Monday 13 November 2017

ಗಿಳಿ ಬಾಗಿಲು ಹವ್ಯಕ ನುಡಿಗಟ್ಟು 45 ಆನೆ ಹೋಪಗಳೂ ಗಂಟೆ ಕಟ್ಟಕ್ಕಾವುತ್ತು© ಡಾ.ಲಕ್ಷ್ಮೀ ಜಿ ಪ್ರಸಾದ


ಗಿಳಿ ಬಾಗಿಲು ಹವ್ಯಕ ನುಡಿಗಟ್ಟು 45 ಆನೆ ಹೋಪಗಳೂ ಗಂಟೆ ಕಟ್ಟಕ್ಕಾವುತ್ತು© ಡಾ.ಲಕ್ಷ್ಮೀ ಜಿ ಪ್ರಸಾದ
ನಾವು ಮಾಡುದು ಒಳ್ಳೆಯ ಮಹತ್ವದ ಕೆಲಸವೇ ಆಗಿದ್ದರೂ ಅದಕ್ಕೆ ಪ್ರಚಾರದ ಅವಶ್ಯಕತೆ ಇರುತ್ತು.ಇಲ್ಲದ್ದರೆ ಅದು ಬೇರೆಯೋರಿಂಗೆ ಮುಟ್ಟುತ್ತಿಲ್ಲೆ ಹೇಳುವ ಅರ್ಥ ಕೊಡುವ ಮಾತಿದು.
ಆನೆ ತುಂಬಾ ದೊಡ್ಡ ಪ್ರಾಣಿ ಆದರೂ ಅದು ಹೋಪಗ ಅದರ ಕೊರಳಿಂಗೆ ಗಂಟೆ ಕಟ್ಟಕ್ಕಾವುತ್ತು.ಇಲ್ಲದ್ದರೆ ಅದು ಬಂದದು ಗೊಂತಾವುತ್ತಿಲ್ಲೆ ಹೇಳುದು ಇದರ ಅರ್ಥ.
ಮೊನ್ನೆ ಶನಿವಾರ ಬೆಂಗಳೂರಿನ ಹವ್ಯಕ ಸಭೆಲಿ ಯಕ್ಷಗಾನ ತರಗತಿಗಳ ಉದ್ಘಾಟಣೆಯ ನಂತರ ಅಧ್ಯಕ್ಷೀಯ ಭಾಷಣ ಮಾಡುವಾಗ ಡಾ.ಗಿರಿಧರ ಕಜೆ ಈ ನುಡಿಗಟ್ಟಿನ ಮಾತಿನ ನಡುವೆ ಹೇಳಿದವು.ಹವ್ಯಕ ಸಭಾಂಗಣಲ್ಲಿ ಪ್ರತಿ ಆದಿತ್ಯವಾರ ಉದಿಯಪ್ಪಗ ಎಲ್ಲಾ ಜಾತಿ ವರ್ಗ ಧರ್ಮದ ಆಸಕ್ತಿ ಇಪ್ಪ ಜನಂಗೊಕ್ಕೆ ಉಚಿತವಾಗಿ ಹೇಳಿಕೊಡುವ ವಿಚಾರವ ಫೇಸ್ ಬುಕ್, ವಾಟ್ಸಪ್ ಗಳಲ್ಲಿ ಹರಡಕ್ಕು.ಇಲ್ಲದ್ದರೆ ಜನಂಗೊಕ್ಕೆ ಗೊಂತಾವುತ್ತಿಲ್ಲೆ ಹೇಳಿ ಹೇಳುತ್ತಾ ಆನೆ ಹೋಪಗಳುದೆ ಗಂಟೆ ಕಟ್ಟಕ್ಕಾವುತ್ತು ಹೇಳುವ ಮಾತಿನ ಬಳಕೆ ಮಾಡಿದವು‌
ಒಳ್ಳೆಯ  ವಿಚಾರ ಗೊಂತಾಯಕ್ಕಾದರೂ ಅದಕ್ಕೆ ಪ್ರಚಾರ ಬೇಕಾವುತ್ತು ಹೇಳುದರ ಹೇಳುವ  ಚಂದದ ನುಡಿಗಟ್ಟು ಇದು.ಇದರ ಸಣ್ಣಾದಿಪ್ಪಗಲೇ ಆನು ಕೇಳಿತ್ತಿದೆ.ಅದರ ಅರ್ಥ ಸ್ಪಷ್ಟವಾಗಿ ಗೊಂತಾದ್ದು ಮೊನ್ನೆಯೇ ಎನಗೆ.
ಇಂದು ಮತ್ತೆ ಇದು ನೆನಪಾತು.ಇಂದು ಕಾಲೇಜಿಂದ ಬಪ್ಪಗ ಬಸ್ಸಿಲಿ  ಮುನಿಯಮ್ಮ ಹೇಳುವ  ಅಜ್ಜಿಯ ಪರಿಚಯ ಆತು.ಗೆಂಡ ಮಕ್ಕ ಆರೂ ಇಲ್ಲೆ.ಇದ್ದ ರಜ್ಜ ಗೆದ್ದೆಯ ದಾಯಾದಿಗ ಒಳಹಾಕಿಕೊಂಡಿದವು.ಈ ಅಜ್ಜಿ ಎಡಿಗಾದಷ್ಟು ಸಮಯ ಕೂಲಿ ಕೆಲಸಕ್ಕೆ ಹೋಗಿ ಬದುಕಿತ್ತು.ಈಗ ಕೆಲಸ ಮಾಡುಲೆ ಎಡಿಯದ್ದೆ ಭಿಕ್ಷೆ ಬೇಡಿ ಬದುಕುವ ವಿಚಾರವ ಕೇಳಿ ಬೇಜರಾಗಿ ಎನ್ನ ಕೈಲಿದ್ದ ಐನೂರು ರುಪಾಯಿ ಕೊಟ್ಟು ಎನ್ನ ಮೊಬೈಲ್ ನಂಬರ್ ‌ಮತ್ತೆ ಕಾಲೇಜು ವಿಳಾಸ ಕೊಟ್ಟು ಅಲ್ಲಿಗೆ ಬಪ್ಪಲೆ ಹೇಳಿದೆ‌.ಬಂದರೆ ಅ ಅಜ್ಜಿಯ ಯಾವುದಾದರೂ ವೃದ್ಧಾಶ್ರಮಕ್ಕೆ ಸೇರಿಸಿ ಒಂದು ವ್ಯವಸ್ಥೆ ಮಾಡುವ ಉದ್ದೇಶ ಎನ್ನದು.
ಇದರ ಫೇಸ್ ಬುಕ್ ಲಿ ಹಾಕಕ್ಕಾ ಬೇಡದಾ ಹೇಳಿ ದ್ವಂದ್ವ ಆತೆನಗೆ.ಆ ಮೇಲೆ ಹಾಕಿದೆ‌ಎಂತಕೆ ಹೇಳಿರೆ ಪ್ರಾಯದೋರಿಂಗೆ ಆಶಕ್ತರಿಂಗೆ ಸಹಾಯ ಮಾಡುಲೆ ಪ್ರೇರಣೆ ಆಗಲಿ ಹೇಳಿ ಅನ್ಸಿತ್ತು.ಅಷ್ಟಪ್ಪಗ ಆನೆ ಹೋಪಗಳುದೆ ಗಂಟೆ ಕಟ್ಟಕ್ಕು ಹೇಳುವ ಮಾತು ನೆಂಪಾತು
© ಡಾ.ಲಕ್ಷ್ಮೀ ಜಿ ಪ್ರಸಾದ

Tuesday 7 November 2017

ಗಿಳಿ ಬಾಗಿಲು: ಹವ್ಯಕ ನುಡಿಗಟ್ಟು 45 ಬೆಂದಷ್ಟು ಸಮಯ ತಣಿವಲಿಲ್ಲೆ© ಡಾ.ಲಕ್ಷ್ಮೀ ಜಿ ಪ್ರಸಾದ

ಮೊನ್ನೆ ಅಮ್ಮನ ಹತ್ತರೆ ಮಾತಾಡುವಾಗ ನಮ್ಮ ಹವ್ಯಕ ಮಾಣಿಯಂಗೊಕ್ಕೆ ಕೂಸು ಹುಡುಕುವ ಅಬ್ಬೆ ಅಪ್ಪಂದಿರ ತೊಳಲಾಟದ ಬಗ್ಗೆ ಮಾತು ಬಂತು.ಎರಡು ದಶಕಗಳ ಹಿಂದೆ ನಿರಂತರ ಸ್ತ್ರೀ ಬ್ರೂಣ ಹತ್ಯೆ ಮಾಡಿದ್ದರ ಪರಿಣಾಮ ಈಗ ಕಾಣುತ್ತಾ ಇದ್ದು.ಕೂಸು ಬೇಡ ಹೇಳಿ ಕಾಂಬಲೆ ನಮ್ಮ ಸಮಾಜವೇ ಕಾರಣ ಆಗಿತ್ತು. ಈಗ ಒಂದು ಹದಿನೈದು ಇಪ್ಪತ್ತು ವರ್ಷಂಗಳ ಮೊದಲಿನವರೆಗೂ ಹವ್ಯಕರಲ್ಲಿ ಬದಿ( ವರದಕ್ಷಿಣೆ ) ಇತ್ತು.ಇಪ್ಪತ್ತು ಮೂವತ್ತು ವರ್ಷ ಮೊದಲು ಕೂಸು ರಜ್ಜ ಕಪ್ಪಾದರೆ ಕಲಿಯದ್ದೆ ಇದ್ದರೆ ಅಂತ ಕೂಸುಗೊಕ್ಕೆ ಮಾಣಿ ಸಿಕ್ಕುದು ಕಷ್ಟ ಇತ್ತು‌ಚಂದ ಇದ್ದ ಕೂಸುಗೊಕ್ಕೆ ಕೂಡ ಬದಿ‌ಕೊಡದ್ದೆ ಮದುವೆ ಆಗಿಯೊಂಡು ಇತ್ತಿಲ್ಲೆ. ಇದರ ಪರಿಣಾಮವಾಗಿ ಅಂಬಗ ತುಂಬಾ ಕೂಸುಗ ಮದುವೆ ಆಗದ್ದೆ ಹಾಂಗೆ ಒಳುದ್ದವು.
ಕೂಸು ಹುಟ್ಟುದು ಭಾರ ಹೇಳಿ ಅನ್ಸಿಯಪ್ಪಗ ಸ್ತ್ರೀ ಬ್ರೂಣ ಹತ್ಯೆ ಶುರು ಮಾಡಿದವು.ಇದರ ಪರಿಣಾಮಂದಾಗಿ ಈಗ ಹವ್ಯಕರಲ್ಲಿ  ಮಾಣಿ ಕೂಸು ಅನುಪಾತ ಕುಸುದು ಸಾವಿರ ಮಾಣಿಯಂಗೊಕ್ಕೆ ಎಂಟುನೂರ ಹದಿನಾಲ್ಕು ಕೂಸುಗ ಇಪ್ಪದು ಅಡ( ನಮ್ಮ ಸ್ವಾಮಿಗ ಭಾಷಣ ಮಾಡುವಾಗ ಹೇಳಿದ್ದರ ಕೇಳಿದ ನೆನಪು).ಇದರಂದಾಗಿ ಹಳ್ಳಿಲಿ ಇಪ್ಪ ಕೃಷಿಕ ,ಪೌರೋಹಿತ್ಯ ಮಾಡುವ,ಸಣ್ಣ ಪುಟ್ಟ ಕೆಲಸ ವ್ಯಾಪಾರ ಮಾಡುವ ಮಾಣಿಯಂಗೊಕ್ಕೆ ಕೂಸು ಸಿಕ್ಕುತ್ತಿಲ್ಲೆ.ಬೇಡಿಕೆ ಇಪ್ಪಗ ಪೇಟೆಲಿ ಆರಾಮಿಲಿ ಇಪ್ಪ ಒಳ್ಳೆಯ ಓದಿದ ಕೆಲಸ ಇಪ್ಪ ಮಾಣಿಯಂಗಳ ನೋಡುದು ಸಹಜ.
ಅಂತೂ ಇಂತೂ ಹಿಂದಣೋರು ಮಾಡಿದ ತಪ್ಪಿಂಗೆ ಈಗಣ ಮಾಣಿಯಂಗ ಅನುಭವಿಸಕ್ಕಾಗಿ ಬಂತು‌‌.
ಹವ್ಯಕ ರಲ್ಲಿ ಮಾಣಿ ಕೂಸು ಅನುಪಾತ ಕುಸಿವಲೆ ಸ್ತ್ರೀ ಬ್ರೂಣ ಹತ್ಯೆ ಕಾರಣ ಹೇಳಿ ಆನು ಇತ್ತೀಚೆಗೆ ಫೇಸ್ ಬುಕ್ ಲಿ ಬರದ್ದಕ್ಕೆ ಸುಮಾರು ಜನಂಗ ಆಕ್ಷೇಪ ಮಾಡಿದವು.ಹೇಳುವ ವಿಚಾರವು ಎಂಗಳ ಮಾತಿನ ನಡುವೆ ಬಂತ
ಹಾಂಗೆ ಎಂಗಳ‌ಪೈಕಿ ಮಾಣಿಗೆ ಒಬ್ಬಂಗೆ ಸರಿಯಾದ ಕೂಸು ಸಿಕ್ಕದ್ದ ಬಗ್ಗೆ ಆರೋ ಕುಹಕದ ಮಾತಾಡಿದ್ದರ ಅಮ್ಮ ಹೇಳಿದ.ಆನು ಅಂಬಗ ಅವಕ್ಕೆ ಮಗ ಇಲ್ಲೆಯಾ ಕೇಳಿದೆ.ಇದ್ದ ,ಈಗ ಎಂತದೋ ಓದುತ್ತಾ ಇದ್ದ.ಇನ್ನೊಂದು ನಾಲ್ಕು ಐದು ವರ್ಷಲ್ಲಿ ಅವಕ್ಕುದೆ ಇದೇ ಸಮಸ್ಯೆ ಬತ್ತು‌‌.ಬೆಂದಷ್ಟು ಹೊತ್ತು ತಣಿವಲಿಲ್ಲೆ ಹೇಳಿ ಹೇಳಿದ.
ಈ ನುಡಿಗಟ್ಟಟ್ಟಿನ ಆನು ಸಣ್ಣದಿಪ್ಪಗಳೇ ಕೇಳಿದ್ದೆ.ಮದುವೆ ಆಗಿ ಪೇಚಾಡುವಆರನ್ನಾದರೂ ಕಂಡು ನೆಗೆ ಮಾಡಿರೆ ,ಅಥವಾ ಅಡಿಗೆ ಸರಿ ಅಯಿದಿಲ್ಲೆ ಹೇಳಿ ಕೊಂಕು ತೆಗದರೆ ಎಂಗಳ ಅಜ್ಜಿ  ಅಂಬಗಳೇ ಬೆಂದಷ್ಟು ಸಮಯ ತಣಿವಲಿಲ್ಲೆ, ನೀನು ಎಂತ ಮಾಡ್ತೆ ನೋಡುವಾ ಹೇಳಿ ಹೇಳಿಗೊಂಡು ಇತ್ತಿದ.
ಅಡಿಗೆ ಬೇವಷ್ಟು ಹೊತ್ತು ತಣಿವಲೆ ಬೇಕಾವುತ್ತಿಲ್ಲೆ.ಆ ಕಾಲ ನಿನಗೂ ಹತ್ತರವೇ ಇದ್ದು ಹೇಳುದರ ಈ ಮಾತು ಸೂಚಿಸುತ್ತು.

ಗಿಳಿ ಬಾಗಿಲು : ಹವ್ಯಕ ನುಡಿಗಟ್ಟು - 44 ಬೆಳಿ ನೆಗೆ©ಡಾ.ಲಕ್ಷ್ಮೀ ಜಿ ಪ್ರಸಾದ

ಬೆಳಿ ಹೇಳುದು ಶುದ್ಧದ ನಿಷ್ಕಳಂಕದ ಸಂಕೇತ
ನೆಗೆ ಹೇಳುದುದೆ ಹಾಸ್ಯ ತಮಾಷೆಯ ಅಭಿವ್ಯಕ್ತಿ. ಆದರೆ ಬೆಳಿ ನೆಗೆ ಹೇಳುದು ಶುದ್ಧ ಹೃದಯದ ಸೂಚಿಸುವ ಮಾತಲ್ಲ.ಇದು ನಯವಂಚಕರ ಬಗ್ಗೆ ಹೇಳುವ ಮಾತು. ನಮ್ಮತ್ತರೆ ಎದುರಂದ ಚಂದ ಮಾತಾಡಿಕೊಂಡೇ ಹಿಂದದ್ದ ಕತ್ತಿ ಹಾಕುವ ಜನಂಗ ನಮ್ಮ ಸುತ್ತ ಮುತ್ತ ಇರ್ತವು.ನಮ್ಮತ್ತರೆ ಎದುರಿಂದ ನಮ್ಮ ಭಾರೀ ಹಿತ ಬಯಸುವೋರ ಹಾಂಗೆ ನಮ್ಮ ಕಷ್ಟ ಸುಖವ ವಿಚಾರ್ಸುತ್ತವು.ಅಯ್ಯೋ ಅದಕ್ಕೆ ಹಾಂಗಾತನ್ನೆ  ಹಾಂಗಪ್ಪಲಾಗಿತ್ತೂ ಇತ್ಯಾದಿ ಬಣ್ಣದ ಮಾತುಗಳ ಹೇಳುತ್ತವು‌ಭಾರೀ ಒಳ್ಳೆಯೋರ ಹಾಂಗೆ ಪ್ರದರ್ಶನ ಮಾಡುತ್ತವು.ಒಣ ಉಪಚಾರ ಮಾಡುತ್ತವು.
ಹಿಂದಂದ ನಮಗೆ ಎಷ್ಟು ಎಡಿಗು ಅಷ್ಟು ದ್ರೋಹ ಮಾಡುತ್ತವು‌.ಅವು ನಮಗಮತ್ತರೆ ವ್ಯವಹರಿಸುವ ರೀತಿ ನೋಡಿದರೆ ಅವು ಹೀಂಗೆ ಹಿಂದಂದ ಮಾಡುಗಾ ಹೇಳಿ ಸಂಶಯ ಆವುತ್ತು. ಅಷ್ಟರ ಮಟ್ಟಿಂಗೆ ಅವರ ಒಳ್ಳೆಯತನದ ಪ್ರದರ್ಶನ ಇರ್ತು.ಹಾಂಗಾಗಿ ಇಂತೋರು ಹಿಂದಂದ ಹೀಂಗೆ ಮಾಡಿದ್ದವು ಹೇಳಿರೆ ಆರಿಂಗೂ ನಂಬಿಕೆ ಬಾರ.ಅವರ ಬಗ್ಗೆ ಹೇಳಿದ ನಮ್ಮ ಬಗ್ಗೆಯೇ ಸಂಶಯ ಕಾಣುಗು.ಅಂತೋರ ಬಗ್ಗೆ ಅವರದ್ದೆಲ್ಲ ಎದುರಂಗೆ ಬೆಳೆ ನೆಗೆ ಅಷ್ಟೇ, ಹಿಂದಂದ ಮಾಡುದೇ ಅನಾಚಾರ ಹೇಳುವ‌ಮಾತಿನ ಹವ್ಯಕ ಭಾಷೆಲಿ ಬಳಕೆ ಮಾಡುತ್ತವು.
ಕನ್ನಡದ ನಯವಂಚಕತನ ಹೇಳುದು ಇದಕ್ಕೆ ಸಂವಾದಿಯಾಗಿ ಇದ್ದು .ಕನ್ನಡಲ್ಲಿ ಬಿಳಿ ನಗು ಹೇಳುವುದು ಮುಗ್ಧತೆಯ ಸರಳತೆಯ ಪ್ರಾಮಾಣಿಕತೆಯ ಸಂಕೇತ.ಆದರೆ ಹವ್ಯಕ ಭಾಷೆಲಿ ಬೆಳೆ ನೆಗೆ ಹೇಳುದು ನಯವಂಚಕರ ಬಗ್ಗೆ ಹೇಳುವ ಮಾತು‌.ನಯ ವಂಚಕರ ಬಗ್ಗೆ ಬೆಳಿ ನೆಗೆ ಹೇಳುವ ಮಾತು ತುಂಬಾ ಅರ್ಥಪೂರ್ಣವಾಗಿ ಇದ್ದು 

ಗಿಳಿ ಬಾಗಿಲು ಹವ್ಯಕ ನುಡಿಗಟ್ಟು-43 ಮೋರೆಲಿ ಚೋಲಿ‌ ಇಲ್ಲದ್ದೋವು© ಡಾ.ಲಕ್ಷ್ಮೀ ಜಿ ಪ್ರಸಾದ

ಇತ್ತೀಚೆಗೆ ಎಂಗಳ ನೆಂಟರ ಪೈಕಿ ಒಬ್ಬರ ನೋಡಿದೆ.ಕಂಡೂ ಕಾಣದ್ದ ಹಾಂಗೆ ಹೋದವು.ಆನೂ ಹಾಂಗೆ ಮಾಡಿದೆ.ಅದು ಬೇರೆ ವಿಚಾರ .
ಆನು ಎರಡನೇ ವರ್ಷ ಬಿಎಸ್ಸಿ ಓದುತ್ತಾ ಇಪ್ಪಗ ಎನ್ನ ಮದುವೆ ಆತು
ಆ ಸಮಯಲ್ಲಿ ಎನ್ನ ಮುಂದಿನ ಓದಿನ ಬಗ್ಗೆ ಮನೆ ಮಂದಿ ನೆಂಟರು ಬಂಧು ಬಳಗಂದ ತುಂಬಾ ವಿರೋಧ ಬಂತು(.ನೆಂಟರುಗೊಕ್ಕೆ  ಆನು ಓದಿದರೆ ಅಪ್ಪ ಸಮಸ್ಯೆ ಎಂತಾ ಹೇಳುದು ಎನಗೆ ಅಂಬಗ ಮಾತ್ರ ಅಲ್ಲ ಈಗಲೂ ಅರ್ಥ ಆವುತ್ತಿಲ್ಲೆ,ಬಹುಶಃ ಹೊಟ್ಟೆ ಕಿಚ್ಚೇ ಕಾರಣ ಆದಿಕ್ಕು)ಅಂಬಗ ಈ ನೆಂಟರುದೆ ವಿರೋಧ ಮಾಡಿ ಚಾಡಿ ಹೇಳಿಕೊಟ್ಟು ಸಮಬಂಧ ಬಿಟ್ಟು ಹೊಣದ್ದವು.ಇದೆಲ್ಲಾ ಆಗಿ ಸುಮಾರು ವರ್ಷ ಕಳುತ್ತು.ಆ ನೆಂಟರ ಮಗಂಗೆ ಏನೋ ಸಮಸ್ಯೆ ಬಂತು..ಅಂಬಗ ಈ ನೆಂಟರು ಎನಗೆ ಪೋನ್ ಮಾಡಿ ಎಂತ ಮಾಡುದೂ ಹೇಳಿ ಗೊಂತಾವುತ್ತಿಲ್ಲೆ . ಹೇಳಿ ಸಹಾಯ ಕೇಳಿತ್ತಿದವು.ಇವಕ್ಕೆ ಸಹಾಯ ಕೇಳುವಗ ಅವು ಮಾಡಿದ ದ್ರೋಹ ಯಾವುದೂ ನೆನಪಿತ್ತಿಲ್ಲೆ.ಎನಗಪ್ಪ ಸಹಾಯವ ಆನು ಮಾಡಿದೆ.
ಇದಾಗಿಯೂ ಸುಮಾರು ವರ್ಷ ಕಳುತ್ತು ಈಗ. ಈಗ ಮತ್ತೆ ಅದೇ ಹಾಂಕಾರ ಇದ್ದು.ಇನ್ನು ಏನಾದರೂ ಸಹಾಯ ಬೇಕಾದರೆ ಯಾವುದೇ ನಾಚಿಕೆ ಮಾನ ಮರ್ಯಾದೆ ಇಲ್ಲದ್ದೆ ಓಡಿ ಬಕ್ಕು.ಅವರ ಕಂಡಪ್ಪಗ ಎನಗೆ ನೆನಪಾದ ಮಾತು ಮೋರೆಲಿ ಚೋಲಿ‌ ಇಲ್ಲದ್ದೋವು

ಅವಕ್ಕೆ ನಾಚಿಕೆ ಮಾನ‌ ಮರ್ಯಾದಿ ಯಾವುದೂ ಇಲ್ಲೆ .ಮೋರೆಲಿ ಚೋಲಿ ಇಲ್ಲದ್ದೋವು ಹೇಳುವ ಮಾತು ಹವ್ಯಕ ಭಾಷೆಲಿ ಅಂಬಗಂಬಗ ಬಳಕೆ ಆವುತ್ತು. ನಮಗೆ ಈ ಮೊದಲು ಬಲವಾದ ದ್ರೋಹ ಮಾಡಿರ್ತವು.ಹಿಂದಂದ ಎಡಿಗಾದಷ್ಟು ಈಗಲೂ ಹೊಣೆತ್ತಾ ಇರುತ್ತವು.ಆದರೆ ನಮ್ಮಂದ ಎಂತಾದರೂ ಉಪಕಾರ ಬೇಕಿದ್ದರೆ ಯಾವ ಮುಲಾಜಿಲ್ಲದ್ದೆ ಓಂಗಿಯೊಂಡು ಬತ್ತವು ಕೆಲವು ಜೆನಂಗ.ಅಂತೋರ ಬಗ್ಗೆ ಹೇಳುವ ಮಾತಿದು.
ತುಳುವಿಲಿ ಕೂಡ ಈ ನುಡಿಗಟ್ಟು ಬಳಕೆಲಿ ಇದ್ದು.ತುಳುವಿಲಿ ಮೋನೆಡ್ ಚೋಲಿ ಇಜ್ಯಾಂದಿನಕುಲು ಹೇಳಿ ಹೇಳುತ್ತವು.