Sunday 10 June 2018

ಗಿಳಿ ಬಾಗಿಲು( ಹವ್ಯಕ ಬ್ಲಾಗ್) ಹವ್ಯಕ ನುಡಿಗಟ್ಟು - 50 ತೌಡು‌ ಮುಕ್ಕೇಲ ಹೋಗಿ ಉಮಿ‌ ಮುಕ್ಕೇಲ ಬತ್ತ - ಡಾ.ಲಕ್ಷ್ಮೀ ಜಿ ಪ್ರಸಾದ

ತೌಡು‌ ಮುಕ್ಕೇಲ ಹೋಗಿ ಉಮಿ‌ ಮುಕ್ಕೇಲ ಬತ್ತ - ಡಾ.ಲಕ್ಷ್ಮೀ ಜಿ ಪ್ರಸಾದ

"ತೌಡು‌ ಮುಕ್ಕೇಲ ಹೋಗಿ ಉಮಿ‌ ಮುಕ್ಕೇಲ ಬತ್ತ "
- ಇದೊಂದು ಹವ್ಯಕ ಭಾಷೆಲಿ ಪ್ರಚಲಿತವಾಗಿಪ್ಪ ನುಡಿಗಟ್ಟು ,ಇದು ತುಳು ಮತ್ತೆ ಕನ್ನಡ  ಭಾಷೆಲಿಯೂ ಬಳಕೆಲಿ ಇದ್ದು.
ಮೊದಲಿನ ಕಾಲಲ್ಲಿ ಒಬ್ಬ ರಾಜ ಇತ್ತಿದ ಅಡ.ಅವನ ಊರಿಲಿ ತುಂಬಾ ಬರಗಾಲ ಬಂತು.ಅಂಬಗ ಅವ ಎಲ್ಲೊರಿಂಗೂ ಒಂದೊಂದು ಸೇರು ತೌಡು ಕೊಟ್ಟ ಅಡ.ಅಕ್ಕಿಯ ಹೆರಣ ಚೋಲಿಯ ಹೊಡಿಗೆ ತೌಡು ಹೇಳುತ್ತವು.ದನಗೊಕ್ಕೆ ಇದರ ಹಿಂಡಿ ಒಟ್ಟಿಂಗೆ ಕೊಡುತ್ತವು.ನಂತರ ಆ ರಾಜ ಒಂದು ಸೇರು ತೌಡಿನ ಬದಲು ಒಂದು ಸೇರು ಅಕ್ಕಿಯ ಹಿಂದೆ ಕೊಡಕ್ಕು ಹೇಳಿ‌ ಕಾನೂನು ಮಾಡಿದ ಅಡ‌.ಈ ರಾಜನ ದುರಾಡಳಿತಕ್ಕೆ ಜನ ರೋಸಿ ಹೋಗಿ ಬೇರೊಬ್ಬ ರಾಜ ಬಪ್ಪಲೆ ಕಾಯ್ತಾ ಇರ್ತವು.ಒಂದು ದಿನ ಇನ್ನೊಬ್ಬ ರಾಜ ಬಂದು ಇವನ ಸೋಲಿಸಿ ಆ ಊರಿನ ರಾಜ ಆದ ಅಡ.ಜನಂಗ ರಜ್ಜ ನೆಮ್ಮದಿಯ ಉಸುಲು ಬಿಟ್ಟವು.ಆದರೆ ಅದು ಹೆಚ್ಚು ದಿನ ಇತ್ತಿಲ್ಲೆ‌
ಈ ರಾಜ ಒಂದು ಸೇರು ಉಮಿ ಕೊಟ್ಟು ಒಂದು ಸೇರು ಅಕ್ಕಿ ವಸೂಲು ಮಾಡಿದ ಅಡ‌.
ಈ ಜಾನಪದ ಕಥೆಯ ಅಧರಿಸಿ ತೌಡು‌ ಮುಕ್ಕೇಲ ಹೋಗಿ ಉಮಿ ಮುಕ್ಕೇಲ ಬಂದ / ಬತ್ತ ಹೇಳುವ ಮಾತು ಹುಟ್ಟಿತ್ತು.
ಒಬ್ಬ  ಕೆಟ್ಟ ಅಧಿಕಾರಿ ಹೋಗಿ ಅವಂದಲೂ ಹೆಚ್ಚು ಧೂರ್ತ ಅಧಿಕಾರಿ ಬತ್ತ ಹೇಳುವ ಸಂದರ್ಭಲ್ಲಿ ಈ ಮಾತಿನ ಬಳಕೆ ಅವುತ್ತು.ಇದಕ್ಕೆ ಸಂವಾದಿಯಾಗಿ ಒಬ್ಬಂದೊಬ್ಬ ಅಸಲು ಹೇಳುವ ಮಾತುದೆ ಬಳಕೆಲಿ ಇದ್ದು
© ಡಾ.ಲಕ್ಷ್ಮೀ ಜಿ ಪ್ರಸಾದ

Monday 4 June 2018

ಗಿಳಿ ಬಾಗಿಲು ( ಹವ್ಯಕ ಬ್ಲಾಗ್) ಹವ್ಯಕ ನುಡಿಗಟ್ಟು 49 ತನ್ನಿಚ್ಛೆಗುದೆ ಸಾಣೆ ತಲೆಗುದೆ ಮದ್ದಿಲ್ಲೆ © ಡಾ.ಲಕ್ಷ್ಮೀ ಜಿ ಪ್ರಸಾದ

ಕಳುದ ರಜೆಲಿ ಅಮ್ಮನ ಮನೆಗೆ ಹೋದಿಪ್ಪಗ ಅರಂತಾಡಿ ತಿಮ್ಮಪ್ಪಪ್ಪಚ್ಚಿ ಬಂದಿತ್ತಿದವು.ಅದೂ ಇದೂ ಮಾತನಾಡುತ್ತಾ ಆರೋ ಒಬ್ಬನ ವಿಚಾರ ಬಂತು.ಅಮ್ಮ ಅಪ್ಪಚ್ಚಿ ಹತ್ತರೆ ಅವಕ್ಕೆ ರಜ್ಜ ಬುದ್ಧಿ ಹೇಳಿ ಸರಿ ಮಾಡುಲಾಗದಾ ಹೇಳಿ ಕೇಳಿದ‌.ಅಷ್ಟಪ್ಪಗ ಅಪ್ಪಚ್ಚಿ " ಅವು ಆರ ಮಾತುದೆ ಕೇಳುವ ಜಾತಿಗ ಅಲ್ಲ ,ಅವಕ್ಕೆ ಅವು ಹೇಳಿದ್ದೆ ಆಯಕ್ಕು.ನಮ್ಮಲ್ಲಿ ತನ್ನಿಚ್ಚೆ ಹೇಳ್ತವಲ್ಲ ಹಾಂಗೆ ಇಪ್ಪ ಸ್ವಭಾವ ಹೇಳಿ ಹೇಳಿದವು.ಮತ್ತೆ ಪುನಃ ತನ್ನಿಚ್ಚೆಗುದೆ ಸಾಣೆ ತಲೆಗುದೆ ಮದ್ದಿಲ್ಲೆ ಹೇಳುವ ಮಾತೇ ಇದ್ದನ್ನೇ ಹೇಳಿ ಹೇಳಿದವು.
ತನ್ನಿಚ್ಚೆಗುದೆ ಸಾಣೆ ತಲೆಗುದೆ ಮದ್ದಿಲ್ಲೆ ಹೇಳುವ ಮಾತು ಕೇಳಿ ಅಪ್ಪಗ ಎನ್ನ ಕೆಮಿ ಕುತ್ತ ಆತು.ಅಂಬಗಳೇ ಕೇಳಿದೆ ಹಾಂಗೆ ಹೇಳಿರೆ ಎಂತದು ಹೇಳಿ.
 ಸುಮಾರು ಮಾಣಿಯಂಗೊಕ್ಕೆ ಪ್ರಾಯ ಆದ ಹಾಂಗೆ ತಲೆಕಸವು ಉದುರಿ ಬೋಳು ಅಪ್ಪದು ಇದ್ದು.ಇದಕ್ಕೆ ‌ಮದ್ದು ಇಲ್ಲೆ ಹಾಂಗೆಯೇ ತನ್ನ ಮಾತೇ ಅಂತಿಮ ಹಾಂಗೇ ನಡೆಯಕ್ಕು ಹೇಳುವೋರ ತಿದ್ದುಲೆ ಎಡಿಯ.ಈ ಎರಡಕ್ಕೂ ಪರಿಹಾರ ಇಲ್ಲೆ (ಸಾಣೆ ತಲೆಯ ಮಾಣಿಗೆ ಕೂಸು ಸಿಕ್ಕದ್ದ ಸಮಸ್ಯೆಯ ಎಳೆಯ ಆಧರಿಸಿ ಒಂದು ‌ಮೊಟ್ಟೆಯ ಕಥೆ ಸಿನೆಮಾ ಬಂದು ರೈಸಿದ್ದು ನಿಂಗೊಗೆಲ್ಲ ಗೊಂತಿಕ್ಕು)
ಎರಡು ಒಂದೇ ರೀತಿದು.ಹಾಂಗಾಗಿ ಎರಡನ್ನೂ ಸಮೀಕರಿಸಿ ತನ್ನಿಚ್ಛೆಗುದೆ ಸಾಣೆ ತಲೆಗುದೆ ಮದ್ದಿಲ್ಲೆ ಹೇಳಿ ಹೇಳುತ್ತವು.ನಮ್ಮ ಹವ್ಯಕ ಭಾಷೆಲಿ ಇಂತಹ ಅಪರೂಪದ ನುಡಿಗಟ್ಟುಗ ಇದ್ದು. ಇವೆಲ್ಲದರೆ ಸಂಗ್ರಹ ಮಾಡುವ ಅಗತ್ಯ ಇದ್ದು.
ಕಾಲಕ್ರಮೇಣ ಇಂಗ್ಲಿಷ್ ಹಾಂಗೆ ಇತರ ಭಾಷೆಗಳ ಪ್ರಭಾವಂದಾಗಿ ಇಂತಹ ನುಡಿಗಟ್ಟುಗಳ ಬಳಕೆ ಕಮ್ಮಿ ಆವುತ್ತಾ ಇದ್ದು.ನಮ್ಮ ಮುಂದಣ ಜನಾಂಗೊಕ್ಕೆ ತಿಳಿಸುವ ಸಲುವಾಗಿ ಆದರೂ ಇದರ ಸಂಗ್ರಹ ಮಾಡಕ್ಕು ಅಲ್ಲದಾ ?
ಡಾ.ಲಕ್ಷ್ಮೀ ಜಿ ಪ್ರಸಾದ