊಂತಿಲ್ಲೆ .ಇದರ ಮೂಲ ರೂಪ ಎಂತಾದಿಕ್ಕು ಹೇಳಿ ಎನಗೆ ಗೊಂತಾವುತ್ತಾ ಇಲ್ಲೆ .
ಜಾಯಿ :
ಹಾಲಿನ್ಗೆ ಎಂಗಳ ಮಕ್ಕಳ ಭಾಷೆಲಿ ಜಾಯಿ ಹೇಳಿ ಹೇಳುದು . ಹಾಲು ಹೇಳುವ ಪದ ಜಾಯಿ ಹೇಳಿ ಅಪ್ಪ ಸಾಧ್ಯತೆ ಇಲ್ಲೆ .ಕ್ಷೀರ ಹೇಳುವ ಪದ ಕೂಡ ಜಾಯಿ ಹೇಳಿ ಆಗಿಪ್ಪ ಸಾಧ್ಯತೆ ಕಮ್ಮಿ ಕಾಣುತ್ತು.ಎಂಗಳ ಭಾಷೆಲಿ ಹಾಲಿನ್ಗೆ  ಬೇರೆ ಎಂತಾದರು ಪದ ಇದ್ದಿಕ್ಕ ?ಇಲ್ಲದ್ದರೆ ಮಕ್ಕಳ ಭಾಷೇಲಿ ಮಾತ್ರ ಜಾಯಿ ಹೇಳುವ ಪದ ಹೇಂಗೆ ಬಂತು ? 
ದಾದೆ :
ಎಂಗಳ ಮಕ್ಕಳ ಭಾಷೆಲಿ ಮನುಗು /ಒರಗು ಹೇಳುದಕ್ಕೆ ದಾದೆ ಮಾಡು ಹೇಳುವ ಪದ ಇದ್ದು .ಇದರ ಮೂಲ ರೂಪ ಎಂತಾದಿಕ್ಕು ?ಅಥವಾ ದೊಡ್ದೊರುದೆ ಮನುಗುದಕ್ಕೆ ದಾದೆ ಹೇಳಿಯೇ ಹೇಳಿಗೊಂಡಿತ್ತಿದವ ?
ಚಾಬು : 
ಎರುಗು ,ಹಲ್ಲಿ ,ಹಾತೆ ,ಜೆರಳೆ ,ಮೊಂಟೆ ಮೊದಲಾದ್ದಕ್ಕೆ ಮಕ್ಕಳ ಭಾಷೇಲಿ ಚಾಬು ಹೇಳಿ  ಹೇಳುದು .ತುಂಬ ಸಣ್ಣ ಮಕ್ಕಳತ್ತರೆ ಎಲ್ಲದಕ್ಕೂ ಚಾಬು ಹೇಳಿಯೇ ಹೇಳುದು . ಮಕ್ಕ ರಜ್ಜ ದೊಡ್ಡಪ್ಪಗ ಎರುಗು ಚಾಬು ಹಲ್ಲಿ  ಚಾಬು ಇತ್ಯಾದಿ ಇನ್ನೊಂದು ಪದ ಸೇರ್ಸಿ ಹೇಳ್ತವು .ಹಾವಿಂಗೆ ಕೂಡ ಚಾಬು ಹೇಳಿಯೇ ಹೇಳುದು .ಬಹುಷ ಹಾವು ಹೇಳುವ ಪದವೇ  ಚಾಬು ಪದದ ಮೂಲ ರೂಪ ಆದಿಕ್ಕು ಹೇಳಿ ಎನಗೆ ಅನ್ಸುತ್ತು .ಇದಲ್ಲದೆ ಬೂಚು ,ತಾಚಿ ಮೊದಲಾಗಿ ಸುಮ್ಮಾರು ವಿಶಿಷ್ಟ ಪದಂಗಳ ಬಳಕೆ ಇದ್ದು .ದೊಡ್ಡೋರ ಮಾತಿಲಿ ಇಲ್ಲದ್ದ ಇಂತ  ಪದಂಗ ಮಕ್ಕಳ ಭಾಷೇಲಿ ಮಾತ್ರ ಹೆಂಗೆ ಬಂತು ?ತಿಳುದೋರು ಹೇಳಿದರೆ ಸಂತೋಷ 
ಇನ್ನೊಂದರಿ ಕಾಂಬ 
ನಮಸ್ಕಾರ - ಡಾ.ಲಕ್ಷ್ಮಿ ಜಿ ಪ್ರಸಾದ

laxmiprasad: ಗಿಳಿ ಬಾಗಿಲು(ಹವ್ಯಕ ಅಂಕಣ ) - ಎಂಗಳ ಭಾಷೆ ರಜ್ಜ ಬೇರೆ

laxmiprasad: ಗಿಳಿ ಬಾಗಿಲು(ಹವ್ಯಕ ಅಂಕಣ ) - ಎಂಗಳ ಭಾಷೆ ರಜ್ಜ ಬೇರೆ:                                  .ಮೊನ್ನೆ ಫೇಸ್ ಬುಕ್ಕಿಲಿ  ಎನ್ನ ಸಣ್ಣಾದಿಪ್ಪಗಣ ಗೆಳೆಯ(ನೆಂಟ್ರು ) ಸೂರ್ಯನಾರಾಯಣ  ತೆಂಕ ಬೈಲು (ಈಗ ಅವ  ದೇಲಂತ ಬೆಟ್ಟಿನ ದೊಡ...