Saturday 21 September 2013

ಗಿಳಿ ಬಾಗಿಲು (ಹವ್ಯಕ ಬ್ಲಾಗ್ )-ಅದು/ಅವ ಪಾತಾಳ ಗರಡಿ

"ಅದಕ್ಕೆ ಬೇಡದ್ದ ವಿಚಾರ ಇಲ್ಲೆ ,ಮತ್ತೆ ಮತ್ತೆ ತೊಳಚ್ಚಿ ತೊಳಚ್ಚಿ ತಲೆ ತಿಂತು ,ಅದು ಮಹಾ ಪಾತಾಳ ಗರಡಿ ,ಅದರತ್ತರೆ ಯಾವುದೂ ಗುಟ್ಟು ಮಾಡುಲೆ ಎಡಿಯ"ಹೇಳಿ ಹೇಳುವ ಮಾತಿನ ಆನು ಸುಮಾರು  ಸರ್ತಿ ಅಲ್ಲಿ ಇಲ್ಲಿ ಕೇಳಿದ್ದೆ .ನಿನ್ಗಳೂ ಕೇಳಿಪ್ಪಿ.  .ಪಾತಾಳ ಗರಡಿ ಹೇಳ್ರೆ ಒಂದು   ಸಾಧನ .ಬಾವಿಗೆ ಏನಾರೂ ಕೊಡ ಪಾನ, ಚೆಂಬು ,ಪಾತ್ರಂಗ ಬಿದ್ದರೆ ಪಾತಾಳ ಗರಡಿಯ ಬಾವಿಯ ಬಳ್ಳಿಗೆ ಇಳುಸಿ ಬಿದ್ದ ವಸ್ತುಗಳ ತೆಗೆತ್ತಾ ಇತ್ತಿದವು .ಅದರಲ್ಲಿ ಅನೇಕ ಬೇಕಾದ ಕಡೆಗೆ ಚಲಿಸುವ ,ಬೇರೆ ಬೇರೆ ಗಾತ್ರದ ಕೊಕ್ಕೆಗ ಇದ್ದು .ಆ ಕೊಕ್ಕೆಗೆ ಕೊಡ ಪಾನ ಪಾತ್ರಂಗಳ ಸಿಕ್ಕುಸಿ ಮೇಲೆ ಎಳದು ತೆಗೆತ್ತಾ ಇತ್ತಿದವು ಮೊದಲು ,ಪಾತಾಳ ಗರಡಿಗೆ ಸಿಕ್ಕಿದ್ದಿಲ್ಲೇ ಹೇಳಿ ಆದ್ರೆ ಇನ್ನು ಆ ಕೊದಪ್ಪಾನದ ಆಸೆ ಬಿಡ ಕ್ಕು ಇನ್ನದು ಸಿಕ್ಕ ಹೇಳುವ ಮಾತು ಪ್ರಚಲಿತ ಇತ್ತು .ಪಾತಾಳ ಗರಡಿಯ ರೀತಿಲಿ ಹೆಂಗಾರೂ ಮಾಡಿ ಇನ್ನೊಬ್ಬರ ವಿಚಾರವ ಪತ್ತೆ ಹಚ್ಚಿ ತೆಗವ ಸ್ವಭಾವದೊರಿನ್ಗೆ  ಎಂಗಳ ಕಡೆ ಪಾತಾಳ ಗರಡಿ ಹೇಳಿ ಹೇಳ್ತವು ."ಅವ/ಅದು ಪಾತಾಳ ಗರಡಿ ಅವನ/ಅದರ ಹಿಡಿಪ್ಪಿಂದ ತಪ್ಪಿಸಿಕೊಂಬಲೆ ಎಡಿಯಪ್ಪ" ಹೇಳುವ ಮಾತುದೆ  ಬಳಕೆಲಿ ಇದ್ದು ."ಆವ /ಅದು ಪಾತಾಳ ಗರಡಿ" ಹೇಳುದು ಒಂದು ರೀತಿ ದೂಷಣೆ /ಬೈಗಳು .ಆದರೆ ಪಾತಾಳ ಗರಡಿ ನಿಜವಾಗಿಯೂ ಒಂದು  ಬಹು ಉಪಯುಕ್ತ ಸಾಧನ ,ಆದರೆ  ನುಡಿಗಟ್ಟಾಗಿ ಬಳಸುವಗ ಪಾತಾಳ ಗರಡಿ ಹೇಳುದು ಬೈಗಳಾಗಿ /ದೂಷಣೆಯ ಮಾತಾಗಿ ಬದಲಾವುತ್ತು.ಇಂತಹ ಅನೇಕ ನುಡಿಗಟ್ಟುಗ ನಮ್ಮಲ್ಲಿ ಬಳಕೆಲಿ ಇದ್ದು .ನೆನಪಾದ್ದರ ಆನಿಲ್ಲ್ಲಿ ಬರದ್ದೆ .ನಿಂಗಳ ಅಭಿಪ್ರಾಯ ತಿಳುಸಿ ,
ನಮಸ್ಕಾರ 
ಇನ್ನೊಂದರಿ ಕಾಂಬ 
-ಲಕ್ಷ್ಮೀ ಜಿ ಪ್ರಸಾದ

Sunday 1 September 2013

ಗಿಳಿ ಬಾಗಿಲು (ಹವ್ಯಕ ಬ್ಲಾಗ್ )-ಕಡುದ ಕೈಗೆ ಉಪ್ಪು ಹಾಕದ್ದೋವು

 ಇದೊಂದು ತಿರಸ್ಕಾರವ ಹೆರ ಹಾಕುವ ಮಾತು .ಮನುಷ್ಯರು ಎಲ್ಲೊರು ಒಂದೇ ರೀತಿಯ ಗುಣ ಸ್ವಭಾವದೊರು ಆಗಿ ಇರ್ತವಿಲ್ಲೆ .ಕೆಲವು ಜನಂಗ ಕೊಪಿಷ್ಟಂಗ ,ಕೆಲವು ಜನಂಗ ಸಮಾಧನಿಗ ಕೆಲವು ಜನಂಗ ಧಾರಾಳಿಗ ,ಕೆಲವು ಜನಂಗ ಕುರೆಗ ,ಪಿಟ್ಟಾಸಿಗ ಇರ್ತವು .ಎಂಗಳ ಕಡೆ ಆರಿನ್ಗೊಬ್ಬಂಗೂ ಏನೊಂದೂ ಕೊಡದ್ದ ಜಿಪುಣನ್ಗಳ ಕುರೆಗ ,ಪಿಟ್ಟಾಸಿಗ   ಹೇಳಿ ಹೇಳ್ತವು .ಕುರೆ ಬುದ್ಧಿಯ ಅತಿರೇಕವ ಹೇಳುವ ಮಾತು "ಕಡುದ ಕೈಗೆ ಉಪ್ಪು ಹಾಕದ್ದೋವು ಅವು" ಹೇಳುದು.ಆದರೆ ಈ ಮಾತಿನ ಒಳಾರ್ಥ ಎಂತ ಹೇಳಿ ಎನಗೆ ಗೊಂತಾಯಿದಿಲ್ಲೆ .ಹಾಂಗೆ ಅಮ್ಮಂಗೆ ಫೋನ್ ಮಾಡಿ ಕೇಳಿದೆ ಆನು .ಕಡುದ ಕೈಗೆ ಉಪ್ಪು ಎಂತಕೆ ಹಾಕುದು ?ಇದಕ್ಕೂ ಕುರೆಗೂ ಎಂತ ಸಂಬಂಧ ಹೇಳಿ.  ಎನ್ನ ಅಮ್ಮನ್ಗೂ  ಇದರ ಅರ್ಥ ಗೊಂತಿತ್ತಿಲ್ಲೆಡ .ಸುಮಾರು ೪೦ ವರ್ಷ ಮೊದಲು ಅಮ್ಮ ಮದುವೆ ಆಗಿ ಬಂದ ಹೊಸತರಲ್ಲಿ ಅಜ್ಜಿ ಆರ ಬಗ್ಗೋ ಮಾತಾಡುವಗ  ಈ ಮಾತಿನ ಹೇಳಿದವಡ ,ಅಂಬಗ ಅಮ್ಮ ಅಜ್ಜಿ ಹತ್ತರೆ "ಹಾಂಗೆ ಹೇಳ್ರೆ ಎಂತದು" ಹೇಳಿ ಕೇಳಿತ್ತಿದ ಅಡ.ಅಂಬಗ ಅಜ್ಜಿ ಅಮ್ಮಂಗೆ ಹೇಳಿದ್ದರ ಅಮ್ಮ ಎನಗೆ ಹೇಳಿದ ಇಂದು . ಅದರ ಆನಿಲ್ಲಿ ಈಗ ಹೇಳುತ್ತೆ . ಆರತ್ತರಾದರು ನಮಗೆ ಕೋಪ, ದ್ವೇಷ ಇದ್ದರೆ ಅವು ಹಾಳಾಯಕ್ಕು ಹೇಳಿ ಏನಾರೂ ಮಾಡುವಗ ಏನಾರು ರಜ್ಜ ನಷ್ಟ ಆದರೆ ಅದರ ಬಗ್ಗೆ ಚಿಂತೆ ಮಾಡ್ತವಿಲ್ಲೇ ಆರುದೆ .ನಮಗೆ ನಷ್ಟ ಆದರೂ ಸಮ ಆವಾ ಹಾಲಾಯಕ್ಕು ಹೇಳಿ ಭಾವಿಸಿ ಹೊಣೆತ್ತವು ಎಲ್ಲೊರು .ಆದರೆ ಜಾತಿಕುರೆಗ (ಅತಿ ಜಿಪುಣರು )ಮಾತ್ರ ಯಾವ ಕಾರಣಕ್ಕೂ ನಷ್ಟ ಮಾಡಿಗೊಳ್ಳುತ್ತವಿಲ್ಲೆ .ಅವರ ಪರಮ ಶತ್ರುವಿನ ಕೈಯ ಆರೋ ಕಡುದ್ದವು.ಕಡುದ ಕೈಗೆ ಉಪ್ಪು ಹಾಕುಲಾಗ ,ಉಪ್ಪು ಹಾಕಿರೆ ನೆತ್ತರು ಕಟ್ಟುತ್ತಿಲ್ಲೆ ,ಅಲ್ಲದ್ದೆ ಭಯಂಕರ ಉರಿತ್ತು ಕೂಡಾ .ಆದರೆ ಪರಮ ಶತ್ರುವಿನ ಕೈಯ ಆರಾದರೂ ಕಡುದರೆ ಅವರ ಮೇಲೆ ದ್ವೇಷ ಇಪ್ಪೋರು ಆ ಕೈಗೆ ಉಪ್ಪು ಹಾಕಿ ಅವಕ್ಕೆ ಉರಿ ಅಪ್ಪ ಹಾಂಗೆ ,ನೆತ್ತರು ಕಟ್ದದ್ದ  ಹಾಂಗೆ ಮಾಡಿ ಅವರ ಹಗೆಯ ತೀರಿಸಿಗೊಂಗು! .ಆದರೆ ಜಾತಿ ಕುರೆಗ ಅದನ್ನೂ ಮಾಡವು .ಹಿಂದಣ ಕಾಲಲ್ಲಿ ಉಪ್ಪು ಧರ್ಮಕ್ಕೆ ಸಿಕ್ಕಿಗೊಂಡು ಇದ್ದ ಸಾಮಾನು .ಆದರೆ ಅದರ ಕೂಡ ಹಗೆಗಳ ಕಡುದ ಕೈಗೆ ಹಾಕಿ ಹಾಕಿ ಹಗೆ ತೀರಿಸಿ ಕೊಳ್ಳದ್ದಷ್ಟು ಕುರೆಗ :ಅವು  ಹಗೆ ಸಾಧನೆ ಮಾಡುದಕ್ಕಾಗಿ ಲೇ ಕೂಡಾ .ಧರ್ಮಕ್ಕೆ ಸಿಕ್ಕುವ ವಸ್ತು ಆಗಿಪ್ಪ ಉಪ್ಪ್ಪಿನ ಇಡುಕ್ಕವು ಅಷ್ಟೂ ಕುರೆಗ ಹೇಳ್ರೆ ಜಿಪುಣತನದ ಪರಮಾವಧಿ ಇಪ್ಪೋರ ಬಗ್ಗೆ  ಈ ಆಡು ಮಾತು ತಿಳುಸುತ್ತು .
ಇಂತ ತುಂಬಾ ವಿಶಿಷ್ಟ ಆಡು ಮಾತುಗ ಗಾದೆಗ ನಮ್ಮ ಭಾಷೆಲಿ ಇದ್ದು ,ಇದರ ಒಟ್ಟು ಮಾಡಿ ಮಾಡಿ ಒಂದು ಕಡೆ ಬರದು ಮಡುಗಿದರೆ ಒಳ್ಳೆದು ಅಲ್ಲದ ?ನಿಂಗೆಲ್ಲ ಎಂತ ಹೇಳ್ತಿ ?
ನಿಂಗಳ ಅಭಿಪ್ರಾಯವ ತಿಳುಸಿ ,
ಇನ್ನೊಂದರಿ ಕಾಂಬ ,ನಮಸ್ಕಾರ 
ಡಾ .ಲಕ್ಷ್ಮೀ ಜಿ ಪ್ರಸಾದ