Wednesday 28 May 2014

ಗಿಳಿ ಬಾಗಿಲು (ಹವ್ಯಕ ಬ್ಲಾಗ್ )-25 ಪರವೂರಿನ ಮಾವಿನ ಕಾಯಿಂದ ನಮ್ಮ ಊರಿನ ಅಂಬಟೆ ಕಾಯಿ ಅಕ್ಕು

ಕಳುದ ಸರ್ತಿ ಊರಿಂಗೆ ಅಪ್ಪನ ಮನೆ ವಾರಣಾಸಿಗೆ ಹೋದಿಪ್ಪಗ ಅಲ್ಲಿ ಅಮ್ಮಂದೆ ತಮ್ಮನುದೆ ಏನೋ ಬೆಶ್ರೊಟ್ಟಗೆ ಗೋಡೆ ಅಡಿ ರಜ್ಜ  ಜಗ್ಗಿದ್ದು .ಮಳೆ ಬರಕ್ಕಾದರೆ ಅದರ ಸರಿಯಾಗಿ ಕಟ್ಟಕ್ಕು ಹೇಳಿ ಮಾತಾಡಿಗೊಂಡು ಇತ್ತಿದವು .ಎಂಗಳ ಊರಿಲಿಯೇ ಒಂದು ಮೇಸ್ತ್ರಿ ಇದ್ದು .ಕಂಡಾಬಟ್ಟೆ ಬ್ಯುಸಿ ಆಗಿರೆಕ್ಕು .ಅದರ ಬಪ್ಪಲೆ ಹೇಳಿದೆ ಬೈನ್ಡಿತ್ತಿಲ್ಲೆ ಅಡ.ಅಂಬಗ ಮಾತಿನ ನಡುವೆ ಅಮ್ಮ "ಹೇಳಿದ "ವಾಣಿಯ (ಎನ್ನ ಅಕ್ಕನ )ಮನೆ ಹತ್ತರೆ  ಒಂದು ಒಳ್ಳೆ ಮೇಸ್ತ್ರಿ ಇದ್ದಡ ,ಅದರ ಹೇಳುವ" ಹೇಳಿ .ಅಂಬಗ ತಮ್ಮ  "ಬೇರೆ ಊರಿನೋರ ಸಂಗತಿ ಆಗ ಅಮ್ಮ  .ಪರ ಊರಿನ ಮಾವಿನ ಕಾಯಿಂದ ನಮ್ಮ ಊರಿನ ಅಂಬಟೆ ಅಕ್ಕು ಹೇಳಿ ಮಾತೇ ಇಲ್ಲೆಯ "ಹೇಳಿ ಹೇಳಿದ .
ಅಷ್ಟರ ತನಕ ಅವರ ಮಾತು ಕಥೆಲಿ ಎನಗೆನೂ ಅಷ್ಟು ಆಸಕ್ತಿ ಇತ್ತಿಲ್ಲೆ.ಅಲ್ಲೇ ಕೂದಿತ್ತಿದೆ.ಹಾಂಗೆ ಕೆಮಿಗೆ ಬಿದ್ದತ್ತು ಅಷ್ಟೇ .ಆದರೆ ಈ ನುಡಿಗಟ್ಟು ಕೇಳಿದ ತಕ್ಷಣ ಎನ್ನ ಕೆಮಿ ಕುತ್ತ ಆತು !

ಅಪ್ಪು !ಬೇರೆ ಊರಿನೋರು  ಒಂದರಿಯಂಗೆ ಬಂದು ಕೆಲಸ ಮಾಡಿ ಕೊಟ್ಟಿಕ್ಕಿ ಹೋಕು.ಆದರೆ ಮತ್ತೆ ಏನಾರು ಅದರಲ್ಲಿ ಸಣ್ಣ ಪುಟ್ಟ ಸಮಸ್ಯೆಗ ಬಂದರೆ ,ಅಥವಾ ಇನ್ನೇನೋ ಸಣ್ಣ ಪುಟ್ಟ ಕೆಲಸ ಹೇಳುಲೆ ಅವು ಇರ್ತವ ?ಮತ್ತೆ ಬಂದು ಸರಿ ಮಾಡಿ ಕೊಡುತ್ತವ ?,ಮತ್ತೆ ಅದಕ್ಕೆ ನಾವು ನಮ್ಮ ಊರಿನ ಮೇಸ್ತ್ರಿಯನ್ನೇ ಹಿಡಿಯಕ್ಕು .ಇಲ್ಲದ್ದರೆ ಬೇರೆಯೋರು ಮಾಡಿದ ಕೆಲಸವ ಅವು ಸರಿ ಮಾಡುಲೆ ಸುಲಭಕ್ಕೆ  ಒಪ್ಪುತ್ತವ ?ಅದೆಲ್ಲ ದೊಡ್ಡ ರಗಳೆ ಸಂಗತಿ .
ಅದರ ಬದಲು ನಮ್ಮ ಊರಿನ ಮೇಸ್ತ್ರಿಹತ್ತರೆ ಕೆಲಸ ಮಾಡ್ಸಿರೆ ಮುಂದೆ ಕೂಡಾ ಏನಾರು ಬೇಕಾರೆಅದು ಊರಿಲಿಯೆ ಇರ್ತನ್ನೇ .
ದೂರದ ಊರಿಲಿ ಅಪ್ಪ ಅಪ್ಪೆಮಿಡಿಯಂಥ ಮಾವಿನ ಕಾಯಿ ಉಪ್ಪಿನಕಾಯಿ ಹಾಕುಲೆ ,ಗೊಜ್ಜಿ ಮಾಡುಲೆ  ತುಂಬಾ ಒಳ್ಳೆಯ ರುಚಿಯ ವಸ್ತು .ಅಂಬಟೆ ಕಾಯಿ ಮಾವಿನಕಾಯಿಯಷ್ಟು ರುಚಿಯಲ್ಲ .ಆದರೆ ಅಂಬಟೆ ಕಾಯಿ ನಮ್ಮ ಜಾಲಿನ ಹತ್ರಣಮರಲ್ಲಿಯೇ ಆವುತ್ತು ,ಕೊಕ್ಕೆ ತೆಕ್ಕೊಂಡು ಹೋಗಿ ಯಾವಾಗ ಬೇಕಾರು ಕೊಯ್ದು ತಪ್ಪಲಕ್ಕು.ಆರತ್ರೂ ಕೆಳಕ್ಕೂ ಹೇಳಿ ಇಲ್ಲೇ. ಎಂತಕೆ ಹೇಳ್ರೆ ಅದು ನಮ್ಮದೇ ಅನ್ನೇ .ಅದಕ್ಕೆ ಹೇಳುದು ಪರ ಊರಿನ ಮಾವಿನ ಕಾಯಿಂದ ನಮ್ಮ ಊರಿನ ಅಂಬಟೆ ಕಾಯಿ ವಾಸಿ ಹೇಳಿ .
ಆದರೆ ಇದು ನಮ್ಮ ಭಾಷೆಲಿ ನುಡಿಗಟ್ಟು ಆಗಿ ಬಳಕೆ ಆವುತ್ತು .

ನಮಗೆ ದೂರಲ್ಲಿತುಂಬಾ ಜನ ಆತ್ಮೀಯರು  ಹತ್ತರಣ ಸಂಬಂಧಿಕರು ಇಕ್ಕು.ಆದರೆನಮಗೆ ಏನಾರುಸಮಸ್ಯೆಗ ಬಂದರೆ ತಕ್ಷಣ ಸಹಾಯಕ್ಕೆ ಬಪ್ಪದು ,ಸಿಕ್ಕುದು ನೆರೆ ಕರೆಯ ಜನಂಗ ಅಲ್ಲದ ?ಅವು ನಮಗೆ ಸಂಬಂಧಿಕರು ಅಲ್ಲದ್ದೇ ಇಕ್ಕು .ಆದರೆ ಅವರತ್ರೆ ನಾವು ಒಳ್ಳೆದು ಮಾಡಿಕ್ಕೊಳ್ಳಕ್ಕು ಹೇಳುವ ಲೋಕ ಜ್ಞಾನದ ತಿಳುವಳಿಕೆಯ ಮಾಡ್ಸುತ್ತು "ಪರವೂರಿನ ಮಾವಿನ ಕಾಯಿಂದ ನಮ್ಮ ಊರಿನ ಅಂಬಟೆ ಕಾಯಿ ಅಕ್ಕು"ಹೇಳುವ ಹವ್ಯಕ ನುಡಿಗಟ್ಟು .
ಕೋಳ್ಯೂರು ಸೀಮೆಯ ಹವ್ಯಕ ಭಾಷೇಲಿ ಇದರ ಬಳಕೆ ಇದ್ದು ,ಬೇರೆ ಕಡೆದೆ ಇಕ್ಕು ಅಲ್ಲದ ?

ಗಿಳಿ ಬಾಗಿಲು(ಹವ್ಯಕ ಬ್ಲಾಗ್ )- ಉಪ್ಪಿದ್ದ ಉಪ್ಪಿನ ಕಲ್ಲಿದ್ದ ?ಹೇಳಿ ಕೇಳಿದ್ದಿಲ್ಲೆ

ಇಂದು  ಕೊದಿಲಿಂಗೆ ರಜ್ಜ ಉಪ್ಪು ಕಮ್ಮಿ ಆಗಿತ್ತು .ಮಗ ಉಂಬಗ ಉಪ್ಪಿದ್ದ ಹೇಳಿ ಕೇಳಿದ .ಅಷ್ಟಪ್ಪಗ ಅವನ ಬಾಯಿಗೆ ಕೋಲು ಹಾಕುಲೆ ಆನು ಸುಮ್ಮನೆ ಉಪ್ಪು ತಂದು ಬಳುಸದ್ದೆ :ಮನೇಲಿ ಉಪ್ಪು ಇರದ್ದೆ ಒಳಿತ್ತ ಮಾರಾಯ ?ಹೇಳಿ ಕೇಳಿದೆ .ಅವಂದೆ ಬಿಡದ್ದೆ "ಅಪ್ಪು ಉಪ್ಪೇ ಇರಕ್ಕು ಹೇಳಿ ಎಂತ ?ಉಪ್ಪಿನ ಕಲ್ಲುದೆ ಇರ್ತಿಲ್ಲೆಯ" ಹೇಳಿ ಕೇಳಿದ .ಅಷ್ಟಪ್ಪಗ ಉಪ್ಪುದೆ ಉಪ್ಪಿನ ಕಲ್ಲುದೆ ಬೇರೆಯ ಹೇಳಿ ಚರ್ಚೆ ಬಂತು .ಅಷ್ಟಪ್ಪಗ ಎನಗೆ "ಉಪ್ಪಿದ್ದ ಉಪ್ಪಿನ ಕಲ್ಲಿದ್ದ ಹೇಳಿ ಕೇಳಿದ್ದಿಲ್ಲೆ " ಹೇಳುವ ಒಂದು ಆಡು ಮಾತು ನೆಂಪು ಆತು .
ಅನು ಸಣ್ಣಾದಿಪ್ಪಗ ಈ ನುಡಿಗಟ್ಟಿನ ಕೇಳಿದ್ದೆ.ಆದರೆ ಅದರ ಅರ್ಥ ಎಂತ ಹೇಳಿ ಎನಗೆ ಗೊಂತಿತ್ತಿಲ್ಲೆ.
.ಮನುಷ್ಯ ಸಮಾಜ ಜೀವಿ .ತನ್ನ ಸುತ್ತ ಮುತ್ತಲಿನ ಜನರತ್ತರೆ ನೆಂಟ್ರು ಗಳ ಅಮ್ಬಗಂಬಗ ಕಾಣಕ್ಕಾವುತ್ತು.ಅವರ ಮನೆಗೆ ಹೊಯಕ್ಕಾವುತ್ತು .ಎಲ್ಲೋರು ಒಂದೇ ರೀತಿ ಇರ್ತವಿಲ್ಲೆ .ನಮಗೆ ಕೆಲವು ಜನಂಗಳ ಹತ್ರೆ ಹೆಚ್ಚು ಆತ್ಮೀಯತೆ ಇರುತ್ತು .ಕೆಲವು ಜನಂಗಳ ಹತ್ತರೆ ಅಷ್ಟಕ್ಕಷ್ಟೇ ಇರುತ್ತು .
ನಮಗೆ ಹೆಚ್ಚ್ಚು ಆತ್ಮೀಯರಾಗಿಪ್ಪೋರ ಮನೆಗೆ ಹೋದರೆ ಅಥವಾ ಅವರ ಎಲ್ಲಿಯಾದರೂ ಕಂಡರೆ ನಾವು ಅವರತ್ರೆ ಅವರ ಕೆಲಸ ಕಾರ್ಯ ದ ಬಗ್ಗೆ ಮಕ್ಕಳು ಮರಿಗಳ ಬಗ್ಗೆ ವಿಚಾರ್ಸುತ್ತು
ಆರಾದರೂ ನಮಗೆ ಅಷ್ಟು ಹಿತ ಇಲ್ಲದ್ದೋರ ಮನೆಗೆ ಹೋದರೆ  ಅವರ ಖಾಸಾ ವಿಷಯಲ್ಲಿ ಎಂತದುದೆ ಮಾತಾಡುತ್ತವಿಲ್ಲೆ .ಹೋದ ಕೆಲಸ ಎಂತದು ಅದರ ಮಾತ್ರ ಮುಗಿಸಿಕ್ಕಿ ಅವು ಕೊಟ್ಟ ಕಾಪಿಯ ಚಾಯವಾ ಕುಡುದಿಕ್ಕಿ ಬತ್ತು !
ಇಂಥ ಸಂದರ್ಭಲ್ಲಿ ಆನು ಅವರತ್ತರೆ" ಉಪ್ಪಿದ್ದ ಉಪ್ಪಿನ ಕಲ್ಲಿದ್ದ ?ಹೇಳಿ ಕೇಳಿದ್ದಿಲ್ಲೆ .ಎನ್ನಷ್ಟಕ್ಕೆ ಕೆಲಸ ಮುಗಿಸಿಕ್ಕಿ ಬೈಂದೆ" ಹೇಳಿ ಹೇಳುತ್ತವು .
ಅವರ ಒಳಗಿನ ವ್ಯವಹಾರ ನಮಗೆ ಇಷ್ಟ ಇಲ್ಲೇ ಅವರತ್ತರೆ ಎಷ್ಟು ಬೇಕೋ ಅಷ್ಟು ಇದ್ದರೆ ಸಾಕು ಹೇಳುವ ಅರ್ಥವ ಉಪ್ಪಿದ್ದ ಉಪ್ಪಿನ ಕಲ್ಲಿದ್ದ ?ಹೇಳಿ ಕೇಳಿದ್ದಿಲ್ಲೆ" ಹೇಳುವ ನುಡಿಗಟ್ಟು ತಿಳುಸುತ್ತು .
ಇದು ಕೋಳ್ಯೂರು ಸೀಮೆ ಕನ್ನಡಲ್ಲಿ ಕೂಡಾ ಉಪ್ಪುಂಟ ಉಪ್ಪಿನ ಕಲ್ಲುಂಟ ?ಹೇಳಿ ಬಳಕೆಲಿ ಇದ್ದು .ಈ ಪರಿಸರಲ್ಲಿ ಇದು ತುಳುವಿಲಿ ರಜ್ಜ ಬೇರೆ ರೀತಿಲಿ ಬಳಕೆ ಇದ್ದು .ತುಳುವಿಲಿ ನೀರುಂಡ ಅರ್ಕಂಜಿ ಉಂಡಾದ್ ಕೇನುದುಜ್ಜಿ ಹೇಳುವ ಮಾತುಪ್ರಚಲಿತ ಇದ್ದು .
ಬಹುಶ ಬೇರೆ ಕಡೆಲಿದೆ ನಮ್ಮ ಹವ್ಯಕ ಭಾಷೆಲಿ ಈ ರೀತಿಯ ನುಡಿಗಟ್ಟಿನ ಬಳಕೆ ಇಕ್ಕು ಹೇಳಿ ಎನ್ನ ಅಂದಾಜು .ಅಥವಾ ಇದಕ್ಕೆ ಸಮಾನಾಂತರವಾದ ಬೇರೆ ಮಾತುಗಳ ಬಳಕೆ ಇಪ್ಪಲೂ ಸಾಕು .ಈ ಬಗ್ಗೆ ಗೊಂತಿಪ್ಪೋರು ತಿಳುಸಿ ಆತಾ .

Wednesday 21 May 2014

ಗಿಳಿಬಾಗಿಲು (ಹವ್ಯಕ ಬ್ಲಾಗ್ )-ಆನೆ ಹೋಪಲ್ಲಿ ಬಿಟ್ಟು ಸೂಜಿ ಹೋಪಲ್ಲಿ ಅಡೆಪ್ಪುದು -ಡಾ.ಲಕ್ಷ್ಮೀ ಜಿ ಪ್ರಸಾದ

ಮನುಷ್ಯರ ಸ್ವಭಾವವೇ ವಿಚಿತ್ರ .ಒಬ್ಬ ಇನ್ನೊಬ್ಬನ ಹಾಂಗೆ ಇರ್ತವಿಲ್ಲೆ.
.ಕೆಲವು ಜನಂಗ ತುಂಬಾ ಉದಾರಿಗ .ಕೆಲವು ಜನಂಗ ಎಂಜೆಲು ಕೈಲಿ ಕಾಕೆ ಓಡ್ಸದ್ದಷ್ಟು ಪಿಟ್ಟಾಸಿಗ,ಕೆಲವು ಜನಂಗ ತುಂಬಾ ಸರಳವಾಗಿಪ್ಪಲೆ ಬಯಸುವೋರು ,ಕೆಲವು ಜನಂಗ ತುಂಬಾ ಧಂ ಧೂಮ್ ಆಗಿ ಖರ್ಚು ಮಾಡುವೋರು .ಮನೆಲಿ ಇದ್ದ ಇಲ್ಲೆಯ ಹೇಳಿ ಕೂಡಾ ನೋಡದ್ದೆ ಖರ್ಚು ಮಾಡುವೋರು,ಮನೇಲಿ ಕೊಳವಷ್ಟು ಇದ್ದರೂ ಬೇರೆಯೋರಿಂಗೆ ಒಂದು ತುಂಡು ಕೊಡದ್ದೋರು ,ಹೆಸರಿನ್ಗಾಗಿಯಾ ಅಥವಾ ಇನ್ನೇನಾದರೂ ಕಾರಣಕ್ಕೋ ಸಂಘ ಸಂಸ್ಥೆಗೊಕ್ಕೆ ಧಾರಾಳ ಕೊಡುವೋರು ,ಮನೆ ಬಾಗಿಲಿಂಗೆ ಬಂದ ಬಡವಂಗೆ ಅಶನ ಹಾಕುಲೂ ಕುರೆ ಮಾಡುವೋರು,ದೇವಸ್ಥಾನಕ್ಕೆ ,ಮಠ-ಮಂದಿರಂಗೊಕ್ಕೆ ಧಾರಾಳ ಕೊಡುವೋರುದೆ ಪಕ್ಕದ ಮನೆಯ ಬಡ ಮಾಣಿಗೆ ಕಿಡ್ನಿ ಜೋಡಣೆಗೆ ಪೈಸೆ ಕೊಡುಲೆ ಮನಸ್ಸು ಮಾಡದ್ದೆ ಇಪ್ಪೋರು ..ಹೀಂಗೆ ಪ್ರತಿಯೊಬ್ಬರಿಂಗು ಅವರದೇ ಆದ ಸ್ವಭಾವ ರೀತಿ ನೀತಿಗ ಇರ್ತು

ಆದರೂ ಸಮಾಜದ ಸಾಮಾನ್ಯವಾಗಿಪ್ಪ  ರೀತಿ ನೀತಿಗೊಕ್ಕೆ   ತೀರಾ ಭಿನ್ನವಾಗಿಪ್ಪೋರ ಬಗ್ಗೆ ಜನಂಗ ಮಾತಾಡಿಗೊಂಬದುದೆ ಸಾಮಾನ್ಯವಾದ ವಿಚಾರ. ಮನುಷ್ಯರ ಇಂಥ ಕೆಲವು ವಿಶಿಷ್ಟ ಸ್ವಭಾವಂಗಳ ಬಗ್ಗೆ ಹೇಳುವಾಗ ಹೆಚ್ಚಾಗಿ ನುಡಿಗಟ್ಟುಗಳ ಬಳಕೆ ಇರುತ್ತು .

ಇಂಥ ಒಂದು ವಿಶಿಷ್ಟ ನುಡಿಗಟ್ಟು "ಆನೆ ಹೋಪಲ್ಲಿ ಬಿಟ್ಟು ಸೂಜಿ ಹೋಪಲ್ಲಿ ಅಡೆಪ್ಪುದು "ಹೇಳುದು .ಒಂದು ಕಡೆ ಬೇಜವಾಬ್ದಾರಿ ಉದಾಸೀನ ಅವ್ಯವಸ್ಥೆಯ ಕಾರಣಂದಾಗಿ ಸಾವಿರ ಗಟ್ಲೆ ನಷ್ಟ ಆವುತ್ತಾ ಇರುತ್ತು .ಅದರ ಸರಿ ಪಡಿಸುಲೆ ಹೋಗದ್ದೆ ಸಣ್ಣ ಪುಟ್ಟ ವಿಚಾರಗಳ ಬಗ್ಗೆ ಹೆಚ್ಚು ಗಮನ ಕೊಟ್ಟು ಸರಿ ಪಡಿಸುಲೆ ಹೋಪ ಜನಂಗಳನ್ನು ನಾವು ಸುತ್ತ ಮುತ್ತ ನೋಡುತ್ತು .
ಉದಾ ಹರಣೆಗೆ ಹೇಳುತ್ತರೆ ತೋಟಕ್ಕೆ ವಾರಕ್ಕೆ ಒಂದರಿದೆ ಕಾಲು ಮಡುಗದ್ದೆ ಅಡಕೆ ತೆಂಗು ಕದ್ದು ಹೊವುತ್ತಾ ಇರ್ತು .ದನಗ ಬಂದು ಬೆಳೆ ಸಪ್ಪಾಯಿ ಆಗಿರ್ತು .ಅದರ ಬಗ್ಗೆ ಕಾಳಜಿ ಮಾಡದ್ದೆ ಮನೆ ಹತ್ರಣ ಮಾವಿನ ಮರಂದ ಬಿದ್ದ ನಾಲ್ಕು ಮಾವಿನ ಹಣ್ಣಿನ ಆರೋ ಹೆರ್ಕಿಕೊಂಡು ಹೋಪಗ ಅದರ ಬಗ್ಗೆ ಭಾರೀ ಜಾಗ್ರತೆ ಮಾಡುದು !

 ತೋಟಂದ ಹಾಡು ಹಗಲೇ  ಕದ್ದು ಹೋಪ ಬಗ್ಗೆ ಜಾಗ್ರತೆ ಮಾಡುಲೆ ಇಲ್ಲೇ .ಬದಲಿಂಗೆ ಮನೆ ಕೆಲಸದೋವಕ್ಕೆ ಬಳುಸುವಗ ಕೈ ಕುಂಟು ಮಾಡುದು ,ಅವಕ್ಕೆ ಬರೀ ಕಳಪೆ ಊಟ ತಿಂಡಿ ಕೊಡುದು ಇತ್ಯಾದಿ ಮಾಡುವ ಅನೇಕ ಜನರ ನಾವು ಕಾಣುತ್ತಾ ಇರುತ್ತು .

ಇಂಥೋರ ಬಗ್ಗೆ ಹೇಳುವಾಗ ಬಳಕೆ ಅಪ್ಪ ನುಡಿಗಟ್ಟು ಇದು
ಆನೆ ಹೋಪಲ್ಲಿ ಬಿಟ್ಟು ಸೂಜಿ ಹೋಪಲ್ಲಿ ಅಡೆಪ್ಪುದು ಹೇಳಿರೆ ಆನೆ ಹೊಪಷ್ಟು ದೊಡ್ಡ ಮಾರ್ಗಲ್ಲಿ ದೊಡ್ಡ ಮಟ್ಟಲ್ಲಿ ನಷ್ಟ ಅಪ್ಪದರ ತಡೆಯದ್ದೆ ಅದರ ಹಾಂಗೆ ಬಿಟ್ಟು ಸೂಜಿ ಹೊಪಷ್ಟು ಸಣ್ಣ ಮಾರ್ಗಲ್ಲಿ ಅಪ್ಪ ಸಣ್ಣ ಪುಟ್ಟ ನಷ್ಟವ ತಡವ ನಿರರ್ಥಕ ಯತ್ನ  ಹೇಳಿ ಅರ್ಥ .
ಸೂಜಿ ಹೊಪಷ್ಟು ಸಣ್ಣಕ್ಕೆ ನಷ್ಟ ಆದರೆ ಎಷ್ಟು ಅಕ್ಕು ?ಉಂಬಲೆ ತಿಂಬಲೆ ಕೊಡುದರಲ್ಲಿ  ಸಣ್ಣ ಮಾಡಿ ಎಷ್ಟು ಒಳಿಸುಲೆ ಎಡಿಗು ?

ಅಂತಹ   ಪ್ರಯತ್ನ ನಿರರ್ಥಕ ಹೇಳಿ ಈ ನುಡಿಗಟ್ಟು ತಿಳಿಸುತ್ತು.

Saturday 3 May 2014

ಗಿಳಿಬಾಗಿಲು (ಹವ್ಯಕ ಬ್ಲಾಗ್ ) ಹಳೆ ಮನೆ ಪಾಪದೆ ಬೇಡ ,ಹೊಸ ಮನೆ ಪುಣ್ಯದೆ ಬೇಡ :ಡಾ.ಲಕ್ಷ್ಮೀ ಜಿ ಪ್ರಸಾದ

ಈಗೀಗ ನಮ್ಮ ಭಾಷೆಲಿ ತುಂಬಾ ಬದಲಾವಣೆ ಆವುತ್ತಾ ಇದ್ದು .ಕನ್ನಡ ಹಾಂಗೆ ಬೇರೆ ಭಾಷೆಗಳ ಪ್ರಭಾವಂದಾಗಿ ಸುಮಾರು ಆಡು ನುಡಿಗಲ ಬಳಕೆ ಅಪರೂಪ ಆವುತ್ತಾ ಇದ್ದು .

ಈಗ ಅಷ್ಟಾಗಿ ಬಳಕೆಲಿ ಇಲ್ಲದ್ದೆ ಇಪ್ಪ ಒಂದು ಅಪುರೂಪದ ನುಡಿಗಟ್ಟು ಹಳೆ ಮನೆ ಪಾಪದೆ ಬೇಡ ಹೊಸ ಮನೆ ಪುಣ್ಯದೆ ಬೇಡ ಹೇಳುದು .
ನಮಗೆ ಆರತ್ತರೆ ಆದರು ರಜ್ಜ ಅಸಮಾಧಾನ ಇದ್ದರೆ ಅಥವಾ ಅವು ತುಂಬಾ ಕಸಂಟುಗ/ಪಿಸುಂಟುಗ ಆಗಿದ್ದರೆ ಅವರ ಸುದ್ದಿಯೇ ನಮಗೆ ಬೇಡ ಹೇಳುವ ಸಂದರ್ಭದಲ್ಲಿ ಈ ಮಾತಿನ ಬಳಕೆ ಮಾಡುತ್ತವು .
ಅವರ ಒಳ್ಳೇದು ಕೆಟ್ಟದು ಎರಡುದೆ ನಮಗೆ ಬೇಡ ಅವರ ಸ್ನೇಹವೂ ಬೇಡ ವಿರೋಧವೂ ಬೇಡ ಎಷ್ಟು ಬೇಕೋ ಅಷ್ಟು ಇದ್ದರೆ ಸಾಕು ಹೇಳುವ ಅರ್ಥವ ಹಳೆ ಮನೆ ಪಾಪದೇ ಬೇಡ ಹೊಸ ಮನೆ ಪುಣ್ಯದೆ ಬೇಡ ಹೇಳುವ ಮಾತು ಧ್ವನಿಸುತ್ತು .

ಇಲ್ಲಿ ಹಳೆ ಮನೆ ಪಾಪ ಹೇಳುವ ಮಾತು ಕೆಡುಕು ,ವಿರೋಧ ದ್ವೇಷವ ಸೂಚಿಸಿದರೆ ಹೊಸ ಮನೆ ಪುಣ್ಯ ಹೇಳುವ ಮಾತು ಒಳಿತು, ಸ್ನೇಹ ವ ಸೂಚಿಸುತ್ತು .ಅವರ ಪಾಪ ಪುಣ್ಯ ಎರಡೂ ಬೇಡ ಹೇಳಿರೆ ಅವರ ಒಳ್ಳೇದು ಕೆಟ್ಟದು ಎರಡರ ಸಂಗತಿಯೂ ಅವರಲ್ಲಿ ನಮಗೆ ಬೇಡ ಅಷ್ಟಕ್ಕಷ್ಟೇ ಇದ್ದರೆ ನಮಗೆ ಒಳ್ಳೆದು ಹೇಳುವ ಭಾವದೆ ಇಲ್ಲಿ ಕಾಣುತ್ತು.
ಕೋಳ್ಯೂರು ಸೀಮೆಲಿ ಈ ನುಡಿಗಟ್ಟು ಬಳಕೆಲಿ ಇದ್ದು ಬೇರೆ ಕಡೆಲಿದೆ ಇಕ್ಕು ಅಥವಾ ಸಮಾನಾಂತರವಾಗಿ ಬೇರೆ ಯಾವುದಾದರೂ ಮಾತಿನ ಬಳಕೆ ಇಕ್ಕು ,ಗೊಂತಿದ್ದೋರು ತಿಳುಸಿ.ಓದಿಅಭಿಪ್ರಾಯ ತಿಳುಸಿ 
ಇನ್ನೊಂದರಿ ಕಾಂಬ
ನಮಸ್ಕಾರ
ಲಕ್ಷ್ಮೀ ಜಿ ಪ್ರಸಾದ