Sunday 14 December 2014

ಗಿಳಿಬಾಗಿಲು (ಹವ್ಯಕ ಬ್ಲಾಗ್ ) 34 ದೂರು ಕುಂಡೆಚ್ಚ :ಡಾ.ಲಕ್ಷ್ಮೀ ಜಿ ಪ್ರಸಾದ

ಹವ್ಯಕ ನುಡಿಗಟ್ಟು ಗಳ ಬಗ್ಗೆ ಬರೆಯದ್ದೆ ತುಂಬಾ ದಿನ ಆತು .ಬರವಲೆ ಪುರುಸೊತ್ತು ಆಯಿದಿಲ್ಲೇ ,ಒಟ್ಟಿಂಗೆ ಮನಸೂ ಇತ್ತಿಲ್ಲೆ.
ಆರಿಂಗೇ ಆದರೂ ನಮ್ಮ ಆಲೋಚನೆಗಳ ಅಕ್ಷರ ರೂಪಕ್ಕೆ ಇಳಿಸುದು ಅಷ್ಟೇನೂ ಸುಲಭದ ವಿಚಾರ ಅಲ್ಲ ,ಅದಕ್ಕೆ ಒಳ್ಳೆಯ ಮೂಡ್ ಇರಕ್ಕಾವುತ್ತು .
ಇಂದು ಉದಿಯಪ್ಪಗ ಆನು ಏಳುವಾಗಲೇ ಜಾಲಿನ ಮೀಸೆ ಹೂಗಿನ ಗೆಲ್ಲಿಂದ ಚಿಂಕ್ ಚಿಂಕ್  ಹೇಳಿ ಭಾರೀ ಬೊಬ್ಬೆ ಕೇಳುತ್ತ ಇತ್ತು .ಎಂತಸಂಗತಿ ಹೇಳಿ ಬಾಗಿಲು ತೆಗದು ನೋಡಿದೆ
ಎರಡು ಕುಂಡೆಚ್ಚಂಗ ಬೊಬ್ಬೆ ಹೊಡೆತ್ತ ಇದ್ದವು .ಎಂತಕಪ್ಪ ಇವು ಇಷ್ಟು ಬೊಬ್ಬೆ ಹೊಡವದು ಹೇಳಿ ಆ ಕಡೆ ಈ ಕಡೆ ನೋಡಿದೆ .ಎಂತದೂ ಕಂಡತ್ತಿಲ್ಲೆ.
ಆದರೆ ಇವರ ಬೊಬ್ಬೆ ಮುಂದುವರುದೇ ಇತ್ತು .ಸಾಮಾನ್ಯವಾಗಿ ಅವಕ್ಕೆ ಅಪಾಯಕಾರಿ ಆಗಿಪ್ಪ ಪುಚ್ಚೆ ನಾಯಿ ಹಾವು ಏನಾರು ಕಂಡರೆ ಕುಂಡೆಚ್ಚಂಗ ಬೊಬ್ಬೆ ಹೊಡೆತ್ತವು .
ಹಾಂಗೆ ಟೆರೇಸ್ ಹತ್ತಿ ನೋಡಿದೆ ಎಂತ ಇದ್ದು ಅಲ್ಲಿ ಹೇಳಿ ,ಅಷ್ಟಪ್ಪಗ ಒಂದು ಕುಂಡೆಚ್ಚ ಗಿಲಿಬಾಗಿಲಿನ ಹತ್ರಂಗೆ ಬಗ್ಗಿದ ಗೆಲ್ಲಿನ ಹತ್ತರೆ ಬಂದು ಬೊಬ್ಬೆ ಹಾಕುಲೇ ಸುರು ಮಾಡಿತ್ತು .ಹಾಂಗೆ ಆನು ಎಂತದು ಹೇಳಿ ಬಗ್ಗಿ ನೋಡಿದೆ !
ಅಲ್ಲಿ ಚಜ್ಜದ ಮೇಲೆ ಎಂಗಳ ಪಕ್ಕದ ಮನೆಯ ಪುಚ್ಚೆ ಒಂದು ಬೆಶಿಲು ಕಾಯಿಸಿಕೊಂಡು ಇತ್ತು..ಆನು ಬಗ್ಗಿ ನೋಡಿ ಅಪ್ಪಗ ಕುಂಡೆಚ್ಚಂಗಳ ಗಲಾಟೆ ಇನ್ನು ಜಾಸ್ತಿ ಆತು .ಈ ಪುಚ್ಚೆ ಮಾತ್ರ ಅವರ ಗಲಾಟೆಯ ಕೆಮಿಗೆ ಹಾಕಿಕೊಳ್ಳದ್ದೆ ಆರಾಮಾಗಿ ಒರಗಿತ್ತು .
ಮತ್ತೆ ಅದು ಎದ್ದು ಹೊಪಲ್ಲಿಯ ವರೆಗೂ ಅದರ ನೋಡಿ ನೋಡಿ ಕುಂಡೆಚ್ಚ ಗ ಚಿವ್ ಚಿವ್ ಹೇಳಿ ಮಾಡಿಕೊಂಡು ಇತ್ತಿದವು .
ಅಂಬಗ ಎನಗೆ ಪಕ್ಕನೆ ನೆನಪಾತು ದೂರು ಕುಂಡೆಚ್ಚ ಹೇಳುವ ನಮ್ಮ ಮಾತಿನ ಒಂದು ಬಳಕೆ
ಸಾಮನ್ಯವಾಗಿ ಮಕ್ಕೊಗೆ ಇದರ ಬಳಕೆ ಮಾಡುತ್ತು .ಅವರಿವರ ಬಗ್ಗೆ ಯಾವಾಗಲೂ ದೂರು ಕೊಡುವ ಮಕ್ಕೊಗೆ ದೂರು ಕುಂಡೆಚ್ಚ ಹೇಳಿ ಹೇಳುತ್ತವು.ಈ ಚೆಂದದ ನುಡಿಗಟ್ಟಿನ ಮೂಲ ಎಂತ ಹೇಳಿತಲೆಗೆ ಹೊದ್ದು ಇಂದೇ ಎನಗೆ .ಕುಂಡೆಚ್ಚ ಎಲ್ಲಿಯೇ ಒಂದು ಪುಚ್ಚೆ ಯನ್ನೂ ನಾಯಿಯನ್ನೂ ನೋಡಲಿ ಅವು ಚಿವ್ ಚಿವ್ ಮಾಡಿ ಎಲ್ಲರಿಂಗೂ ಈ ಬಗ್ಗೆ ತಿಳಿಸುತ್ತವು!ಇದರ ದೂರು ಕೊಡುದು ಹೇಳಿ ಭಾವಿಸಿ ದೂರು ಕೊಡುವ ಮಕ್ಕೊಗೆ ಈ ಮಾತಿನ ಬಳಕೆ ಬಂದಿಕ್ಕು ಹೇಳಿ ಎನಗೆ ಅನ್ಸಿತ್ತು ?ನಿಂಗೋಗೆ ಎಂತ ಅನ್ಸುತ್ತು ?

Thursday 21 August 2014

ಗಿಳಿ ಬಾಗಿಲು (ಹವ್ಯಕ ಬ್ಲಾಗ್ )ಆನೆ ಲದ್ದಿ ಹಾಕುತ್ತು ಹೇಳಿ ಮೆರು ಹೆರಟರೆ ಅಕ್ಕಾ ?-ಡಾ.ಲಕ್ಷ್ಮೀ ಜಿ ಪ್ರಸಾದ



ಆನೆ ಲದ್ದಿ ಹಾಕುತ್ತು ಹೇಳಿ ಮೆರು ಹೆರಟರೆ ಅಕ್ಕಾ ?

ಮೊನ್ನೆ ಎಂಗಳ ಪಕ್ಕದ ಮನೆ ಹೆಮ್ಮಕ್ಕ ಒಂದು ದಾರುಣ ಸುದ್ದಿ ಹೇಳಿದವು .ಅವರ ಆಫೀಸ್ ಲಿ ಕೆಲಸ ಮಾಡುವ ಒಬ್ಬ ಆಫೀಸರ್ ಮತ್ತೆ ಅವನ ಹೆಂಡತಿ ಆತ್ಮ ಹತ್ಯೆಗೆ ಯತ್ನಿಸಿದ  ಬಗ್ಗೆ ಹೇಳಿದವು .ಇಂದಿನ ದಿನಂಗಳಲ್ಲಿ ಆತ್ಮ ಹತ್ಯೆ ಹೆಚ್ಚಾವುತ್ತಾ ಇದ್ದು .ಕೆಲವು ಸ್ವಯಂಕೃತ ಅಪರಾಧಗಳ ಕಾರಣಕ್ಕೆ ಕೆಲವು ಬೇರೆಯೋರ ಉಪದ್ರ ತಾಳುಲೆ ಎಡಿಯದ್ದೆ ಇನ್ನು ಕೆಲವು ಸರಿಯಾದ ಕೆಲ್ಸ, ಸಂಬಳ ಸಿಕ್ಕದ್ದ ಬಗ್ಗೆ .ಪರೀಕ್ಷೇಲಿ ಫೈಲ್ ಆದ ಬಗ್ಗೆ .ಹೀಂಗೆ ದಿನ ನಿತ್ಯ ಇಂಥ ವಿಚಾರವ ನಾವು ಕೇಳುತ್ತು .ಅದರಲ್ಲಿ ಸುಮಾರು ಕೇಸ್ ಗ ಈ ದಂಪತಿಗಳ ಹಾಂಗೆ ಆತ್ಮ ಹತ್ಯೆ ಮಾಡಿಕೊಂಡೋವು ಇದ್ದವು .

ಈ ಗೆಂಡ ಹೆಂಡತಿಗೊಕ್ಕೆ ಇಬ್ರಿಂಗು ಒಳ್ಳೆಯ  ಕೆಲಸ ಇದ್ದು.ಇವು ಪ್ರಾಮಾಣಿಕ ಕೆಲಸ ಗಾರರು ಕೂಡ .ಫೈಲ್ ಮುಟ್ಟಕ್ಕಾರೆಮೊದಲು ,ಮುಟ್ಟಿದ್ದಕ್ಕೆ ನಂತರ ಹೇಳಿ ಪೈಸೆ ಎಳಕ್ಕೊಂಬ ಜೆನಂಗ ಅಲ್ಲ .ಸಾಮಾನ್ಯವಾಗಿ ಲೆಂಚ ತೆಕ್ಕೊಂಡು ಭ್ರಷ್ಟಾಚಾರ ಮಾಡಿ ಸಿಕ್ಕು ಹಾಕಿಕೊಂಡು ಅನೇಕ ಜನಂಗ ಅತ್ಮಹತ್ಯೆಯತ್ತ ಮೋರೆ ಮಾಡುದು ಅಲ್ಲಲ್ಲಿ ಕಂಡು ಬತ್ತು .ಭ್ರಷ್ಟಾಚಾರ ಮಾಡಿರೆ ಅದರ ಅರಗಿಸಿಕೊಂಬದು ಕೂಡ ಸುಲಭದ ವಿಚಾರ ಅಲ್ಲನ್ನೇ!

ಆದರೆ ಇವರದ್ದು ಈ ವಿಚಾರಕ್ಕೆ ಮಾಡಿಕೊಂಡ ಆತ್ಮ ಹತ್ಯೆಯಲ್ಲ .ಇವರಲ್ಲಿ ಹೆಂಡತಿಯ ತಂಗೆಯ ಗೆಂಡ ದೊಡ್ಡ ಬುಸಿನೆಸ್ ಮ್ಯಾನ್ .ತುಂಬಾ ದೊಡ್ಡ ವ್ಯವಹಾರ ಇದ್ದು ಅಡ.ಅವರತ್ರೆ ಏಳೆಂಟು ಬಂಗಲೆ ,ಕಾರುಗ ಎಲ್ಲ ಇದ್ದಡ.ಪ್ರಾಮಾಣಿಕವಾಗಿ ಕೆಲಸ ಮಾಡುವ ಸರ್ಕಾರಿ ಕೆಲಸಗಾರರಿಂಗೆ ಇಷ್ಟೆಲ್ಲಾ ಆದಾಯ ಇಲ್ಲೆ.ಈ ಗೆಂಡ ಹೆಂಡತಿಗ ಅವರ ಹೆಂಡತಿಯ ತಂಗೆಗೆ ಇಪ್ಪ ಹಾಂಗೆ ಸೀರೆ ಚಿನ್ನ ,ಮನೆ ವಾಹನಂಗ ಆಯಕ್ಕು ಹೇಳಿ ವಿಪರೀತ ಸಾಲ ಮಾಡಿ ದೊಡ್ಡ ಬಂಗಲೆ, ಇಪ್ಪತ್ತೈದು ಲಕ್ಷದ  ಕಾರು ತೆಗದ್ದವು .ಮತ್ತೆ ಸಾಲ ಕೊಡುಲೆ ಎಡಿಯದ್ದೆ ಆತು .ಸಾಲಗಾರರೆಲ್ಲ ದಿನ ನಿತ್ಯ ಪೈಸೆ ಹಿಂದೆ ಕೊದುಲೇ ಹೇಳುಲೆ ಸುರು ಮಾಡಿದವು .ಇನ್ನೊಂದೆಡೆ ಬಾಂಕ್ ಗಳಿಂದ ನೋಟೀಸ್ ಬಂತು .

ಇಷ್ಟಪ್ಪಗ ಇದರೆಲ್ಲದರ ನಿಭಾಯಿಸುಲೆ ಎಡಿಯದ್ದೆ  ಆ ದಂಪತಿಗ ಸಾವಿನತ್ತ ಮುಖ ಹಾಕಿದವು .

ಅಂಬಗ ಎನಗೆ ಇಂಥ ಸಂದರ್ಭಕ್ಕೆ ಆನೆ ಲದ್ದಿ ಹಾಕುತ್ತು ಹೇಳಿ ಮೆರು ಹಾಕುಲೆ ಹೋದರೆ ಅಕ್ಕ ?ಹೇಳುವ ಮಾತು ಬಳಕೆಲಿ ಇಪ್ಪದು ಎನಗೆ ನೆನಪಾತು .ಹಾಸಿಗೆ ಇದ್ದಷ್ಟು ಕಾಲು ಚಾಚು ಹೇಳುವ ಗಾದೆ ಮಾತು ಇದ್ದು ಅದಕ್ಕೆ ಪ್ರತಿಯಾಗಿ ಹಾಸಿಗೆಯನ್ನೇ ದೊಡ್ಡಕ್ಕೆ ಹೊಲಿಸು ಹೇಳುವ ಆಧುನಿಕ ಚಿಂತನೆಗಳೂ ಇದ್ದು ,ಆದರೆ ಎಲ್ಲದಕ್ಕೂ ಒಂದು ಮಿತಿ ಇರಡದ.ಅವರವರ ಸಾಮರ್ಥ್ಯ ನೋಡಿಗೊಳ್ಳಡದ?

ಆನೆಗೆ ದೊಡ್ಡ ಪ್ರಮಾಣದ ಲದ್ದಿ ಹಾಕುಲೆ ಎಡಿತ್ತು .ಅದು ಹಾಂಗೆ ತಿಂತು ,ಕೆಲಸ ಮಾಡುತ್ತು ಕೂಡ !ಆದರೆ ಹುಲ್ಲಿನ ಕೊಡಿ ಕೊಡಿ ತಿಂಬ ಮೆರು (ಮೊಲ ) ಅನೆ ಹಾಂಗೆ ಲದ್ದಿ ಹಾಕುಲೇ ಹೆರಟ್ರೆ ಅದು ಅಸಾಧ್ಯವಾದ ವಿಚಾರ .

ನಮ್ಮ ಸಾಮರ್ಥ್ಯವ ಮೀರಿದ ಕೆಲಸಕ್ಕೆ ಕೈ ಹಾಕುವ ಸಂದರ್ಭಲ್ಲಿ ಬುದ್ಧಿ  ಮಾತಾಗಿ  ಈ ಹವ್ಯಕ ಪಡೆ ನುಡಿ ಬಳಕೆಲಿ ಇದ್ದು .ಸಿಂಹ ಆನೆಯ ಎಳವಲೆ ಹೆರಟ ಹಾಂಗೆ ಹೇಳಿ ಅರ್ಥ ಬಪ್ಪ ಸಂಸ್ಕೃತದ ನುಡಿಗಟ್ಟು ಸಂಸ್ಕೃತ ಭಾಷಾ ಸಾಹಿತ್ಯಲ್ಲಿ ಬಳಕೆಲಿ ಇದ್ದು .ಸಿಂಹ ಕ್ಕೆ ಆನೆಯ ಕೊಲ್ಲುಲೆ ಎಡಿಗು ಹಾಂಗೆ ಹೇಳಿ ಎಳಕ್ಕೊಂಡು ಹೊಪಲೆ ಹೆರಟ್ರೆ ಅದು ಶಕ್ತಿ ಕುಂದಿ ಸಾಯ್ತು ಹೇಳುವ ಕಥೆಯ ಹೇಳಿಕ್ಕಿ ಈ ಮಾತಿನ ಅರ್ಥ . ಅದೇ ರೀತಿಯ ಅರ್ಥವ” ಆನೆ ಲದ್ದಿ ಹಾಕುತ್ತು ಹೇಳಿ ಮೆರು ಹೆರಟರೆ ಅಕ್ಕಾ ?”ಹೇಳುವ ಹವ್ಯಕ ನುಡಿ ಕಟ್ಟು ಕೊಡುತ್ತು .

ಸಾಮರ್ಥ್ಯಕ್ಕೆ ಮೀರಿದ ಕೆಲಸಕ್ಕೆ ಕೈ ಹಾಕಿದರೆ ಸೋಲಕ್ಕಾವುತ್ತು .ಹಾಂಗಾಗಿ ನಮ್ಮ ಇತಿ ಮಿತಿಯ ನೋಡಿಕೊಂಡು ಕೆಲಸ ಮಾಡಕ್ಕು .ಆರತ್ರೋ ಕಾರು ಬಂಗಲೆ ಇದ್ದು ಹೇಳಿ ಅತಿಯಾಗಿ ಸಾಲ ಮಾಡಿ ಜೀವನ ಇಡೀ ಅದರ ಬೂಟುಲೆ ಹೆಣಗಾಡಕ್ಕಾದ ಅಗತ್ಯ ಬತ್ತು .ನೆಮ್ಮದಿಯ ಕಳಕ್ಕೊಂಡು ಬದುಕ್ಕಾವುತ್ತು ಹೇಳುವ ಎಚ್ಚರಿಕೆ ಕೊಡುವ ನುಡಿಗಟ್ಟು ಇದು

Friday 8 August 2014

ಗಿಳಿ ಬಾಗಿಲು (ಹವ್ಯಕ ಬ್ಲಾಗ್ )- ಕಣ್ಣು ನೆತ್ತಿಗೆ ಹಾರಿದ್ದು

ಒಂದು ಡೆಡ್ ಲ್ಯಾಂಗ್ವೇಜ್ ನ ( ?! )ಕಲ್ತು   ಲೈವ್ ಬರಹಗಾರ್ತಿಯಾದೆ.ಅಪ್ಪು ಎನ್ನ ಬರವಣಿಗೆಗೆ ಮೂಲ ಪ್ರೇರಣೆ ಸಂಸ್ಕ್ರತದ್ದೆ ,ಎಂತಕೆ ಹೇಳಿ ಇನ್ನೊಂದು ದಿನ ಹೇಳುತ್ತೆ .ಸಂಸ್ಕೃತ ಮೃತ ಭಾಷೆ ಅಲ್ಲ ,ಆದರೆ ಅಭಿಮಾನ ಹೀನರು .ಪೂರ್ವಾಗ್ರಹ ಪೀಡಿತರು ಬದುಕಿಯೂ ಮೃತ ಆವುತ್ತವು ಅಷ್ಟೇ !

ಮೊನ್ನೆಯಷ್ಟೇ ಸಂಸ್ಕೃತ ದಿನ ಕಳುತ್ತು ಅಂಬಗ ಎನಗೆನೆನಪಾದ ಒಂದು ಮಾತು ಮತ್ತು ಅದಕ್ಕೆ ಸಂಬಂಧಿಸಿದ ಅನುಭವಕ್ಕೆ ಬಂದ  ಒಂದು ನುಡಿಗಟ್ಟು "ಕಣ್ಣು ನೆತ್ತಿಗೆ ಹಾರಿದ್ದು"
ಕಣ್ಣು ನೆತ್ತಿಗೆ ಹಾರಿದ್ದು ಹೇಳುವ ಮಾತಿನ ಆನು ಸುಮಾರು ಸರ್ತಿ ಅವು ಇವು ಹೇಳುದರ ಕೇಳಿತ್ತಿದೆ.ಆದರೆ ನಿಜಕ್ಕೂ ಕಣ್ಣು ನೆತ್ತಿಗೆ ಹಾರುದುಹೇಳಿರೆ ಎಂತ ಹೇಳಿ ಎನಗೆ ನೋಡಿ ಗೊಂತಿತ್ತಿಲ್ಲೆ.
ಕಳುದ ವರ್ಷ ಒಂದು ವಿದ್ಯಾ ಸಂಸ್ಥೆಗೆ ವಿಶೇಷ ಉಪನ್ಯಾಸ ಕೊಡುಲೆ ಹೋಗಿತ್ತಿದೆ. ಕಾರ್ಯಕ್ರಮಕ್ಕೆ ಮೊದಲು ಬಂದ ಅತಿಥಿಗೊಕ್ಕೆ ಸಣ್ಣ ಉಪಹಾರ ವ್ಯವಸ್ಥೆ ಮಾಡಿತ್ತಿದವು .ಅಲ್ಲಿ ಒಬ್ಬ ಊಟೋಪಚಾರ ವ್ಯವಸ್ಥೆಯ ವಹಿಸಿಕೊಂಡಿದ್ದ ವ್ಯಕ್ತಿಯ ನೋಡುವಾಗ ಅವಂಗೆ ಏನೋ ಗೊಂದಲ ಇದ್ದ ಹಾಂಗೆ ಅನಿಸಿಕೊಂಡು ಇತ್ತು .ಅವನ ಎಲ್ಲಿಯೋ ನೋಡಿದ್ದೆ ಹೇಳಿ ಅನುಸ್ತಾ ಇತ್ತು ಎನಗೆ.ಅವ ಹತ್ತರೆ ಬಂದು ಮುಖ್ಯಸ್ಥರಿಂಗೆ ನಮಸ್ಕಾರ ಮಾಡಿದ.

ಅಷ್ಟಪ್ಪಗ ಎನ್ನ "ಇವರು ಡಾ.ಲಕ್ಷ್ಮೀ ಜಿ ಪ್ರಸಾದ್ ಗೊತ್ತಲ್ವ ಬರಹಗಾರಾರು ,ಸಂಶೋಧಕರು.ಇವತ್ತಿನ ಅಥಿತಿಗಳು ಹೇಳಿ ಪರಿಚಯಿಸಿಕ್ಕಿ ಅವನ ಆ ಕಾಲೇಜ್ ಲಿ ಅವ ಎಲೆಕ್ಟ್ರಾನಿಕ್ಸ್ ಲೆಕ್ಚರರ್ ಆಗಿದ್ದ ಹೇಳಿ ಪರಿಚಯ ಮಾಡಿ ಕೊಟ್ಟವು ಅಲ್ಲಿ .ನಂತರ ಆನು ಕಾರ್ಯಕ್ರಮ ಆಗಿ ಹೆರಡುವಾಗ ಅವ ಬಂದು ಎನ್ನತ್ತರೆ ಬಂದು ನೀವು ದಕ್ಷಿಣ ಕನ್ನಡದವರ ? ಹವ್ಯಕರ ?ಹೇಳಿ ಕೇಳಿದ.ಅಪ್ಪ್ಪು ಹೇಳಿ ಹೇಳಿದೆ .ನಿಂಗಳ ಎಲ್ಲಿಯೋ ನೋಡಿದ್ದೆ ಹೇಳಿ ಅನ್ಸುತ್ತು ಹೇಳಿದ.ಈ ಮಾತಿನ ಎನಗೆ ತುಂಬಾ ಜನಂಗ ಹೇಳುತ್ತವು .ಪತ್ರಿಕೆಗಳಲ್ಲಿ ಲೇಖನ ಬಪ್ಪಗ ಕೆಲವು ಸರ್ತಿ ಎನ್ನ ಫೋಟೋವೂ ಬತ್ತನ್ನೇ!ಅದರ ನೋಡಿದೊರಿಂಗೆ ಎನ್ನ ಕಾಂಬಗ ಎಲ್ಲೋ ನೋಡಿದ ಹಾಂಗೆ ಅನ್ಸುದು ಸಹಜ .ಹಾಂಗೆ ಇವಂಗೆ ಎನ್ನ ನೋಡಿದ ಹಾಂಗೆ ಅನ್ಸುದು ಆಡಿಕ್ಕು ಹೇಳಿ ಭಾವಿಸಿದೆ ಆನು.

ಮತ್ತೆ ನಿಂಗಳ ಸ್ವಂತ ಊರು ಯಾವುದು ಕೇಳಿದ .ಹೇಳಿದೆ ಆನು .ಅಷ್ಟಪ್ಪಗ ಅವಂಗೆ ಆನು ಆರು ಹೇಳಿ ಅವಂಗೆ ಗೊಂತಾತು.ಅವ ಆರು ಹೇಳಿ ಪರಿಚಯ ಹೇಳಿದ ಎನಗೂ ಅವನ ಈ ಹಿಂದೆ ಎಲ್ಲಿ ನೋಡಿದ್ದು ಹೇಳಿ ನೆನಪಾತು.

ಎಂಗಳ ಮನೆ (ಪ್ರಸಾದ್ ನ ಮನೆ) .ಹತ್ರ ಅವನ ಮನೆ ಇತ್ತು .ಮದುವೆ ಆದ ಹೊಸತರಲ್ಲಿ ಎಂಗಳ ಒಂದು ಊಟಕ್ಕೆ/ ಸಮ್ಮಾನಕ್ಕೆ ದೆನಿಗೇಳಿತ್ತಿದವು ಇವನ ಅಬ್ಬೆ ಅಪ್ಪ .ಹಾಂಗೆ ಅಲ್ಲಿಗೆ ಆನು ಹೋದಿಪ್ಪಗ ಇವನತ್ರೆ ಮಾತಾಡಿದ್ದೆ .ಆ ಸಮಯಲ್ಲಿ ಆನು ಮದುವೆಯ ನಂತರ ಕಲಿತ್ತಾ ಇಪ್ಪದು ಒಂದು ಊರಿಂಗೆ ಒಂದು ಮಾತನಾಡಿಕೊಂಬ ಸುದ್ದಿ ಆಗಿತ್ತು .ಅಂಬಗ ಇವ ಜಸ್ಟ್ ಇಂಜಿನೀರಿಂಗ್ ಗೆ ಸೇರಿದ್ದಷ್ಟೇ .ಇನ್ನು ಕ್ಲಾಸ್ ಸುರು ಆಗಿತ್ತಿಲ್ಲೆ .ಎನ್ನ ಡಿಗ್ರಿ ಮುಗುದು ಆನು ಸಂಸ್ಕೃತ ಎಂ. ಎ ಗೆ ಸೇರುವ ಅಂದಾಜಿಲಿ ಇತ್ತಿದೆ.(ಆನು ಬಿಎಸ್ಸಿ ಮಾಡಿದ್ದು ಆದರೆ ಎನಗೆ ಲ್ಯಾಬ್ ಅಲರ್ಜಿ ಸಮಸ್ಯೆ ಕಾಣಿಸಿಕೊಂಡ ಕಾರಣ ಎನಗೆ ಕೆಮಿಸ್ಟ್ರಿ ಎಂ.ಎಸ್ಸಿ ಮಾಡುಲೆ ಸಾಧ್ಯ ಇತ್ತಿಲ್ಲೆ.ಫಿಸಿಕ್ಸ್ ಮತ್ತೆ ಮಾಥ್ಸ್ ಎನಗೆ ಇಂಟರೆಸ್ಟ್ ಇತ್ತಿಲ್ಲೆ.ಸಂಸ್ಕೃತಲ್ಲಿ ಆಸಕ್ತಿ ಇತ್ತು .ಹಾಂಗಾಗಿ ಆನು ಸಂಸ್ಕೃತ ಎಂ.ಎ ಮಾಡಿದ್ದು ಆನು)
ಆ ಸಮಯಲ್ಲಿ ಇವನ ಅಬ್ಬೆ ಎನ್ನತ್ರೆ ಮುಂದೆ ಓದುಲೆ ಇದ್ದ ಕೇಳಿದವು .ಇದ್ದು ಹೇಳಿದೆ ಅಂಬಗ ಎಂತರ ಓದುದು ಹೇಳಿ ಅಲ್ಲಿ ಕೇಳಿದವು .ಆನು ಕಟೀಲಿಲಿ ಸಂಸ್ಕೃತ ಎಂ ಎ ಗೆ ಸೇರುದು ಹೇಳಿದೆ

ಅಂಬಗ ಅಲ್ಲಿಯೇ ಇದ್ದ ಇವ ಎನ್ನತ್ರೆ ಕೇಳಿತ್ತಿದ.ಒಂದು ಡೆಡ್ ಲ್ಯಾಂಗ್ವೇಜ್ ನ ಓದಿ ಎಂಥ ಪ್ರಯೋಜನ ಹೇಳಿ .ಅಷ್ಟಪ್ಪಗ ಆನು ನೀನು ಇಂಜಿನೀರಿಂಗ್ ಓದಿರೆ ಎಂತ ಪ್ರಯೋಜನ ಕೇಳಿದೆ .ಅಂಬಗ ಅವ ಒಳ್ಳೆ ಕೆಲಸ ಸಿಕ್ಕುತ್ತು ಹೇಳಿದ ,ಆನು ಹೇಳಿದೆ ಅಂಬಗ ಪರಿಶ್ರಮ ಪ್ರತಿಭೆ ಪ್ರಾಮಾಣಿಕತೆ ಇದ್ದರೆ ಎಂತ ಓದಿದರೂ ಕೆಲಸ ಸಿಕ್ಕುತ್ತು ಹೇಳಿ .ಎಂ ಎ ಓದಿದೋರು ನಾಯಿ ಸಂತೆ ಇದ್ದವು ಹೇಳುವ ಮಾತಿನ ಎನಗೆ ಸುಮಾರು ಜನಂಗ ಹೇಳಿತ್ತಿದವು.ದೊಡ್ಡೋರ ಇಂಥ ಮಾತಿನ ಕೇಳಿ ಎನ್ನತ್ತರೆ ಇವಂದೆ ಎನಗೆ ಹೇಳಿತ್ತಿದ .ಈ ಬಗ್ಗೆ ಎಂಗೊಗೆ ತುಂಬಾ ಚರ್ಚೆ ಆಗಿತ್ತು ಕೂಡಾ!
ಆದರೆ ಎನಗೆ ಅವನ ಗುರ್ತ ಸಿಕ್ಕಿತ್ತಿಲ್ಲೆ ಸುರುವಿಂಗೆ

ಆನು ಆರು ಹೇಳಿ ಗೊಂತಾಗಿ ಅಪ್ಪಗಲೇ ಅವನ ಮೋರೆಲಿ ತುಂಬಾ ಆಶ್ಚರ್ಯ ಕಂಡತ್ತು.ಮತ್ತೆ ಪುನಃ ಕೇಳಿದ ಅಂಬಗ

ಪತ್ರಿಕೆಗಳಲ್ಲಿ ಲೇಖನ ಬರವ ಲಕ್ಷ್ಮೀ ಜಿ ಪ್ರಸಾದ ನಿಂಗಳೆಯಾ ಹೇಳಿ ಕೇಳಿದ.ಅಪ್ಪು ಹೇಳಿ ಹೇಳಿದೆ.ಅಂಬಗ ಅಪ್ಪ ?! ಹೇಳಿ ಆಶ್ಚರ್ಯಲ್ಲಿ ಕೇಳಿದ "ಎಂ ಎ ಓದಿದೋರು ನಾಯಿ ಸಂತೆ ಇದ್ದು ಹೇಳಿದೋನು ಕೆಲಸ ಮಾಡುವ ಕಾಲೇಜಿಂಗೆ ಇದ್ದಕಿದ್ದ ಹಾಂಗೆ ಅತಿಥಿಯಾಗಿ ಆಹ್ವಾನಿಸಲ್ಪಟ್ಟು ಸಂಸ್ಥೆ ಯ ಹಿರಿಯ ಅಧಿಕಾರಿಗಳಿಂದ ಪರಿಚಯಿಸಲ್ಪಟ್ಟರೆ ನಂಬುಲೆ ಅಸಾಧ್ಯವಾಗಿ ಆಶ್ಚರ್ಯ ಅಪ್ಪದು ಸಹಜ ಕೂಡ !.ಅವನ ಕಣ್ಣು ಅರಳಿ ದೊಡ್ಡ ಆಗಿಹೆರ ಬಪ್ಪ ಹಾಂಗೆ ಆತು .ಅವಂಗೆ ಅದರ ಜೀರ್ಣಿಸಿಕೊಂಬಲೆ ಅಸಾಧ್ಯವಾಗಿತ್ತು! ಅಂಬಗ ಎನಗೆ ಕಣ್ಣುಗೆ ಹಾರುದು ಹೇಳುದು ಎಂತರ ಹೇಳಿ ಎನಗೆ ಗೊಂತಾತು.
ನಂತರ ಅವ "ಲಕ್ಷ್ಮ್ಯಕ್ಕ sorry ಅಂದು ಎನಗೆ ಅಷ್ಟು ತಿಳುವಳಿಕೆ ಇತ್ತಿಲ್ಲೇ .ಎಲ್ಲರು ದೊಡ್ಡೋರು ಹಾಂಗೆ ಮಾತಾಡಿಗೊಂಡು ಇತ್ತಿದವು ನಿಂಗ ಮದುವೆ ಆದ ಮೇಲೆ ಕಲಿವ ಬಗ್ಗೆ ಹಾಂಗೆ ಆನುದೇ ಬುದ್ದಿ ಇಲ್ಲದ್ದೆ ಮಾತಾಡಿದ್ದೆ ಎಂಗಳ ಮನೆಗೆ ಸಮ್ಮಾನಕ್ಕೆ ದೆನಿಗಗೇಳಿಕ್ಕಿ ಹಾಂಗೆ ಮಾತಾಡಿದ್ದು ತಪ್ಪು ಕ್ಷಮಿಸಿ" ಹೇಳಿದ.ಅದು ಅವನ ದೊಡ್ಡ ತನ ಅದು ಇರಲಿ
ಎನಗೆ ಮಾತ್ರ ಅಂಬಗ ಕಣ್ಣು ನೆತ್ತಿಗೆ ಹಾರಿದ್ದು /ಹೊಯಿದು ಹೇಳುವ ನುಡಿಗಟ್ಟು ನೆನಪಾಗಿ ಅದರ ಅರ್ಥ ಕೂಡಾ ಸರಿಯಾಗಿ ತಲೆಗೆ ಹೋತು .
ಆರಿಂಗಾದರೂ ನಂಬುಲೆ ಅಸಾಧ್ಯವಾದರೂ ವಾಸ್ತವ ಸತ್ಯ ಎದುರಾಗಿ ಅಪ್ಪಗ ಅಪ್ಪ ಆಶ್ಚರ್ಯವ ವಿವರ್ಸುವ ಸಂದರ್ಭಲ್ಲಿ ಅವನ /ಅದರ ಕಣ್ಣು ನೆತ್ತಿಗೆ ಹಾರಿದ್ದು ಹೇಳುವ ಮಾತಿನ ಬಳಕೆ ಮಾಡುತ್ತವು
ಅಂತೂ ಇಂತೂ ಅಭಿಮಾನ ಶೂನ್ಯ ಅವಿವೇಕಿಗಳ ಪಾಲಿಗೆ ಮೃತ ಭಾಷೆ ಆಗಿಪ್ಪ ಜೀವಂತ ಭಾಷೆ  ಸಂಸ್ಕೃತವ ಕಲ್ತು ಆನಂತೂ ಜೀವಂತ ಬರಹಗಾರ್ತಿ ಆಯ್ದೆಪ್ಪ /
ನಮ್ಮ ಸಮಾಜಲ್ಲಿ ತಪ್ಪು ಮಾಡಿದೋರ ಬಗ್ಗೆ ಉದಾರತೆ    ಇದ್ದಪ್ಪ  ಎಷ್ಟು ಉದಾರತೆ ಹೇಳಿರೆ ಅದರ ಹೇಳಿದರೆ ದೊಡ್ಡ ತಪ್ಪು ಹೇಳುವಷ್ಟು  !ಎಂತಕೆ ಹೇಳಿ ಗೊಂತಿಲ್ಲೆ ಎನಗೆ .
ಬಹುಶ ಆನು ಹೆಂಗಸು ಅನ್ನೇ  ತಮ್ಮ ಮೇಲೆ ಅಪ್ಪ ಅನ್ಯಾಯವ ಎಲ್ಲೂ ಹೇಳದ್ದೆ ಬಾಯಿ ಮುಚ್ಚಿ ಕ್ಷಮಯಾ ಧರಿತ್ರಿ ಆಗಿದ್ದರೇ  ಹೆಣ್ಣು ದೇವತೆ ,ಇಲ್ಲೆ ಅದರ ಪ್ರಶ್ನಿಸಿತ್ತೋ ಅನ್ಯಾಯವ ಹೇಳಿತ್ತೋ ಅಂಬಗ ಅದು ಕೂಡಲೇ ರಾಕ್ಷಸಿ ಆಗಿ ಬಿಡುತ್ತು ನಮ್ಮ ಪುರುಷ ಪ್ರಧಾನ ಸಮಾಜಲ್ಲಿ !.

Wednesday 23 July 2014

ಗಿಳಿ ಬಾಗಿಲು (ಹವ್ಯಕ ಬ್ಲಾಗ್ )-30 ಕಾಡ ಸೊಪ್ಪು ತೋಡ ನೀರು -ಡಾ.ಲಕ್ಷ್ಮೀ ಜಿ ಪ್ರಸಾದ

ಮೊನ್ನೆ ಒಂದಿನ ಪೇಪರ್ ಓದುವಾಗ ಒಂದು ವಿಷಯ ಗಮನಕ್ಕೆ ಬಂತು .ಅದರಲ್ಲಿ ಒಂದಷ್ಟು ವಿಜ್ಞಾನಿಗಳ ಸಂಶೋಧನೆ ಬಗ್ಗೆ ಮಾಹಿತಿ ಇತ್ತು .
ನಾವು ಇಷ್ಟರತನಕ ಶುದ್ಧಗೊಳಿಸಿದ ಆಹಾರ ತಿನ್ನಕ್ಕು ,ಆಹಾರಲ್ಲಿ ಬ್ಯಾಕ್ಟೀರಿಯಂಗ ಇದ್ದರೆ ಆರೋಗ್ಯಕ್ಕೆ ಹಾನಿ ಹೇಳುದರ ಕೇಳಿಗೊಂಡು ಬಂದದು ಅನ್ನೇ.ಆದರೆ ಅದರಲ್ಲಿ ವಿಜ್ಞಾನಿಗ ಆಹಾರಲ್ಲಿ ಒಂದಷ್ಟು ಜೀವಿಗಳ ಸೇರಿಸಿ ತಿಮ್ಬದು ಒಳ್ಳೇದು ,ಆರೋಗ್ಯಕ್ಕೆ ಸಣ್ಣ ಪ್ರಮಾಣದ ಬ್ಯಾಕ್ಟೀರಿಯಂಗ ಬೇಕು .ಅದರಂದಾಗಿ ರೋಗ ನಿರೋಧಕ ಶಕ್ತಿ ಹೆಚ್ಚಾವುತ್ತು ಇತ್ಯಾದಿ ಮಾಹಿತಿಗಳ ಸಂಶೋಧನೆಯ ಆಧಾರಲ್ಲಿ ಕೊಟ್ಟಿದವು .ಅದಕ್ಕೆ ಸಾಕ್ಷಿಯಾಗಿ ಯೋಗರ್ಟ್ (ಹಾಲಿನ ಕಿಣ್ವನಕ್ಕೆ ಒಳಪಡಿಸಿದ ಪೇಯ ) ಇಂದಾಗಿ ಆರೋಗ್ಯದ ಮತ್ತ ಹೆಚ್ಚು ಅಪ್ಪದರ ಬಗ್ಗೆ ವಿವರಿಸಿದ್ದವು .ಇದರ ಓದುವಗ  ಎಂಗಳ ಭಾರೀ ಪ್ರೀತಿಯ ಪೆಲತ್ತಡ್ಕ ಅಜ್ಜಿ (ಎನ್ನ ಅಪ್ಪನ ಕಿರಿಯಬ್ಬೆ,ಅಮ್ಮನ ಸೋದರತ್ತೆ ಕೂಡಾ )  ಹೇಳುತ್ತಾ ಇದ್ದ ಒಂದು ಮಾತು ನೆನಪ್ಪಾತು .

ಎನ್ನ ಅಜ್ಜಂಗೆ ಅಮ್ಮಂದೆ ದೊಡ್ದಮ್ಮಂದೆ ಇಬ್ರು ಕೂಸುಗ ಮಾತ್ರ.ಹಾಂಗಾಗಿ  ಅಜ್ಜನ ಮನೆಲಿ ಹತ್ತು ಜನ (ದೊಡ್ಡಮ್ಮನ ಮಕ್ಕ ಐದು ಜನ ,ಎಂಗ ಐದು ಜನ) ಪುಳ್ಳಿಯಕ್ಕಳದ್ದೆ ಕಾರ್ಬಾರು .ಎಂಗ ಕಲ್ಲು ಇಡ್ಕದ್ದ ಬೀಜದ ಮರ/ಮಾವಿನ ಮರಂಗ  ಆ ಊರಿಲಿ ಒಂದುದೆ ಇತ್ತಿಲ್ಲೆ.ಬೇಸಗೆ ರಜೆಲಿ ಉದಿಯಪ್ಪಗ ಅಜ್ಜಿ ಮಾಡಿದ  ದೋಸೆಯೋ ಸೆಖೆಗೆರದ್ದೋ ತಿಂದಿಕ್ಕಿ ಕೊಕ್ಕೆದೆ ಬಟ್ಟಿದೆ ಹಿಡ್ಕೊಂಡು ಬೀಜ ಕೊಯ್ವ ನೆಪಲ್ಲಿ ಮನೆಂದ ಎಲ್ಲರೂ ಪರಾರಿ ಅಪ್ಪದು ,ನಾಲ್ಕು ಬೀಜ ಕೊಯ್ದ ಹಾಂಗೆ ಮಾಡಿಕ್ಕಿ ಎಂಗಳ ಕಲ್ಲು ಇಡ್ಕುವ ಗುರಿಯ ಪ್ರದರ್ಶನ ,ಕಲ್ಲು ಇಡ್ಕಿ ಬೀಜ ಹಣ್ಣಿನ ಬೀಳ್ಸುದು,ಮತ್ತೆ ಹತ್ತರೆ ಇಪ್ಪ ಮಾವಿನ ಮರಕ್ಕೆ ಕಲ್ಲು ಇಡುಕ್ಕಿ ಮಾವಿನಕಾಯಿ ಬೀಳ್ಸುದು,ಮನೆಂದ ಬಪ್ಪಗಳೇ ಉಪ್ಪು ಖಾರ ಅಜ್ಜಿಯ  ಕಣ್ಣಿಂಗೆ ಬೀಳದ್ದ ಹಾಂಗೆ ತಂದುಗೊಂಡು ಇತ್ತಿದೆಯ .ಅದರ ಹಾಕಿ ಮಾವ್ನಕಾಯಿ ತಿಂದು ಬೀಜ ಹಣ್ಣು ತಿಂದು ,ಬೆಟ್ಟು ಗೆದ್ದೆಲಿ ಪಿಲೆ(ಚಿನ್ನಿ ದಾಂಡು ?)ಆಡಿಕ್ಕಿ  ಮಧ್ಯಾಹ್ನ ಎರಡು ಗಂಟೆಗೆ ಮನೆಗೆ ಬಪ್ಪದು.ಹೋಪಗಳೇ ಅಜ್ಜಿ ಬೇಗ ಬನ್ನಿ ಹೊತ್ತು ಮಾಡ್ದಿ ಹೇಳುತ್ತ.ಆದರೂ ಎಂಗ ಬಪ್ಪದು ಎರಡು ಗಂಟೆ ಮೇಲೆಯೇ !ಎನ್ನ ಅಜ್ಜನ ಮನೆಲಿ ಪುಳ್ಳಿಯಕ್ಕಳಲ್ಲಿ ಕೂಸು ಮಾಣಿ ಹೇಳಿ ಬೇಧ ಇತ್ತಿಲ್ಲೆ,ಹಾಂಗಾಗಿ ಈ ಗುಂಪಿಲಿ ಆನುದೆ ಇತ್ತಿದೆ .

ಬೆಶಿಲಿಂಗೆ ಮನೆಗೆ ಬಂದು ಮೀವಲೆ ಹೋಪದು ರಜ್ಜವೇ ರಜ್ಜ ಹೊತ್ತು ಹೇಳಿ ಅಜ್ಜಿಯ ಪುಸಲಾಯಿಸಿ ತೋಡಿನ್ಗೆ ಈಜುಲೆ ಹೋಗಿಕೊಂಡು ಇತ್ತಿದೆಯ.(ಅಂಬಗ ಬೇಸಗೆಲಿ ಕೂಡಾ ಆ ತೋಡಿನ ಗುಂಡಿಲಿ ಈಜುವಷ್ಟು ನೀರು ಇತ್ತು ,ಈಗ ಮಾರ್ಚ್ ಬರಕ್ಕಾದರೆ ನೀರು ಹರಿವದು ನಿಲ್ಲುತ್ತು )ಅಷ್ಟೊತ್ತಿಂಗೆ ಎನ್ನ ಅಜ್ಜಿ ಎಂಗೊಗೆ ವಿಶೇಷವಾಗಿ ಎನಗೂ ದೊಡ್ಡಮ್ಮನ ಮಗಳು ತಂಗೆಗೂ ತಲೆ ಚೆಂಡಿ ಮಾಡಡಿ ಹೇಳಿ ಹೇಳಿಗೊಂದು ಇತ್ತಿದ.ಎಂಗ ಹೂ0ಕುಟ್ಟಿಕ್ಕಿ ಆಚೊಡೆ ಹೋಗಿ ಈಜುವ ಮೀವ ನೆಪಲ್ಲಿ ನೀರಿಲಿ ಮುಳುಗಿಕೊಂಡು ಇತ್ತಿದೆಯ.

ಎಂಗ ಗಂಟೆ ಮೂರು ಆದರೂ ಮಿಂದು ಬಾರದ್ದೆ ಅಪ್ಪಗ ಅಜ್ಜಿ ಕೋಲು ಹಿಡುಕ್ಕೊಂಡು ಬಂದಪ್ಪಗ ಓಡಿ  ಹೋಗಿ ಮನೆ ಸೇರಿ ಕೊಂಡು ಇತ್ತಿದೆಯ .

ಕೆಲವು ಸರ್ತಿ ಎಂಗೊಗೆ ಶೀತ ಜ್ವರ ಎಲ್ಲ ಬಂದುಕೊಂಡು ಇತ್ತಿದು. ಎನ್ನ ಪೆಲತ್ತಡ್ಕ ಅಜ್ಜಿ ಬಂದಿಪ್ಪಗಳುದೆ ಹೀಂಗೆ ಆಗಿಕೊಂಡು ಇತ್ತು.ಒಂದು ಸರ್ತಿ ಎಂಗೊಗೆ ಎಲ್ಲೊರಿಂಗೂ ಜ್ವರ ಬಂತು .ಅಂಬಗ ಎನ್ನ ಅಜ್ಜಿ ಪೆಲತ್ತಡಕ ಅಜ್ಜಿ ಹತ್ರೆ ಈ ಮಕ್ಕ ಒಂದುದೆ ಹೇಳಿದ್ದು ಕೇಳ್ತವಿಲ್ಲೇ,ಬೆಶಿಲಿಂಗೆ ಸೊಕ್ಕಿಕ್ಕಿ ಬಂದು ತೋಡ ನೀರಿಲಿ ಆಡುತ್ತವು .ಅಜ್ಜ ನೋಡಿಯೂ ನೋಡದ್ದ ಹಾಂಗೆ ಸುಮ್ಮನಿದ್ದವು (ಅಜ್ಜಂದು ಅಪರೊಕ್ಷವಾಗಿ ಎಂಗೊಗೆ ಬೆಂಬಲ ಇತ್ತು !)ಇತ್ಯಾದಿಯಾಗಿ ದೂರು ಹೇಳಿಗೊಂಡು ಇತ್ತಿದ.ಅಂಬಗ ಪೆಲತ್ತಡ್ಕ ಅಜ್ಜಿ "ಮಕ್ಕ ಹಾಂಗೆ ಇರಕ್ಕು ಲಕ್ಷ್ಮೀ   (ಎನ್ನ ಅಜ್ಜಿಯ ಹೆಸರು ಲಕ್ಷ್ಮೀ ಹೇಳಿ ,ಹಾಂಗಾಗಿಯೇ ಎನ್ನ ಹೆಸರು ಕೂಡ ಅದೇ)ಮಕ್ಕ ಕಾಡ ಸೊಪ್ಪು ತೋಡ ನೀರು ಹೇಳಿ ಬೆಳೆಯಕ್ಕು.ಹಾಂಗೆ ಬೆಳದರೆ ಅವಕ್ಕೆ ಎಲ್ಲವನ್ನು ತಡಕ್ಕೊಂಬ ಶಕ್ತಿ ಬಪ್ಪದು .ಮಕ್ಕಳ ಅತೀ ಜಾಗ್ರತೆ ಮಾಡುಲಾಗ ,ರಜ್ಜ ಮಳೆಲಿ ನೆನೆಯಕ್ಕು ,ಬೆಶಿಲಿಂಗೆ ಹೊಯಕ್ಕು ಸಿಕ್ಕಿದ್ದು ತಿನ್ನಕ್ಕು ಒಂದೆರಡು ಸರ್ತಿ ರಜ್ಜ ಶೀತ ಅಕ್ಕು .ಆದರೆ ಅವು ಗಟ್ಟಿ ಮುಟ್ಟಾಗಿ ಬೆಳೆತ್ತವು,ಶೀತ ಆದರೆ ಕುಂಕುಮ ಬೆಶಿ ಮಾಡಿ ನೆತ್ತಿಗೆ ಹಾಕಿ,ಮತ್ತೆ ಬೆಶಿ ಹಾಲಿನಗೆ ಒಂದು ಚಿಟಿಕೆ ಅರಿಶಿನ ಹಾಕಿ ಕುಡಿವಲೆ ಕೊಡು .ಅರ್ಧ ಗಂಟೆಲಿ ಕಮ್ಮಿ ಅವುತ್ತಿದ  ಹೇಳಿ" ಅಜ್ಜಿಗೆ ಸಮಾಧಾನ ಮಾಡಿಕೊಂಡು ಇತ್ತಿದವು .

ನಮ್ಮ ಹಿರಿಯರು  ಶಾಲೆ ಮೆಟ್ಲು ಹತ್ತದ್ದರೂ ,ಯಾವ ಸಂಶೋಧನೆ ಮಾಡದ್ದರೂ ಅವರಲ್ಲಿ ತುಂಬಾ ಅನುಭವ ಇತ್ತು ,ಜ್ಞಾನ ಇತ್ತು ,ಹಾಂಗಾಗಿ  ಈಗ ವಿಜ್ಞಾನಿಗ ಹೇಳಿದ ವಿಚಾರ ಅವಕ್ಕೆ ಅಂದೇ ಗೊಂತಿತ್ತು ,ಹಾಂಗಾಗಿಯೇ ಕಾಡ ಸೊಪ್ಪು ತೋಡ ನೀರು ಹೇಳುವ ಮಾತು ಬಳಕೆಗೆ ಬಂದಿರೆಕ್ಕು ಅಲ್ಲದ ?

ಗಿಳಿ ಬಾಗಿಲು(ಹವ್ಯಕ ಬ್ಲಾಗ್ )-29 ಬೇಳೆಗೆ ಮಣ್ಣು ಉದ್ದಿದ ಹಾಂಗೆ -ಡಾ.ಲಕ್ಷ್ಮೀ ಜಿ ಪ್ರಸಾದ

ಆನು ಇಂದು ಅಮ್ಮಂಗೆ ಫೋನ್ ಮಾಡಿ ಅಪ್ಪಗ ಅಭಿ ಓಡಿ ಬಂದು ಫೋನ್ ನೆಗ್ಗಿತ್ತು ,ಅದರದ್ದು ಮನೆಲಿ “ಆನು ಫೋನ್ ನೆಗ್ಗುದು ಹೇಳಿ “ಯಾವಾಗಲು ಗಲಾಟೆ !ಅಭಿ ಹೇಳಿರೆ ಎನ್ನ ತಮ್ಮನ ಮಗಳು ,ಮೂರು ವರ್ಷದ ಸಣ್ಣ ಕೂಸು ,ಮಾತಿನ ಮಲ್ಲಿ .ಫೋನ್ ನೆಗ್ಗಿ ಹಲೋ ಹೇಳಿತ್ತು .ಎಂತ ಮಾಡುತ್ತಾ ಇದ್ದೆ ಅಭಿ,ಉಂಡಾತ ?ಹೇಳಿ ಕೊಂಡಾಟಲ್ಲಿ ಕೇಳಿದೆ .
ಆನು ತುಂಬಾ ಉಂಡಿದೆ ಹೇಳಿತ್ತು .,ಅದು ಎಂತದುದೆ ಸರಿಯಾಗಿ ಉಂಡು ತಿಂದು ಮಾಡುತ್ತಿಲ್ಲೆ (ಈಗಣ ಎಲ್ಲ ಮಕ್ಕಳದ್ದೂ ಇದೇ ಕಥೆ ಅನ್ನೇ ) ಹಾಂಗೆ ಸಪೂರಕ್ಕೆ ಸಣ್ಣಕ್ಕೆ ಇದ್ದು ನೋಡುಲೆ ,ಕಾರ್ಬಾರು ಮಾತ್ರ ಗುಡ್ಡೆ ಅಷ್ಟು ಇದ್ದು ,ಅದು ಬೇರೆ ವಿಚಾರ .ಎಂತದೂ ಉಂಡು ತಿಂದು ಮಾಡದ್ದೆ ಅದರಮ್ಮನ ಬೊಡಿಸುವ ಜೆನ ತುಂಬಾ ಉಂಡಿದೆ ಹೇಳುವಗ ನೆಗೆ ಬಂತು ಎನಗೆ .
ಮತ್ತೆ ಅಮ್ಮ ಫೋನ್ ತೆಕ್ಕೊಂಡ .ಹೀಂಗೆ ಮಾತಾಡುವಾಗ ಅಮ್ಮನತ್ರೆ ಹೇಳಿದೆ ಅಭಿ ತುಂಬಾ ಉಂಡಿದೆ ಹೇಳಿತ್ತು ,ಉಂಡು ತಿಂದು ಮಾಡುತ್ತಾ ?ಗೆನ ಆಯಿದ ಈಗ ?ಹೇಳಿ ಕೇಳಿದೆ .”ಉಂಬ ಕಥೆ ಹೇಳಿ ಪ್ರಯೋಜನ ಇಲ್ಲೆ .ಆದರೆ ರಜ್ಜ ಗೆನ ಆಗಿತ್ತು ”ಬೇಳೆಗೆ ಮಣ್ಣು ಉದ್ದಿದ ಹಾಂಗೆ” ,ಮತ್ತೆ ಮೊನ್ನೆ ಎರಡು ದಿನ ಶೀತ ಜ್ವರ ಬಂತು ಮತ್ತೆ ಪುನ ಹಾಂಗೆ ಬಚ್ಚಿದ್ದು” ಹೇಳಿ ಹೇಳಿದ ಅಮ್ಮ .
ಅಷ್ಟಪ್ಪಗ ಅಮ್ಮ ಮಾತಿನ ನಡುಗೆ ಉಪಯೋಗಿಸಿದ ಬೇಳೆಗೆ ಮಣ್ಣು ಉದ್ದಿದ ಹಾಂಗೆ ಹೇಳುವ ನುಡಿಗಟ್ಟು ಎನ್ನ ಗಮನಕ್ಕೆ ಬಂತು .ಆನು ಸಣ್ಣಾದಿಪ್ಪಗಲೇ ಈ ಮಾತಿನ ಕೇಳಿದ್ದೆ .ಎಂತ ಅದರ ಅರ್ಥ ಹೇಳಿ ಗಮನಿಸಿತ್ತಿಲ್ಲೆ.
ಸಣ್ಣಾದಿಪ್ಪಗ ಎನ್ನ ಅಜ್ಜನ ಮನೆಲಿ ಬೇಸಗೆಲಿ ಹಲಸಿನ ಹಣ್ಣು ತಿಂದ ಮೇಲೆ ಹೊದುಂಕುಳಿಂದ ಬೇಳೆಯ ಪೀಂಕಿಸಿ ತೆಗದು ,ಒಳ್ಳೆ ಬೇಳೆಗಳ ಬೇರೆ ಮಡುಗಿ ಕೊಂಡು ಇತ್ತಿದವು .ನಂತರ ಒಂದು ಅಳಗೆಲಿ ರಜ್ಜ ಲಾಯ್ಕ ಮಣ್ಣು ತಂದು ನೀರು ಹಾಕಿ ಮಣ್ಣು ನೀರು ತಯಾರು ಮಾಡಿಕೊಂಡು ,ಅದಕ್ಕೆ ಬೇಳೆಗಳ ಹಾಕಿ ಅದರ ಕೊಟ್ಟಗೆಯ ಮೂಲೆಲಿ ಸೊರುಗಿಕೊಂಡು ಇತ್ತಿದವು ,ಬೇಸಗೆಯ ಬೆಶಿಗೆ ನೀರು ಆವಿಯಾಗಿ ಬೇಳೆ ಹಾಂಗೆ ಒಳುಕ್ಕೊಂದು ಇತ್ತು , ಬೇಳೆಗಳ ಮೇಲೆ ತೆಳುವಾಗಿ ಕಂಡೂ ಕಾಣದ್ದ ಹಾಂಗೆ ಮಣ್ಣು ಹಿಡಿತ್ತು.
ಹಾಂಗೆ ಜತನ ಮಾಡಿದ ಹಲಸಿನ ಕಾಯಿಯ ಬೇಳೆ ಹುಟ್ಟಿಗೊಂಡು ಹಾಳಾವುತ್ತಿಲ್ಲೆ,ಮತ್ತೆ ಪೂನ್ಕೆ ಬಂದು ದೆ ಹಾಳಾವುತ್ತಿಲ್ಲೆ .ಅದರ ನಂತ್ರಣ ಬೇಸಗೆ ಬಪ್ಪಲ್ಲಿಯವರೆಗೂ ಉಪಯೋಗಿಸುಲೆ ಆಗಿಯೊಂಡು ಇತ್ತು. ನಮ್ಮ ಹೆರಿಯೋರತ್ತರೆ ಇಂಥ ಹಲವು ಉಪಾಯಂಗ ಕೌಶಲ್ಯಂಗ ಇತ್ತು .
ತೀರಾ ಬಚ್ಚಿ ಎಲ್ಕೋಟೆ ಕಟ್ಟಿದೋರು ರಜ “ಅಪ್ಪಾ ಅಲ್ಲದ ಹೇಳುವ ಹಾಂಗೆ” ಗೆನ ಆದರೆ,ಅದರ ರಜ ಗೆನ ಆಯಿದು ಬೇಳೆಗೆ ಮಣ್ಣು ಉದ್ದಿದ ಹಾಂಗೆ ಹೇಳಿ ಹೋಲಿಕೆ ಮಾಡಿ ಹೇಳುತ್ತವು .ಬೇಳೆಗೆ ತುಂಬಾ ತೆಳುವಾಗಿ ಮಣ್ಣು ಹಿಡಿವದು ಹಾಂಗೆ .ರಜ ಗೆನ ಆಗಿ, ಚೋಲಿ ಹಸಿ ಆಯಿದು ಹೇಳುದರ ಹೇಳುವಾಗ ಬೇಳೆಗೆ ಮಣ್ಣು ಉದ್ದಿದ ಹಾಂಗೆ ಹೇಳುವ ಮಾತಿನ ನಮ್ಮಲ್ಲಿ ಬಳಕೆ ಮಾಡುತ್ತವು .

Friday 6 June 2014

ಗಿಳಿ ಬಾಗಿಲು (ಹವ್ಯಕ ಬ್ಲಾಗ್ )-28 ಉಡುಗಿ ಇಡ್ಕಿದ ಕುಂಟು ಹಿಡಿಸೂಡಿದೆ ಪ್ರಯೋಜನಕ್ಕೆ ಬತ್ತು .ಡಾ.ಲಕ್ಷ್ಮೀ ಜಿ ಪ್ರಸಾದ

ಎಂಗ ಜಾಲಿಂಗೆ ಸಿಮೆಂಟ್ ಹಾಕಿದ್ದಿಲ್ಲೆ,ಮನೆ ಮುಂದೆ 30x 25 ಅಡಿ ಯಷ್ಟು ಜಾಗೆಲಿ ರಜ್ಜ ಹೂಗಿನ ಸೆಸಿ ,ಒಂದೆರಡು ಬದನೆ ಸೆಸಿ ,ಬಸಳೆ ಬಳ್ಳಿ ಒಟ್ಟಿಂಗೆ ಒಂದು ಪಾರಿಜಾತ ,ಎರಡು ಮೂರು ಮೀಸೆ ಹೂಗಿನ ಎತ್ತರದ ಸೇಸಿಗ,ಒಂದು ಬೇನ್ಸೊಪ್ಪಿನ ಸಣ್ಣ ಮರ  ಇದ್ದು . ಸಿಮೆಂಟ್ ಹಾಕಿದರೆ ನೀರು ಇಂಗುತ್ತಿಲ್ಲೆ ,ಸೇಸಿಗ ಬೆಳೆತ್ತಿಲ್ಲೆ ,ಹಕ್ಕಿಗ ಕುಂಡೆಚ್ಚಂಗ ಗಮ್ಮತ್ತು ಮಾಡಿಕೊಂಡು ಇರಲಿ ಹೇಳಿ ಸೇಸಿಗಳ  ಹಾಂಗೆ ಬಿಟ್ಟಿದೆಯ .ನಡುಗೆ ಒಂದು ಬೋರ್ ವೆಲ್,ಅದಕ್ಕೆ ಟೆರೇಸಿನ ನೀರು ಮತ್ತು ಜಾಲಿಂಗೆ ಬಿದ್ದ ನೀರಿನ ಇಂಗುವ ಹಾಂಗೆ ಮಾಡಿದ್ದೆಯ .
ನಡಕ್ಕೊಂದು ಹೋಪ ದಾರಿಗೆ ಮಾತ್ರ ಕಲ್ಲು ಹಾಸಿದ್ದೆಯ .
ಎರಡು ದಿನಂದ ಮಳೆಯೂ ಬತ್ತಾ ಇದ್ದು .ಒಟ್ಟಿಂಗೆ ಹೆಗ್ಳಂಗಳುದೆ ಮಣ್ಣು ಎಳದು ಹಾಕಿದ್ದವು .ಹಾಂಗೆ ಮಣ್ಣು  ಎದ್ದು ಹೋಪ ದಾರಿಗೆ ಬಿದ್ದು ಕಾಲಿನ್ಗೆ ಹಿಡ್ಕೊಂಡು ಇತ್ತು .ಮನೆ ಒಳಂಗೆ ಮಣ್ಣು ಬತ್ತು ಹೇಳಿ ದಾರಿಯ  ಉಡುಗುವ ಹೇಳಿ ಹೆರಟೆ.ಅದು ಈ ಮೆದು ಕಡ್ಡಿಯ ಆಧುನಿಕ ಹಿಡಿಸೂಡಿಲಿ ಹೊವುತ್ತಾ?
ಅಂಬಗ ಎನಗೆ ಊರಿನ ಮನೆ ಒಳ ಉಡುಗಿ ಕುಂಟು ಆದ ಹಿಡಿ ಸೂಡಿಯ ಇಡುಕ್ಕದ್ದೆ ಜಾಳು ಉಡುಗುಲೆ ಹೇಳಿ ಮಡಿಕ್ಕೊಂಡು ಇದ್ದದು ನೆನಪಾತು .ಒಟ್ಟಿಂಗೆ ಉಡುಗಿ ಇಡ್ಕಿದ ಕುಂಟು ಹಿಡಿಸೂಡಿದೆ ಪ್ರಯೋಜನಕ್ಕೆ ಬತ್ತು ಹೇಳುವ ನುಡಿಗಟ್ಟುದೆ ನೆಂಪಾತು.

ಯಾವ ವಸ್ತು ಕೂಡಾ ನಿಷ್ಪ್ರಯೋಜಕ ಅಲ್ಲ .ಒಂದಲ್ಲ ಒಂದು ಪ್ರಯೋಜನ ಇದ್ದೆ ಇರುತ್ತು,ಹಾಂಗಾಗಿ ಆರ ಬಗ್ಗೆದೆ ತಾತ್ಸಾರ ಭಾವನೆ ಇಪ್ಪಲಾಗ ಹೇಳುವ ಅರ್ಥವ ಇದು ತಿಳಿಸುತ್ತು .

ಯಶಸ್ಸು ಹೇಳುದು ಯಾವಾಗಲೂ ಒಬ್ಬನ ಯತ್ನಂದ ಮಾತ್ರ ಸಿಕ್ಕುತ್ತಿಲ್ಲೆ.ಅದಕ್ಕೆ ತುಂಬಾ ಜನಂಗ ಪ್ರತ್ಯಕ್ಷವಾಗಿ ಅಪ್ರತ್ಯಕ್ಷವಾಗಿ ಸಹ ಕರಿಸಿರುತ್ತವು .ಆದರೆ ಯಾವಾಗಲು ಯಶಸ್ಸು ಮುಂಚೂಣಿಲಿ ಇದ್ದ ಅಥವಾ ಆ ಕಾರ್ಯವ ಸುರುಮಾಡಿದ ,ಕೊನೆ ಎತ್ತಿಸಿದ ಒಬ್ಬನ ಹೆಸರಿಲಿ ದಾಖಲಾವುತ್ತು.ಅಂತ ಸಂದರ್ಭಗಳಲ್ಲಿ ತನ್ನ ಕಾರ್ಯದ ಯಶಸ್ಸಿಂಗೆಸಹಕರಿಸಿದ ಎಲ್ಲರನ್ನೂ ಮರ್ತುಬಿಡುವ ಪ್ರವೃತ್ತಿ ಅನೇಕ ಜೆನಂಗಳಲ್ಲಿ ನಾವು ಕಾಣುತ್ತು.
ಇಂಥ ಸಂದರ್ಭಲ್ಲಿದೆ "ಈಗ ಅವಂಗೆ ಉಪಕಾರ ಮಾಡಿದೋರ ನೆನಪಿಲ್ಲೆ,ಉಡುಗಿ ಇಡ್ಕಿದ ಕುಂಟು ಹಿಡಿಸೂಡಿದೆ ಬೇಕಾವುತ್ತು ,ಒಂದಿನ ನಮ್ಮ ಸಹಾಯ ಬೇಕಕ್ಕು,ಅಂಬಗ ನೆನಪಕ್ಕು, ನೋಡುವ ಹೇಳಿ ಕೋಳ್ಯೂರು ಕಡೆಲಿ ನಮ್ಮ ಭಾಷೆಲಿಈ ಮಾತಿನ ಬಳಕೆ ಮಾಡುತ್ತವು,
ಬೇರೆ ಕಡೆಲಿದೆ ಈ ಪಡೆನುಡಿ ಬಳಕೆಲಿ ಇಕ್ಕು .ಇದಕ್ಕೆ ಸಮಾನಾಂತರವಾದ ಮಾತುಗಳೂ ಇಕ್ಕು ,ಗೊಂತಿಪ್ಪೋರು ತಿಳುಸಿ .

Thursday 5 June 2014

ಗಿಳಿ ಬಾಗಿಲು (ಹವ್ಯಕ ಬ್ಲಾಗ್ ) ಗುಡ್ದೆಂದ ಗುಡ್ಡೆ ಅಡ್ಡ ಸಾವಿರ ಇದ್ದು-ಡಾ.ಲಕ್ಷ್ಮೀ ಜಿ ಪ್ರಸಾದ


ಆನು ಹೈ ಸ್ಕೂಲ್  ಓದುವ  ಕಾಲಕ್ಕೆ  ಎಂಗಳ ಊರಿಲಿ ಎಸ್ ಎಸ್ ಎಲ್ ಸಿ ಲಿ ಫಸ್ಟ್ ಕ್ಲಾಸ್ ಪಾಸ್ ಅಪ್ಪದು ಒಂದು  ದೊಡ್ಡ ವಿಷಯ ಆಗಿತ್ತು.ಆನು ಫಸ್ಟ್ ಕ್ಲಾಸ್ ತೆಗೆದೆ.ಶಾಲೆಗೆ ಸೆಕೆಂಡ್ ಬಂದೆ. ಭಾರಿ ಕೊಷಿ ಆತು ಎನಗೆ !ಅಪ್ಪ- ಅಮ್ಮ ಅಜ್ಜಿ ಅಜ್ಜ ಎಲ್ಲೊರಿಂಗುದೆ. ಹಠ ಮಾಡಿ ಪಿಯುಸಿ ಗೆ ಸೇರಿದೆದೆ..
ಭಾರೀ ಹೆಮ್ಮೆಲಿ ಪಿಯುಸಿ ಕ್ಲಾಸ್ ಗೆ ಹೋದೆ .ಸುರುವಣ ದಿನ ಎಲ್ಲರ ಪರಿಚಯ ಹೇಳುಲೇ ಇತ್ತು .ಅಂಬಗ ಗೊಂತಾತು ಎನಗೆ ಎನ್ನ ಫಸ್ಟ್ ಕ್ಲಾಸ್ ಮಾರ್ಕು ಒಂದು ದೊಡ್ಡ ಮಾರ್ಕೆ ಅಲ್ಲ .ಅಲ್ಲಿ 80-85 % ಮಾರ್ಕು ತೆಗದ ಮಕ್ಕ ಇತ್ತಿದವು .

ಕಾಲೇಜಿಂಗೆ ಸೇರುವಾಗ ಎನಗೆ ಡಿಗ್ರಿ ಮಾಡುದು ದೊಡ್ಡ ವಿಷಯ ಹೇಳಿ ಅನ್ಸಿತ್ತು .ಡಿಗ್ರಿ ಮಾಡ್ರೆ ಒಳ್ಳೆ ಸಂಬಳದ ಗೌರವದ ಕೆಲಸ ಸಿಕ್ಕುತ್ತು ಹೇಳಿ ಆರೋ ಹೇಳುದರ ಕೇಳಿತ್ತಿದೆ.ಆದರೆ  ಬಿಎಸ್ಸಿ ಡಿಗ್ರಿ ಮಾಡಿ ಅಪ್ಪಗ ಗೊಂತಾತು ಡಿಗ್ರಿ ಲೆಕ್ಕಕ್ಕೇ ಇಲ್ಲೆ ,ಎಂ. ಎ ಮಾಡದ್ರೆ ಎಂತದೂ ಪ್ರಯೋಜನ ಇಲ್ಲೆ ಹೇಳಿ .
ಡಿಗ್ರಿ ಓದುವಾಗಲೇ ಮದುವೆ ಬೇರೆ ಆಗಿತ್ತು !ಇಪ್ಪತ್ತೊಂದು ವರ್ಷ ಹಿಂದೆ ಮದುವೆ ಆದ ಮೇಲೆ ಓದುದು ಹೇಳುವ ವಿಚಾರ ದೊಡ್ಡ ಕ್ರಾಂತಿಯೇ ಸರಿ !ಆದರೂ ಮನೆ ಮಂದಿ  ಎಲ್ಲರ ಎದುರು ಹಾಕಿಕೊಂಡು ಎಂ .ಎ (ಸಂಸ್ಕೃತ )ಓದಿದೆ .ಮೊದಲ ರಾಂಕ್ ದೆ ತೆಗದೆ.ರಜ್ಜ ಸಮಯ ಭಾರಿ ಸಂತೋಷಲ್ಲಿ ಇತ್ತಿದೆ (,ಎನ್ನ ಬಿಟ್ರೆ ಆರಿಲ್ಲೆ ಹೇಳುವ ಹಾಂಗೆ ಹೆಮ್ಮೆಲಿ ಬೀಗಿಕೊಂಡು !!)

ಆದರೆ  ಎಂ.ಎ ರಾಂಕ್ ಇದೆಲ್ಲ ದೊಡ್ಡ ವಿಷಯವೇ ಅಲ್ಲ ,ಎಂ ಫಿಲ್ , ಪಿಎಚ್. ಡಿ ಮಾಡಿದೋರು ತುಂಬಾ ಜನಂಗ ಇದ್ದವು ಹೇಳಿ ಮತ್ತೆ ಗೊಂತಾತು .
ಸರಿ ! ಕಲಿವಲೆ ತುಂಬಾ ಆಸಕ್ತಿ ಇದ್ದ ಆನು ಎಂ.ಫಿಲ್,ಪಿಎಚ್.ಡಿ ಯೂ ಮಾಡಿದೆ !ಅಷ್ಟಪ್ಪಗ ಎನಗೆ ಗೊಂತಾತು ಎನ್ನ ಕಲಿಕೆ ಏನೇನೂ ಅಲ್ಲ !ಡಬಲ್ ಪಿಎಚ್.ಡಿ ಮಾಡಿದೋರು  ಇದ್ದವು ತುಂಬಾ ಜೆನಂಗ ,ಪೋಸ್ಟ್  ಡಾಕ್ಟೊರಲ್ ಸ್ಟಡಿ ಮಾಡಿದ ವಿದ್ವಾಂಸರು ತುಂಬಾ ಜನಂಗ ಇದ್ದವು .
ಪಿಎಚ್.ಡಿ ಹೇಳುದು ಸಂಶೋಧನೆಯ ಕೊನೆ ಅಲ್ಲ ಸುರು ಹೇಳುದೂ ಗೊಂತಾತು !ಇನ್ನು ಮಾಡಕ್ಕಾದ  ಕೆಲಸ ತುಂಬಾ ಇದ್ದು ,ಮಾಡಿದ್ದು ಏನೇನೂ ಅಲ್ಲ ಹೇಳುದು ಮನವರಿಕೆ ಆತು
."ಗುಡ್ದೆಂದ ಗುಡ್ಡೆ ಅಡ್ಡ ಸಾವಿರ ಇದ್ದು" ಹೇಳುವ ನುಡಿಗಟ್ಟು ಎನಗೆ ಅಂಬಗ ಅರ್ಥ ಆತು .

ಒಂದೊಂದೇ ಹಂತ ಏರಿದ ಹಾಂಗೆ ಅದರಂದ ಮೇಲೆ ಎಷ್ಟೋ ಜನಂಗ ಇದ್ದವು ಹೇಳಿ ನಮಗೆ ಗೊಂತಾವುತ್ತಾ ಹೋವುತ್ತು.
ಇಂಥ ವಿಚಾರ ಹೇಳುವಾಗ "ಗುಡ್ದೆಂದ ಗುಡ್ಡೆ ಅಡ್ಡ ಸಾವಿರ ಇದ್ದು" ಹೇಳುವ ನುಡಿ ಗಟ್ಟಿನ ನಮ್ಮಲ್ಲಿ ಬಳಕೆ ಮಾಡುತ್ತು .

ನಾವು ತಲೆ ಎತ್ತಿ ನೋಡುವಾಗ ಒಂದು ಎತ್ತರದ ಗುಡ್ಡೆ ಕಾಣುತ್ತು.ಅದರ ಹತ್ತಿ ತಲೆ ಎತ್ತಿ ನೋಡುವಾಗ ಅದರಂದ ಎತ್ತರದ ಇನ್ನೊಂದು ಗುಡ್ಡೆ ಕಾಣುತ್ತು ,ಅದನ್ನೂ ಹತ್ತಿ ನೋಡ್ರೆ ಮತ್ತೊಂದು ಕಾಣುತ್ತು .
ಹಾಂಗೆ ನಮ್ಮಂದ ಪೈಸೆಲಿ,ವಿದ್ಯೆಲಿ ,ಸ್ಥಾನಲ್ಲಿ,ತಿಳುವಳಿಕೆಲಿ ,ಬುದ್ಧಿವಂತಿಕೆಲಿ  ಹೆಚ್ಚಿನೋರು ತುಂಬಾ ಜನಂಗ ಇದ್ದವು .ಹಾಂಗಾಗಿ ನಮ್ಮ ಬಿಟ್ರೆ ಆರಿಲ್ಲೆ ಹೇಳುವ ಹಾಂಗೆ ಹಾಂಕಾರ ತೋರ್ಸುಲೆ ಆಗ ಹೇಳುವ ತಿಳುವಳಿಕೆಯ ಈ ನುಡಿಗಟ್ಟು ತಿಳಿಸುತ್ತು.

Sunday 1 June 2014

ಗಿಳಿ ಬಾಗಿಲು (ಹವ್ಯಕ ಬ್ಲಾಗ್ ) 26 ಅವ ಬಡ್ದು ಕತ್ತಿಲಿ ಬಡುದ -ಡಾ.ಲಕ್ಷ್ಮೀ ಜಿ ಪ್ರಸಾದ

ಇತ್ತೀಚೆಗೆಂಗೆ  ಒಂದು ಮದುವೆಗೆ ಹೋಗಿತ್ತಿದೆ.ಅಲ್ಲಿ ಎನ್ನ ಹಳೆಯ ಎನ್ನ ಫ್ರೆಂಡ್  ಮಾತಾಡುಲೆ ಸಿಕ್ಕಿತ್ತು.ಅದು ತುಂಬಾ ಸ್ನೇಹ ಮಯಿ ,ಬಾಯಿ ತುಂಬಾ ಮಾತಾಡಿಗೊಂಡು ಲವಲಿವಿಕೆಲಿ ಓಡಾಡಿಗೊಂಡು ಇಪ್ಪ ಜೆನ ಅದು .ಅಂದು ಎಂತಕೋ ತುಂಬಾ ಚಪ್ಪೆ ಇತ್ತು .ಸಾಮಾನ್ಯಕ್ಕೆಲ್ಲ ಯಾವುದೇ ಸಮಸ್ಯೆಗೂ ತಲೆಕೆದಿಸಿಕೊಂಬ ಜೆನ ಅಲ್ಲ ಅದು .ಹಾಂಗಾಗಿ ಎಂತ ಹೇಳಿ ?ಕೇಳಿದೆ .

ಅಷ್ಟಪ್ಪಗ ಅದು ಹೇಳಿತ್ತು .ಎಂಗೊಗು ಪಕ್ಕದ ಜಾಗವ ತೆಕ್ಕೊಂಡು ಹೊಸತಾಗಿ ಬಂದ ಜೆನಂಗಳದ್ದು ರಜ್ಜ ಜಾಗೆಯ ತಕರಾರು .ಸುಮ್ಮನೆ ಸುಮಾರು ಮಾರ್ಗ ಹತ್ರೆ ಇಪ್ಪ ಎಂಗಳ ಜಾಗೆಯ ಹತ್ತು ಸೆನ್ಸ್ ಅವರದ್ದು ಹೇಳಿ ಗಲಾಟೆ ಮಾಡುತ್ತಾ ಇದ್ದವು .ಅದು ದೊಡ್ಡ ವಿಷಯ ಅಲ್ಲ,ಅವರ ಸುಲಭಲ್ಲಿ ಬಾಯಿ ಮುಚ್ಚುಸುಲೆ  ಎಡಿತ್ತಿತ್ತು.ಆದರೆ ಆಚಮನೆ ರಾಜಣ್ಣ  ಬಡ್ದು ಕತ್ತಿಲಿ ಬಡುದ
 .ಅವಕ್ಕೆ ಮನೆಗೆ ಹೋಪ ದಾರಿ ಎಂಗ ಕೊಡಕ್ಕು ಅಥವಾ ಆಚ ಮನೆ ರಾಜಣ್ಣ (ಹೆಸರು ಬದಲಾಯಿಸಿದ್ದು )ಕೊಡಕ್ಕು.ಇಷ್ಟರ ವರೆಗೆ ಎಂಗಳ ಜಾಗೆಲಿ ಹೋಗಿಕೊಂಡು ಇದ್ದದು .ಮಾರ್ಗ ಹತ್ರಣ ಜಾಗೆ ಅವರದ್ದು ಹೇಳಿ ಬೇಲಿ ಹಾಕಿದ್ದಕ್ಕೆ  ಎಂಗ ಅಂಬಗ ದಾರಿ ಹೋಪಲೆ ಬಿಡೆಯ ಹೇಳಿ" ಹೇಳಿದೆಯ .
ಎಂಗೊಗು ಆಚ ಮನೆ ರಾಜಣ್ಣ ನೋರಿಂಗೂ ತುಂಬಾ ಒಳ್ಳೆದಿದ್ದು .ಅವು ಗೆಂಡ ಹೆಂಡತಿ ಇಬ್ರೂ ಕೆಲಸಕ್ಕೆ ಹೋಪ ಕಾರಣ ಅವು ಬಪ್ಪಲ್ಲಿಯವರೆಗೆ ಅವರ ಇಬ್ರು ಮಕ್ಕಳೂ ಎಂಗಳ ಮಕ್ಕಳ ಒಟ್ಟಿಂಗೆ ಎಂಗಳ ಮನೆ ಮಕ್ಕಳ ಹಾಂಗೆ ಬೆಳದ್ದು..ಹೊತ್ತಪ್ಪಗ ಕಾಪಿ ತಿಂಡಿ ಎಂಗಳಲ್ಲಿಯೇ ಆನು ಕೊಟ್ಟು ಗೊಂಡು ಇದ್ದದು.ಎಷ್ಟೋ ಸರ್ತಿ ಅವು ಕೆಲಸಂದ ಬಪ್ಪಗ ತಡವು ಆದರೆ ಅವರ ಮಕ್ಕ ಎರಡುದೆ ಎಂಗಳಲ್ಲಿ ಉಂಡು ಒರಗಿಕೊಂಡು ಇತ್ತಿದವು .
ಈಗ ಆಚ ಮನೆ ರಾಜಣ್ಣ ಅವಕ್ಕೆ ಹೋಪಲೆ ದಾರಿ ಬಿಟ್ಟಿದ. .ಅ ಮಾರ್ಗದ ಹತ್ರಣ ಜಾಗೆ ಬಗ್ಗೆ ಎಂಗಳತ್ರೆ ರೆಕಾರ್ಡ್ ಗಟ್ಟಿ ಇದ್ದು .ಆದರೆ ಎಂಗಳ ಜಾಗೆ ಎಂಗಳದ್ದು ಹೇಳಿ ಸಾಧಿಸಕ್ಕಾದರೆ ಇನ್ನು ಕೋರ್ಟ್ ಗೆ ಹೋಗಿ ಆಯಕ್ಕು.ಆಚ ಮನೆ ರಾಜಣ್ಣನ್ಗೆ ಆ ಜಾಗೆ ಎಂಗಳದ್ದು ಹೇಳಿ ಗೊಂತಿದ್ದು ಆದರೂ ಎಂಗ ಕೋರ್ಟು ಕಚೇರಿ ಅಲವಾಂಗೆ ಮಾಡಿದ .ಪಕ್ಕದ ಜಾಗೆ ತೆಕ್ಕೊಂಡೋರು ಹೊಣದ್ದರಂದ ಹೆಚ್ಚು ಬೇಜಾರು ಆದ್ದು ಎಂಗೊಗೆ ಆಚ ಮನೆ ರಾಜಣ್ಣ ಮಾಡಿದ ವಿಶ್ವಾಸ ದ್ರೋಹ "ಹೇಳಿ ಹೇಳಿತ್ತು .

ಅವ ಎಂಥಕೆ ಹಾಂಗೆ ಮಾಡಿದ್ದು ?ಹೇಳಿ ಆನು ಕೇಳಿದೆ ."ಆನು  ಇಬ್ರ ಕಡೆಲಿ ಇಲ್ಲೆ,ಎನಗೆ ಇಬ್ರೂ ಅಕ್ಕ ಪಕ್ಕದೋರು ,ಹೋಪಲೆ ದಾರಿ ಕೇಳುವಾಗ ಇಲ್ಲೆ ಹೇಳಿ ಹೇಂಗೆ ಹೇಳುದು ?ಹೇಳುತ್ತ ಹೇಳಿ ಹೇಳಿತ್ತು .
ಅಪ್ಪು !ಅದರ ಪರಿಸ್ಥಿತಿ ಎನಗೆ ಅರ್ಥ ಆತು .ಆರೋ ಮಾಡುವ ದ್ರೋಹಂದ ನಮ್ಮ ಆತ್ಮೀಯರು ಹೇಳಿ ಇಪ್ಪೋರು ಮಾಡುವ ವಿಶ್ವಾಸ ದ್ರೋಹ ತುಂಬಾ ಪೆಟ್ಟು ಕೊಡುತ್ತು.!ಅದರಂದ ಚೇತರಿಸಿ ಕೊಳ್ಳಕ್ಕಾದರೆ ತುಂಬಾ ಸಮಯ ಹಿಡಿತ್ತು.
ಹರಿತದ ಕತ್ತಿಲಿ ಕಡುದರೆ ಗಾಯ ಆವುತ್ತು .ಗಾಯ ಗುಣ ಆದರೆ ಅಲ್ಲಿಗೆ ಬೇನೆದೆ ಹೋವುತ್ತು.ಆದರೆ ಬಡ್ದು ಕತ್ತಿಲಿ ಬಡುದರೆ ಹೇರಂದ ಗಾಯ ಕಾಣುತ್ತಿಲ್ಲೇ,ಆದರೆ ಅಪ್ಪ ಬೇನೆ ತುಂಬಾ ಸಮಯ ಒಳಿತ್ತು .
ಹಾಂಗೆ ಆರೋ ದ್ರೋಹ ಮಾಡ್ರೆ ಅವರತ್ರೆ ಕೋಪ, ದ್ವೇಷ ಮಾತ್ರ ಬತ್ತು ,ಆದರೆ ನಂಬಿದೋರು ವಿಶ್ವಾಸ ದ್ರೋಹ ಮಾಡಿ ನಮ್ಮ ವಿರೋಧಿಗಳ ಒಟ್ಟಿಂಗೆ ಕೈ ಜೋಡಿಸಿದರೆ, ಕೋಪಂದ ಹೆಚ್ಚು ಮನಸಿಂಗೆ ಪೆಟ್ಟು ಆವುತ್ತು .ಆ ಬೇನೆ ತುಂಬಾ ಸಮಯ ಒಳಿತ್ತು .ಇಂಥ ಸಂದರ್ಭಲ್ಲಿ ಬಡ್ದು ಕತ್ತಿಲಿ ಬಡುದ ಹೇಳುವ ಮಾತಿನ ಬಳಕೆ ಮಾಡುತ್ತವು.ಇದಕ್ಕೆ ಸಂವಾದಿಯಾಗಿ ಬೆನ್ನಿಂಗೆ ಕತ್ತಿ  ಹಾಕಿದ ಹೇಳುವ ಮಾತುದೆ ಬಳಕೆಲಿ ಇದ್ದು .
ಕನ್ನಡಲ್ಲಿ ಕಂಬಳಿಯಲ್ಲಿ ಸುತ್ತಿ ಹೊಡೆಯುವುದು ಹೇಳುವ ಮಾತು ಮೇಲ್ನೋಟಕ್ಕೆ ಇದಕ್ಕೆ ಸಮಾನ ಹೇಳುವ ಹಾಂಗೆ ಅನ್ಸುತ್ತು .ಆದರೆ ಇದಕ್ಕೂ ಅದಕ್ಕೂ ಭಾವಲ್ಲಿ ತುಂಬಾ ವ್ಯತ್ಯಾಸ ಇದ್ದು .ಬಡ್ದು ಕತ್ತಿಲಿ ಬಡುದ ಹೇಳುದು ವಿಶ್ವಾಸ ದ್ರೋಹ ಮಾಡಿದ ಹೇಳುವ ಅರ್ಥವ ಸೂಚಿಸುತ್ತು.ಕಂಬಳಿಲಿ ಸುತ್ತಿ ಬಡಿವದು ಹೇಳ್ರೆ  ಮಾಡಕ್ಕಾದ್ದರ  ನೇರವಾಗಿ ಮಾಡದ್ದೆ ಉಪಾಯವಾಗಿ ಮಾಡಿದ ಹೇಳುವ ಅರ್ಥ ಬತ್ತು ಹೇಳಿ ಎನಗೆ ಅನ್ಸುತ್ತು .
ಈ ಬಗ್ಗೆ ತಿಳುದೋರು ತಿಳುಸಿ

Wednesday 28 May 2014

ಗಿಳಿ ಬಾಗಿಲು (ಹವ್ಯಕ ಬ್ಲಾಗ್ )-25 ಪರವೂರಿನ ಮಾವಿನ ಕಾಯಿಂದ ನಮ್ಮ ಊರಿನ ಅಂಬಟೆ ಕಾಯಿ ಅಕ್ಕು

ಕಳುದ ಸರ್ತಿ ಊರಿಂಗೆ ಅಪ್ಪನ ಮನೆ ವಾರಣಾಸಿಗೆ ಹೋದಿಪ್ಪಗ ಅಲ್ಲಿ ಅಮ್ಮಂದೆ ತಮ್ಮನುದೆ ಏನೋ ಬೆಶ್ರೊಟ್ಟಗೆ ಗೋಡೆ ಅಡಿ ರಜ್ಜ  ಜಗ್ಗಿದ್ದು .ಮಳೆ ಬರಕ್ಕಾದರೆ ಅದರ ಸರಿಯಾಗಿ ಕಟ್ಟಕ್ಕು ಹೇಳಿ ಮಾತಾಡಿಗೊಂಡು ಇತ್ತಿದವು .ಎಂಗಳ ಊರಿಲಿಯೇ ಒಂದು ಮೇಸ್ತ್ರಿ ಇದ್ದು .ಕಂಡಾಬಟ್ಟೆ ಬ್ಯುಸಿ ಆಗಿರೆಕ್ಕು .ಅದರ ಬಪ್ಪಲೆ ಹೇಳಿದೆ ಬೈನ್ಡಿತ್ತಿಲ್ಲೆ ಅಡ.ಅಂಬಗ ಮಾತಿನ ನಡುವೆ ಅಮ್ಮ "ಹೇಳಿದ "ವಾಣಿಯ (ಎನ್ನ ಅಕ್ಕನ )ಮನೆ ಹತ್ತರೆ  ಒಂದು ಒಳ್ಳೆ ಮೇಸ್ತ್ರಿ ಇದ್ದಡ ,ಅದರ ಹೇಳುವ" ಹೇಳಿ .ಅಂಬಗ ತಮ್ಮ  "ಬೇರೆ ಊರಿನೋರ ಸಂಗತಿ ಆಗ ಅಮ್ಮ  .ಪರ ಊರಿನ ಮಾವಿನ ಕಾಯಿಂದ ನಮ್ಮ ಊರಿನ ಅಂಬಟೆ ಅಕ್ಕು ಹೇಳಿ ಮಾತೇ ಇಲ್ಲೆಯ "ಹೇಳಿ ಹೇಳಿದ .
ಅಷ್ಟರ ತನಕ ಅವರ ಮಾತು ಕಥೆಲಿ ಎನಗೆನೂ ಅಷ್ಟು ಆಸಕ್ತಿ ಇತ್ತಿಲ್ಲೆ.ಅಲ್ಲೇ ಕೂದಿತ್ತಿದೆ.ಹಾಂಗೆ ಕೆಮಿಗೆ ಬಿದ್ದತ್ತು ಅಷ್ಟೇ .ಆದರೆ ಈ ನುಡಿಗಟ್ಟು ಕೇಳಿದ ತಕ್ಷಣ ಎನ್ನ ಕೆಮಿ ಕುತ್ತ ಆತು !

ಅಪ್ಪು !ಬೇರೆ ಊರಿನೋರು  ಒಂದರಿಯಂಗೆ ಬಂದು ಕೆಲಸ ಮಾಡಿ ಕೊಟ್ಟಿಕ್ಕಿ ಹೋಕು.ಆದರೆ ಮತ್ತೆ ಏನಾರು ಅದರಲ್ಲಿ ಸಣ್ಣ ಪುಟ್ಟ ಸಮಸ್ಯೆಗ ಬಂದರೆ ,ಅಥವಾ ಇನ್ನೇನೋ ಸಣ್ಣ ಪುಟ್ಟ ಕೆಲಸ ಹೇಳುಲೆ ಅವು ಇರ್ತವ ?ಮತ್ತೆ ಬಂದು ಸರಿ ಮಾಡಿ ಕೊಡುತ್ತವ ?,ಮತ್ತೆ ಅದಕ್ಕೆ ನಾವು ನಮ್ಮ ಊರಿನ ಮೇಸ್ತ್ರಿಯನ್ನೇ ಹಿಡಿಯಕ್ಕು .ಇಲ್ಲದ್ದರೆ ಬೇರೆಯೋರು ಮಾಡಿದ ಕೆಲಸವ ಅವು ಸರಿ ಮಾಡುಲೆ ಸುಲಭಕ್ಕೆ  ಒಪ್ಪುತ್ತವ ?ಅದೆಲ್ಲ ದೊಡ್ಡ ರಗಳೆ ಸಂಗತಿ .
ಅದರ ಬದಲು ನಮ್ಮ ಊರಿನ ಮೇಸ್ತ್ರಿಹತ್ತರೆ ಕೆಲಸ ಮಾಡ್ಸಿರೆ ಮುಂದೆ ಕೂಡಾ ಏನಾರು ಬೇಕಾರೆಅದು ಊರಿಲಿಯೆ ಇರ್ತನ್ನೇ .
ದೂರದ ಊರಿಲಿ ಅಪ್ಪ ಅಪ್ಪೆಮಿಡಿಯಂಥ ಮಾವಿನ ಕಾಯಿ ಉಪ್ಪಿನಕಾಯಿ ಹಾಕುಲೆ ,ಗೊಜ್ಜಿ ಮಾಡುಲೆ  ತುಂಬಾ ಒಳ್ಳೆಯ ರುಚಿಯ ವಸ್ತು .ಅಂಬಟೆ ಕಾಯಿ ಮಾವಿನಕಾಯಿಯಷ್ಟು ರುಚಿಯಲ್ಲ .ಆದರೆ ಅಂಬಟೆ ಕಾಯಿ ನಮ್ಮ ಜಾಲಿನ ಹತ್ರಣಮರಲ್ಲಿಯೇ ಆವುತ್ತು ,ಕೊಕ್ಕೆ ತೆಕ್ಕೊಂಡು ಹೋಗಿ ಯಾವಾಗ ಬೇಕಾರು ಕೊಯ್ದು ತಪ್ಪಲಕ್ಕು.ಆರತ್ರೂ ಕೆಳಕ್ಕೂ ಹೇಳಿ ಇಲ್ಲೇ. ಎಂತಕೆ ಹೇಳ್ರೆ ಅದು ನಮ್ಮದೇ ಅನ್ನೇ .ಅದಕ್ಕೆ ಹೇಳುದು ಪರ ಊರಿನ ಮಾವಿನ ಕಾಯಿಂದ ನಮ್ಮ ಊರಿನ ಅಂಬಟೆ ಕಾಯಿ ವಾಸಿ ಹೇಳಿ .
ಆದರೆ ಇದು ನಮ್ಮ ಭಾಷೆಲಿ ನುಡಿಗಟ್ಟು ಆಗಿ ಬಳಕೆ ಆವುತ್ತು .

ನಮಗೆ ದೂರಲ್ಲಿತುಂಬಾ ಜನ ಆತ್ಮೀಯರು  ಹತ್ತರಣ ಸಂಬಂಧಿಕರು ಇಕ್ಕು.ಆದರೆನಮಗೆ ಏನಾರುಸಮಸ್ಯೆಗ ಬಂದರೆ ತಕ್ಷಣ ಸಹಾಯಕ್ಕೆ ಬಪ್ಪದು ,ಸಿಕ್ಕುದು ನೆರೆ ಕರೆಯ ಜನಂಗ ಅಲ್ಲದ ?ಅವು ನಮಗೆ ಸಂಬಂಧಿಕರು ಅಲ್ಲದ್ದೇ ಇಕ್ಕು .ಆದರೆ ಅವರತ್ರೆ ನಾವು ಒಳ್ಳೆದು ಮಾಡಿಕ್ಕೊಳ್ಳಕ್ಕು ಹೇಳುವ ಲೋಕ ಜ್ಞಾನದ ತಿಳುವಳಿಕೆಯ ಮಾಡ್ಸುತ್ತು "ಪರವೂರಿನ ಮಾವಿನ ಕಾಯಿಂದ ನಮ್ಮ ಊರಿನ ಅಂಬಟೆ ಕಾಯಿ ಅಕ್ಕು"ಹೇಳುವ ಹವ್ಯಕ ನುಡಿಗಟ್ಟು .
ಕೋಳ್ಯೂರು ಸೀಮೆಯ ಹವ್ಯಕ ಭಾಷೇಲಿ ಇದರ ಬಳಕೆ ಇದ್ದು ,ಬೇರೆ ಕಡೆದೆ ಇಕ್ಕು ಅಲ್ಲದ ?

ಗಿಳಿ ಬಾಗಿಲು(ಹವ್ಯಕ ಬ್ಲಾಗ್ )- ಉಪ್ಪಿದ್ದ ಉಪ್ಪಿನ ಕಲ್ಲಿದ್ದ ?ಹೇಳಿ ಕೇಳಿದ್ದಿಲ್ಲೆ

ಇಂದು  ಕೊದಿಲಿಂಗೆ ರಜ್ಜ ಉಪ್ಪು ಕಮ್ಮಿ ಆಗಿತ್ತು .ಮಗ ಉಂಬಗ ಉಪ್ಪಿದ್ದ ಹೇಳಿ ಕೇಳಿದ .ಅಷ್ಟಪ್ಪಗ ಅವನ ಬಾಯಿಗೆ ಕೋಲು ಹಾಕುಲೆ ಆನು ಸುಮ್ಮನೆ ಉಪ್ಪು ತಂದು ಬಳುಸದ್ದೆ :ಮನೇಲಿ ಉಪ್ಪು ಇರದ್ದೆ ಒಳಿತ್ತ ಮಾರಾಯ ?ಹೇಳಿ ಕೇಳಿದೆ .ಅವಂದೆ ಬಿಡದ್ದೆ "ಅಪ್ಪು ಉಪ್ಪೇ ಇರಕ್ಕು ಹೇಳಿ ಎಂತ ?ಉಪ್ಪಿನ ಕಲ್ಲುದೆ ಇರ್ತಿಲ್ಲೆಯ" ಹೇಳಿ ಕೇಳಿದ .ಅಷ್ಟಪ್ಪಗ ಉಪ್ಪುದೆ ಉಪ್ಪಿನ ಕಲ್ಲುದೆ ಬೇರೆಯ ಹೇಳಿ ಚರ್ಚೆ ಬಂತು .ಅಷ್ಟಪ್ಪಗ ಎನಗೆ "ಉಪ್ಪಿದ್ದ ಉಪ್ಪಿನ ಕಲ್ಲಿದ್ದ ಹೇಳಿ ಕೇಳಿದ್ದಿಲ್ಲೆ " ಹೇಳುವ ಒಂದು ಆಡು ಮಾತು ನೆಂಪು ಆತು .
ಅನು ಸಣ್ಣಾದಿಪ್ಪಗ ಈ ನುಡಿಗಟ್ಟಿನ ಕೇಳಿದ್ದೆ.ಆದರೆ ಅದರ ಅರ್ಥ ಎಂತ ಹೇಳಿ ಎನಗೆ ಗೊಂತಿತ್ತಿಲ್ಲೆ.
.ಮನುಷ್ಯ ಸಮಾಜ ಜೀವಿ .ತನ್ನ ಸುತ್ತ ಮುತ್ತಲಿನ ಜನರತ್ತರೆ ನೆಂಟ್ರು ಗಳ ಅಮ್ಬಗಂಬಗ ಕಾಣಕ್ಕಾವುತ್ತು.ಅವರ ಮನೆಗೆ ಹೊಯಕ್ಕಾವುತ್ತು .ಎಲ್ಲೋರು ಒಂದೇ ರೀತಿ ಇರ್ತವಿಲ್ಲೆ .ನಮಗೆ ಕೆಲವು ಜನಂಗಳ ಹತ್ರೆ ಹೆಚ್ಚು ಆತ್ಮೀಯತೆ ಇರುತ್ತು .ಕೆಲವು ಜನಂಗಳ ಹತ್ತರೆ ಅಷ್ಟಕ್ಕಷ್ಟೇ ಇರುತ್ತು .
ನಮಗೆ ಹೆಚ್ಚ್ಚು ಆತ್ಮೀಯರಾಗಿಪ್ಪೋರ ಮನೆಗೆ ಹೋದರೆ ಅಥವಾ ಅವರ ಎಲ್ಲಿಯಾದರೂ ಕಂಡರೆ ನಾವು ಅವರತ್ರೆ ಅವರ ಕೆಲಸ ಕಾರ್ಯ ದ ಬಗ್ಗೆ ಮಕ್ಕಳು ಮರಿಗಳ ಬಗ್ಗೆ ವಿಚಾರ್ಸುತ್ತು
ಆರಾದರೂ ನಮಗೆ ಅಷ್ಟು ಹಿತ ಇಲ್ಲದ್ದೋರ ಮನೆಗೆ ಹೋದರೆ  ಅವರ ಖಾಸಾ ವಿಷಯಲ್ಲಿ ಎಂತದುದೆ ಮಾತಾಡುತ್ತವಿಲ್ಲೆ .ಹೋದ ಕೆಲಸ ಎಂತದು ಅದರ ಮಾತ್ರ ಮುಗಿಸಿಕ್ಕಿ ಅವು ಕೊಟ್ಟ ಕಾಪಿಯ ಚಾಯವಾ ಕುಡುದಿಕ್ಕಿ ಬತ್ತು !
ಇಂಥ ಸಂದರ್ಭಲ್ಲಿ ಆನು ಅವರತ್ತರೆ" ಉಪ್ಪಿದ್ದ ಉಪ್ಪಿನ ಕಲ್ಲಿದ್ದ ?ಹೇಳಿ ಕೇಳಿದ್ದಿಲ್ಲೆ .ಎನ್ನಷ್ಟಕ್ಕೆ ಕೆಲಸ ಮುಗಿಸಿಕ್ಕಿ ಬೈಂದೆ" ಹೇಳಿ ಹೇಳುತ್ತವು .
ಅವರ ಒಳಗಿನ ವ್ಯವಹಾರ ನಮಗೆ ಇಷ್ಟ ಇಲ್ಲೇ ಅವರತ್ತರೆ ಎಷ್ಟು ಬೇಕೋ ಅಷ್ಟು ಇದ್ದರೆ ಸಾಕು ಹೇಳುವ ಅರ್ಥವ ಉಪ್ಪಿದ್ದ ಉಪ್ಪಿನ ಕಲ್ಲಿದ್ದ ?ಹೇಳಿ ಕೇಳಿದ್ದಿಲ್ಲೆ" ಹೇಳುವ ನುಡಿಗಟ್ಟು ತಿಳುಸುತ್ತು .
ಇದು ಕೋಳ್ಯೂರು ಸೀಮೆ ಕನ್ನಡಲ್ಲಿ ಕೂಡಾ ಉಪ್ಪುಂಟ ಉಪ್ಪಿನ ಕಲ್ಲುಂಟ ?ಹೇಳಿ ಬಳಕೆಲಿ ಇದ್ದು .ಈ ಪರಿಸರಲ್ಲಿ ಇದು ತುಳುವಿಲಿ ರಜ್ಜ ಬೇರೆ ರೀತಿಲಿ ಬಳಕೆ ಇದ್ದು .ತುಳುವಿಲಿ ನೀರುಂಡ ಅರ್ಕಂಜಿ ಉಂಡಾದ್ ಕೇನುದುಜ್ಜಿ ಹೇಳುವ ಮಾತುಪ್ರಚಲಿತ ಇದ್ದು .
ಬಹುಶ ಬೇರೆ ಕಡೆಲಿದೆ ನಮ್ಮ ಹವ್ಯಕ ಭಾಷೆಲಿ ಈ ರೀತಿಯ ನುಡಿಗಟ್ಟಿನ ಬಳಕೆ ಇಕ್ಕು ಹೇಳಿ ಎನ್ನ ಅಂದಾಜು .ಅಥವಾ ಇದಕ್ಕೆ ಸಮಾನಾಂತರವಾದ ಬೇರೆ ಮಾತುಗಳ ಬಳಕೆ ಇಪ್ಪಲೂ ಸಾಕು .ಈ ಬಗ್ಗೆ ಗೊಂತಿಪ್ಪೋರು ತಿಳುಸಿ ಆತಾ .

Wednesday 21 May 2014

ಗಿಳಿಬಾಗಿಲು (ಹವ್ಯಕ ಬ್ಲಾಗ್ )-ಆನೆ ಹೋಪಲ್ಲಿ ಬಿಟ್ಟು ಸೂಜಿ ಹೋಪಲ್ಲಿ ಅಡೆಪ್ಪುದು -ಡಾ.ಲಕ್ಷ್ಮೀ ಜಿ ಪ್ರಸಾದ

ಮನುಷ್ಯರ ಸ್ವಭಾವವೇ ವಿಚಿತ್ರ .ಒಬ್ಬ ಇನ್ನೊಬ್ಬನ ಹಾಂಗೆ ಇರ್ತವಿಲ್ಲೆ.
.ಕೆಲವು ಜನಂಗ ತುಂಬಾ ಉದಾರಿಗ .ಕೆಲವು ಜನಂಗ ಎಂಜೆಲು ಕೈಲಿ ಕಾಕೆ ಓಡ್ಸದ್ದಷ್ಟು ಪಿಟ್ಟಾಸಿಗ,ಕೆಲವು ಜನಂಗ ತುಂಬಾ ಸರಳವಾಗಿಪ್ಪಲೆ ಬಯಸುವೋರು ,ಕೆಲವು ಜನಂಗ ತುಂಬಾ ಧಂ ಧೂಮ್ ಆಗಿ ಖರ್ಚು ಮಾಡುವೋರು .ಮನೆಲಿ ಇದ್ದ ಇಲ್ಲೆಯ ಹೇಳಿ ಕೂಡಾ ನೋಡದ್ದೆ ಖರ್ಚು ಮಾಡುವೋರು,ಮನೇಲಿ ಕೊಳವಷ್ಟು ಇದ್ದರೂ ಬೇರೆಯೋರಿಂಗೆ ಒಂದು ತುಂಡು ಕೊಡದ್ದೋರು ,ಹೆಸರಿನ್ಗಾಗಿಯಾ ಅಥವಾ ಇನ್ನೇನಾದರೂ ಕಾರಣಕ್ಕೋ ಸಂಘ ಸಂಸ್ಥೆಗೊಕ್ಕೆ ಧಾರಾಳ ಕೊಡುವೋರು ,ಮನೆ ಬಾಗಿಲಿಂಗೆ ಬಂದ ಬಡವಂಗೆ ಅಶನ ಹಾಕುಲೂ ಕುರೆ ಮಾಡುವೋರು,ದೇವಸ್ಥಾನಕ್ಕೆ ,ಮಠ-ಮಂದಿರಂಗೊಕ್ಕೆ ಧಾರಾಳ ಕೊಡುವೋರುದೆ ಪಕ್ಕದ ಮನೆಯ ಬಡ ಮಾಣಿಗೆ ಕಿಡ್ನಿ ಜೋಡಣೆಗೆ ಪೈಸೆ ಕೊಡುಲೆ ಮನಸ್ಸು ಮಾಡದ್ದೆ ಇಪ್ಪೋರು ..ಹೀಂಗೆ ಪ್ರತಿಯೊಬ್ಬರಿಂಗು ಅವರದೇ ಆದ ಸ್ವಭಾವ ರೀತಿ ನೀತಿಗ ಇರ್ತು

ಆದರೂ ಸಮಾಜದ ಸಾಮಾನ್ಯವಾಗಿಪ್ಪ  ರೀತಿ ನೀತಿಗೊಕ್ಕೆ   ತೀರಾ ಭಿನ್ನವಾಗಿಪ್ಪೋರ ಬಗ್ಗೆ ಜನಂಗ ಮಾತಾಡಿಗೊಂಬದುದೆ ಸಾಮಾನ್ಯವಾದ ವಿಚಾರ. ಮನುಷ್ಯರ ಇಂಥ ಕೆಲವು ವಿಶಿಷ್ಟ ಸ್ವಭಾವಂಗಳ ಬಗ್ಗೆ ಹೇಳುವಾಗ ಹೆಚ್ಚಾಗಿ ನುಡಿಗಟ್ಟುಗಳ ಬಳಕೆ ಇರುತ್ತು .

ಇಂಥ ಒಂದು ವಿಶಿಷ್ಟ ನುಡಿಗಟ್ಟು "ಆನೆ ಹೋಪಲ್ಲಿ ಬಿಟ್ಟು ಸೂಜಿ ಹೋಪಲ್ಲಿ ಅಡೆಪ್ಪುದು "ಹೇಳುದು .ಒಂದು ಕಡೆ ಬೇಜವಾಬ್ದಾರಿ ಉದಾಸೀನ ಅವ್ಯವಸ್ಥೆಯ ಕಾರಣಂದಾಗಿ ಸಾವಿರ ಗಟ್ಲೆ ನಷ್ಟ ಆವುತ್ತಾ ಇರುತ್ತು .ಅದರ ಸರಿ ಪಡಿಸುಲೆ ಹೋಗದ್ದೆ ಸಣ್ಣ ಪುಟ್ಟ ವಿಚಾರಗಳ ಬಗ್ಗೆ ಹೆಚ್ಚು ಗಮನ ಕೊಟ್ಟು ಸರಿ ಪಡಿಸುಲೆ ಹೋಪ ಜನಂಗಳನ್ನು ನಾವು ಸುತ್ತ ಮುತ್ತ ನೋಡುತ್ತು .
ಉದಾ ಹರಣೆಗೆ ಹೇಳುತ್ತರೆ ತೋಟಕ್ಕೆ ವಾರಕ್ಕೆ ಒಂದರಿದೆ ಕಾಲು ಮಡುಗದ್ದೆ ಅಡಕೆ ತೆಂಗು ಕದ್ದು ಹೊವುತ್ತಾ ಇರ್ತು .ದನಗ ಬಂದು ಬೆಳೆ ಸಪ್ಪಾಯಿ ಆಗಿರ್ತು .ಅದರ ಬಗ್ಗೆ ಕಾಳಜಿ ಮಾಡದ್ದೆ ಮನೆ ಹತ್ರಣ ಮಾವಿನ ಮರಂದ ಬಿದ್ದ ನಾಲ್ಕು ಮಾವಿನ ಹಣ್ಣಿನ ಆರೋ ಹೆರ್ಕಿಕೊಂಡು ಹೋಪಗ ಅದರ ಬಗ್ಗೆ ಭಾರೀ ಜಾಗ್ರತೆ ಮಾಡುದು !

 ತೋಟಂದ ಹಾಡು ಹಗಲೇ  ಕದ್ದು ಹೋಪ ಬಗ್ಗೆ ಜಾಗ್ರತೆ ಮಾಡುಲೆ ಇಲ್ಲೇ .ಬದಲಿಂಗೆ ಮನೆ ಕೆಲಸದೋವಕ್ಕೆ ಬಳುಸುವಗ ಕೈ ಕುಂಟು ಮಾಡುದು ,ಅವಕ್ಕೆ ಬರೀ ಕಳಪೆ ಊಟ ತಿಂಡಿ ಕೊಡುದು ಇತ್ಯಾದಿ ಮಾಡುವ ಅನೇಕ ಜನರ ನಾವು ಕಾಣುತ್ತಾ ಇರುತ್ತು .

ಇಂಥೋರ ಬಗ್ಗೆ ಹೇಳುವಾಗ ಬಳಕೆ ಅಪ್ಪ ನುಡಿಗಟ್ಟು ಇದು
ಆನೆ ಹೋಪಲ್ಲಿ ಬಿಟ್ಟು ಸೂಜಿ ಹೋಪಲ್ಲಿ ಅಡೆಪ್ಪುದು ಹೇಳಿರೆ ಆನೆ ಹೊಪಷ್ಟು ದೊಡ್ಡ ಮಾರ್ಗಲ್ಲಿ ದೊಡ್ಡ ಮಟ್ಟಲ್ಲಿ ನಷ್ಟ ಅಪ್ಪದರ ತಡೆಯದ್ದೆ ಅದರ ಹಾಂಗೆ ಬಿಟ್ಟು ಸೂಜಿ ಹೊಪಷ್ಟು ಸಣ್ಣ ಮಾರ್ಗಲ್ಲಿ ಅಪ್ಪ ಸಣ್ಣ ಪುಟ್ಟ ನಷ್ಟವ ತಡವ ನಿರರ್ಥಕ ಯತ್ನ  ಹೇಳಿ ಅರ್ಥ .
ಸೂಜಿ ಹೊಪಷ್ಟು ಸಣ್ಣಕ್ಕೆ ನಷ್ಟ ಆದರೆ ಎಷ್ಟು ಅಕ್ಕು ?ಉಂಬಲೆ ತಿಂಬಲೆ ಕೊಡುದರಲ್ಲಿ  ಸಣ್ಣ ಮಾಡಿ ಎಷ್ಟು ಒಳಿಸುಲೆ ಎಡಿಗು ?

ಅಂತಹ   ಪ್ರಯತ್ನ ನಿರರ್ಥಕ ಹೇಳಿ ಈ ನುಡಿಗಟ್ಟು ತಿಳಿಸುತ್ತು.

Saturday 3 May 2014

ಗಿಳಿಬಾಗಿಲು (ಹವ್ಯಕ ಬ್ಲಾಗ್ ) ಹಳೆ ಮನೆ ಪಾಪದೆ ಬೇಡ ,ಹೊಸ ಮನೆ ಪುಣ್ಯದೆ ಬೇಡ :ಡಾ.ಲಕ್ಷ್ಮೀ ಜಿ ಪ್ರಸಾದ

ಈಗೀಗ ನಮ್ಮ ಭಾಷೆಲಿ ತುಂಬಾ ಬದಲಾವಣೆ ಆವುತ್ತಾ ಇದ್ದು .ಕನ್ನಡ ಹಾಂಗೆ ಬೇರೆ ಭಾಷೆಗಳ ಪ್ರಭಾವಂದಾಗಿ ಸುಮಾರು ಆಡು ನುಡಿಗಲ ಬಳಕೆ ಅಪರೂಪ ಆವುತ್ತಾ ಇದ್ದು .

ಈಗ ಅಷ್ಟಾಗಿ ಬಳಕೆಲಿ ಇಲ್ಲದ್ದೆ ಇಪ್ಪ ಒಂದು ಅಪುರೂಪದ ನುಡಿಗಟ್ಟು ಹಳೆ ಮನೆ ಪಾಪದೆ ಬೇಡ ಹೊಸ ಮನೆ ಪುಣ್ಯದೆ ಬೇಡ ಹೇಳುದು .
ನಮಗೆ ಆರತ್ತರೆ ಆದರು ರಜ್ಜ ಅಸಮಾಧಾನ ಇದ್ದರೆ ಅಥವಾ ಅವು ತುಂಬಾ ಕಸಂಟುಗ/ಪಿಸುಂಟುಗ ಆಗಿದ್ದರೆ ಅವರ ಸುದ್ದಿಯೇ ನಮಗೆ ಬೇಡ ಹೇಳುವ ಸಂದರ್ಭದಲ್ಲಿ ಈ ಮಾತಿನ ಬಳಕೆ ಮಾಡುತ್ತವು .
ಅವರ ಒಳ್ಳೇದು ಕೆಟ್ಟದು ಎರಡುದೆ ನಮಗೆ ಬೇಡ ಅವರ ಸ್ನೇಹವೂ ಬೇಡ ವಿರೋಧವೂ ಬೇಡ ಎಷ್ಟು ಬೇಕೋ ಅಷ್ಟು ಇದ್ದರೆ ಸಾಕು ಹೇಳುವ ಅರ್ಥವ ಹಳೆ ಮನೆ ಪಾಪದೇ ಬೇಡ ಹೊಸ ಮನೆ ಪುಣ್ಯದೆ ಬೇಡ ಹೇಳುವ ಮಾತು ಧ್ವನಿಸುತ್ತು .

ಇಲ್ಲಿ ಹಳೆ ಮನೆ ಪಾಪ ಹೇಳುವ ಮಾತು ಕೆಡುಕು ,ವಿರೋಧ ದ್ವೇಷವ ಸೂಚಿಸಿದರೆ ಹೊಸ ಮನೆ ಪುಣ್ಯ ಹೇಳುವ ಮಾತು ಒಳಿತು, ಸ್ನೇಹ ವ ಸೂಚಿಸುತ್ತು .ಅವರ ಪಾಪ ಪುಣ್ಯ ಎರಡೂ ಬೇಡ ಹೇಳಿರೆ ಅವರ ಒಳ್ಳೇದು ಕೆಟ್ಟದು ಎರಡರ ಸಂಗತಿಯೂ ಅವರಲ್ಲಿ ನಮಗೆ ಬೇಡ ಅಷ್ಟಕ್ಕಷ್ಟೇ ಇದ್ದರೆ ನಮಗೆ ಒಳ್ಳೆದು ಹೇಳುವ ಭಾವದೆ ಇಲ್ಲಿ ಕಾಣುತ್ತು.
ಕೋಳ್ಯೂರು ಸೀಮೆಲಿ ಈ ನುಡಿಗಟ್ಟು ಬಳಕೆಲಿ ಇದ್ದು ಬೇರೆ ಕಡೆಲಿದೆ ಇಕ್ಕು ಅಥವಾ ಸಮಾನಾಂತರವಾಗಿ ಬೇರೆ ಯಾವುದಾದರೂ ಮಾತಿನ ಬಳಕೆ ಇಕ್ಕು ,ಗೊಂತಿದ್ದೋರು ತಿಳುಸಿ.ಓದಿಅಭಿಪ್ರಾಯ ತಿಳುಸಿ 
ಇನ್ನೊಂದರಿ ಕಾಂಬ
ನಮಸ್ಕಾರ
ಲಕ್ಷ್ಮೀ ಜಿ ಪ್ರಸಾದ

Thursday 17 April 2014

ಗಿಳಿಬಾಗಿಲು (ಹವ್ಯಕ ಬ್ಲಾಗ್ )-ಮೂಗಿಲಿ ಎಷ್ಟು ಉಂಬಲೆಡಿಗು?

ನಮ್ಮ ಭಾಷೆಲಿ ಮಾತಿನ ನಡುಗೆ ಬಳಕೆ ಅಪ್ಪ ಒಂದು ಚಂದದ ನುಡಿಗಟ್ಟು "ಮೂಗಿಲಿ ಎಷ್ಟು ಉಂಬಲೆಡಿಗು?"ಹೇಳುದು
ನಾವು ಉಂಬದು ಬಾಯಿಲಿ .ಅದಕ್ಕೂ ಒಂದು ಮಿತಿ ಇದ್ದು ,ಮಿತಿ ಮೀರಿ ತಿಂಬಲೆ ಎಡಿತ್ತಿಲ್ಲೆ.

ಮೂಗಿಲಿ ಅಂತೂ ಉಂಬಲೆ ಎಡಿತ್ತಿಲ್ಲೆ ಅದು ಅಸಾಧ್ಯವಾದ ವಿಚಾರ.ಹಾಂಗೂ ಒಂದು ವೇಳೆ ಪ್ರಯತ್ನ ಮಾಡಿರೆ ಒಂದೆರಡು ಅಶನ ತಿಂಬಲೆ ಎದುಗು ಅಷ್ಟೇ !
ಸರಿಯಾದ ರೀತಿಲಿಯೇ ಬಾಯಿಲಿ ಉಂಬದಕ್ಕೆ ಒಂದು ಮಿತಿ ಇದ್ದು ಅದರ ದಾಂಟಿ ಹೋಪಲೆ ಎಡಿತ್ತಿಲ್ಲೆ .ಮಿತಿಯ ಒಳವೇ ತಿಂಬಲೆ ಎಡಿವದು !ಹಾಂಗಿಪ್ಪಗ ಸ್ವಾಭಾವಿಕ ನೇರ ದಾರಿಯ ಬಿಟ್ಟು  ಮೂಗಿಲಿ ತಿಂಬಲೆ ಹೆರಟರೆ ಎಷ್ಟು ತಿಂಬಲೆ ಎಡಿಗು ?ಹೇಳುವ ಅರ್ಥ ಇಲ್ಲಿ ಕಾಣುತ್ತು.

ನ್ಯಾಯವಾದ ಮಾರ್ಗಲ್ಲಿ ಸಂಪಾದನೆ ಮಾಡಿ ಬದುಕುವೋನ ಗಳಿಕೆಗೂ ಒಂದು ಮಿತಿ ಇದ್ದು. ನಮ್ಮ ಅಯುಸ್ಸಿಂಗು ಒಂದು ಮಿತಿ ಇದ್ದು .ಆರು ಎಂತ ಸಂಪಾದನೆ ಮಾಡಿರೂ ಎಲ್ಲವನ್ನು ಇಲ್ಲಿಯೇ  ಬಿಟ್ಟು ದೇವರೆಡೆ ನಡೆಯಕ್ಕಾವುತ್ತು

ಹಾಂಗಿದ್ದರೂ ಕೆಲವು ಜನಂಗ ಬೇರೆಯೋರದ್ದರ ಎಳದು ತಿಂಬಲೆ ನೋಡುತ್ತವು!ಜಾಗೆಯ ಗಡಿಯ ರಜ್ಜ್ಜ ರಜ್ಜವೇ ಮುಂದೆ ಹಾಕುದು ,ಮನೆಗೆ ಕಾಂಪೌಂಡ್ ಕಟ್ಟುವಗ ನಾಲ್ಕಿಂಚು ಅಕ್ಕ ಪಕ್ಕದ ಜಾಗೆಯ ಸೇರ್ಸಿ ಹಾಕುದು ಇತ್ಯಾದಿ ಮಾಡುದು ಕಾಣುತ್ತು!
ಇಂಥ ಸಂದರ್ಭಂಗಗಳಲ್ಲಿ ಮೂಗಿಲಿ ಉಂಡ್ರೆ ಎಷ್ಟು ಉಂಬಲೆ ಎಡಿಗು ಹೇಳುವ ಮಾತಿನ ಎಂಗಳ ಕೋಳ್ಯೂರು ಸೀಮೆಲಿ ನಮ್ಮ ಭಾಷೆಲಿ ಬಳಕೆ ಮಾಡುತ್ತವು !ಬಹುಶ ಬೇರೆ ಕಡೆಯೂ ಈ ಮಾತು ಬಳಕೆಲಿ ಇಕ್ಕು ಅಲ್ಲದ ?ಇದೆ ಅರ್ಥ ಬಪ್ಪ ಬೇರೆ ನುಡಿಗಟ್ಟುಗಳೂ ಇಕ್ಕು ಅಲ್ಲದ ?ನಿಂಗಳ ಗಮನಕ್ಕೆ ಬಂದದರ ತಿಳಿಸಿ

Thursday 6 March 2014

ಗಿಳಿಬಾಗಿಲು-26 (ಹವ್ಯಕ ಬ್ಲಾಗ್ ) ಕಂಜಿ ಹಾಕಿರೆ ಸಾಲ ,ನಕ್ಕುಲೂ ಅರಡಿಯಕ್ಕು

ಇದೊಂದು ನಮ್ಮ ಭಾಷೆಲಿಪ್ಪ ಭಾರಿ ಚೆಂದದ ನುಡಿಗಟ್ಟು .ಸಣ್ಣಾದಿಪ್ಪಗಳೇ ಒಂದೆರಡು ಸತ್ತಿ ಎಲ್ಲೋ ಕೇಳಿದ್ದು ನೆನಪಿದ್ದು .ಅದರ ಅರ್ಥ ಗಿರ್ಥ ಎಲ್ಲ ಅಷ್ಟಾಗಿ ಆಲೋಚನೆ ಮಾಡಿತ್ತಿಲ್ಲೆ.
ಇತ್ತಿಚೆಗಂಗೆ ಇದು ಎನಗೆ ಅಂಬಗಂಬಗ ನೆನಪಾವುತ್ತ ಇದ್ದು.ಉದಾಹರಣೆ ಹೇಳ್ತರೆ ಎನ್ನ ಬ್ಲಾಗ್  ಬ್ಲಾಗ್ ಕಥೆಯನ್ನೇ ಹೇಳುಳಕ್ಕು.ಇದು ಈ ನುಡಿ ಗಟ್ಟಿಂಗೆ ಸೂಕ್ತ ಉದಾಹರಣೆ ಅಕ್ಕು ಹೇಳಿ ಅನ್ಸುತ್ತು ಎನಗೆ.

ಆರೋ ಎಲ್ಲ ಬ್ಲಾಗ್ ಬರವದು ನೋಡುವಾಗಮೊದಲೇ ಬರವ ತುಡಿತ ಇಪ್ಪ ಎನಗೂ ಬ್ಲಾಗ್ ಬರೆಯಕ್ಕು ಹೇಳಿ ಅನ್ಸಿತ್ತು.ಸರಿ ಹೇಳಿ ಒಂದು ಕಂಪ್ಯೂಟರ್ ತೆಗತ್ತು .ಕನ್ನಡ ಟೈಪಿಂಗ್ ಈಗ ಏನೂ ಕಷ್ಟದ ವಿಚಾರ ಅಲ್ಲನ್ನೇ! ಮಾಹಿತಿ ಸಂಗ್ರಹಂಗ ಮೊದಲೇ ಇತ್ತು.ಹಾಂಗಾಗಿ ಬರವಲೆ ಸುರುಮಾಡಿದೆ.
ನಂತರವೇ ಗೊಂತಾದ್ದು .ಇದರಲ್ಲಿ ಎಂತೆಲ್ಲ ಸಮಸ್ಯೆಗ ಇದ್ದು ಹೇಳಿ.ತುಂಬಾ ಜನಂಗ ಇದರ ನಕಲು ಮಾಡಿ ಅವರವರ ಹೆಸರಿಲಿ ಹಾಕಿಕೊಂಬಲೆ ಸುರುಮಾಡಿದವು.
ಸುರುವಿಂಗೆ ಫೋಟೋ ನಕಲು ಮಾಡಿಗೊಂಡು ಇತ್ತಿದವು.ಇದಕ್ಕೆ ಎಂತ ಮಾಡುದು ಹೇಳಿ ತಲೆಕೆಡಿಸಿಕೊಂಡು ಅಂತು ಇಂತೂ ವಾಟರ್ ಮಾರ್ಕ್ (ಫೋಟೋ ಮೇಲೆ ನಮ್ಮ ಹೆಸರು ) ಹಾಕುಲೆ ಸಹೃದಯಿ ಪದ್ಯಾಣ ರಾಮಚಂದ್ರಣ್ಣ ಅವರ ಕೈಂದ ಹೆಂಗೋ ಕಲ್ತೆ. ಇನ್ನು ತೊಂದರೆ ಇಲ್ಲೆಹೇಳಿ ಜ್ಹಾನ್ಸಿ ನೆಮ್ಮದಿಲಿ ಇತ್ತಿದೆ.

ಮುಂದಣ ಸರದಿ ಲೇಖನಂಗಳಕಾಪಿ ಮಾಡಿ ಹಾಕುಲೆ ಸುರು ಮಾಡಿದವು .ಈಗ ಅದಕ್ಕೂನಕಲು ಮಾಡುಲೆ ಎಡಿ ಯದ್ದ ಹಾಂಗೆ  ಮಾಡುಲೆ ಸಹೃದಯಿ ರಾಘವೇಂದ್ರ ನಾವಡ
ಹೇಳಿ ಕೊಟ್ಟವು ಅದನ್ನು ಹೆಂಗೋ ಎನ್ನ ಬ್ಲಾಗ್ ಗೆ ಅನ್ವಯ ಅಪ್ಪ ಹಾಂಗೆ ಮಾಡಿ ದೆ ಸಮ  .ಮತ್ತೆ ಈಗಾಗಲೇ ನಕಲು ಮಾಡಿದೋರ ಪತ್ತೆ ಮಾಡುದು ಹೇಂಗೆ?
ಅದೂ ಒಂದು ಉಪಾಯ ಗೊಂತಾತು,ಎನ್ನ ಲೇಖನಲ್ಲಿಪ್ಪ ಒಂದು ಮುಖ್ಯ ಪದ ಅಥವಾ ವಾಕ್ಯವ ಗೂಗಲ್ ಗೆ ಹಾಕಿ ಹುಡುಕಿ ಅಪ್ಪಗ ಅದು ಎಲ್ಲೆಲ್ಲ ಇದ್ದು ಹೇಳಿ ಗೊಂತಾವುತ್ತು .ಅದರ ಹಿಂದಂದ ಹೋಗಿ ಎನ್ನ ಲೇಖನಂಗ ಎಲ್ಲೆಲ್ಲ ಆರಾರು ನಕಲು ಮಾಡಿದ್ದವು ಹೇಳಿ ನೋಡಿ ಅವಕ್ಕವಕ್ಕೆ ಸಂದೇಶ ಕಳುಸಿದೆ ಅದು ಎನ್ನ ಬರಹ ಹೇಳಿ ಆಧಾರ ಸಾಕ್ಷಿ ಕೊಟ್ಟು !
ಫೇಸ್ ಬುಕ್ ಲಿ ಈ ಬಗ್ಗೆ ಸೂಚನೆಯೂ ಕೊಟ್ಟೆ !
ನಾವು ಹಸೆ ಕೆಲ ಹೊಕ್ರೆ ರಂಗೋಲಿ ಕೆಳ ಹೊಕ್ಕುವ ಜನಂಗ ಇರ್ತವು .ಬರವ ಉತ್ಸಾಹ ,ಮಾಹಿತಿ ಇದ್ದರೆ ಸಾಲ ,ಅದರ ಹೊರ ಜಗತ್ತಿಂಗೆ ತಿಳಿಸಿಯೂ ನಮ್ಮ್ಮದಾಗಿ ಮಡಿಕ್ಕೊಂಬಲೆ ಸುಮಾರು ಕಷ್ಟ ಇದ್ದು ಹೇಳಿ ಈಗ ಗೊಂತಾತು !
ಇದರೆಲ್ಲರ ಜಂಜಾಟ ನೋಡುವಾಗ ನೆನಪಾದ ನುಡಿಗಟ್ಟು ಕಂಜಿ  ಹಾಕಿರೆ ಸಾಲ ನಕ್ಕುಲೂ ಅರಡಿಯಕ್ಕು ಹೇಳಿ.ದನಗ ಕಂಜಿ ಹಾಕಿ ಬಿಟ್ರೆ ಅವರ ಜವಾಬ್ದಾರಿ ಮುಗುತ್ತಿಲ್ಲೆ.ನಂತರ ಕಂಜಿಯ ಮೈ ನಕ್ಕಿ ನಕ್ಕಿ ಅದಕ್ಕೆ ಬಲ ಬಪ್ಪ ಹಾಂಗೆ ಕೂಡಾ ಮಾಡಕ್ಕು .ಮುಂದೆ ಆ ಕಂಜಿ ಅದರ ಕಾಲ ಮೇಲೆ ನಿಂಬಲ್ಲಿಯವರೆಗೆ ಅದರ ಜವಾಬ್ದಾರಿ ದನದ್ದೇ ಅದನ್ನು ಅದು ನಿಭಾಯಿಸಕ್ಕು .ಹಾಂಗೆ ನಾವುದೇ ಒಂದು ಕೆಲಸ ಸುರು ಮಾಡಿರೆ ಸಾಲ ,ಅದರ ಪೂರ್ತಿ ಜವಾಬ್ದಾರಿ ಆಗು ಹೋಗುಗಳ ನೋಡಿಗೊಂಬ ಸಾಮರ್ಥ್ಯವೂ ನಮ್ಮ್ಮಲ್ಲಿ ಇರೆಕ್ಕು ಹಾಂಗಾರೆ ಮಾತ್ರ ಅಂತ ಕೆಲಸಕ್ಕೆ ಕೈ ಹಾಕೆಕ್ಕು ಹೇಳುವ ನೀತಿಯ ಈ ನುಡಿಗಟ್ಟು ಹೇಳುತ್ತು ಹೇಳಿ ಎನಗೆ ಅನ್ಸುತ್ತು .
ನಿಂಗ ಎಲ್ಲ ಎಂತ ಹೇಳ್ತಿ ?ನಿಂಗಳ ಅಭಿಪ್ರಾಯ ತಿಳಿಸಿ
ನಮಸ್ಕಾರ

Friday 21 February 2014

ಗಿಳಿಬಾಗಿಲು-25 (ಹವ್ಯಕ ಬ್ಲಾಗ್ )- ತಲೆ ತುಂಬ ಸಂಸಾರ

ಎಂತಕೆ ಹೇಳಿ ಗೊಂತಿಲ್ಲೆ ,ಎನಗೆ ಸಣ್ಣಾದಿಪ್ಪಗಳೇ ಎನ್ನ ಕೆಮಿಗೆ ಬಿದ್ದ ಮಾತುಗಳ ಹಾಂಗೆ ಹೇಳ್ರೆ ಎಂತ ?ಹೀಂಗೆ ಹೇಳ್ರೆ ಎಂತ ಹೇಳಿ ಆಲೋಚನೆ ಮಾಡುವ ಸ್ವಭಾವ ಇತ್ತು !

ಮಾತಿನ ನಡುವೆ ಯಾವುದಾದರು ಪದ ಗೊಂತಾಗದ್ದರೆ ಹಾಂಗೆ ಹೇಳ್ರೆ ಎಂತ ಹೇಳಿ ಕೇಳುವ ಸ್ವಭಾವಂದಾಗಿ “ನಿನಗೆ ಅದು ಇದು ಅಜಕ್ಕೆ ಎಂತಕೆ ?ಸುಮ್ಮನೆ ಇಪ್ಪಲೆ ಆವುತ್ತಿಲ್ಲೆಯ ಹೇಳಿ ಆನು ಸುಮಾರು ಸರ್ತಿ ಮನೆಲಿ ಶಾಲೆಲಿದೆ ಮಂಗಳಾರತಿ ಮಾಡ್ಸಿಕೊಂಡಿದೆ !
ಆದರೂ ಆ ಸ್ವಭಾವ ದೊಡ್ಡ ಅಪ್ಪಗಲೂ ಎನಗೆ ಬಿಟ್ಟು ಹೋಯಿದಿಲ್ಲೆ !ಸಣ್ಣಾದಿಪ್ಪಗ ಸಮಯ ಸಂದರ್ಭ ನೋಡದ್ದೆ ಮಾತಿನ ನಡುವೆ ಬಾಯಿ ಹಾಕಿ ಬೈಗಳು ತಿಂತಿತ್ತಿದೆ !

ದೊಡ್ಡ ಆದ ಹಾಂಗೆ ಕೇಳುವ ಅಭ್ಯಾಸ ಬಿಟ್ಟು ಹೋತು ,ಆದರೆ ಗ್ರಹಿಸುವ ಅಭ್ಯಾಸ ಒಳುದ್ದು !ಹಾಂಗಾಗಿಯೇ ಬಹುಶ ಅವು ಇವು ಮಾತಾಡುವಾಗ ಬಳಕೆ ಅಪ್ಪ ವಿಶಿಷ್ಟ ಬಳಕೆ ಬಗ್ಗೆ ಎನ್ನ ಗಮನ ಹೋ ವುತ್ತು ಹೇಳಿ ಕಾಣೆಕ್ಕು !

ಆನು ಇದರ ಎಂತಕೆ ಹೇಳಿದ್ದು ಹೇಳಿರೆ ಮೊನ್ನೆ ದ್ವಾದಶಿ ಸಮಾರಾಧನೆಗೆ ಎಂಗಳ ಕೋಳ್ಯೂರು ದೇವಸ್ಥಾನಕ್ಕೆ ಹೋಗಿತ್ತಿದೆ,ಅಲ್ಲಿ ಊಟಕ್ಕೆ ಮೊದಲು ಇಬ್ರು ರಜ್ಜ ಪ್ರಾಯದ ಹೆಮ್ಮಕ್ಕ ಸುಖ ದುಃಖ ಮಾತಾಡಿಗೊಂಡು ಇತ್ತಿದವು. ಮಾತಿನ ನಡುವೆ “ಅವಂಗೆ ಭಾರೀ ಬಂಗ ,ತಲೆ ತುಂಬ ಸಂಸಾರ ಪಾಪ !ಎಲ್ಲವನ್ನು ನೋಡಿಗೊಂಡು ಹೋಯಕ್ಕು “ಹೇಳಿ ಆರ ಬಗ್ಗೆಯೋ ಹೇಳಿದ್ದು ಎನ್ನ ಗಮನಕ್ಕೆ ಬಂತು !

ತನ್ನಷ್ಟಕ್ಕೆ ಎನ್ನ ಕೈ ತಲೆ ಹತ್ತರಂಗೆ ಹೋತು !ಎನ್ನ ಅಪ್ಪಚ್ಚಿಯಕ್ಕ ತುಂಬಾ ಕುಶಾಲಿನೋರು,ಅವು “ಅವಂಗೆ ತಲೆ ತುಂಬಾ ಸಂಸಾರ” ಡಿಡಿಟಿ ಸಾಕಾ  ?ಅಥವಾ ಬಿ ಎಚ್ ಸಿ ತರಕ್ಕಾವುತ್ತಾ ಹೇಳಿ ತಲೆ ತೊರ್ಸಿ ಹೇನು ಕುಟ್ಟುವ ಅಭಿನಯ ಮಾಡುತ್ತಾ ಇದ್ದದು ನೆನಪಾಗಿ ನೆಗೆ ಬಂತು ಕೂಡಾ !

ತಲೆ ತುಂಬ ಸಂಸಾರ ಹೇಳುವ ನುಡಿಗಟ್ಟು ತುಂಬಾ ಜನ  ಅಕ್ಕ ತಂಗೆಕ್ಕ ,ಅಣ್ಣ ತಮ್ಮಂದಿರು ,ಅಪ್ಪಚ್ಚಿ ಚಿಕ್ಕಮ್ಮಂದಿರು ಸೋದರತ್ತೆಕ್ಕ, ಮೊದಲಾದ ತುಂಬಾ ಜನ ಬಂಧು ಬಳಗ ಇಪ್ಪ ದೊಡ್ಡ ಸಂಸಾರ /ಕುಟುಂಬ ಹೇಳುವ ಅರ್ಥವ ಅಭಿವ್ಯಕ್ತಿಸುತ್ತು .
ತುಂಬಾ ಜನ ಅಕ್ಕ ತಂಗೆಕ್ಕ ತಮ್ಮಂದಿರು ಸೋದರತ್ತೆಕ್ಕ ಮೊದಲಾದೋರ ಸಲಹುವ ಜವಾಬ್ದಾರಿ ಸ್ಥಾನಲ್ಲಿ ಇಪ್ಪ ವ್ಯಕ್ತಿಯ ಬಗ್ಗೆ “ಅವಂಗೆ ತಲೆ ತುಂಬಾ ಸಂಸಾರ “ಹೇಳುವ ಮಾತಿನ ಬಳಕೆ ಮಾಡುತ್ತವು.
ಈಗ ನಮ್ಮ ಭಾಷೆ ಕೂಡಾ ಆಧುನಿಕತೆಗೆ ಒಳಗಾಗಿ ಇಂಥ ಅಪರೂಪದ ಮಾತುಗ ಕೇಳುಲೆ  ಸಿಕ್ಕುದೇ ಅಪರೂಪ ಆಯಿದು ಅಲ್ಲದ ?ಇಂಥ ಪದಂಗಳ ಬಳಸಿ ಉಳಿಸಕ್ಕು ಹೇಳಿ ಎನ್ನ ಗಮನಕ್ಕೆ ಬಂದದರ ಬರದು ಮಡುಗುತ್ತಾ ಇದ್ದೆ ಆನು  

Friday 14 February 2014

ಗಿಳಿ ಬಾಗಿಲು (ಹವ್ಯಕ ಬ್ಲಾಗ್ )-ಕಾಸು ಕೊಟ್ಟು ಹೊಳೆ ನೀಂದುವ ಪಂಚಾಯತಿಗೆ ಆಗ !

'ಕಾಸು ಕೊಟ್ಟು ಹೊಳೆ ನೀಂದುವ ಪಂಚಾಯತಿಗೆ ಆಗ ''ಎಂಗಳ ಹೊಸ ಮನೆ ಅಜ್ಜ ಹೀಂಗೆ ಹೇಳ್ತಾ ಇಪ್ಪದರ ಆನು ಸಣ್ಣಾದಿಪ್ಪಗಲೇ ಕೇಳಿತ್ತಿದೆ.ನೀಂದುದು ಹೇಳಿದರೆ ಈಜುದು ಹೇಳಿ ಎನಗೆ ಗೊಂತಿತ್ತು.ಅಜ್ಜನ ಮನೆಯ ತೋಡಿಲಿ ಎಂಗ ಎಲ್ಲ ಸೊಕ್ಕಿಗೊಂಡು ಇತ್ತಿದೆಯಬೇಸಗೆಲಿ ನೀರು ತುಂಬಾ ಕಮ್ಮಿ ಅಪ್ಪಗ ಅಲ್ಲಿ ನೀಂದುಲೆ ಹೋದರೆ ಕೈಕಾಲಿಂಗೆ ಗೆರಕಿ ತಾಗಿಕೊಂಡು ಇತ್ತು.ಹಾಂಗೆ ಆನು ಅಜ್ಜನ ಮನೆಯ ತೋಡಿನ ಬದಲು ಹೊಳೆ ಇದ್ದರ ಒಳ್ಳೆದಿತ್ತು ಹೇಳಿ ಜ್ಹಾನ್ಸಿಗೊಂಡು ಇತ್ತಿದೆ.ಆ ಸಮಯಲ್ಲಿ“ಅಜ್ಜ ಕಾಸು ಕೊಟ್ಟು ಹೊಳೆ ನೀಂದುವ ಪಂಚಾಯತಿಗೆ ಆಗ”ಹೇಳಿ ಆರತ್ತರೋ ಮಾತಾಡುದು ಅಲ್ಲಿಯೇ ಓಂಗಿಗೊಂಡು ಇದ್ದ ಎನ್ನ ಕೆಮಿಗೆ ಬಿದ್ದದು!
'' ಓ ಹೊಳೇಲಿ ನೀಂದಕ್ಕಾದರೆ ಪೈಸೆ ಕೊಡಕ್ಕು ಅಂಬಗ !ಸದ್ಯ ಅಜ್ಜನ ಮನೆಲಿ ತೋಡು ಇದ್ದದೆ ಪುಣ್ಯ!ಹೊಳೆ ಇರ್ತಿತ್ತರೆ ಈಜುಲೂ ಪೈಸೆ ಕೊಡಕ್ಕಾವುತ್ತಿತ್ತು,ಈಜುಲೂ ಪೈಸೆ ಕೊಟ್ಟರೆ , ಅಜ್ಜಿ ಕೊಟ್ಟ ಹಾಲು ತೆಕ್ಕೊಂಡು ಹೋದ್ದರ ಪೈಸೆ,ಅಜ್ಜ ಅಡಕ್ಕೆ ಹೆರ್ಕಿದ್ದಕ್ಕೆ,ಹೊತ್ತದಕ್ಕೆ,ಹಿಂಡಿ ತಂದದಕ್ಕೆ ಕೊಟ್ಟ ಪೈಸೆ ಎಲ್ಲ ಮುಗುದರೆ ಮತ್ತೆ ಕೋಳ್ಯೂರು ಮಂಡಲ ಪೂಜೆಲಿ ಸಂತೆಗೆ ಬಪ್ಪ ಶೆಟ್ಟಿ ಐಸು ಕ್ರೀಮು ತಿಮ್ಬಲೆ,ದಂಬಾರು ತೊಟ್ಲಿಲಿ ಕೂಪಲೆ ಪೈಸೆ ಒಳಿಯ ಅನ್ನೇ '' ಹೇಳಿ ಆನು ಅಂಬಗ ಜ್ಹಾನ್ಸಿತ್ತಿದೆ !ನಿಂಗೊಗೆ ಎಲ್ಲ ಈಗ ನೆಗೆ ಬಂದಿಕ್ಕು ಅಲ್ಲದ ?ಎನಗೆ ಅಷ್ಟೇ ಬೊಂಡು ಬೆಳದಿತ್ತದು!ಮತ್ತೆದೆ ಅದು ಬೆಳದ್ದೇ ಇಲ್ಲೆ ಹೇಳುದು ಬೇರೆ ವಿಚಾರ!! .
ಇರಲಿ; ಅಜ್ಜ ಹೇಳಿಗೊಂಡು ಇದ್ದ ಕಾಸು ಕೊಟ್ಟು ಹೊಳೆ ನೀಂದುವ ಸಂಗತಿ ಎನಗೆ ನೆನಪಾದ್ದು ಓ ಮೊನ್ನೆ ಎರಡು ಮೂರು ತಿಂಗಳು ಮೊದಲು ಎನ್ನ ಪುಸ್ತಕ ಪ್ರಕಟ ಮಾಡುವ ಸಮಯಲ್ಲಿ .
ರಜ್ಜ ಸಮಯ ಮೊದಲು ಎನ್ನ ಪಿಎಚ್.ಡಿ ಸಂಶೋಧನ ಮಹಾ ಪ್ರಬಂಧ ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ-ಒಂದು ವಿಶ್ಲೇಷಣಾತ್ಮಕ ಅಧ್ಯಯನ ,.ಭೂತಗಳ ಅದ್ಭುತ ಜಗತ್ತು ,ತುಳು ಜಾನಪದ ಕಾವ್ಯಗಳಲ್ಲಿ ಕಾವ್ಯತತ್ವಗಳು ,ಬಂಗ್ಲೆ ಗುಡ್ಡೆ ಸಣ್ಣಕ್ಕನ ಮೌಖಿಕ ಸಾಹಿತ್ಯ ,ಮತ್ತೆ ಶಾರದಾ ಜಿ ಬಂಗೇರರ ಮೌಖಿಕ ಸಾಹಿತ್ಯ ಹೇಳುವ 5 ಪುಸ್ತಕಂಗಳ ಪ್ರಕಟಣೆ ಮಾಡುತ್ತೆಯ ಹೇಳಿ ಒಂದು ಪ್ರಕಾಶನ ಸಂಸ್ಥೆ ಒಪ್ಪಿತ್ತು .ಆನುದೆ ಒಪ್ಪಿ ಎಲ್ಲ ತಯಾರಿ ನಡದು ಅಪ್ಪಗ ಪ್ರಕಾಶಕರ ಕಡೆಂದ ಒಂದು ಮನವಿ ಬಂತು.ಎಂಗೊಗೆ ಈಗ ಪೈಸೆ ಭಾರೀ ಟೈಟ್ ಆಯಿದು.ನಿಂಗ ಒಂದು 30,೦೦೦ ಈಗ ಕೊಟ್ಟಿರಿ.ಬಪ್ಪ ತಿಂಗಳು ಎನಗೆ ಪೈಸೆ ಬಪ್ಪದು ಇದ್ದು ಅಂಬಗ ಕೊಡ್ತೆ ಹೇಳಿ!ಎಂತ ಹೇಳುದು ಹೇಳಿ ಗೊಂತಾತಿಲ್ಲೆ ಒಂದು ಕ್ಷಣ .ಎಂತಕ್ಕೂ ನಾಳೆ ಹೇಳುತ್ತೆ ಹೇಳಿ ಹೇಳಿದೆ.
ಈ 5 ಪುಸ್ತಕಂಗಳ ಆನು ಸ್ವಂತ ಪ್ರಿಂಟ್ ಮಾಡಿ ಪ್ರಕಟಿಸುತ್ತರೆ ಕಮ್ಮಿ ಹೇಳ್ರೂ ನಾಲ್ಕು ಲಕ್ಷ ರೂಪಾಯಿ ಬೇಕು.ಎನ್ನ ಈ ಹಿಂದೆ ಪ್ರಕಟ ಆದ 15 ಪುಸ್ತಕಂಗ ಇಷ್ಟರ ತನಕ ಯಾವುದೂ ಮಾರಾಟ ಆಗದ್ದೆ ಒಳುದ್ದಿಲ್ಲೆ .ಪುಸ್ತಕಂಗ ಮಾರಾಟ ಆದರೆ ಒಳ್ಳೆ ಲಾಭವೂ ಬತ್ತು .ಆನು ಲಾಭದ ದೃಷ್ಟಿಲಿ ಪ್ರಕಟ ಮಾಡಿದ್ದು ಅಲ್ಲ.ಆದರು ಎನಗೆ ನಷ್ಟ ಆಯಿದಿಲ್ಲೆ .ಅಲ್ಪ ಸ್ವಲ್ಪ ಲಾಭವೇ ಅಯಿದು.
ಈಗ ಪ್ರಕಟ ಅಪ್ಪ ಪುಸ್ತಕಂಗಳಲ್ಲಿ 3 ಪುಸ್ತಕಂಗ ಒಳ್ಳೆ ಬೇಡಿಕೆ ಇಪ್ಪ ಕ್ಷೇತ್ರದ ನಾಗಾರಾಧನೆ,ಭೂತಾರಾಧನೆ ಇಪ್ಪ ಪುಸ್ತಕಂಗ.ಇದು ಪ್ರಕಟ ಮಾಡಿರೆ ಒಳ್ಳೆ ಲಾಭ ಬಪ್ಪಂತಹಾದ್ದು.ಹಾಂಗಿಪ್ಪಗ ಪ್ರಕಾಶಕರು ಮೂವತ್ತು ಸಾವಿರ ಕೊಡಿ ಹೇಳಿರೆ !
ನಿದಾನಕ್ಕೆ ಕೂದು ಆಲೋಚನೆ ಮಾಡಿದೆ.ಈಗ ಮೂವತ್ತು ಸಾವಿರ ಕೇಳಿದೋರು ಇದರ ಕೊಟ್ಟಪ್ಪಗ ಮತ್ತೆ ಪುನ ಇಷ್ಟು ಕೊಡಿ ಹೇಳಿರೆ ..!ಇದು ಆಗ! ಕಾಸು ಕೊಟ್ಟು ಹೊಳೆ ನೀಂದುವ ಪಂಚಾಯತಿಕೆ ಆತಿಲ್ಲೆ.ಅದರ ಆನೇ ಬಂಡವಾಳ ಹಾಕಿ ಒಂದೊಂದೇ ಪುಸ್ತಕ ನಿದಾನಕ್ಕೆ ಪ್ರಕಟ ಮಾಡುಲೆ ಅಕ್ಕನ್ನೇ ಹೇಳಿ ಕಂಡತ್ತು!
ಮರು ದಿನ ಫೋನ್ ಮಾಡಿ ಅವಕ್ಕೆ ಖಡಾ ಖಂಡಿತವಾಗಿ ಹೇಳಿದೆ.”ಎನ್ನ ಕಡೆಂದ ಒಂದು ನಯಾ ಪೈಸೆ ಹೂಡಿಕೆ ಇಲ್ಲೆ.ಲಾಭ ನಷ್ಟ ಎರಡೂ ನಿಂಗಳದ್ದೆ.ಒಪ್ಪಿಗೆ ಇದ್ದರೆ ಮಾತ್ರ ಪ್ರಕಟ ಮಾಡಿ ಇಲ್ಲದ್ದರೆ ಬೇಡ” ಹೇಳಿ.”ಅರ್ಧಾಂಶ ನಿಂಗ ಬಂಡವಾಳ ಹಾಕದ್ದರೆ ಎಂಗೊಗೆ ಎಡಿಯ” ಹೇಳಿದವು.(ಇದರ ಅರ್ಥ ಅವು ಎನ್ನ ಕೈಂದ ಎರಡು ಲಕ್ಷ ಪೀಂಕುಸುವ ಅಂದಾಜಿಲಿ ಇತ್ತಿದವು ಹೇಳಿ ಅಲ್ಲದ! )
ಸರಿ ಹೇಳಿದೆ.
ಎರಡು ಪುಸ್ತಕವ ಕೂಡಲೇ ಅನೇ ಪ್ರಕಟಮಾಡುದು ಹೇಳಿ ಆಲೋಚಿಸಿದೆ.ಅಷ್ಟರಲ್ಲಿ ಬೇರೆ ಒಂದು ಪ್ರಕಾಶನದೋರು (ಪ್ರಚೇತ ಬುಕ್ ಹೌಸ್ ಪ್ರಕಾಶಕರು) ಅವ್ವೆ ಪೂರ್ತಿಯಾಗಿ ಬಂಡವಾಳ ಹಾಕಿ ಎನ್ನ ಎಲ್ಲ ಪುಸ್ತಕ ಪ್ರಕಟಮಾಡುಲೆ ಮುಂದೆ ಬಂದವು.ಈಗ ಎಲ್ಲ ಪ್ರಕಟ ಆತುದೆ.
ಆದರೆ ಈ ಪ್ರಕರಣ ಕಾಸು ಕೊಟ್ಟು ಹೊಳೆ ನೀಂದುದು ಹೇಳ್ರೆ ಎಂತದು ಹೇಳಿ ಕಲಿಸಿತ್ತು.ಆನು ಮೋಸ ಹೋಗದ್ದಾಂಗೆ ಎನ್ನ ಸಕಾಲಲ್ಲಿ ಎಚ್ಚರಿಸಿತ್ತು ಕೂಡಾ ಅಜ್ಜನ ಅನುಭವದ ಮಾತು!.
ಮೊದಲೆಲ್ಲ ಈಗಲುದೆ ಕೆಲವೆಡೆ ಹೊಳೆ ದಾಂಟುಲೆ ಸಂಕ ಇತ್ತಿಲ್ಲೆ.ಮಳೆಗಾಲಲ್ಲಿ ಓಡದೋರಿನ್ಗೆ ಪೈಸೆ ಕೊಟ್ಟು ಓಡಲ್ಲಿ ಹೊಳೆ ದಾಂಟಿ ಗೊಂಡು ಇದ್ದದು.ಕೆಲವು ಜನಂಗ ನೀರು ಕಮ್ಮಿ ಇದ್ದರೆ ಈಜಿಕೊಂಡು ಅಥವಾ ಹೀಂಗೆ ನದಕ್ಕೊಂದು ದಾಂಟಿ ಕೊಂಡು ಹೋಗಿಗೊಂಡು ಇತ್ತಿದವು.ಆದರೆ ಕಾಸು ಕೊಟ್ಟು ಹೊಳೆ ನೀಂದುದು ಹೇಳುವ ನುಡಿಗಟ್ಟು ಹೇಂಗೆ ಬಳಕೆಗೆ ಬಂತು ಗೊಂತಿಲ್ಲೆ.ನಮ್ಮ ಭಾಷೆಲಿ ಇಂಥ ಒಂದು ಚೆಂದದ ನುಡಿಗಟ್ಟು ಇದ್ದು.ತುಳುವಿಲಿಯೂ ಕಾಸು ಕೊರ್ದು ಸುದೆ ನೀನ್ದುನೆ ಹೇಳುವ ಬಳಕೆ ಇದ್ದು ಹೇಳಿ ಎನಗೆ ನೆನಪು .ಈ ನುಡಿಗಟ್ಟು ಬಳಕೆಗೆ ಬಪ್ಪಲೆ ಬೇರೆ ಏನಾದರೂ ಕಾರಣ ಇಕ್ಕ ?ಗೊಂತಿಪ್ಪೋರು ತಿಳುಸಿ

Thursday 6 February 2014

ಗಿಳಿ ಬಾಗಿಲು (ಹವ್ಯಕ ಬ್ಲಾಗ್ ) -ಪೊಟ್ಟು ಕಡಮ್ಮೆ



ಮೊನ್ನೆ ಒಂದಿನ ಬೆಂಗಳೂರಿಂಗೆ ರೈಲಿಲಿ ಬಪ್ಪಗ ಒಬ್ಬ ಹೆಮ್ಮಕ್ಕಳ ನೋಡಿದೆ .ಅವು ಟೀಚರ್ ಆಗಿರೆಕ್ಕು ,ಒಂದು ವಿದ್ಯಾರ್ಥಿನಿಯೂ ಇತ್ತು ,ಅದರ ಯಾವುದೊ ಕಾರ್ಯಕ್ರಮಕ್ಕೆ ಬಹುಶ ಸ್ಕೌಟ್ /ಗೈಡ್ ತರಬೇತಿಗೆ ಕರಕೊಂಡು ಹೋಪದು ಆಗಿರೆಕ್ಕು .ಆ  ಕೂಸಿಂಗೆ ಒರಕ್ಕು ತೂಗಿ ಕಣ್ಣು ಮುಚ್ಚಿ ಮುಚ್ಚಿ ಹೋಗಿಕೊಂಡು ಇತ್ತು .
ಇರುಳು ಹನ್ನೊಂದು ಗಂಟೆ ಕಳುದರೂ ಈ ಟೀಚರ್ ಅದರತ್ತರೆ ಅದರ ಹಿಂದಿನ ಕಾರ್ಯನ್ಗಳ ಬಗ್ಗೆ ವಿದ್ಯಾರ್ಥಿಗಳ  ಹಿಡಿತಲ್ಲಿ ಮಡುಗುಲೆ ಎಷ್ಟು ಕಷ್ಟ ಇದ್ದು ಹೇಳುದರ ಬಗ್ಗೆ ..ಹೀಂಗೆ ಕೊಚ್ಚಿ ಕೊಳ್ಳುತ್ತಾನೇ  ಇತ್ತು .ಅಲ್ಲಿ ಇದ್ದ ಬೇರೆಯೋರಿಂಗೂ ಒರಕ್ಕು (ಒಟ್ಟಿಂಗೆ ಎನಗೂ !)ಇಲ್ಲೆ ಇವರ ದೆಸೆಲಿ !
ಅವರ ನೋಡಿ ಅಪ್ಪಗ ಎನಗೆ ಇದರ ಪೊಟ್ಟು ಕಡುಮ್ಮೆ ಹೇಳಿ ಹೇಳುದು ಎಂತರ ಹೇಳಿ ತಲೆಗೆ ಹೋತು .ತೀರಾ ಪ್ರದರ್ಶನ ಮಾಡಿಕೊಂಬ ,ತೀರಾ ಅಹಂಕಾರಿಗಳ ಬಗ್ಗೆ ಕೋಳ್ಯೂರು ಕಡೆ 
“ಅದರ  ಕೆಲಸದ ಪೊಟ್ಟು ಕಡಮ್ಮೆಗಿಷ್ಟು ಉಪ್ಪು ಹಾಕಲಿ,ಅವನ   ಪೈಸೆಯ ಪೊಟ್ಟು ಕಡುಮ್ಮೆಗಿಷ್ಟು ಮಣ್ಣು “ಹೇಳುವ ಮಾತು ಬಳಕೆಲಿ ಇದ್ದು ..
ಸಣ್ಣ ಪುಟ್ಟ  ಹುದ್ದೆ ಕೆಲಸಂಗಳಲ್ಲಿ ಇಪ್ಪೋರು ತಾನು ಮಹಾ ಹೇಳುವ ಹಾಂಗೆ ತೋರ್ಸಿಗೊಂಡು ತುಂಬಾ ಏಕರೆ ,ಹಾಂಕಾರ ತೋರ್ಸಿದರೆ ಅವಕ್ಕೆ ಹಿಂದಂದ ಪ್ರಯೋಗ ಅಪ್ಪ ತಿರಸ್ಕಾರದ ಮಾತು ಇದು .

ಪೊಟ್ಟು ಕಡಮ್ಮೆ ಯ ,ಪೊಟ್ಟು ಕಡುಮ್ಮೆ  ,ಪೊಟ್ಟು ಕಡುಮೆ ಹೇಳಿಯೂ ಬಳಕೆ ಮಾಡುತ್ತವು.
ಇದು ತುಳುವಿಲಿಯೂ ಬಳಕೆಲಿ ಇದ್ದು ಆಯಿನ ಪೊಟ್ಟು ಕಡುಮ್ಮೆಗೀತು ಉಪ್ಪು ಪಾಡಡು  ಹೇಳಿ ಅಲ್ಲಿ ಬಳಕೆ ಅವುತ್ತು .
ತನ್ನ ಬಿಟ್ರೆ ಆರೂ ಇಲ್ಲೆ ಹೇಳಿ ಟೆಂಕಾರಲ್ಲಿ ಮೆರವೋರ ಬಗ್ಗೆ ಬಳಕೆ ಅಪ್ಪ ಸೂಕ್ತವಾದ ಮಾತು ಇದು
ಪೊಟ್ಟು ಹೇಳಿರೆ ಹೊಟ್ಟು,ಸಾರ ಇಲ್ಲದ್ದು ಹೇಳುವ ಅರ್ಥ .ಕಡಮ್ಮೆ/ಕಡುಮ್ಮೆ/ಕಡಮೆ  ಹೇಳಿದರೆ ಎಂತದು ?
ಗರಿಮೆ ಹೇಳುದೆ ಕಡುಮೆ ಹೇಳಿ ಬದಲಾದಿಪ್ಪ ಸಾಧ್ಯತೆ ಇದ್ದು .ಅಥವಾ ಅಹಂ /ಅಹಮಿಕೆ ಹೇಳುದು ಕಡುಮೆ ಹೇಳಿ ಆಡಿಪ್ಪ ಸಾಧ್ಯತೆ ಇದ್ದು .ಆದರೂ ಪೊಟ್ಟು ಗರಿಮೆ ಹೇಳ್ರೆ ವ್ಯರ್ಥ>ಹೊಟ್ಟು ಗರಿಮೆ ಪದ ಬಳಕೆಯಿಂದ ಬಂದಿಪ್ಪ ಸಾಧ್ಯೆತೆ ಹೆಚ್ಚು ಹೇಳಿ ಎನಗೆ ಅನ್ಸುತ್ತು ,ನಿಂಗ ಎಲ್ಲ ಎಂತ ಹೇಳ್ತಿ ?ಈ ರೀತಿಯ ಬಳಕೆ ನಮ್ಮ ಭಾಷೆ ಬೇರೆ ಕಡೆಲಿಯೂ ಇದ್ದ ?

Tuesday 28 January 2014

ಗಿಳಿಬಾಗಿಲು (ಹವ್ಯಕ ಬ್ಲಾಗ್ )-ತಲೆಲಿ ಬರದ್ದರ ಎಲೆಲಿ ಉದ್ದುಲೆ ಎಡಿಯ

ಲಲಾಟ ಲಿಖಿತಾ ಲೇಖಾಂ ಪರಿಮಾರ್ಷ್ಟುಂ ನ ಶಕ್ಯತೇ|
ಹಣೆಲಿ ಲಿ ಬರದ್ದರ ಉದ್ದುಲೆ ಎಡಿಯ ಹೇಳುವ ಈ  ಮಾತು ಕನ್ನಡಲ್ಲಿ  ಹಣೆ ಬರಹವನ್ನು ಬ್ರಹ್ಮನಿಗೂ ಬದಲಿಸಲು ಸಾಧ್ಯವಿಲ್ಲ ಹೇಳಿ ಬಳಕೆಲಿ ಇದ್ದು.

ಆದರೆ ಈ ಮಾತು ನಮ್ಮ ಭಾಷೆಲಿ  ಇನ್ನೂ ಹೆಚ್ಚನ ಅರ್ಥ ವಿಸ್ತಾರವ ಪಡದು ಹಣೆಲಿ ಬರದ್ದರ ಎಲೆಲಿ ಉದ್ದುಲೆಡಿಯ ಹೇಳಿ ಬಳಕೆ ಆವುತ್ತು .
ಯಥಾ ಧೇನು ಸಹಸ್ರೇಷು ಪುತ್ರೋ ವಿಂದತಿ ಮಾತರಮ್|
ತಥಾ ಪೂರ್ವಾರ್ಜಿತಾನಿ  ಕರ್ಮಾಣಿ  ಕರ್ತಾರಮನುಸರಂತಿ||

ಹೇಂಗೆ ಸಾವಿರಾರು ದನಂಗಳ ನಡುವೆ ಕಂಜಿ ಅಬ್ಬೆಯನ್ನೇ ಹಿಂಬಾಲಿಸುತ್ತು,ಹಾಂಗೆ ನಮ್ಮ ಪೂರ್ವಾರ್ಜಿತ ಕರ್ಮ ನಮ್ಮ ಹಿಂಬಾಲಿಸುತ್ತು .ಈ ಕರ್ಮದ ಫಲಕ್ಕೆ ಅನುಗುಣವಾಗಿ ನಾವು ಹುಟ್ಟಕ್ಕಾದರೆ ಮೊದಲೇ ಈ ಭೂಮಿಲಿ ಏನೇನು ಸುಖ ದುಖಂಗಳ ಅನುಭವಿಸಕ್ಕು ಹೇಳುದರ ದೇವರು ಬರೆದಿರುತ್ತ ಹೇಳಿ ನಾವು ನಂಬಿಗೊಂಡು ಬೈಂದು.

ಈ ಬಗ್ಗೆ ಎನಗೆ ಹಿತೋಪದೇಶಲ್ಲಿ ಇಪ್ಪ ಒಂದು ಕಥೆ ಎನಗೆ ನೆನಪಾವುತ್ತು.ಒಂದೂರಿಲಿ ಸೋಮದತ್ತ ಹೇಳುವ ನಿಪುಣ ನೇಕಾರ ಇರುತ್ತ.ಅವಂಗೆ ಎಂಥ ಮಾಡ್ರೂಎಷ್ಟೇ ಕೆಲಸ ಮಾಡಿರೂ ಹೊಟ್ಟೆಗೆ ಬಟ್ಟೆಗೆ ಅಪ್ಪದರಂದರ ಹೆಚ್ಚು ಸಂಪಾದನೆ ಅವುತ್ತಿಲ್ಲೆ.ಅವನ ಊರಿಲಿ ಇಪ ಇತರ ಸಾಮಾನ್ಯ ನೆಕಾರಂಗೊಕ್ಕೆಇವನದ ಹೆಚ್ಚು ಸಂಪಾದನೆ ಆವುತ್ತು.ಹಾಂಗೆ ಅವ ಹೆಂಡತಿ ಹತ್ತರೆ ಆನು ಬೇರೆ ಊರಿಂಗೆ ಹೋಗಿ ಕೈ ತುಂಬಾ ಸಂಪಾದನೆ ಮಾಡಿ ಬತ್ತೆ ಹೇಳಿ ಹೇಳುವಾಗ ಹೆಂಡತಿ "ಲಲಾಟ ಲಿಖಿತಾ ಲೇಖಾಂ ಪರಿಮಾರ್ಷ್ಟುಂ ನ ಶಕ್ಯತೇ|" ಹೇಳಿ ಹೇಳುದರ ನೆನಪು ಮಾಡಿ ಕೊಟ್ಟು ವ್ಯರ್ಥ ಪ್ರಯತ್ನ ಬೇಡ ಹೇಳಿ ಹೇಳುತ್ತು.ಆದರೆ ಸೋಮ ದತ್ತ ಹಠ ಮಾಡಿ

ಉದ್ಯಮೇನ ಹಿ ಸಿದ್ಧ್ಯಂತಿ ಕಾರ್ಯಾಣಿ ನ ಮನೋರಥೈಃ |
ನಹಿ ಸುಪ್ತಸ್ಯ ಸಿಂಹಸ್ಯ ಮುಖೇ ಪ್ರವಿಶಂತಿ ಮೃಗಾಃ ||
"ಕಾರ್ಯ ಮಾಡುವುದರಂದಲೇ ಮನಸಿನ ಆಸೆ ಆಕಾಂಕ್ಷೆಗ ಈಡೆರುತ್ತು ಹೊರತು ಕೇವಲ ಆಸೆಂದ ಅಲ್ಲ ,ಒರಗಿಪ್ಪ ಸಿಂಹದ ಬಾಯಿಯ ಒಳ ಪ್ರಾಣಿಗ ಅವು ಆಗಿಯೇ ಪ್ರವೇಶ ಮಾಡುತ್ತವಿಲ್ಲೆ" ಹೇಳಿ ಚರ್ಚಿಸಿ ಬೇರೆ ಊರಿಂಗೆ ಸಂಪಾದನೆ ಮಾಡುಲೆ ಹೊವುತ್ತ.

ಅಲ್ಲಿ ಆರು ತಿಂಗಳು ಚಂದಕ್ಕೆ ದುಡುದು ಐನ್ನುರು ಚಿನ್ನದ ವರಹ ಸಂಪಾದನೆ ಮಾಡಿಕೊಂಡು ಊರಿಂಗೆ ಬತ್ತ.ಬಪ್ಪ ದಾರಿಲಿ ಒಂದು ಕಾಡು ಇರುತ್ತು ಅಲ್ಲಿಗೆ ಎತ್ತುವಾಗ ಕಸ್ತಲೆ ಆವುತ್ತು.ಅವ ಕ್ರೂರ ಪ್ರಾಣಿಗಳ ಹೆದರಿಕೆಗೆ ಒಂದು ಮರ ಹತ್ತಿ ರಜ್ಜ ಕಣ್ಣು ಮುಚ್ಚಿ ಒರಗುತ್ತ.ಅವಂಗೆ ಕನಸಿಲಿ ಕರ್ತಾ ಮತ್ತು ಕರ್ಮ ಮಾತಾಡುದು ಕಾಣುತ್ತು, ಕರ್ಮ ಕರ್ತನ ಹತ್ತರೆ "ಈ ಸೋಮದತ್ತಂಗೆ ಹೊಟ್ಟೆಗೆ ಬಟ್ಟೆಗೆ ಮಾತ್ರ ಬರದ್ದು ನೀನು ಎಂತಕೆ ಅದರಂದ ಹೆಚ್ಚು ಪೈಸೆ ಕೊಟ್ಟೆ ಹೇಳಿ ಕೇಳುತ್ತ.ಅಂಬಗ ಕರ್ಮ "ದುಡಿದೊನಿಂಗೆ ತಕ್ಕ ಪ್ರತಿಫಲ ಕೊಡುದು ಎನ್ನ ಕರ್ತವ್ಯ ಮುಂದಣದ್ದು ನಿನಗೆ ಬಿಟ್ಟದು ಹೇಳಿ..ಅಷ್ಟಪ್ಪಗ ಇವಂಗೆ ಎಚ್ಚರಾವುತ್ತು.ನೋಡುವಾಗ ಅವನ ಪೈಸೆಯ ಗೆಂಟು ಮಾಯ ಆಯಿದು.

ಛೆ! ಕಾಲಿ ಕೈಲಿ ಹೆಂಡತಿ ಮಕ್ಕಳ ಮೋರೆ ನೋಡುದು ಹೇಂಗೆ ಹೇಳಿ ಪುನಃ ಬೇರೆ ಊರಿಂಗೆ ಹೋಗಿ ಒಂದು ಸಾವಿರ ವರಹ  ಸಂಪಾದನೆ ಮಾಡಿ ಊರಿಂಗೆ ಬತ್ತ.ಈ ಸರ್ತಿ ಕಸ್ತಲೆ ಅಪ್ಪಗ ಒರಗದ್ದೆ ಕಾಯ್ತ.ನಡು ಇರುಳು ಅವನ ಕಣ್ಣಿಂಗೆ ಮತ್ತೆ ಕರ್ತ ಮತ್ತು ಕರ್ಮ ಮೊದಲಿನ ಹಾಂಗೆ ಮಾತಾಡುತ್ತವು,ಇವ ಗಟ್ಟಿಯಾಗಿ ಹಿಡುಕೊಂಡು ಇದ್ದ ಪೈಸೆಯ ಗೆಂಟು ಮಾಯಾ ಅವುತ್ತು.ಇವ ಭಾರೀ ಬೇಜಾರಾಗಿ ಅಲ್ಲಿಯೇ ಒಂದು ಮರಕ್ಕೆ ಬಳ್ಳಿ ಕಟ್ಟಿ ಕೊರಳಿಂಗೆ ಹಾಕಿಗೊಂಡು ಸಾವಲೆ ಹೆರಡುತ್ತ.ಅಷ್ಟಪ್ಪಗ ಕರ್ಮ ಬಂದು ನಿನಗೆ ಈ ಜನ್ಮಲ್ಲಿ ಇಷ್ಟೇ ಪ್ರಾಪ್ತಿ,ನಿನ್ನ ಪ್ರಯತ್ನಕ್ಕೆ ಮೆಚ್ಚಿದೆ ಇನ್ನು ನೀನು ಮನೆಗೆ ಹೋಗಿ ನೆಮ್ಮದಿಲಿ ಬದುಕು ಹೇಳಿ ಸಮಾಧಾನ ಮಾಡಿ ಕಳುಸಿದ. ಈ ಕಥೆಲಿ ಲಲಾಟ ಲಿಖಿತಾ ಲೇಖಾಂ ಪರಿಮಾರ್ಷ್ಟುಂ ನ ಶಕ್ಯತೇ|
ಹಣೆಲಿ ಬರದ್ದರ ಉದ್ದುಲೆ ಎಡಿಯ ಹೇಳುವ ಮಾತು ಬತ್ತು.


ಎಷ್ಟೋ ವಿಚಾರಂಗ ನಮ್ಮ ಕೈಲಿ ಇರುತ್ತಿಲ್ಲೆ.ಆದರೆ ನಾವು ಸಾಕಷ್ಟು ಪ್ರಯತ್ನಿಸುತ್ತು ,ಕೊನೆಗೆ ಯಾವುದೂ ಆಗದ್ದೆ ಅಪ್ಪಗ ನಮಗೆ ಒಂದು ವಿಚಾರ ಮನವರಿಕೆ ಆವುತ್ತು ,ಇದು ನಮ್ಮ ಕೈಲಿ ಇಲ್ಲೆ ಹೇಳಿ .ಯಾವುದೇ ಕೆಲಸ ಮನುಷ್ಯ ಪ್ರಯತ್ನ ಇಲ್ಲದ್ದೆ ಅವುತ್ತಿಲ್ಲೆ ನಿರಂತರ ಯತ್ನ ಬೇಕಾವುತ್ತು.ಸಾಕಷ್ಟು ಯತ್ನವ ಮಾಡಿಯೂ ನಮ್ಮದಲ್ಲದ ಕಾರಣಕ್ಕೆ ನಾವು ತೊಂದರೆಗೆ ಒಳಗಾವುತ್ತು ಎಷ್ಟೋ ಸರ್ತಿ ,ಎನಗೆ ಎಷ್ಟೋ ಸರ್ತಿ ಈ ಅನುಭವ ಅಯಿದು,ಬಹುಶ ಎಲ್ಲೋರಿಂಗು ಇದು ಅನುಭವಕ್ಕೆ ಬಕ್ಕು ಹೇಳಿ ಅನ್ಸುತ್ತು ಎನಗೆ.

ಅಂತ ಸಂದರ್ಭಲ್ಲಿ ನಮ್ಮ ಭಾಷೆಲಿ ಬಳಕೆ ಅಪ್ಪ ಮಾತು ಇದು.ದೇವರು ತಲೆಲಿ ಬರದ್ದರ ಎಲೆಲಿ ಉದ್ದುಲೆ ಎಡಿಯ ಹೇಳಿ .ದೇವರು ನಾವು ಮಾಡಿದ ಕರ್ಮಕ್ಕೆ ಅನುಗುಣವಾಗಿ ಅದರ ಬಲವಾಗಿ ಬರೆದಿರುತ್ತ.ಎಲೆ ಮೃದುವಾದ ಹರಿವ ವಸ್ತು ,ಇದರಲ್ಲಿ ರಜ್ಜ ಮಣ್ಣು ಧೂಳು ಆದ್ದರ   ಉದ್ದಿ ಸರಿ ಮಾಡುಲೆ ಎಡಿಗು ಆದರೆ ದೇವರು ತಲೆಲಿ ಬರದ್ದರ ಎಲೆಲಿ ಉದ್ದಿ ಸರಿಮಾಡುಲೆ ಎಡಿಯ.

ವಿಧಿಯ ಮುಂದೆ ಮನುಷ್ಯ ಯತ್ನ ಎಲೆಯಷ್ಟು ದುರ್ಬಲ ಹೇಳುದರ ಈ ನುಡಿಗಟ್ಟು ನಮ್ಮ ಭಾಷೆಲಿ ಇಪ್ಪ ತಿಳಿಸಿ ಕೊಡುತ್ತು.

Sunday 12 January 2014

ಸುಬ್ಬಿ ಇಂಗ್ಲೀಷು ಕಲ್ತದು -1984 ,ಮಹಿಳೆ ರಚಿಸಿದ ಮೊದಲ ಹವಿಗನ್ನಡ ನಾಟಕ



                             ಮನದಾಳದಿಂದ ಎರಡು ಮಾತು
ಹೌದು  .! ನಾನು ನಂಬಿದೆ  “ಸುಬ್ಬನ ಪಾತ್ರ ಮಾಡಿದ ಹುಡುಗಿಗೆ ದೊಡ್ಡ ಭವಿಷ್ಯ ಇದೆ “ ಸುಬ್ಬಿ ಇಂಗ್ಲೀಷು ಕಲ್ತದು “ಎಂಬ ನಾಟಕವನ್ನು ಬರೆದು ಅಭಿನಯಿಸಿ ಬಹುಮಾನ ಪಡೆದಾಗ ನಾನು ಓದುತ್ತಿದ್ದ  ಶ್ರೀ ವಾಣಿ ವಿಜಯ ಪ್ರೌಢ  ಶಾಲೆಯ ಯುವ ಜನೋತ್ಸವಕ್ಕೆ ಅಥಿತಿಯಾಗಿ ಆಗಮಿಸಿದ್ದ ನಿವೃತ್ತ ಶಿಕ್ಷಕರಾದ ವಿಶ್ವೇಶ್ವರ ಭಟ್ ನುಡಿದ ಮಾತನ್ನು  ನಾನು ಬಲವಾಗಿ ನಂಬಿದೆ. ನಂಬಿ ದೃಢವಾಗಿ ಮುಂದಡಿ ಇಟ್ಟೆ
ಈ ನಾಟಕವನ್ನು ನಾನು ಮೀಯಪದವಿನ ಶ್ರೀ ವಿದ್ಯಾ ವರ್ಧಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿಯಲ್ಲಿ  ಓದುತ್ತಿದ್ದಾಗ 1984ರಲ್ಲಿ   ಎಲ್ಲೋ ಓದಿದ/ಕೇಳಿದ  ಹಾಸ್ಯವನ್ನು ಆಧರಿಸಿ ರಚಿಸಿದ್ದೆ,ಆದರೆ ಇದರ ಮೂಲ ಕಥೆ /ಹಾಸ್ಯ /ನಾಟಕ ಯಾವುದೆಂದು ನನಗೆ ಈಗ ಮಾತ್ರವಲ್ಲ ,ಆಗಲೂ ತಿಳಿದಿರಲಿಲ್ಲ,ಯಾವುದೇ ಕೃತಿಯನ್ನು ಎದುರಿಗೆ ಇಟ್ಟುಕೊಂಡು ಹವ್ಯಕಕ್ಕೆ ಅನುವಾದ  ಮಾಡಿದ ಕೃತಿ ಇದಲ್ಲ ,ಮತ್ತು ಇದರ ಮೂಲ ಕಥೆ /ಹಾಸ್ಯ ಕೂಡ ನನ್ನ ಸ್ವಂತದ್ದು ಅಲ್ಲ ,ತೀರ ಚಿಕ್ಕ  ವಯಸ್ಸಿನಲ್ಲಿ ಅಂದರೆ ನಾನು ಏಳನೇ ತರಗತಿಯಲ್ಲಿ ,೧೯೮೪ರಲ್ಲಿ  ಓದುತ್ತಿದ್ದಾಗ ರಚಿಸಿದ ಹವ್ಯಕ ನಾಟಕ ಇದು. ಅದ್ದರಿಂದ ನನಗೆ ಇದರ ಮೂಲ ಕಥೆ ಎಲ್ಲಿಯದು ಎಂದು ತಿಳಿದಿಲ್ಲ ,ಆದರೆ ಇದು ಯಾವುದೇ ಕೃತಿಯ ಅನುವಾದವಲ್ಲ,ನಾನು ಕೇಳಿದ /ಓದಿದ ಹಾಸ್ಯ/ಕಥೆಯನ್ನು ನೆನಪಿಟ್ಟುಕೊಂಡು ರಚಿಸಿದ ಹವಿಗನ್ನಡದ ನಾಟಕವಿದು . ಮರು ವರ್ಷವೇ ಇದನ್ನು ಅಭಿನಯಿಸಿ ಶಾಲೆಯಲ್ಲಿ ಬಹುಮಾನ ಪಡೆದಿದ್ದೆವು!

ಗಡಿನಾಡು ಕಾಸರಗೋಡಿನ ಕೋಳ್ಯೂರು ಎಂಬ ಹಳ್ಳಿಯ  ಸಂಪ್ರದಾಯಸ್ಥ ಪುರೋಹಿತ ಮನೆತನ ವಾರಣಾಸಿಯ ಶ್ರೀ  ವೇ ಮೂ|| ನಾರಾಯಣ ಭಟ್ಟ ಮತ್ತು ಮತ್ತು ಸರಸ್ವತಿ ಅಮ್ಮ ದಂಪತಿಗಳ ಮಗಳಾಗಿ ಹುಟ್ಟಿದ ನನಗೆ ದೊಡ್ಡ ಕನಸುಗಳೇನೂ ಇರಲಿಲ್ಲ .”ಹುಡುಗಿಯರು ಏನು ಓದಿದರೇನು ?ಒಲೆ ಬೂದಿ ಒಕ್ಕುವುದು ತಪ್ಪದು”  ಎಂಬ ಮಾತು ಆಗ ಪ್ರಚಲಿತ ಇತ್ತು .
ಆದರೆ ನಮ್ಮ ಮೀಯಪದವಿನ ಶ್ರೀ ವಿದ್ಯಾ ವರ್ಧಕ ಶಾಲೆಯ ಶಿಕ್ಷಕರು ಬಹುಶ ಹಾಗೆ ಭಾವಿಸಿರಲಿಲ್ಲ ,ಆದ್ದರಿಂದಲೇ ನಮಗೆ ಪಾಠದೊಂದಿಗೆ ಹಾಡು ,ನೃತ್ಯ ,ನಾಟಕ ಮೊದಲಾದವುಗಳಲ್ಲಿ ನಮಗೆ ತರಬೇತಿ ನೀಡಿದರು .ಒಂದು ಹೆಜ್ಜೆ ಎತ್ತಿ ಇಡಲೂ ತಿಳಿಯದ ನಮಗೆ ನೃತ್ಯ ಕಲಿಸಿ ಬಾಲಕಲೋತ್ಸವಕ್ಕೆ ಕರೆದೊಯ್ದು ಸ್ಪರ್ಧೆಯಲ್ಲಿ ಬಹುಮಾನ ಗಳಿಸುವಂತೆ ಮಾಡಿದರು ನನ್ನ ಮೆಚ್ಚಿನ ಶಿಕ್ಷಕರಾದ ಶ್ರೀಯುತ ವಸಂತ ಮಾಸ್ಟರ್ ತೊಟ್ಟೆತ್ತೋಡಿ ಮತ್ತು ಶ್ರೀಮತಿ ಸರೋಜಾ ಟೀಚರ್ , ನನ್ನ ಅತಿ ಉತ್ಸಾಹ ,ತುಂಟತನಗಳನ್ನು ಉದ್ಧಟತನವೆಂದು  ಭಾವಿಸದೆ ನನ್ನನ್ನು ಸದಾ ಪ್ರೋತ್ಸಾಹಿಸಿದವರು ನನ್ನ ನೆಚ್ಚಿನ ಸಂಸ್ಕೃತ ಶಿಕ್ಷಕಿ ಶ್ರೀಮತಿ ಪುಷ್ಪವಲ್ಲಿ ಅವರು.
ಪ್ರತಿ ವರ್ಷ ವಾರ್ಷಿಕೋತ್ಸವ ಮಾಡಿ ಅದರಲ್ಲಿ ನಮಗೆ ನಾಟಕ ಡಾನ್ಸ್ ಗೆ ನನ್ನ ಅಭಿವ್ಯಕ್ತಿಗೆ ಪ್ರೋತ್ಸಾಹ ನೀಡಿದರು .ಅಲ್ಲಿ ನಾನು ,ನನ್ನ ಗೆಳತಿ ಹೇಮಮಾಲಿನಿ (ಪ್ರಸ್ತುತ ಇದೇ ಸಮಸ್ಥೆಯಲ್ಲಿ ಶಿಕ್ಷಕಿ ಆಗಿದ್ದಾರೆ) ಮತ್ತೆ ಇತರರು ಮಾಡಿದ ನೃತ್ಯ ಪಿಳ್ಳಂಗೋವಿಯ ಕೃಷ್ಣ (ನಾನು ಕೃಷ್ಣ ಆಗಿದ್ದೆ ) ಮತ್ತು ಯಮ ಗರ್ವ ಭಂಗ ನಾಟಕ (ಇದರಲ್ಲಿ ನಾನು ಬಲರಾಮ ,ಗೆಳತಿ ಹೇಮಮಾಲಿನಿ ಕೃಷ್ಣ ) ಇನ್ನು ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಕುಳಿತಿದೆ.ಇದು ನನ್ನ ಮುಂದಿನ ಸಾಧನೆಗಳಿಗೆ ಪ್ರೇರಕವಾಯಿತು ಎಂಬುದರಲ್ಲಿ ಯಾವುದೇ ಸಂಶಯ ಇಲ್ಲ..
ಆಗ ಶಾಲೆಯಲ್ಲಿ ನಾಟಕ ಅಭಿನಯ ಕಲಿತ ನಾನು ನಾಟಕವೆಂದರೆ ಏನು ಎಂದು ತಿಳಿದೆ.ಅಜ್ಜನ ಮನೆಯಲ್ಲಿ ಓದುತ್ತಿದ್ದ ನಾವು ಶಾಲೆಯಲ್ಲಿ ನಾಟಕ ಅಭಿನಯಿಸಿದ್ದನ್ನು ಮನೆಯಲ್ಲಿ ಪ್ರಯೋಗಿಸಲು ಸುರು ಮಾಡಿದೆವು .
ಆಗ ನಾನು ರಚಿಸಿದ ಕಿರುನಾಟಕ ಸುಬ್ಬಿ ಇಂಗ್ಲೀಷು ಕಲ್ತದು ,ಇದನ್ನು ವ್ಯವಸ್ಥಿತವಾಗಿ ಅಭಿನಯಸಿ ಮರು ವರ್ಷವೇ ನಾನು ವಾಣಿವಿಜಯ ಶಾಲೆಯಲ್ಲಿ ಬಹುಮಾನ ಪಡೆದೆ.ಮೀಯಪದವು ಶಾಲೆಯಲ್ಲಿ ಸಿಕ್ಕ ತರ ಬೇತಿ ಯಿಂದಾಗಿ ನಾನು ಸ್ವತಂತ್ರವಾಗಿ  ನಾಟಕ ರಚನೆ, ಅಭಿನಯ ಪ್ರಾರಂಭಿಸಿದೆ.
ಅನಂತರ ಶಾಲಾ ಕಾಲೇಜು ದಿನಗಳಲ್ಲಿ ಸುಮಾರು 10-12 ಕಿರು ನಾಟಕಗಳನ್ನು ರಚಿಸಿ ಅಭಿನಯಿಸಿ ಮೆಚ್ಚುಗೆಯನ್ನು ಪಡೆದೆ .
ಅದರಲ್ಲಿ ಹೆಚ್ಚು ಬಾರಿ ಪ್ರದರ್ಶನ ಗೊಂಡ ನಾಟಕ “ಸುಬ್ಬಿ ಇಂಗ್ಲೀಷು ಕಲ್ತದು”ಎನ್ನುವ ನನ್ನ ಹವಿಗನ್ನಡ ನಾಟಕ.ಅನೇಕ ಬಹುಮಾನಗಳು ಇದಕ್ಕೆ ಬಂದಿದೆ .ಸರಳವಾದ ಹಾಸ್ಯದೊಂದಿಗೆ ಇಂಗ್ಲಿಹ್ ಭಾಷೆಯ ವ್ಯಾಮೋಹ ಬೇಡ ಕನ್ನಡ ಕಸ್ತೂರಿ ಎನ್ನುವುದನ್ನು ಸಾರುವುದರೊಂದಿಗೆ ಬಾಲ್ಯ ವಿವಾಹದ ದುಷ್ಪರಿಣಾಮವನ್ನು ಸೂಕ್ಷ್ಮವಾಗಿ   ತಿಳಿಸುವುದು ಈ ನಾಟಕದ ಮೂಲ ಉದ್ದೇಶ.
ಇದನ್ನು ನಾನು ಹವಿಗ್ನಡದಲ್ಲಿ ರಚಿಸಿದ್ದಕ್ಕೆ ವಿಶೇಷವಾದ ಕಾರಣ ಏನೂ ಇಲ್ಲ ನಾವು 7-8 ಮೊಮ್ಮಕ್ಕಳು ಅಜ್ಜನ ಮನೆ ಹೊಸಮನೆಯಿಂದ ಶಾಲೆಗೆ ಹೋಗುತ್ತಿದ್ದೆವು,ನಾವು ಮನೆಯಲ್ಲಿ ಆಟಕ್ಕಾಗಿ ರಚಿಸಿದ ಪ್ರಹಸನ ಆದ ಕಾರಣ ಸಹಜವಾಗಿಯೇ ಇದು ನಮ್ಮ ಮಾತೃ ಭಾಷೆ ಹವ್ಯಕ ಕನ್ನಡಲ್ಲಿಯೇ ರಚಿತವಾಯಿತು.

 ಇದು ಮಹಿಳೆ ಬರೆದ ಮೊದಲ ಹವಿಗನ್ನಡ ನಾಟಕ ಎಂಬ ಚಾರಿತ್ರಿಕ ಮಹತ್ವವನ್ನು ಪಡೆಯುತ್ತದೆ ,ನನಗೆ  ಹವಿಗನ್ನಡದ ಮೊದಲ ನಾಟಕಗಾರ್ತಿ ಎಂಬ ಹೆಗ್ಗಳಿಕೆ ದೊರೆಯಬಹುದು ಎಂಬ ಊಹೆ ಮಾಡಲು ಕೂಡ ಅಸಾಧ್ಯವಾಗಿದ್ದ ಕಾಲ ಅದು!
ನನಗೆ ತುಂಬಾ ಸಮಯ ಇದು ಮಹಿಳೆ ರಚಿಸಿದ ಹವಿಗ್ನಡದ ಮೊದಲ ನಾಟಕ ಅಂತ ಗೊತ್ತಿರಲಿಲ್ಲ.
1997 ರಲ್ಲಿ ನಾವು ಶ್ರೀಮತಿ ಪುಷ್ಪ ಖಂಡಿಗೆ ,ಶ್ರೀಮತಿ ವಸಂತ ಲಕ್ಷ್ಮಿ ,ಶ್ರೀಮತಿ ರಾಜಿ ಬಾಲಕೃಷ್ಣ ,ಶ್ರೀಮತಿ ರಾಜೇಶ್ವರಿ ಮೊದಲಾದ ಅನೇಕ ಹವ್ಯಕ ಮಹಿಳೆಯರು ಸೇರಿ ಇದನ್ನು ಮಂಗಳೂರು ಹವ್ಯಕ ಮಹಾ ಸಭೆಯ ವಾರ್ಷಿಕೋತ್ಸವದಂದು ಪ್ರದರ್ಶನ ಮಾಡಿ ಮೆಚ್ಚುಗೆ ಗಳಿಸಿದ್ದೆವು ..
ಇದರೊಂದಿಗೆ ನನಗೆ ಒಂದು ಸಿಹಿ ನೆನಪುನೆನಪಾಗುತ್ತಿದೆ.ಅಂದು ಸುಬ್ಬಿ ಇಂಗ್ಲೀಷು ಕಲ್ತದು ನಾಟಕಕ್ಕೆ ನಾನು (ಸುಬ್ಬ )ಮತ್ತು ಶ್ರೀಮತಿ ರಾಜೇಶ್ವರಿ  (ಗೆಳೆಯ )ಸೂಟ್ ಬೂಟ್ ಧರಿಸಿ ಗಂಡು ವೇಷ ಹಾಕಿ, ನಾಟಕಕ್ಕೆ ಇನ್ನು ಸ್ವಲ್ಪ ಹೊತ್ತು ಇದ್ದ ಕಾರಣ ಹೊರಗೆ ಅಡ್ದಾಡುತ್ತಿದ್ದೆವು. ಆಗ ಹವ್ಯಕ ಸಭೆಯ ಯಾರೋ ಒಬ್ಬರು ನಮ್ಮ ನಾಟಕ ತಂಡದ ಶ್ರೀಮತಿ ರಾಜಿ ಬಾಲಕೃಷ್ಣರ ಹೈ ಸ್ಕೂಲ್ ಓದುತ್ತಿದ್ದ  ಪುಟ್ಟ ಹುಡುಗ ಮಗ ಮಿಥುನ್ ಹತ್ತಿರ ನಮ್ಮಿಬರನ್ನು ತೋರಿಸಿ” ಓ ಅವು ಇಬ್ರು ನಡವಗ ರಜ್ಜ ಹೆಮ್ಮಕ್ಕಳ ಹಾಂಗೆ ಕಾಣುತ್ತು ಅಲ್ಲದ? ಎಂದು ಹೇಳಿದಾಗ ,ನಮ್ಮ ಪರಿಚಯವಿದ್ದ ಮಿಥುನ್ ಅವರು ಗಂಡಸರಲ್ಲ ಹೆಂಗಸರು ಎಂದು ಹೇಳಿದನಂತೆ ,ಇದನ್ನು ಬಂದು ಮಿಥುನ್ ನಮಗೆ ತಿಳಿಸಿದಾಗ ನಮಗೂ ಹೆಮ್ಮೆ ಆಯಿತು !ಅಂದಿನ ಪುಟ್ಟ ಹುಡುಗ ಮಿಥುನ್ ಕಾಕುಂಜೆ, IIM ನಲ್ಲಿ MBA ಓದಿ ಖ್ಯಾತ ಕಂಪನಿಯಲ್ಲಿ ಕೆಲಸ ಮಾಡಿ ಅನುಭವ ಪಡೆದು ಈಗ ಸ್ವಂತ ಬ್ಯುಸಿನೆಸ್ ಮಾಡುತ್ತಿರುವ ಸದ್ಗೃಹಸ್ಥ ಆಗಿದ್ದಾನೆ .
ಹವ್ಯಕ ಸಭೆಯ ವಾರ್ಷಿಕೋತ್ಸವದಂದು ನಾವು ಸುಬ್ಬಿ ಇಂಗ್ಲೀಷು ಕಲ್ತದು ಹೇಳುವ ನಾಟಕ ಅಭಿನಯಿಸಿದ ಸುದ್ಧಿ ಹವ್ಯಕ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.
ಈಗ್ಗೆ ಕೆಲವು 5-6  ವರ್ಷಗಳ ಹಿಂದೆ ಅಖಿಲ ಭಾರತ  ಹವ್ಯಕ ಮಹಾ ಸಭೆಯು ಈ ತನಕ ಹವ್ಯಕ ಭಾಷೆಯಲ್ಲಿ ರಚನೆಯಾದ ಎಲ್ಲ ನಾಟಕಗಳನ್ನು  ಒಟ್ಟಿಗೆ ಸೇರಿಸಿ ಒಂದು ನಾಟಕ ಸಂಕಲನ ತರಲು ನಿರ್ಧರಿಸಿ ಎಲ್ಲೆಡೆಯಿಂದ ಹವ್ಯಕ ನಾಟಕಗಳ ಬಗ್ಗೆ ಮಾಹಿತಿ ಸಂಗ್ರಹಿಸ ತೊಡಗಿದರು
 ಆಗ ಹವ್ಯಕ ಅಧ್ಯಯನ ಕೇಂದ್ರದ ಪ್ರಧಾನ ನಿರ್ದೇಶಕರಾಗಿದ್ದ ಶ್ರೀ ನಾರಾಯಣ ಶಾನು ಭಾಗರ ಗಮನಕ್ಕೆ ಹಳೆಯ ಹವ್ಯಕ ಪತ್ರಿಕೆಯಲ್ಲಿ ಪ್ರಕಟವಾದ “ಲಕ್ಷ್ಮೀ ಜಿ ಪ್ರಸಾದ ರಚಿಸಿದ ಸುಬ್ಬಿ ಇಂಗ್ಲೀಷು ಕಲ್ತದು ಎಂಬ ನಾಟಕವನ್ನು ಹವ್ಯಕ ಮಹಿಳೆಯರು ವಾರ್ಷಿಕೋತ್ಸವದಂದು ಅಭಿನಯಿಸಿದರು “ಎಂಬ ನಮ್ಮ ನಾಟಕ ಪ್ರದಶನ ಸುದ್ದಿ ಗಮನಕ್ಕೆ ಬಂತು.
ಆಗ ಅದಕ್ಕೆ ಮೊದಲು  ಮಹಿಳೆಯರು ಯಾರೂ ಬರೆದಿಲ್ಲ ,ಈ ನಾಟಕ ಮಹಿಳೆ ಬರೆದ ಮೊದಲ ನಾಟಕ ಎಂದು ಎಂಬುದನ್ನು ತಿಳಿದು ಅವರು ಆ ನಾಟಕವನ್ನು ಪ್ರಕಟಿಸುವ ಸಲುವಾಗಿ ನನ್ನ ಬಗ್ಗೆ ಮಂಗಳೂರು ಹವ್ಯಕ ಸಭೆಯ ಪದಾಧಿಕಾರಿಗಳನ್ನು ಸಂಪರ್ಕಿಸಿದರು.ಆದರೆ ಆ ಸಮಯಕ್ಕಾಗುವಾಗ ನಾವು ಉದ್ಯೋಗ ನಿಮಿತ್ತ ಮಂಗಳೂರು ಬಿಟ್ಟು ಬೆಂಗಳೂರು ಸೇರಿದ್ದವು.ಹಾಗೆ ಅವರು “ಈಗ ಲಕ್ಷ್ಮೀ ಜಿ ಪ್ರಸಾದ ಮಂಗಳೂರಿನಲ್ಲಿ ಇಲ್ಲ ಬೆಂಗಳೂರಿನಲ್ಲಿ ಎಲ್ಲೋ ಇದ್ದಾರೆ” ಎಂಬ ಮಾಹಿತಿ ನೀಡಿದರು.

ಆಗ ನಾರಾಯಣ ಶಾನುಭಾಗರು ನಾನೆಲ್ಲಿದ್ದೇನೆ ಎಂದು ತಿಳಿದು ಸುಬ್ಬಿ ಇಂಗ್ಲೀಷು ಕಲ್ತದು ನಾಟಕದ ಪ್ರತಿ ಸಂಗ್ರಹಿಸುವ ಜವಾಬ್ದಾರಿಯನ್ನು ಶ್ರೀಯುತ ಕೆ.ಪಿ  ರಾಜಗೋಪಾಲ ಕನ್ಯಾನ ಇವರಿಗೆ ವಹಿಸಿದರು. ಬೆಂಗಳುರಿನಂಥ ದೊಡ್ಡ ಸಾಗರಲ್ಲಿ ಸಣ್ಣ ಚುಕ್ಕೆಯಷ್ಟೂ ಅಲ್ಲದ ನನ್ನನ್ನು ಹುಡುಕುವುದು ಅವರ ಪಾಲಿಗೆ ನಿಜವಾಗಿಯೂ ಸಾಹಸದ ವಿಚಾರವೇ ಸರಿ !ಅನೇಕ ಸಂಘ ಸಂಸ್ಥೆ ಹಾಗೂ ಯಕ್ಷಗಾನ ಸೇರಿದಂತೆ ಅನೇಕ ಕಾರ್ಯಕರಮಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ಅವರು ತಮ್ಮ ಪರಿಚಯದ ಸಂಘ ಸಂಸ್ಥೆಯ ಸ್ನೇಹಿತರಲ್ಲಿ  ಲಕ್ಷ್ಮೀ ಜಿ ಪ್ರಸಾದ ಎಂಬವರು ತಿಳಿದಿದೆಯೇ ಎಂದು ವಿಚಾರಿಸಿದರು .ಹಾಗೆಯೇ ನಾನು ಪಿಎಚ್. ಡಿ ಅಧ್ಯಯನ ಮಾಡುತ್ತಿದ್ದ ನಮ್ಮ ಸ್ನಾತಕೋತ್ತರ ಸಂಶೋಧನಾ ಅಧ್ಯಯನ ಕೇಂದ್ರ” ಬಿ ಎಂ ಶ್ರೀ ಸ್ಮಾರಕ ಪ್ರತಿಷ್ಠಾನದ ಮುಖ್ಯಸ್ಥರಾದ ಡಾ.ಗೀತಾಚಾರ್ಯ ಅವರಲ್ಲಿ ನನ್ನ ಬಗ್ಗೆ ವಿಚಾರಿಸಿದರು .ಆಗ ಅವರು ಲಕ್ಷ್ಮೀ ಜಿ ಪ್ರಸಾದ ಅಂತ ಯಾರು ಗೊತ್ತಿಲ್ಲ ,ಆದರೆ ನಮ್ಮಲ್ಲಿ ಲಕ್ಷ್ಮಿ. ವಿ ಎನ್ನುವ ಮಹಿಳೆ ಪಿಎಚ್.ಡಿ ಅಧ್ಯಯನ ಮಾಡುತ್ತಿದ್ದಾರೆ ಎಂದು ತಿಳಿಸಿ ನನ್ನ ಫೋನ್ ನಂಬರ್ ನೀಡಿದರು
ಅದೊಂದು ಸುದಿನ ಶ್ರೀಯುತ ರಾಜಗೋಪಾಲ ಕನ್ಯಾನ ಅವರು ಫೋನ್ ಮಾಡಿ “ಲಕ್ಷ್ಮೀ ಜಿ ಪ್ರಸಾದ ಅಂದ್ರೆ ನೀವೇನಾ ?”ಎಂದು ಕೇಳಿದರು.ಹೌದು ಎಂದು ತಿಳಿಸಿದೆ . ಆಗ ಸುಬ್ಬಿ ಇಂಗ್ಲೀಷು ಕಲ್ತದು ನಾಟಕ ನೀವೇ ಬರೆದದ್ದ ?ಎಂದು ವಿಚಾರಿಸಿ ನಮ್ಮ ಮನೆ ವಿಳಾಸ ಕೇಳಿ ನಮ್ಮ ಮನೆಗೆ ಬಂದರು .
ನಾಟಕ ರಚನೆಯ ಕಾಲ ಮತ್ತಿತರ ಮಾಹಿತಿ ಪಡೆದು “ಈಗ ತಿಳಿದು ಬಂದ ಮಟ್ಟಿಗೆ ಇದೇ ನಾಟಕ ಮಹಿಳೆ ರಚಿಸಿದ ಮೊದಲ ಹವಿಗನ್ನಡ ನಾಟಕ ಇದನ್ನು ಹವ್ಯಕ ನಾಟಕ ಸಂಕಲನದಲ್ಲಿ ಪ್ರಕಟಿಸುತ್ತೇವೆ ,ಅದರ ಹಸ್ತ ಪ್ರತಿ ಇದೆಯಾ? ಎಂದು ಕೇಳಿದರು ಮುಂದೆ ಆ ನಾಟಕದ ಹಸ್ತ ಪ್ರತಿ ಹುಡುಕಿ ಅದನ್ನು ನಕಲು ಮಾಡಿ ಅವರಿಗೆ ತಲುಪಿಸಿದೆ .ಮುಂದೆ ಕಾರಣಾಂತರಗಳಿಂದ ಹವ್ಯಕ ನಾಟಕ ಸಂಕಲನದಲ್ಲಿ ಪ್ರಕಟವಾಗಲಿಲ್ಲ .
ಆದರೆ ಕೆ ಪಿ ರಾಜ ಗೋಪಾಲ ಕನ್ಯಾನ ಅವರ ಪರಿಚಯ  ವ್ಯರ್ಥ ಆಗಲಿಲ್ಲ ,ಸಾಕಷ್ಟು ಪುಸ್ತಕ ರಚನೆ ಮತ್ತು ಪ್ರಕಟಣೆಯಲ್ಲಿ ಅನುಭವ ಇದ್ದ ಸಹೃದಯಿಗಳಾದ ಅವರು ನನ್ನ ಎಂಫಿಲ್  ಥೀಸಿಸ್ ಅನ್ನು ನೋಡಿ ಅದನ್ನು ಅವರ ಪರಿಚಿತರಾದ ಹರೀಶ ಎಂಟರ್ಪ್ರೈಸಸ್ ಪ್ರಕಾಶಕರ ಮೂಲಕ  ಪ್ರಕಟನೆ ಮಾಡಿಸಿ ಕೊಟ್ಟರು .ಹೀಗೆ ಆಕಸ್ಮಿಕವಾಗಿ ನನ್ನ ಮೊದಲ ಸಂಶೋಧನಾ ಕೃತಿ  ಇವರ ಪ್ರೇರಣೆ ಮತ್ತು ಪ್ರಯತ್ನದಿಂದಾಗಿ “ದೈವಿಕ ಕಂಬಳ ಕೋಣ “ನನ್ನ ಮೊದಲ ಸಂಶೋಧನಾ ಕೃತಿ  ಪ್ರಕಟಗೊಂಡು ಬೆಳಕಿಗೆ ಬಂತು .ಇದು ನನ್ನ ಮುಂದಿನ ಸಂಶೋಧನಾ ಪ್ರಕಟಣೆಗಳಿಗೆ ಅಡಿಪಾಯ ಹಾಕಿ ಕೊಟ್ಟಿತು.
ನಾನು ಸುಬ್ಬಿ ಇಂಗ್ಲೀಷು ಕಲ್ತದು ಎಂಬ ನಾಟಕ ಅಲ್ಲದೆ ಬೇರೆ 10-12 ನಾಟಕಗಳನ್ನು ರಚಿಸಿದ್ದೇನೆ . ನೀರಕ್ಕನ ಮನೆ ಕಣಿವೆ ,ಹಸಿರು ಕರಗಿದಾಗ ..,ಈಜೋ ಮಂಜೊಟ್ಟಿ ಗೋಣ ,ಎಂಬ ಮೂರು ಕಿರು ನಾಟಕಗಳು  ಇದರೊಂದಿಗೆ ಇಲ್ಲಿವೆ .
ಮದಲಿಂಗನ ಕಣಿವೆ ಎಂಬುದು ತುಮಕೂರು ಬಳಿಯ ಚಿಕ್ಕನಾಯಕನ ಹಳ್ಳಿಗೆ ಹೋಗುವ ದಾರಿಯಲ್ಲಿ ಸಿಗುವ ಒಂದು ಕಣಿವೆ .ಇಲ್ಲಿನ ಐತಿಹ್ಯವನ್ನು ಆಧರಿಸಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಮದಲಿನಗನ ಕಣಿವೆ ಎಂಬ ಕಥನ ಕಾವ್ಯವನ್ನು ರಚಿಸಿದ್ದಾರೆ .ಇದರ ಪ್ರೇರಣೆಯಿಂದ  “ನೀರಕ್ಕನ ಮನೆ ಕಣಿವೆ” ನಾಟಕವನ್ನು ರಚಿಸಿದ್ದೇನೆ .ಮದಲಿಂಗನ ಕಣಿವೆಯ ಕಥೆ ಮದಲಿಂಗ ಸಾಯುವಲ್ಲಿಗೆ ಮುಕ್ತಾಯವಾಗುತ್ತದೆ .ಇಲ್ಲಿ ಅದು ಮುಂದುವರೆದು ನೀರಿನ ಸಂರಕ್ಷಣೆಗೆ ಪ್ರೆರಕವಾಗುವಂತೆ ಮಾಡುತ್ತದೆ.ನನ್ನ ವಿದ್ಯಾರ್ಥಿಗಳಿಗಾಗಿ ರಚಿಸಿದ ನಾಟಕ ಇದು ,ಇದು ಯಶಸ್ವಿಯಾಗಿ  ಪ್ರದರ್ಶನಗೊಂಡಿದೆ 
ಹಸಿರು ಕರಗಿದಾಗ ..ಪರಿಸರ ಸಂರಕ್ಷಣೆ ಯ ಮಹತ್ವದ ಸಂದೇಶ ಕೊಡುವ ನಾಟಕ.ಈ ನಾಟಕವನ್ನು ನನ್ನ ವಿದ್ಯಾರ್ಥಿಗಳು ಅಭಿನಯಿಸಿ ಬಹುಮಾನಗಳನ್ನು ಪಡೆದಿದ್ದಾರೆ
ಈಜೋ ಮಂಜೊಟ್ಟಿ ಗೋಣ..ತುಳುನಾಡಿನಲ್ಲಿ ಪ್ರಚಲಿತವಿರುವ ಇದೇ ಹೆಸರಿನ ಪ್ರಸಿದ್ಧ ಪಾಡ್ದನದ ಕಥೆಯನ್ನು ಆಧರಿಸಿ ರಚಿಸಿದ ನಾಟಕ.ನಾನು ಸಂಗ್ರಹಿಸಿದ ಈ ಪಾಡ್ದನದದಲ್ಲಿ ಧೂಮಾವತಿ ದೈವಕ್ಕೆ ಹೇಳಿಕೊಂಡ ಹರಕೆಯನ್ನು ಮರೆತು ಅದೇ ಮುಂಡ್ಯೆಯ ಹಲಸಿನ ಹಣ್ಣನ್ನು ಕೊಯ್ದು ತಿಂದು ಕೋಣಗಳಿಗೆ ಹಾಕಿರುವ ಕಥಾನಕ ಇದೆ.ಹರಿಕೆಯನ್ನು ಮರೆತವರಿಗೆ ತಕ್ಕ ಶಿಕ್ಷೆ ಯನ್ನು ಭೂತಗಳು ವಿಧಿಸುವುದು ತುಳು ಸಂಸ್ಕೃತಿಯಲ್ಲಿ ಸಾಮಾನ್ಯ  ವಿಚಾರ .ಅಂತೆಯೇ ಈ ದೈವದ ಆಗ್ರಹಕ್ಕೆ ತುತ್ತಾಗಿ ಕೋಣ ಮತ್ತು ಮೂಲದ ಬಬ್ಬು ಮಾಯವಾಗಿದ್ದಾನೆ ಎಂಬ ಸೂಚನೆ ಈ ಪಾದ್ದನದಲ್ಲಿದೆ ,ವಾಸ್ತವಿಕ ನೆಲೆಯಲ್ಲಿ ಹೇಳುವುದಾದರೆ ಇದು ವರ್ಗ ಸಂಘರ್ಷದ ಕಥಾನಕ ,ಅಲೌಕಿಕತೆ ಮತ್ತು ವಾಸ್ತವಿಕತೆ ಎರಡನ್ನು ಸಮನ್ವಯ ಮಾಡಿ ,ಒಂದಷ್ಟು ಕಲ್ಪನೆ ಸೇರಿಸಿ ಈ ನಾಟಕವನ್ನು ರಚಿಸಲಾಗಿದೆ .
ಬೀಜವೊಂದು ಮೊಳೆತು ಗಿಡವಾಗಿ ಮರವಾಗಿ ಹಣ್ಣುಗಳನ್ನು ಕೊಡಬೇಕಾದರೆ ಅದಕ್ಕೆ ತುಂಬಾ ಪೋಷಣೆ ಬೇಕಾಗುತ್ತದೆ.ಹಾಗೆಯೇ ಪ್ರತಿಭಾ ವಿಕಸನಕ್ಕೂ ಅಂಥದೇ ಪ್ರೋತ್ಸಾಹ ಅಗತ್ಯವಾಗಿ ಬೇಕಾಗುತ್ತದೆ.ನನಗೆ ಅಂಥಹ ಪ್ರೋತ್ಸಾಹವನ್ನು ನೀಡಿ ನನ್ನನ್ನು ಬೆಳೆಸಿದವರು ಅನೇಕರು ಇದ್ದಾರೆ .ಎಲ್ಲರನ್ನು ಈ ತಂಪು ಹೊತ್ತಿನಲ್ಲಿ ನೆನೆಯುವುದು ನನ್ನ ಆದ್ಯ ಕರ್ತವ್ಯ.
ಮೊದಲಿಗೆ ಮೀಯಪದವಿನ ಶ್ರೀ ವಿದ್ಯಾವರ್ಧಕ ಶಾಲೆಯ ಶಿಕ್ಷಕರಾದ ಮೀಯಪದವಿನ ಶ್ರೀ ವಿದ್ಯಾ ವರ್ಧಕ ಹಿರಿಯ ಪ್ರಾಥಮಿಕ ಶಾಲೆಯ  ಒಲವಿನ ಗುರುಗಳಾದ ಶ್ರೀಮತಿ ಸರೋಜಾ  ,ಶ್ರೀಮತಿ  ಪುಷ್ಪವಲ್ಲಿ ,  ಶ್ರೀ ವಸಂತ   ಭಟ್ ತೊಟ್ಟೆತ್ತೊಡಿ,ಶ್ರೀ ಶ್ರೀಧರ  ರಾವ್ ,ಶ್ರೀ ಮಾಧವ,  ಶ್ರೀ ಶ್ರೀನಿವಾಸ ಭಟ್ ,ಶ್ರೀ ಶಿವರಾಮ ನಾವಡ ,ಶ್ರೀಮತಿ ವೇದವಲ್ಲಿ ,ಶ್ರೀ ಶಿವರಾಮ ಪದಕ್ಕಣ್ಣಾಯ ,ಶ್ರೀ ಗೋಪಾಲ ಕೃಷ್ಣ ಭಟ್ ಮಿತ್ತಾಳ,ಶ್ರೀ ವಿಶ್ವನಾಥ ಭಂಡಾರಿ   ಹಾಗೂ  ನನ್ನ ಎಲ್ಲ ಗುರುಗಳಿಗೆ ನಾನು ಸದಾ ಋಣಿಯಾಗಿದ್ದೇನೆ. ಪ್ರಸ್ತುತ ಇಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಬಾಲ್ಯದ ಗೆಳತಿ ಶ್ರೀಮತಿ ಹೇಮಮಾಲಿನಿ ,ಆತ್ಮೀಯರಾದ ಶ್ರೀ ಮಹಾಬಲೇಶ್ವರ ಭಟ್ (ಸಂತೋಷ್ ಭಾವ ), ,ಶ್ರೀಮತಿ ನಳಿನಿ,  ಶ್ರೀಮತಿ ಅನುರಾಧ (ನನ್ನ ಗೆಳತಿ ಶೈಲಜಾರ ಅಕ್ಕ ),ರಂಜಿತ್ ಮೊದಲಾದ ಎಲ್ಲರಿಗೂ ವಂದನೆಗಳು.
ನನ್ನೆಲ್ಲ ಸಾಹಿತ್ಯ ಸಂಶೋಧನಾ ಚಟುವಟಿಕೆಗಳಿಗೆ ನಿರಂತರ ಬೆಂಬಲ ನೀಡುತ್ತಿರುವ ಡಾ.ಅಮೃತ ಸೋಮೇಶ್ವರ,ಡಾ.ವಾಮನ ನಂದಾವರ ,ಡಾ.ಪುರುಷೋತ್ತಮ ಬಿಳಿಮಲೆ, ಪ್ರೊ||ಮುರಳಿಧರ ಉಪಾಧ್ಯ  ,ಡಾ.ಸುರೇಶ ಪಾಟೀಲ್ ಅವರಿಗೆ ಮನಪೂರ್ವಕ ಕೃತಜ್ಞತೆಗಳು.
ಈ ನಾಟಕ ಸಂಕಲನಕ್ಕೆ ಸೂಕ್ತವಾದ ಮುನ್ನುಡಿ ಬರೆದು ಕೊಟ್ಟ ಆಕಾಶವಾಣಿ ಮಂಗಳೂರು ಕೇಂದ್ರದ ನಿರ್ದೇಶಕರಾದ  ಡಾ.ವಸಂತ ಕುಮಾರ ಪೆರ್ಲ ಹಾಗು ಬೆನ್ನುಡಿಯನ್ನು ನೀಡಿ ಪ್ರೋತ್ಸಾಹಿಸಿದ  ಪ್ರೊ|| ಮುರಳೀಧರ ಉಪಾಧ್ಯ ಇವರಿಗೆ ಹೃತ್ಪೂರ್ವಕ ಧನ್ಯವಾದಗಳು.
ನನ್ನ ಸಾಹಿತ್ಯ ಸಂಶೋಧನೆಗಳ ಪ್ರಕಟಣೆಗೆ ಬಲವಾದ ಅಡಿಪಾಯ ಹಾಕಿ ಕೊಟ್ಟಿರುವ,”ಸುಬ್ಬಿ ಇಂಗ್ಲೀಷು ಕಲ್ತದು” ಹೇಳುವ ನನ್ನ ನಾಟಕ ಮಹಿಳೆ ಬರೆದ ಮೊದಲ ಹವಿಗನ್ನಡ ನಾಟಕ ಎಂಬುದನ್ನು ತಿಳಿಸಿ ಕೊಟ್ಟ,ಹವ್ಯಕ ಅಧ್ಯಯನ ಕೇಂದ್ರದ ನಿರ್ದೆಶಕರಾಗಿದ್ದ ಶ್ರೀ ನಾರಾಯಣ ಶಾನುಭಾಗ ಮತ್ತು ನನ್ನ ಸಾಹಿತ್ಯ ಸಂಶೋಧನೆಗಳ ಪ್ರಕಟಣೆಗೆ ಬಲವಾದ ಅಡಿಪಾಯ ಹಾಕಿ ಕೊಟ್ಟಿರುವ  ಕೃತಿಯ ಬಗ್ಗೆ   ತುಂಬು ಪ್ರೋತ್ಸಾಹದ  ಮಾತುಗಳನ್ನಾಡಿದ ಸಹೋದರ ಸಮಾನರಾದ ಶ್ರೀ ಕೆ ಪಿ ರಾಜಗೋಪಾಲ ಕನ್ಯಾನ ಇವರಿಗೆ ಮನಃ ಪೂರ್ವಕ ಕೃತಜ್ಞತೆಗಳು.
1997 ರಲ್ಲಿ ಮಂಗಳೂರು ಹವ್ಯಕ ಸಭೆಯಲ್ಲಿ ನಾವು ಪ್ರದರ್ಶಿಸಿದ ಸುಬ್ಬಿ ಇಂಗ್ಲೀಷು ಕಲ್ತದು ನಾಟಕದಲ್ಲಿ ಅಭಿನಯಿಸಿದ,ಅಂದಿನ ಫೋಟೋಗಳನ್ನು ಜತನದಿಂದ ಕಾಯ್ದಿಟ್ಟು ,ಈ ಕೃತಿಯಲ್ಲಿ ಬಳಸಲು ಅನುವು ಮಾಡಿಕೊಟ್ಟ ಶ್ರೀಮತಿ ಪುಷ್ಪಾ ಖಂಡಿಗೆ,ಶ್ರೀಮತಿ ರಾಜಿ ಬಾಲಕೃಷ್ಣ ಕಾಕುಂಜೆ,ಶ್ರೀಮತಿ ರಾಜೇಶ್ವರಿ ಇವರಿಗೆ ಮನಃ ಪೂರ್ವಕ ಕೃತಜ್ಞತೆಗಳು.ನಾವೆಲ್ಲಾ ಒಟ್ಟಾಗಿ ಫೋಟೋ ತೆಗೆಸಿಕೊಳ್ಳುವ ,ನನಗೆ ಬೇಕಾಗಿದ್ದ 17 ವರ್ಷ ಹಿಂದೆ ನಾವು ಅಭಿನಯಿಸಿದ ಈ ನಾಟಕದ ಹಳೆಯ  ಫೋಟೋ ಸಂಗ್ರಹಕ್ಕೆತುಂಬು ಮನದಿಂದ  ಸಹಕರಿಸಿದ ಶ್ರೀಮತಿ ವಸಂತ ಲಕ್ಷ್ಮಿ ಇವರಿಗೆ ಧನ್ಯವಾದಗಳು
ನನ್ನ ನಾಟಕಗಳ ಹಾಡಿಗೆ ಸ್ವರ ಸಂಯೋಜನೆ ಮಾಡಿ ಬೆಂಬಲಿಸಿದ ಶ್ರೀಮತಿ ಶಾಂತಾ ಆಚಾರ್ ಅವರನ್ನು ಮನದುಂಬಿ ನೆನೆಯುತ್ತೇನೆ.
.ನನ್ನ ಸಂಶೋಧನಾ ಹಾಗು ಸಾಹಿತ್ಯಿಕ ಬರವಣಿಗೆ ಮತ್ತು ಪ್ರಕಟಣೆಗೆ  ನಿರಂತರ ಬೆಂಬಲ ಹಾಗೂ  ಪ್ರೋತ್ಸಾಹ ನೀಡುತ್ತಿರುವ ಪದ್ಯಾಣ ರಾಮಚಂದ್ರ ಭಟ್ ಇವರಿಗೆ  ನಾನು ಸದಾ ಋಣಿಯಾಗಿದ್ದೇನೆ.
ನನ್ನೆಲ್ಲ ಭಾವನೆಗಳನ್ನು ಹಂಚಿಕೊಂಡು ನಿರಂತರ ಬೆಂಬಲ ನೀಡುತ್ತಿರುವ ಗೆಳತಿಯರಾದ ಶ್ರೀಮತಿ ಭಾರತಿ ಮತ್ತು  ಶ್ರೀಮತಿ ಅನುಪಮ ಪ್ರಸಾದ ಇವರಿಗೆ ಆತ್ಮೀಯ ನಮನಗಳು .
ನನ್ನ ಸಾಹಿತ್ಯ ಸಂಶೋಧನಾ ಚಟುವಟಿಕೆಗಳನ್ನು ಮೆಚ್ಚಿ ಪ್ರೋತ್ಸಾಹಿಸಿದ ಫೇಸ್ ಬುಕ್ ಗೆಳೆಯ ಗೆಳತಿಯರಿಗೆ ಅನಂತಾನಂತ ಕೃತಜ್ಞತೆಗಳು.
ನಾನು ಚಿಕ್ಕಂದಿನಲ್ಲಿ ದೊಡ್ಡಮ್ಮನ ಮಕ್ಕಳೊಂದಿಗೆ  ನನ್ನ ಅಜ್ಜನ ಮನೆಯಲ್ಲಿ ಓದಿದ್ದು ,ಆ ಸಮಯದಲ್ಲಿ ನನ್ನ ಸೃಜನ ಶೀಲ ಚಟುವಟಿಕೆಗಳಿಗೆ ಅಜ್ಜ ದಿ|| ಶ್ರೀ ಈಶ್ವರ ಭಟ್ಟ ಹೊಸಮನೆ ಮತ್ತು ಅಜ್ಜಿ ಶ್ರೀಮತಿ ಲಕ್ಷ್ಮಿ ಅಮ್ಮ ಅವರ ಪೂರ್ಣ ಬೆಂಬಲ ನನಗಿತ್ತು ,ಜೊತೆಗೆ ದೊಡ್ಡಮ್ಮ ಶ್ರೀಮತಿ ಗೌರಮ್ಮ ಮತ್ತು ಅವರ ಮಕ್ಕಳಾದ, ನನ್ನ ಸಹೋದರ ಸಹೋದರಿಯರ ಪ್ರೋತ್ಸಾಹ ನನಗೆ ಸಿಕ್ಕಿತ್ತು .ಸುಬ್ಬಿ ಇಂಗ್ಲೀಷು ಕಲ್ತದು ನಾಟಕದ ಮೊದಲ ಪ್ರಯೋಗ ನಮ್ಮ ಅಜ್ಜನ ಮನೆಯಲ್ಲಿಯೇ ಆಗಿತ್ತು ,ಇಂಥ ಎಲ್ಲ ಚಟುವಟಿಕೆಗಳಿಗೆ ನನಗೆ ನನ್ನ ದೊಡ್ಡಮ್ಮನ ಮಗಳು ತಂಗಿ ರಾಜೇಶ್ವರಿ ಸದಾ ಒಡ ನಾಡಿ ಆಗಿದ್ದನ್ನು ನಾನೆಂದೂ  ಮರೆಯಲಾರೆ.ಜೊತೆ ಜೊತೆಯಾಗಿ ಅಡಿ ಬೆಳೆದ ದೊಡ್ಡಮ್ಮನ ಮಗ ಅಣ್ಣ  ಕೆ ವಿ ರಾಧಾ ಕೃಷ್ಣ ಭಟ್ ,,ಅಕ್ಕ ಪಾರ್ವತಿ,ಅಕ್ಕ ಜಯಲಕ್ಷ್ಮಿ ,ತಂಗಿಯರಾದ ರಾಜೇಶ್ವರಿ ಮತ್ತು ಸರಸ್ವತಿ ಅವರ ಜೊತೆಗಿನ ಬಾಲ್ಯದ ಒಡನಾಟ ನನ್ನ ಮನದಲ್ಲಿ ಹಸಿರಾಗಿದೆ .  ಇವರೆಲ್ಲರನ್ನು  ಈ ತಂಪು ಹೊತ್ತಿನಲ್ಲಿ ನಾನು ಮನಪೂರ್ವಕವಾಗಿ ನೆನೆಯುತ್ತೇನೆ .
ಸದಾ ಬೆಂಬಲ ನೀಡುತ್ತಿರುವ,ನನ್ನ ಸಂಶೋಧನಾ ಕಾರ್ಯಗಳಿಗೆ ಬೇಕಾದ ಪರಿಕರಗಳಾದ ಕ್ಯಾಮೆರಾ  ಹಾನ್ದಿಕ್ಯಾಮ್ ಮೊದಲಾದ ಬೆಲೆ ಬಾಳುವ ವಸ್ತುಗಳನ್ನು ಸಕಾಲದಲ್ಲಿ ಒದಗಿಸಿಕೊಟ್ಟು ಎಲ್ಲ ಸಂದರ್ಭಗಳಲ್ಲೂ ಜೊತೆಯಾಗಿ ನಿಂತು ನನ್ನನ್ನು ಎಲ್ಲಿಯೂ ಸೋಲಲು ಬಿಡದೆ ,ಸದಾ ನನ್ನ ಒಳಿತಿಗಾಗಿ , ತುಂಬು ಮನದಿಂದ ಪ್ರೋತ್ಸಾಹಿಸಿದ  ನನ್ನ ಅಣ್ಣ ಕೃಷ್ಣ ಭಟ್ ವಾರಣಾಸಿ ,ತಮ್ಮಂದಿರಾದ ಈಶ್ವರ ಭಟ್ ಮತ್ತು ಗಣೇಶ ಭಟ್ ವಾರಣಾಸಿ ,ಅಕ್ಕ ಶಾರದಾ ಜಿ ಭಟ್  ಇವರೆಲ್ಲರಿಗೆ ಆಭಾರಿಯಾಗಿದ್ದೇನೆ .
ನನ್ನೆಲ್ಲ ಚಟುವಟಿಕೆಗಳಿಗೆ ನಿರಂತರ ಬೆಂಬಲ ನೀಡುತ್ತಿರುವ ನನ್ನ ತಾಯಿ ವಾರಣಾಸಿ  ಶ್ರೀಮತಿ ಸರಸ್ವತಿ ಅಮ್ಮ ಮತ್ತು ತಂದೆ ದಿ|ನಾರಾಯಣ ಭಟ್ ವಾರಣಾಸಿ ಅವರ ಪಾದಗಳಿಗೆ ಮಣಿದಿದ್ದೇನೆ

ಎಳೆಯನಾದರೂ ಹಿರಿಯರಂತೆ ನನ್ನ ಸಾಹಿತ್ಯ ಸಂಶೋಧನೆಗಳಿಗೆ ಪೂರ್ಣ ಬೆಂಬಲ ನೀಡುತ್ತಿರುವ ಮಗ ಅರವಿಂದನಿಗೆ ಅಭಿನಂದನೆಗಳು .ನನ್ನೆಲ್ಲ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತು,  ಮುನ್ನುಗ್ಗಿ ಎಲ್ಲ  ಸವಾಲುಗಳನ್ನು ಗೆಲ್ಲುವ ಧೈರ್ಯ ತುಂಬಿ ,ನನ್ನೊಂದಿಗೆ ಹೆಗಲು ಕೊಟ್ಟು ಸದಾ ಬೆಂಬಲಿಸುತ್ತಿರುವ ಜೀವನ ಸಂಗಾತಿ ಗೋವಿಂದ ಪ್ರಸಾದರಿಗೆ ನಾನು ಆಜೀವ ಋಣಿಯಾಗಿದ್ದೇನೆ .
ಇನ್ನೂ ಅನೇಕರು ನನ್ನ ಒಳಿತಿಗೆ ಕಾರಣ ಕರ್ತರಾಗಿದ್ದಾರೆ.ಎಲ್ಲರನ್ನು ಹೆಸರಿಸಲು ಸಾಧ್ಯವಾಗಿಲ್ಲ.ಆದರೆ ಎಲ್ಲರನ್ನೂ ನಾನು ಹೃತ್ಪೂರ್ವಕ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ .


                                                                            ಡಾ.ಲಕ್ಷ್ಮೀ ಜಿ ಪ್ರಸಾದ
                                                                             ಕನ್ನಡ ಉಪನ್ಯಾಸಕಿ
                                                                  ಸರಕಾರಿ ಪದವಿ ಪೂರ್ವ ಕಾಲೇಜು
                                                                   ಬೆಳ್ಳಾರೆ ಸುಳ್ಯ (ತಾ )ದ ಕ  ಜಿಲ್ಲೆ
                                                                    ಮೊಬೈಲ್ :9480516684
                                                                    E mail:samagramahiti@gmail.com
                                                                  Blog: http://laxmipras.blogspot.com
                                                                       Blog: http://laxmihavyaka.blogspot.com



                                     
                          



                      




                           ಮಹಿಳೆ ರಚಿಸಿದ ಮೊದಲ ಹವಿಗನ್ನಡ ನಾಟಕ
                   ಸುಬ್ಬಿ ಇಂಗ್ಲೀಷು ಕಲ್ತದು ಮತ್ತು ಇತರ ನಾಟಕಗಳು
                                               
ಸುಬ್ಬಿ ಇಂಗ್ಲೀಷು ಕಲ್ತದು
ಪಾತ್ರಗಳ ಪರಿಚಯ
ಸುಬ್ಬಿ:ನಾಟಕದ ನಾಯಕಿ , ಬಾಲ್ಯ ವಿವಾಹವಾದ ಹೈ ಸ್ಕೂಲ್ ಮೆಟ್ಟಿಲು ಹತ್ತದ್ದ ಕೂಸು
ಸುಬ್ಬ : ನಾಯಕ
ಅಪ್ಪ ಮತ್ತು  ಅಮ್ಮ  :ಸುಬ್ಬಿಯ ತಂದೆ ತಾಯಿ
ಥೋಮಸ್  ಮತ್ತು ಟ್ಯಾಲಿನ್ :ಸುಬ್ಬನ ಗೆಳೆಯರು
                    


















                                   ಸುಬ್ಬಿ ಇಂಗ್ಲೀಷು ಕಲ್ತದು
                                       ದೃಶ್ಯ -1
(ಸುಬ್ಬಿ ಅಡಿಗೆ ಮಾಡಿಗೊಂಡು ಇಪ್ಪಗ ಫೋನ್ ರಿಂಗ್ ಆವುತ್ತು )
ಸುಬ್ಬಿ ; ಅಯ್ಯೋ ರಾಮ ದೇವರೇ ಇದೊಂದು ಫೋನ್ ಮೂರೂ ಹೊತ್ತು ಬೊಬ್ಬೆ ಹೊಡಕ್ಕೊಂಡೆ  ಇರುತ್ತು ..ಒಂದು ಕೆಲಸ ಮಾಡುಲೆ ಬಿಡ್ತಿಲ್ಲೆ..ಗಳಿಗೆಗೊಂದರಿ ಫೋನ್ ಬತ್ತಾ ಇದ್ದರೆ ಆನು ಅಡಿಗೆ ಮಾಡುದಾದರೂ ಹೇಂಗೆ? (ಫೋನ್ ಎತ್ತಿ )ಹಲ್ಲೋ ಆರು ?..ಆರು ..?ಸರಿ ಕೇಳ್ತಿಲ್ಲೇ ..ದೊಡ್ಡಕ್ಕೆ ಮಾತಾಡಿ ..ಅರೆ ನಿಂಗ ಎಂತ ಹೇಳುದು ಹೇಳಿ ಗೊಂತವುತ್ತಾ ಇಲ್ಲೆನ್ನೇ ..(ಫೋನ್ ಮಡುಗುತ್ತು )
ಅಯ್ಯೋ ದೇವರೇ ..ಎನ್ನ ಕರ್ಮವೇ .?ಆರೋ ಇವರ ಫ್ರೆಂಡ್ ಗಳ ಫೋನ್ ಆಗಿರೆಕ್ಕು !ಅವಕ್ಕೆ ಒಬ್ಬಂಗುದೆ ನಮ್ಮ ಭಾಷೆ ಬತ್ತಿಲ್ಲೆ ,ಎಲ್ಲರುದೆ ಇಂಗ್ಲಿಷಿಲಿದೆ ಹಿಂದಿಲಿದೆ ಮಾತಾಡುತ್ತವು .ಆರೋ ಏನ ಇನ್ನು ಆಗಂದಲೇ ಮತ್ತೆ ಮತ್ತೆ ಫೋನ್ ಬತ್ತ ಇದ್ದು ..ಅಯ್ಯೋ ರಾಮ ..ತಾಳು ಒಲೆಲಿ ಮಡುಗಿಕ್ಕಿ ಬೈನ್ದೆ ಅಡಿ ಹಿದುತ್ತು ಕಾಣೆಕ್ಕು ..ನೋಡುತ್ತೆ ..
(ಫೋನ್ ಮತ್ತೆ ರಿಂಗ್ ಆವುತ್ತು )
ಇನ್ನು ಪುನಃ ಆರಿಂದಪ್ಪಾ ಫೋನ್ ? ಇವರ ಫ್ರೆಂಡ್ ಗೊಕ್ಕೆ ಮಾಡ್ಲೇನು ಬೇರೆ ಕೆಲಸ ಇಲ್ಲೆಯ ಹೇಳಿ ?ಮತ್ತೆ ಮತ್ತೆ ಫೋನ್ ಮಾಡಿ ಇಂಗ್ಲಿಷಿಲಿ ಎಂತದೋ ಹೇಳ್ತವು .ಅಲ್ಲ ಇವಕ್ಕಾದರೂ ಹೇಳುಲಾಗದಾ ಇರುಳು ಮಾತ್ರ ಫೋನ್ ಮಾಡಿ ಎನ್ನ ಹೆಂಡತಿಗೆ ಇಂಗ್ಲಿಷ್ ಬತ್ತಿಲ್ಲೆ ಹೇಳಿ ..(ಫೋನ್ ನೆಗ್ಗಿ )ಹಲ್ಲೋ ಆರು ?..(ಫೋನ್ ಮಡುಗಿಕ್ಕಿ )ಮತ್ತೆ ಅದೇ ರಾಮಾಯಣ !ಆರೋ ಇವರ ಫ್ರೆಂಡ್ ಗ ಇಂಗ್ಲಿಷಿಲಿ ಎಂತದೋ ಹೇಳ್ತಾ ಇರೆಕ್ಕು ..ಎಂತ ಬೇಕಾರು ಹೇಳಲಿ ..ಎನಗೆಂಥ  ? ಈ  ಫೋನಿನ ದೆಸೆಲಿ ಎನಗಂತು ನೆಮ್ಮದಿ ಇಲ್ಲೆ
(ಮತ್ತೆ ಫೋನ್ ರಿಂಗ್ ಆವುತ್ತು )
ಸುಬ್ಬಿ : ಇದು ಬೊಬ್ಬೆ ಹಾಕಿಕೊಂಡೆ ಇರಲಿ ಆನಂತೂ ಇಂದು ನೆಗ್ಗುತ್ತಿಲ್ಲೇ .ಎನಗೆ ಸುಮಾರು ಕೆಲಸ ಇದ್ದು  (ಒಳ ಹೋ ವುತ್ತು)
               (ಫೋನ್ ಮತ್ತೆ ಮತ್ತೆ ರಿಂಗ್ ಆವುತ್ತು )
ಸುಬ್ಬಿ : ಇಂದು ಎಂಥ ಆಯಿದು ಹೇಳಿ ಈ ಫೋನಿಂಗೆ ?ಆರಿದು  ದಿನ ಇಡೀ  ಫೋನ್ ಮಾಡುತ್ತಾ ಇಪ್ಪದು ಹೇಳಿ ಗೊಂತವುತ್ತಾ  ಇಲ್ಲೆ ಅನ್ನೇ ..? ಇರ್ಲಿ ಅವಕ್ಕೆ ಮಾಡುತ್ತೆ .. (ಫೋನ್ ಎತ್ತಿ ) ಹಲ್ಲೋ ಆರದು ಇಡೀ ದಿನ ಫೋನ್ ಮಾಡುದು ?ನಿಂಗೊಗೆ ಬೇರೆಂಥ ಕೆಲಸ ಇಲ್ಲೆಯ ?ಮದುಗಿ ನೋಡ ಫೋನ್ ..(ಬೈದು ಫೋನ್ ಮಡುಗಿ ಒಳ ಹೋವುತ್ತು)
ಸುಬ್ಬಿ : (ಸ್ವಗತ) ಅಬ್ಬಾ !ಅಡಿಗೆ ಕೆಲಸ ಎಲ್ಲ ಆತಪ್ಪ !ರಜ್ಜ ಹೊತ್ತು ಆರಾಮಾಗಿ ಕೂರ್ತೆ ಇನ್ನು ..ಸಾಕಾತು ಇಂದು ಉದಿಯಪ್ಪಗಂದ ...ಎನ್ನ ಗೆಳತಿಯರೆಲ್ಲ ಈಗ ಆರಾಮಾಗಿ ಶಾಲೆಗೆ ಹೋಗಿ ಬಂದುಗೊಂಡು ಇಕ್ಕು ..ಆನು ಮಾತ್ರ ಮದುವೆ ಆಗಿ ಸೋತೆ ..ಆನು ಹಠ ಮಾಡಿ ಮದುವೆ ಬೇಡ ,ಆನು ಶಾಲೆಗೆ ಹೋವುತ್ತೆ ಹೇಳಿ ಹೇಳಕ್ಕಾಗಿತ್ತು ..ಭಾರೀ ದೊಡ್ಡ ತಪ್ಪು ಮಾಡಿದೆ ಹೇಳಿ ಎನಗೆ ಈಗ ಅನ್ಸುತ್ತು ..ಛೆ !ಎಂತ ಮಾಡುದು ?
                             (ಟಕ್ ಟಕ್ ಬಾಗಿಲು ಬಡುದ ಶಬ್ದ ಅವುತ್ತು )
ಓ ಆರೋ ಬೈನ್ದವು ಹೇಳಿ ಕಾಣೆಕ್ಕು ಬಾಗಿಲು ಬಡಿತ್ತಾ ಇದ್ದವು. ಆರು ಹೇಳಿ ನೋಡ್ತೆ ..
                                    (ಅಪ್ಪ ಅಮ್ಮ ಒಳ ಬತ್ತವು ) 
ಸುಬ್ಬಿ : ಓ !ಅಪ್ಪ ಅಮ್ಮ ..!ಬನ್ನಿ ಬನ್ನಿ ..ಆಸರಿಂಗೆ ತಟ್ಟೆ ಕೂರಿ..
ಅಪ್ಪ :ಆಸರಿಂಗೆ ಎಂಥ ಬೇಡ ಮಗಳೋ
ಸುಬ್ಬಿ : ಈ ಬೆಶಿಲಿಂಗೆ ಬೈಂದಿ ..ತಂಪಿಂಗೆ ಪುನರ್ಪುಳಿ ಎಸರು ಸರ್ಬತ್ತು ಮಾಡಿ ತತ್ತೆ ಆಗದಾ ?ರಜ್ಜ ಕುಡೀರಿ
ಅಮ್ಮ : ಸರಿ .ಒಂದು ಅರ್ಧರ್ಧ ಲೋಟೆ ಸಾಕು ಸುಬ್ಬಿ ..ಸುಬ್ಬ  ಇಲ್ಲೆಯ ಮನೆಲಿ ?
ಸುಬ್ಬಿ : ಇಲ್ಲೆಮ್ಮ ಅವು ಆಫೀಸಿಂಗೆ ಹೋಯ್ದವು, ಈಗ ಬಕ್ಕು ,ಒಂದು ನಿಮಿಷ ಕೂರಿ ಸರ್ಬತ್ತು  ಮಾಡಿ ತತ್ತೆ..
ಒಳ ಹೋಗಿ ಮಾಡಿ ತತ್ತು)
ಸುಬ್ಬಿ : (ಸರ್ಬತ್ತು ಕೊಡುತ್ತಾ ) ಅಲ್ಲ ..ನಿಂಗ ಎಂಥ ಹೀಂಗೆ ದಿಡೀರನೆ ಬಂದದು ?ನಿಂಗ ಫೋನ್ ಮಾಡಿದರೆ ಇವು ಕರಕೊಂಡು ಬಪ್ಪಲೆ ಬರ್ತಿತ್ತವಿಲ್ಲೆಯ ?ಬಸ್ ಸ್ಟಾಂಡ್ ಯಿಂದ ಹೇಂಗೆ ಬಂದಿ ?ದಾರಿ ಸರಿ ಸಿಕ್ಕಿತ್ತಾ ?ಎಂಥಕ್ಕೂ ಫೋನ್  ಮಾಡಿದ್ದರೆ ಆನು ಇವರ ಕಳುಸ್ತಿತ್ತೆ ..
ಅಮ್ಮ : ಎಷ್ಟು ಸರ್ತಿ ಮಾರಾಯ್ತಿ ನಿನಗೆ ಫೋನ್ ಮಾಡುದು ?ಫೋನ್ ಮಾಡಿ ಮಾಡಿ ಸಾಕಾತು ..ನೀನು ಫೋನ್ ಎತ್ತಿದ್ದೇ ಇಲ್ಲೆ ..ಒಡ್ಕಕ್ಕೆ ಫೋನೆತ್ತಿ ಆನು ಮಾತಾಡಕ್ಕಾದರೆ ಮೊದಲೇ ನಿಂಗೊಗೆಂಥ ಬೇರೆಂಥ ಕೆಲಸ ಇಲ್ಲೆಯ ಫೋನ್ ಮದುಗಿ ಹೇಳಿ ಬೈದಿಕ್ಕಿ ಮಡುಗಿದೆ ನೀನು ! ಎಂಥ ಕಥೆ ನಿನ್ನದು ?ಅಷ್ಟು ತಾಳ್ಮೆ ಇಲ್ಲದ್ದರೆ ಹೇಂಗೆ ?
ಸುಬ್ಬಿ : ಅಯ್ಯೋ ದೇವರೇ ..ಅದು ಅಷ್ಟು ಸರ್ತಿ ಫೋನ್ ಮಾಡಿದ್ದು ನಿಂಗಳ ?ಉದಿಯಪ್ಪಗಂದ ಫೋನ್ ಮಾಡಿ ಇಂಗ್ಲಿಷಿಲಿ ಎಂಥದೋ ಹೇಳ್ತಾ ಇತ್ತಿದವು .ಅದಕ್ಕೆ ಫೋನ್ ನೆಗ್ಗಿತ್ತಿಲ್ಲೆ..ಮತ್ತೆ ಫೋನ್ ಬಂದಪ್ಪಗ ಕೋಪ ಬಂದು ಹಾಂಗೆ ಹೇಳಿದ್ದು ಅಷ್ಟೇ!ಬೇಜಾರಾತ ನಿಂಗೊಗೆ ?
ಅಮ್ಮ :ಮತ್ತೆ ಆರಿಂಗಾದರು ಎಂತ ಹೇಳಿ ಅನ್ಸ ಹೇಳು ? ಅಲ್ಲ ..ಸುಬ್ಬಿ ನೀನು ಅಷ್ಟು ತಾಳ್ಮೆ ಕಲ್ಕ್ಕೊಂದರೆ ಹೇಂಗೆ ?ನೋಡು ಈಗ ನೀನು ಸಣ್ಣ ಕೂಸು ಅಲ್ಲ ..ಎಲ್ಲರೊಟ್ಟಿಂಗೆ ನಯ ವಿನಯಂದ ಇರಕ್ಕು ಗೊಂತಾತ
(ಮಾತಾಡುತ್ತ ಇಪ್ಪಗ ರಾಜ ಒಳ ಬತ್ತ )
ರಾಜ :ಹಾಂಗೆ ಹೇಳಿ ಅತ್ತೆ ನಿಂಗ ಇದಕ್ಕೆ ..ಇದರತ್ತಾರೆ ಎಷ್ಟು ಸರ್ತಿ ಹೇಳ್ತೆ ಹೇಳಿ ಇಲ್ಲೆ ..ಸಿಡುಕುಲೆ ಆಗ ಹೇಳಿ ,ಆದರೆ ಎನ್ನ ಫ್ರೆಂಡ್ ಗಳ ಫೋನ್ ಬಂದರೆ ಸಾಕು ಇದಕ್ಕೆ ಕೋಪ ಬತ್ತು..
ಸುಬ್ಬಿ : ಅಪ್ಪು ಮತ್ತೆ ..ನಿಂಗಳ ಫ್ರೆಂಡ್ ಗ ಎಲ್ಲ ಇಂಗ್ಲಿಷ್ ಮಾತಾಡುತ್ತವು,ಎನಗೆ ಎಂತದು ತಲೆಬುಡ ಗೊಂತಾವುತ್ತಿಲ್ಲೆ,ಮತ್ತೆ ಎಂಥ ಮಾಡುದು ಆನು ?ನಿಂಗಳ ಫ್ರೆಂಡ್ ಗಳ ಹತ್ತರೆ ಎನ್ನ ಹೆಂಡತಿಗೆ ಇಂಗ್ಲೀಷು ಬತ್ತಿಲ್ಲೆ ಹೇಳಿ ಹೇಳ್ರೆ ಇವು ಹೇಳುತ್ತಿಲ್ಲಿ ನಿಂಗ ಆನೆಂಥ ಮಾಡುದು ?
ಸುಬ್ಬ :ಅದಕ್ಕೆ ಹೇಳುದು ಆನು ರಜ್ಜ ಇಂಗ್ಲೀಷು ಕಲಿ  ಹೇಳಿ , ಕ್ಲಾಸಿಂಗೆ ಹೋಗಿ ಕಲಿ ಹೇಳಿ ಆದರೆ ನಿನಗೆ ಕಲಿವಲೇ ಮನಸ್ಸಿಲ್ಲೆ ..ಎನ್ನ ಫ್ರೆಂಡ್ ಗ ಆರಾದರೂ ಮನೆಗೆ ಬಂದಿಪ್ಪಗ ನಿನಗೆ ಇಂಗ್ಲೀಷು ಬತ್ತಿಲ್ಲೆ ಹೇಳಿ ಗೊಂತಾದರೆ ಎನಗೆ ಎಷ್ಟು ನಾಚಿಕೆ ಗೊಂತಿದ್ದಾ ?ಅವರ ಹೆಂಡತಿಯಕ್ಕ ಎಲ್ಲ ಡಬ್ಬಲ್ ಡಿಗ್ರಿ ಮಾಡಿದ್ದವು ಗೊಂತಿದ್ದಾ ?
ಸುಬ್ಬಿ : ನೋಡಮ್ಮ ..ಇವು ಹೀಂಗೆ ದಿನಾಗುಲೂ ಆನು ಓದಿದ್ದಿಲ್ಲೇ ಹೇಳಿ ಎನ್ನ ಹಂಗುಸುತ್ತವು !ಇವಕ್ಕೆ ಅಷ್ಟು ನಾಚಿಕೆ ಆವುತ್ತಾರೆ ಎನ್ನ ಮಾಡುವೆ ಆದ್ದು ಎಂಥಕೆ ? ಕೇಳಿ ..
ಸುಬ್ಬ :ಮದುವೆ ಆದ ಮೇಲೆ ನಿನಗೆ ಇಂಗ್ಲೀಷು ಕಲಿಸುಲಕ್ಕು ಹೇಳಿ ಗ್ರೇಶಿ ಮದುವೆ ಆದೆ ,ನಿನಗೆ ಕಲಿವಲೆ ಮನಸ್ಸೇ ಇಲ್ಲೆ ..
ಅಪ್ಪ : ಅಪ್ಪು ..ಮಗಳೋ ..ಏನೋ ಸೋದರತ್ತೆ ಮಗಳು ಹೇಳಿ ಪ್ರೀತಿಲಿ ಮಾಡುವೆ ಆದ .ನೀನು ಚೂರು ಇಂಗ್ಲೀಷು ಕಲಿ ನಿನಗೆ ಇಂಗ್ಲೀಷು ಬಂದರೆ ಸಮಸ್ಯೆಯೇ ಇಲ್ಲೆನ್ನೇ ..
ಅಮ್ಮ : ಸಾಕಿನ್ನು ಆ ವಿಚಾರ ..ಸುಬ್ಬಿ ..ಅಡಿಗೆ ಆಯಿದ ?ಆದರೆ ಉಂಬ ಎಲ್ಲರೂ ಗಂಟೆ ಎರಡಾತು ..ಹೋಪ ..ಉಂಬ ..
ಅಪ್ಪ : ಸ್ಸರಿ..ಸ್ಸರಿ ..ಬಳುಸಿ ..
(ಎಲ್ಲ ಒಳ ಹೋವುತ್ತವು)
(ಫೋನ್ ಮತ್ತೆ ರಿಂಗ್ ಆವುತ್ತು )
ಸುಬ್ಬ ;ಹಲೋ . S.Raja  is here
ಥೋಮಸ್; hello Mr S.Raja How are you ?Iam Thomas here
ಸುಬ್ಬ :Hello friend ,how are you ?when did you come from U S A?
ಥೋಮಸ್ : We arrived India yesterday,Tolin also came with me ,we are coming to your house today evening
ಸುಬ್ಬ :What a surprise visit !You are always welcome
ಥೋಮಸ್ : Thank you very much ,meet you on evening
ಸುಬ್ಬ : ok bye
ಸುಬ್ಬ : (ಸ್ವಗತ ) ಹೊತ್ತಪ್ಪಗ ಎನ್ನ ಫ್ರೆಂಡ್ ಗ ಬತ್ತವಡ !ಆನು ಎನ್ನ ಹೆಂಡತಿ ಡಬ್ಬಲ್ ಗ್ರಾಜುವೇಟ್ ಹೇಳಿ ಹೇಳಿದ್ದೆ ಅನ್ನೇ ಅವರತ್ತರೆ!ಈಗ ಎಂಥ ಮಾಡುದು ?(ಭಾರೀ ಚಿಂತೆಲಿ ತಲೆಗೆ ಕೈ ಕೊಟ್ಟು ಕೂರುತ್ತ )
ಅಪ್ಪ ; ಎಂಥ ರಾಜ ?ಆರಿಂದು ಫೋನ್ ?ಎಂಥ ಸಮಾಚಾರ ?
ಸುಬ್ಬ : ಎಂಥ ಹೇಳಿ ಹೇಳುದು ಮಾವ ? ಈಗ ಹೊತ್ತಪ್ಪಗ ಎನ್ನ ಫ್ರೆಂಡ್ ಗ ಇಲ್ಲಿಗೆ ಬತ್ತವಡ ..ಅದೇ ಯೋಚನೆ ಎನಗೆ ..!
ಅಪ್ಪ : ಅದಕ್ಕೆ ಅಷ್ಟು ತಲೆಬೆಶಿ   ಮಾಡುಲೆ ಎಂಥ ಇದ್ದು ?ನಿನ್ನ ಅತ್ತೆಡೆ ಸುಬ್ಬಿದೆ ಸೇರಿ ಎಂಥ ಆದರೊಂಡು ತಿಂಡಿ ,ಸ್ವೀಟ್ ಮಾಡುಗು ,ಬೇಕಾರೆ ಬೆಕರಿಂದಲೂ ತಪ್ಪಲಕ್ಕನ್ನೇ?
ಸುಬ್ಬ : ಅಯ್ಯೋ ಅದೆಂತ ತೊಂದರೆ ಇಲ್ಲೆ ಮಾವ
ಅಪ್ಪ :ಮತ್ತೆ ಅವು ಬಪ್ಪಗ ಎಂಗ ಇದ್ದರೆ ತೊಂದರೆ ಆವುತ್ತಾ ?ಎಂಗ ಈಗಲೇ ಹೆರಡ್ತೆಯ ಬೇಕಾರೆ !
ರಾಜ : ಅಯ್ಯಯ್ಯೋ ನಿಂಗ ಇರಿ ಮಾವ ,ನಿಂಗ ಇದ್ದರೆ ಎಂಥ ತೊಂದರೆ ಇಲ್ಲೆ .ಎನಗೆ ಅದು ಚಿಂತೆ ಅಲ್ಲ ಮಾವ
ಸುಬ್ಬ : ಮತ್ತೆ ಎಂತ ಯೋಚನೆ ಹೇಳು ಅಂಬಗ ,ಸರಿ ಮಾಡುವ ಎಲ್ಲ
ಸುಬ್ಬ ; ಅದೇ ಮಾವ ..ಅದೇ ನಮ್ಮ ಸುಬ್ಬಿಗೆ ಇಂಗ್ಲೀಷು ಬತ್ತಿಲ್ಲೆ ಅನ್ನೇ ,ಎನ್ನ ಫ್ರೆಂಡ್ ಗೊಕ್ಕೆ ಕನ್ನಡ  ಬತ್ತಿಲ್ಲೆ..ಅವು ಅಮೆರಿಕಾಲ್ಲಿ ಇಪ್ಪದು ..ಅವು ಇಂಗ್ಲಿಷಿಲಿಯೇ ಮಾತಾಡುತ್ತವು..ಎಂಥ ಮಾಡುದು ಈಗ ..ಹೇಳಿ ಗೊಂತವುತ್ತಿಲ್ಲೇ ಎನಗೆ
ಅಮ್ಮ : ಅದಕ್ಕೆಂತ ಇದ್ದು ತಲೆಬೆಶಿ ? ಸುರುವಿಂಗೆ ನೀನು ನಿನ್ನ ಫ್ರೆಂಡ್ ಗಳ ಹತ್ತರೆ  ಸುಬ್ಬಿಗೆ ಇಂಗ್ಲೀಷು ಬತ್ತಿಲ್ಲೆ ಹೇಳಿ ಹೇಳಿ ಬಿಡು
ಸುಬ್ಬ : ಅದಾಗ ಅತ್ತೆ ..ಆನೆ ಎನ್ನ ಫ್ರೆಂಡ್ ಗಳ ಹತ್ತರೆ ಎನ್ನ ಹೆಂಡತಿ ಡಬ್ಬಲ್ ಡಿಗ್ರಿ ಓದಿದ್ದು ಹೇಳಿ ಹೇಳಿದ್ದೆ ..ಈಗ ಎಂಥ ಎಂತ ಮಾಡುದು ?
ಸುಬ್ಬಿ : ಈಗ ಎಂಥ ಮಾಡುದು ?ಮತ್ತೆ ಸುಳ್ಳು ಹೇಳಿದ್ದೆಂತಕೆ ?ಎಂಥ ಬೇಕಾರೂ ಮಾಡಿ ಎನಗೆ ಗೊಂತಿಲ್ಲೇ .
ಸುಬ್ಬ : (ಜೋರಾಗಿ ಕೋಪಂದ)ಸುಬ್ಬಿ ಅದೆಲ್ಲ ಎನಗೆ ಗೊಂತಿಲ್ಲೇ ..ನೀನು ಅವರ ಹತ್ತರೆ ಇಂಗ್ಲಿಷಿಲಿ ಮಾತಾಡಕ್ಕು ಅಷ್ಟೇ !
ಸುಬ್ಬಿ :ಅಲ್ಲಾಳಿ, ಹೈ ಸ್ಕೂಲ್  ಮೆಟ್ಲು ಹತ್ತದ್ದ ಆನು ಇಂಗ್ಲಿಷಿಲಿ ಹೇಂಗೆ ಮಾತಾಡುದು ಹೇಳಿ ?
ಸುಬ್ಬ : ಆನು ಹೇಳಿ ಕೊಡ್ತೆ ..ಕಲಿ .
ಸುಬ್ಬಿ: ಅಲ್ಲಾಳಿ ನಿಂಗಳ ಫ್ರೆಂಡ್ ಗ ಹೊತ್ತಪ್ಪಗ ಬತ್ತವು ಹೇಳಿ ಹೇಳ್ತಿ ..ಇನ್ನು ಒಂದೆರಡು ಗಂಟೆ ಒಳ ಅವು ಬಕ್ಕು ..ಅಷ್ಟು ರಜ್ಜ ಹೊತ್ತಿಲಿ ಇಂಗ್ಲಿಷ್ ಕಲಿವಲೆ ಎಡಿಗ ?!ಎಂತ ಹೇಳ್ತಿ ನಿಂಗ ಹೇಳಿ ಎನಗೆ ಅರ್ಥ ಅವುತ್ತಿಲ್ಲೆ ಎನಗೆ ಎಂಥ ಮರ್ಲು ನಿಂಗಳದ್ದು!!
ಅಮ್ಮ : ಅಪ್ಪು ರಾಜ ..ಸುಬ್ಬಿ ಹೇಳುದರಲ್ಲಿಯೂ ಅರ್ಥ ಇದ್ದು ,ಒಂದೆರಡು ಗಂಟೆಲಿ ಇಂಗ್ಲೀಷು ಕಲಿವಲೆ ಎಡಿಯ ಅದೆಂತ ಮಕ್ಕಳಾಟವ?
ಸುಬ್ಬ : ಅದು ಹಾಂಗಲ್ಲ ಅತ್ತೆ ..ಎನ್ನ ಫ್ರೆಂಡ್ಗೊಕ್ಕೆ ಸುಬ್ಬಿ ಹತ್ತರೆ ಮಾತಾಡುವದ್ದು ಎಂತ ಇರ್ತು ಹೇಳಿ ?ಸುಮ್ಮನೆ ಶಿಷ್ಟಾಚಾರಕ್ಕಾಗಿ ಹೆಸರು ,ಊರು ಮಕ್ಕ ,ಪ್ರಾಯ ..ಕೇಳ್ತವು ಅವು ಅಷ್ಟೇ ?ಅವು ಹೇಂಗೆ ಮಾತದುತ್ತವು ಹೇಳಿ ಎನಗೆ ಗೊಂತಿದ್ದು ಬೇರೆ ಕಡೆ ಆನು ಗಮನಿಸಿದ್ದೆ ಅವು ಮಾತಾಡುದರ .ಅದಕ್ಕೆ ಒಂದೊಂದು ಶಬ್ದಲ್ಲಿ ಉತ್ತರ ಹೇಳಿದರೆ ಆತು ಅದರ ಆನು ಈಗ ಸುಬ್ಬಿಗೆ ಹೇಳಿ ಕೊಡ್ತೆ ಅದರ ಕಲಿವಲೆ ಅರ್ಧ ಗಂಟೆದೆ ಬೇಡ .
ಅಪ್ಪ :ಅಪ್ಪು ಸುಬ್ಬಿ ರಾಜ ಹೇಳುದುದೆ ಸರಿ ನೀನು ಅವ ಹೇಳಿ ಕೊಟ್ಟ ಹಾಂಗೆ ಕಲಿ ಎಂಗ ಆಚ ಕಡೆ ಇರ್ತೆಯ
ಸುಬ್ಬಿ : ಹ್ಹೂ ಸರಿ .ಅಪ್ಪ ..
ಸುಬ್ಬ : ನೋಡು ಸುಬ್ಬಿ ಅವು ಸುರುವಿಂಗೆ ನಿನ್ನ ಹೆಸರೆಂತ ಹೇಳಿ ಕೇಳ್ತವು ..ಎಂಥ ಹೇಳ್ತೆ ನೀನು ?
ಸುಬ್ಬಿ  :ಎನ್ನ ಹೆಸರು ನಿಂಗೊಗೆ ಗೊಂತಿಲ್ಲೆಯ ?
ಸುಬ್ಬ ;ಎನಗೆ ಗೊಂತಿದ್ದು ಆದರೆ ಅವಕ್ಕೆ ಗೊಂತಿಲ್ಲೇ ಅನ್ನೇ .
ಸುಬ್ಬಿ : ಓ ಅಪ್ಪು ..ಎನ್ನ ಹೆಸರು ಸುಬ್ಬಲಕ್ಷ್ಮಮ್ಮ ಹೇಳಿ ಅನ್ನೇ ಅದೇ ಹೇಳುತ್ತೆ ..
ಸುಬ್ಬ : ಈ ಸುಬ್ಬಲಕ್ಷ್ಮಮ್ಮ ಶಾಂತಮ್ಮ ನಂಜುಡಮ್ಮ ಎಲ್ಲ ಹಳೆ ಹೆಸರು ಅದು ಆಗ ..ಈಗ ಆನು ಎನ್ನ ಹೆಸರು ಸುಬ್ಬ ರಾಜ ಹೇಳಿ ಇಪ್ಪದರ  ಎಸ್ .ರಾಜ ಹೇಳಿ ಚೆಂದ ಮಾಡಿದ್ದಿಲ್ಲೆಯ ?ಈಗ ಮನೆಯೋರಿನ್ಗೆ ಬಿಟ್ರೆ ಆರಿನ್ಗೂ ಎನ್ನ ಹೆಸರಿನ ಎಸ್  ಹೇಳಿರೆ ಸುಬ್ಬ ಹೇಳಿ ಗೊಂತಿಲ್ಲೆ ಅಲ್ಲದ ?ಹಾಂಗೆ ನಿನ್ನ ಹೆಸರನ್ನು ಬೇರೆ ಮಾಡುವ ..ನೀನೊಂದು ಚೆಂದದ ಹೆಸರು ಹೇಳು .
ಸುಬ್ಬಿ :ಅಕ್ಕು ಅಂಬಗ ಆನು ಎಂಥ ಹೇಳಿ ಹೆಸರು ಹೇಳಕ್ಕು?
ಸುಬ್ಬ :( ಯೋಚನೆ ಮಾಡಿ ) ಹ್ಹ ..ನೀನು ಚಂದನಾ ಹೇಳಿ ಹೇಳು
ಸುಬ್ಬಿ :ಹ್ಹ ಅಕ್ಕು ಹೆಸರು ಲಾಯ್ಕ ಇದ್ದು ಇದು  ಚಂದನಾ ಕನ್ನಡ ವಾಹಿನಿ
ಸುಬ್ಬಿ :ತಲೆ ಹರಟೆ ಮಾಡಡ ,ಸುಮ್ಮನೆ ಇರು
ಸುಬ್ಬಿ :ಆತು ಮಾರಾಯರೇ ಎಂತ ಹೇಳಿ ಹೇಳಕ್ಕೂ ಆನು ಹೇಳಿ
ಸುಬ್ಬ :ನೀನು ಚಂದಕ್ಕೆ ಚಂದನಾ ಹೇಳಿ ಹೇಳು
ಸುಬ್ಬ : ಚಂದಕ್ಕೆ ಚಂದನಾ
ಸುಬ್ಬಿ :ಅಯ್ಯೋ ರಾಮ !ಚಂದಕ್ಕೆ ಚಂದನಾ ಅಲ್ಲ ಮಾರಾಯ್ತಿ ಖಾಲಿ ಚಂದನಾ
ಸುಬ್ಬಿ : ಖಾಲಿ ಚಂದನಾ
ಸುಬ್ಬ :ಅಯ್ಯೋ ದೇವರೇ ಎನ್ನ ಕರ್ಮ !ಒಂದರಿ ಚಂದನಾ ಹೇಳಿ ಹೇಳು ಮಾರಾಯ್ತಿ
ಸುಬ್ಬಿ :ಚಂದನಾ
ರಾಜ : ಪುನಃ ಹೇಳು
ಸುಬ್ಬಿ :ಚಂದನಾ
 ಸುಬ್ಬ : ಗುಡ್  ನಂತರ ನಿನ್ನ ಊರು ಯಾವುದು ಹೇಳಿ ಕೇಳ್ತವು ಎಂತ ಹೇಳುತ್ತೆ ?
ಸುಬ್ಬಿ : ಕೊಡೆಯಾಲ ಹೇಳಿ ಹೇಳ್ತೆ ..
ಸುಬ್ಬ : ಹಾಂಗೆ ಬೇಡ ನೀನು ಸ್ಟೈಲ್ ಆಗಿ ಮ್ಯಾಂಗಲೋರ್  ಹೇಳಿ ಹೇಳು
ಸುಬ್ಬಿ :ಮಾಂಗನೂರು
ಸುಬ್ಬ ಮಂಗನೂರು ಅಲ್ಲ ಮಾರಾಯ್ತಿ  ಮ್ಯಾಂಗಲೋರ್
ಸುಬ್ಬಿ : ಮ್ಯಾಂಗಲೋರ್
ಸುಬ್ಬ ;ಹಾಂಗೆ ಹೇಳು ಸರಿಯಾಯಿದು ,ನಂತರ ಅವು ನಿನ್ನ ಹತ್ತರೆ ನಿನಗೆ ಎಷ್ಟು ಜನ ಮಕ್ಕ ಹೇಳಿ ಕೇಳುಗು ಎಂಥ ಹೇಳುತ್ತೆ?
ಸುಬ್ಬಿ :ನಿಜವಾಗಿಯೂ ಇಲ್ಲೆನ್ನೇ ,ಎಂಥ ಇದ್ದು ಹೇಳಿ ಹೇಳಕ್ಕ ?
ಸುಬ್ಬ : ಬೇಡ ಬೇಡ ಇಲ್ಲೆ ಹೇಳಿಯೇ ಹೇಳುವ ,ಇಲ್ಲೆ ಹೇಳುದನ್ನೇ ಇಂಗ್ಲಿಷಿಲಿ ನೋ ಹೇಳಿ ಹೇಳು
ಸುಬ್ಬಿ : ಸ್ನೋ
ಸುಬ್ಬ ಸ್ನೋ ಅಲ್ಲ ಪೌಡರ್
ಸುಬ್ಬಿ : ಸ್ನೋ ಅಲ್ಲ ಪೌಡರ್
ಸುಬ್ಬ :ಅಯ್ಯೋ ರಾಮ !ನೋ ಹೇಳಿ ಹೇಳು ಮಾರಾಯ್ತಿ
ಸುಬ್ಬಿ : ಸ್ನೋ
ಸುಬ್ಬ : ಅಯ್ಯೋ ಕರ್ಮವೇ !ಸ್ನೋ ಅಲ್ಲ ಮಾರಾಯ್ತಿ ನೋ ನೋ ಹೇಳಿ ಹೇಳುಲೆಡ್ತಿಲ್ಲೆಯ ನಿನಗೆ ?ನಿನ್ನ ನಾಲಗೆಗೆ ಬೆಣಕಲ್ಲು ಹಾಕಿ ತಿಕ್ಕಕ್ಕು ..(ಕೋಪ )
ಸುಬ್ಬಿ : (ಕೋಪಂದ ) ಇದಾ ನಿಂಗ ಇಂಗ್ಲೀಷು ಹೇಳಿ ಕೊಡ್ತೆ ಹೇಳಿದ್ದಕ್ಕೆ ಆನು ಕಲಿತ್ತಾ ಇಪ್ಪಡಿ ನಿಂಗಳ ಮರ್ಯಾದೆ ಒಳಿಸುಲೆ ಬೇಕಾಗಿ !ಹ್ಹ ! ಬೈದರೆ ಜೋರು ಮಾಡ್ರೆ ಆನು ಕಲಿಯೆ,ಮತ್ತೆ ನಿಂಗೊಗೆ ನಾಚಿಕೆ ಆದರೆ ಎನಗೆ ಗೊಂತಿಲ್ಲೆ !ಎಂಥ ಬೇಕಾರು ಮಾಡಿಗೊಳ್ಳಿ ಎನಗೆ ತುಂಬಾ ಕೆಲಸ ಇದ್ದು ಆನು ಒಳ ಹೋವುತ್ತೆ ..(ಒಳ ಹೊಪಲೆ ಹೆರಡುತ್ತು)
ಸುಬ್ಬ : ಅಯ್ಯಯ್ಯೋ ನಿಲ್ಲು ನಿಲ್ಲು .. ಹೋಗಡ  ಸುಬ್ಬಿ..ಬೈತ್ತಿಲ್ಲೆ ಮಾರಾಯ್ತಿ ಬಾ ,ನೋ ಹೇಳಿ ಹೇಳು
ಸುಬ್ಬಿ : ನೋ
ಸುಬ್ಬ:  ಸರಿ ಹಾಂಗೆ ಹೇಳು ,ಮುಂದೆ ಅವು ನಿನ್ನ ಪ್ರಾಯ ಎಷ್ಟು ಹೇಳಿ ಕೇಳುಗು ಎಂತ ಹೇಳುತ್ತೆ ?
ಸುಬ್ಬಿ : ನಿಜವಾಗಿ ಹದಿನಾರು ಎಂಥ ಎಪ್ಪತ್ತಾರು ಹೇಳಿ ಹೇಳಕ್ಕ ?
ಸುಬ್ಬ :ಬೇಡ ಆದರೆ 16 ಹೇಳಿದೆ ಬೇಡ ಎನ್ನ ಫ್ರೆಂಡ್ ಗ ಎಲ್ಲ ಸಮ ಪ್ರಾಯದೋರನ್ನೇ ಮದುವೆ ಆಯಿದವು .ಹಾಂಗೆ ನೀನು ಎನ್ನಂದ 10 ವರ್ಷ ಸಣ್ಣ ಹೇಳಿರೆ ಎನಗೆ ಒಂಥರಾ ನಾಚಿಕೆ ಆವುತ್ತು ಅದಕ್ಕೆ ನೀನು ಇಪ್ಪತ್ತಾರು ಹೇಳಿ ಹೇಳು .ಅದರ ಇಂಗ್ಲಿಷಿಲಿ  ಟ್ವೆಂಟಿ ಸಿಕ್ಸ್ ಹೇಳಿ ಹೇಳು
ಸುಬ್ಬಿ : ಶುಂಟಿ ಮಿಕ್ಸ್
ಸುಬ್ಬ ;(ಸ್ವಗತ ) ಓ ದೇವರೇ ಇದಕ್ಕೆ ಹೆಂಗಪ್ಪಾ ಹೇಳಿಕೊಡುದು? (ಸುಬ್ಬಿ ಹತ್ತರೆ )ನಿನಗೆ ಸದಾ ಅಡಿಗೆ ಮನೆದೇ ಧ್ಯಾನ ಸುಬ್ಬಿ ಅದಕ್ಕೆ ಶುಂಟಿ ಮಿಕ್ಸ್ ಹೇಳಿ ಬಪ್ಪದು ಅದರ ಅಡಿಗೆಗೆ ಮಡಿಕ್ಕ ,ಈಗ ಟ್ವೆಂಟಿ ಸಿಕ್ಸ್ ಹೇಳಿ ಹೇಳಿ
ಸುಬ್ಬಿ :ಟ್ವೆಂಟಿ..
ಸುಬ್ಬ : ಹ್ಹ ಹ್ಹ ..ಹಾಂಗೆ ಟ್ವೆಂಟಿ ಸಿಕ್ಸ್
ಸುಬ್ಬಿ : ಟ್ವೆಂಟಿ ವಿಕ್ಸ್
ಸುಬ್ಬ: ವಿಕ್ಸ್ ಅಲ್ಲ ಅಮೃತಾಂಜನ
ಸುಬ್ಬಿ : ವಿಕ್ಸ್ ಅಲ್ಲ ಅಮೃತಾಂಜನ
ಸುಬ್ಬ : ಸುಬ್ಬಿ ಎನಗೆ ಕೋಪ ಬರ್ಸಡ ,ಸರಿಯಾಗಿ ಹೇಳು,ಟ್ವೆಂಟಿ ಸಿಕ್ಸ್
ಸುಬ್ಬಿ  :ಟ್ವೆಂಟಿ ಸಿಕ್ಸ್
ಸುಬ್ಬ :ವೆರಿ ಗುಡ್ ,ಇಷ್ಟು ಹೇಳಿದರೆ ಸಾಕು !
ಸುಬ್ಬಿ : ಅದು ಸಮ ..ಆದರೆ ನಿಂಗ ಹೇಳಿ ಕೊಟ್ಟ ರೀತಿಲಿಯೇ ಪ್ರಶ್ನೆ ಕೆಳುತ್ತವು ಹೇಳಿ ಹೇಂಗೆ ಹೇಳುದು ?ಸುರುವಿಂಗೆ ಹೆಸರು ಕೇಳುವ ಬದಲು ಊರು ಯಾವುದು ಹೇಳಿ ಕೇಳ್ರೆ ಎನಗೆ ಹೇಂಗೆ ಗೊಂತಪ್ಪದು ..?
ಸುಬ್ಬ:  (ಯೋಚಿಸಿಗೊಂಡು ) ಅಪ್ಪಲ್ಲದ ..?!ಎಂಥ ಮಾಡುದೂ ಇದಕ್ಕೆ ..ಹ್ಹ ಒಂದು ಉಪಾಯ ಗೊಂತಾತು ..ಅವು ನಿನ್ನ ಹೆಸರು ಕೇಳಿ ಅಪ್ಪಗ ಆಗ ಹೀಂಗೆ ಕಣ್ಣು ಮುಚ್ಚುತ್ತೆ ಒಂದು ಕ್ಷಣ (ಕಣ್ಣು ಮುಚ್ಚಿ ತೋರುಸಕ್ಕು )ಅಂಬಗ ನೀನು ಚಂದನಾ ಹೇಳಿ ಹೇಳು ,ಅವು ಊರಿನ ಹೆಸರು ಕೇಳುವಗ ಆನು ಕೈಯ ಹೀಂಗೆ ಹಣೆಲಿ ಮಡುಗುತ್ತೆ (ಕೈ ಹಣೆಗೆ ಮದುಗಿ ತೋರುಸುತ್ತ)ಅದರ ನೋಡಿ ನೀನು ಮ್ಯಾಂಗಲೋರ್ ಹೇಳಿ ಹೇಳು .ಮಕ್ಕ ಎಷ್ಟು ಹೇಳಿ ಕೇಳುವಗ ಆನು ಹೀಂಗೆ ಕೆಲ ನೋಡುತ್ತೆ ,ನಿನ್ನ ಪ್ರಾಯ ಕೇಳುವಾಗ ಹೀಂಗೆ ಕೈ ನೆಗ್ಗುತ್ತೆ ..ಅದರ ನೋಡಿ ಟ್ವೆಂಟಿ ಸಿಕ್ಸ್ ಹೇಳಿ ಹೇಳು ..ಸರಿಯಾ .
ಸುಬ್ಬಿ :ಸರಿ ಅವು ಮೊದಲು ಹೆಸರು ಕೆಳುತ್ತವು ಅಂಬಗ ನಿಂಗ ಕಣ್ಣು ಮುಚ್ಚುತ್ತಿ ,ಆನು ಚಂದನಾ ಹೇಳಿ ಹೇಳಕ್ಕು,ನಿಂಗ ಹಣೆಲಿ ಕೈ ಮಡುಗಿರೆ ಉರ ಹೆಸರು ಹೇಳಕ್ಕೂ ಅನಂತರ ಕೈ ನೆಗ್ಗುತ್ತಿ ..ಅಲ್ಲ ಅಲ್ಲ ಕೆಲ ನೋಡುತ್ತಿ ಅಂಬಗ ನೋ ಹೇಳಕ್ಕೂ ಅನಂತರ ಕೈ ನೆಗ್ಗುತ್ತಿ ಅಂಬಗ ಟ್ವೆಂಟಿ ಮಿಕ್ಸ್ ಅಲ್ಲಲ್ಲ ಟ್ವೆಂಟಿ ಸಿಕ್ಸ್ ಹೇಳಕ್ಕು ಸರಿಯಾ ..
ಸುಬ್ಬ : ಹ್ಹ ಸರಿ ಇದ್ದು ,ನೋಡು ನಿನಗೆ ಮನಸ್ಸು ಮಾಡ್ರೆ ಎಲ್ಲ ಎಡಿತ್ತು .ಆ ಮೇಲೆ ಅವು ಬಂದ ಕೂಡಲೇ ಹಲೋ ಹೇಳಿ ಹೇಳಕ್ಕೂ ಹೇಂಗೆ ?
ಸುಬ್ಬಿ : ಹಲ್ಲೋ
ಸುಬ್ಬ : ಹಲ್ಲು ನಿನ್ನ ಬಾಯಿಲಿ ಇದ್ದು ಹಲೋ ಹೇಳಿ ಹೇಳಕ್ಕೂ
ಸುಬ್ಬಿ : ಹಲೋ
ಸುಬ್ಬ :ಮತ್ತೆ ಹೈ ಹೀಲ್ಡ್ ಚಪ್ಪಲಿ ಹಾಕಿ ಕೊಂಡು ಕೈಲಿ ಕಾಫಿ ಹಿಡ್ಕೊಂಡು ಸ್ಟೈಲ್ ಆಗಿ ತಂದು ಕೊಡಕ್ಕು.
ಸುಬ್ಬಿ : ಅದೆಂತದು ಹೈ ಹೈ ಹೇಳ್ರೆ ?
ಸುಬ್ಬಿ : ಅದು ಎತ್ತರದ ಮೆಟ್ಟು ನಂತರ ಅವು ಹೊಪಗ ಥ್ಯಾಂಕ್ಸ್ ಹೇಳಕ್ಕು
ಸುಬ್ಬಿ : ಟಾಂಕಿಸ್
ಸುಬ್ಬ : ತಾಂಕಿ ನೀರು ತುಂಬುಸುಲೆ ನಿನ್ನ ಹತ್ತರೆಯೇ ಮಡಿಕ್ಕ ಈಗ ಥ್ಯಾಂಕ್ಸ್ ಹೇಳಿ ಹೇಳು
ಸುಬ್ಬಿ : ಥ್ಯಾಂಕ್ಸ್ 
ಸುಬ್ಬ : ಸರಿ ಅದರ ಆನು ಪೇಟೆಗೆ ಹೋಗಿ  ಹೈ ಹೀಲ್ಡ್ ತತ್ತೆ ನಿನಗೆ ..ನೀನು ಎಲ್ಲ ನೆನಪು ಮಾಡಿಕ್ಕೊಂಡು ತಯಾರಾಗಿರು .
 (ಸುಬ್ಬ ಪೇಟೆಗೆ ಹೋವುತ್ತ )
ಸುಬ್ಬಿ : ಅಮ್ಮ ಅಮ್ಮಾ ಇಲ್ಲಿ ಬಾ .
ಅಮ್ಮ : ಎಂಥ ಸುಬ್ಬಿ
ಸುಬ್ಬಿ : (ಭಾರೀ ಕೊಷಿಲಿ)ನೋಡು ಅಮ್ಮಾ ಎನಗೆ ಎಷ್ಟು ಬೇಗ ಇಂಗ್ಲೀಷು ಬಂತು ಗೊಂತಿದ್ದಾ ?
ಅಮ್ಮ : ಹ್ಹೂ ಗೊಂತಾತು ಎಂಗೊಗೆ ಅಲ್ಲಿಗೆ ಕೇಳಿಗೊಂಡು ಇತ್ತು ನಿನ್ನ ಕಲಿಯಾಣ.ಏನಾರು ಎಡವಟ್ಟು ಆಗದ್ರೆ ಸರಿ ..
ಸುಬ್ಬಿ : ಏನಾಗ ಬಿಡು ..ನಾವು ರಜ್ಜ ಸ್ವೀಟ್ ದೆ ತಿಂಡಿದೆ ಮಾಡುವ ಹೋಪ
(ಅಡಿಗೆ ಸಿದ್ಧತೆಯ ಅಭಿನಯ )
    (ಟಕ್ ಟಾಕ್ ಶಬ್ದ ..
ಸುಬ್ಬಿ ; ಓ ಇವು ಬಂದವು ಹೇಳಿ ಕಾಣೆಕ್ಕು
(ಸುಬ್ಬ ಒಳಂಗೆ ಬತ್ತ )
ಸುಬ್ಬ :ಇದಾ ಹೈ ಹೀಲ್ಡ್ ..ಹಾಕಿಗ ..
ಸುಬ್ಬಿ : (ಜಾರಿ ಬೀಳುಲೇ ಆಗಿ )ಹ್ಹಾ ..
ಅಮ್ಮ : ಜಾಗ್ರತೆ ..ಜಾಗ್ರತೆ ..ಸರಿ ನೀನೆಲ್ಲ ಅಭ್ಯಾಸ ಮಾಡಿಗ ..ಆನು ಒಳ ರಜ್ಜ ತಿಂಡಿ ತಯಾರು ಮಾಡುತ್ತೆ ..
ಸುಬ್ಬ : ಎಲ್ಲ ನೆನಪಿದ್ದನ್ನೇ ಸುಬ್ಬಿ ..ಹೆಸರು ಹೇಳು ..
ಸುಬ್ಬಿ : ನಿಂಗ ಕಣ್ಣು ಮುಚ್ಚಿದ್ದಿಲ್ಲಿ ..
ಸುಬ್ಬ : ಹ್ಹ ಹ್ಹಾ ..ಕಣ್ಣು ಮುಚ್ಚಿದೆ
ಸುಬ್ಬಿ :ಚಂದನಾ
ಸುಬ್ಬ :ಊರು (ಹಣೆ ಮುಟ್ಟಿ )
ಸುಬ್ಬಿ:ಮ್ಯಾಂಗಲೋರ್
ಸುಬ್ಬ :ವೆರಿ ಗುಡ್ ಸುಬ್ಬಿ ,ಒಪ್ಪಕ್ಕ ನೀನು ..ಮಕ್ಕ (ತಲೆ ಕೆಲ ಹಾಕಿ )
ಸುಬ್ಬಿ: ಆ ..ಎಂತದಪ್ಪಾ ..ಹ್ಹ ಹ್ಹಾ ಟ್ವೆಂಟಿ ಸಿಕ್ಸ್ ಸರಿಯ ?
ಸುಬ್ಬ :ಅಲ್ಲ ಅಲ್ಲ ನೋ
ಸುಬ್ಬಿ : ಅಪ್ಪಪ್ಪು ಎನಗೆ ಮರತ್ತು ..ನೋ
ಸುಬ್ಬ :ಪ್ರಾಯ ?
ಸುಬ್ಬಿ : ಟ್ವೆಂಟಿ ಸಿಕ್ಸ್ ..ಹೊಪಗ ಥ್ಯಾಂಕ್ಸ್ ಬಪ್ಪಗ ಹಲೋ ಸಮ ಇದ್ದು ಅಲ್ಲದ ?
ಸುಬ್ಬ :ಸರಿ ಇದ್ದು ನಿನಗೆ ಮನಸ್ಸು ಆದರೆ ಎಲ್ಲ ಎಡಿತ್ತು..ಆದರೆ ಮನಸ್ಸಪ್ಪದು ಮಾತ್ರ ನಮ್ಮ ಮೋಡೆ ಗೋಣ  ಕಂಜಿ ಹಾಕಿ ಅಪ್ಪಗ ..(ನೆಗೆ )
ಸುಬ್ಬಿ : ಇದಾ ಬೇಡ !
(ಬಾಗಿಲು ಟಕ ಟಕ್ ಟಕ್ ಶಬ್ದ )
ಸುಬ್ಬ :ಅವು ಬಂದವು ಹೇಳಿ ಕಾಣೆಕ್ಕು ಸುಬ್ಬಿ ನೀನು ಒಳ ಇರು ಆನು ದೇಣಿಗೇಲಿ ಅಪ್ಪಗ ಬಾ ..
                                 (ಗೆಳೆಯರ ಪ್ರವೇಶ )
ಸುಬ್ಬ :welcome friends welcome ,please be seated
Friends :thanks
Eriend 1 :how are you Mr S .Raja ?
ಸುಬ್ಬ:Iam very fine ,thanks ,how are you dears ?
Friends :we are fine. thanks
Friend 1 :Your house is very beautiful.You must be proud of it
ಸುಬ್ಬ :thanks ,credit goes to my wife
Friend 2: By the by Mr.S.Raja,where is your wife ?
ಸುಬ್ಬ: just wait, I will call her..chandana ..chandana..
 ಸುಬ್ಬಿ : ಎಂತಾಳಿ ..?ಹ್ಹ ಹ್ಹ ..!ಹಲ್ಲೂ ಹಲ್ಲೂ ..!!(ಸುಬ್ಬ ಕೋಪಂದ ಅದರ ನೋಡುತ್ತ ,ಗಾಭರಿ ಆಗಿ )ಅಲ್ಲಲ ..ಥ್ಯಾಂಕ್ಸ್ ..ಥ್ಯಾಂಕ್ಸ್
(ಸುಬ್ಬ ನಾಚಿಕೆ ಆಗಿ ಹಣೆಗೆ ಕೈ ಹಿಡಿತ್ತ ಅದೇ ಹೊತ್ತಿಂಗೆ )
Friend 1:How are you Mrs Raja?May I know your name please
ಸುಬ್ಬಿ :(ಸುಬ್ಬ ಹಣೆಗೆ ಕೈ ಮಡುಗಿದ್ದರ ನೋಡಿ) (ಸ್ವಗತ ) ಓ ಇವು ಹನೆಗ್ ಕೈ ಮದುಗಿದ್ದವು ಅಂಬಗ ಅವು ಸುರುವಿಂಗೆ ಊರ ಹೆಸರು ಕೇಳಿರೆಕ್ಕು..(ಪ್ರಕಾಶ ) ಮ್ಯಾಂಗಲೋರ್
(ಇದರ ಉತ್ತರ ಕೇಳಿ ತಲೆ ಕೆಟ್ಟು ಕಣ್ಣು ಮುಚ್ಚಿದ ಸುಬ್ಬ )
Friend 2 : (ಸಂಶಯಂದ ಮೋರೆ ಮೋರೆ ನೋಡಿಕ್ಕಿ )you are from which place ?
ಸುಬ್ಬಿ :( ಸುಬ್ಬ ಕಣ್ಣು ಮುಚ್ಚಿದ್ದರ ನೋಡಿಕ್ಕಿ  )ಚಂದನಾ
Friend 1 :She is very young
Friend 2 :How old are you Mrs Raja ?
 (ನಾಚಿಕೆಂದ ಸುಬ್ಬ ತಲೆತಗ್ಗಿಸಿ ನಿಂದಿತ್ತಿದ )
ಸುಬ್ಬಿ : (ಸುಬ್ಬ ತಲೆ ಕಂತು ಹಾಕಿದ್ದರ ನೋಡಿಕ್ಕಿ ) ನೋ

friend  2 : (ವಿಚಿತ್ರವಾಗಿ ನೋಡಿ ) Do you have any children ?
(ಸುಬ್ಬ ಒಳ ಹೋಗು ಹೇಳಿ ಸನ್ನೆ ಮಾಡಿದ )
ಸುಬ್ಬಿ : (ಸುಬ್ಬನ ಸನ್ನೆಯ ಕೈ ನೆಗ್ಗಿದ್ದು  ಹೇಳಿ ಭಾವಿಸಿ ) ಟ್ವೆಂಟಿ ಸಿಕ್ಸ್
friends :Oh my God!
ಸುಬ್ಬ : ಸುಬ್ಬಿ ಒಳ ಹೋಗು ಒಳ ಹೋಗು ಒಂದರಿ ..
Friends : Mr S. Raja Is your wife litle ?! (ತಲೆ ಕೆಟ್ಟಿದ ಹೇಳುವಾನ್ಗೆ ಅಭಿನಯಿಸಿ ಕೇಳಿದವು )
ಸುಬ್ಬ :Sorry my friends sorry She doesn’t know English ,I forgotton to tell
Friends :ok its all right,we will come again ,It was nice to see you and your wife
ಸುಬ್ಬ : Thanks ,It is our pleasure
ಸುಬ್ಬಿ : ( ಗಡಿ ಬಿಡಿಲಿಒಳಂದ ಕಾಫಿ ತಪ್ಪ ಬದಲು ಮೆಟ್ಟು ಹಿಡ್ಕೊಂಡು ಬಂದು ) ಹಲೋ ಹಲೋ ..
Friends : What is this ?
ಸುಬ್ಬಿ : ಹೈ .. ಹೈ ..ಒಹ್ ಕಾಫಿ ತತ್ತೆ .
Friends: ok..ok all right ,May God bless you ,see you again
                                           (ಹೋವುತ್ತವು)
ಸುಬ್ಬ : ಅಲ್ಲ ಸುಬ್ಬಿ ಎನ್ನ ಮರ್ಯಾದೆ ತೆಗದೆ ಅಲ್ಲ ..!ಛೆ ..
ಸುಬ್ಬಿ : ಆನೆಂಥ ಮಾಡಿದೆ ?ಎಲ್ಲ ನಿಂಗ ಹೇಳಿ ಕೊಟ್ಟ ಹಾಂಗೆ ನಿಂಗಳ ಕೈ ಕಣ್ಣು ನೋಡಿಗೊಂಡೆ  ಹೇಳಿದ್ದೆ ಅಷ್ಟು ಸರಿಯಾಗಿ ಮಾತಾಡಿದ್ದೆ ಇಂಗ್ಲಿಷಿಲಿ !
ಸುಬ್ಬ : ಹೇಳಿದ್ದೇನೋ ಆನು ಹೇಳಿ ಕೊಟ್ಟ ಹಾಂಗೆ ,ಆದರೆ ಎಲ್ಲ ಉಲ್ಟಾ ಪಲ್ಟಾ ಹೇಳಿದ್ದೆ ,ಹೆಸರು ಕೇಳ್ರೆ ಊರು ,ಊರು ಕೇಳ್ರೆ ಹೆಸರು ,ಪ್ರಾಯ ಕೇಳ್ರೆ ನೋ ಮಕ್ಕ ಎಷ್ಟು ಕೇಳ್ರೆ ೨೬ ಹೇಳಿ ಹೇಳಿದೆ !ನೀನು ಬುದ್ಧಿವಂತೆ ಹೇಳಿ ಭಾವಿಸಿ ಆನು ಮೋಸ ಹೋದೆ ..
ಸುಬ್ಬಿ :ಇಲ್ಲೆನ್ನೇ ಆನು ಎಲ್ಲ ಸರಿ ಹೇಳಿದ್ದೆ !ನಿಂಗ ಸುರುವಿಂಗೆ ಹಣೆಗೆ ಕೈ ಮಡುಗಿದಿ ಆನು ಊರು ಹೇಳಿದೆ ,ನಂತರ ನಿಂಗ ಕಣ್ಣು ಮುಚ್ಚಿದಿ,ಕಣ್ಣು ಮುಚ್ಚಿದರೆ ಎಸರು ಹೇಳು ಹೇಳಿ ಕೊಟ್ಟದು ನಿಂಗಳೇ ಅನ್ನೇ ಹಾಂಗೆ ಹೇಳಿದೆ ಆನು ..ನಿಂಗ ತಲೆ ತಗ್ಗಿಸಿ ಇಪ್ಪಗ ಟ್ವೆಂಟಿ ಸಿಕ್ಸ್ ಹೇಳಿದ್ದೆ ಕೈ ನೆಗ್ಗಿ ಅಪ್ಪಗ ನೋ ಹೇಳಿದ್ದೆ ಎಲ್ಲ ಸರಿಯಾಗಿಯೇ ಹೇಳಿದ್ದೆ ಆನು ಎನ್ನ ಬೈಯಡಿ ಸುಮ್ಮ ಸುಮ್ಮನೆ ..ಬೈವಲೆ ಆನೆಂಥ ತಪ್ಪು ಮಾಡಿದ್ದೆ ಹೇಳಿ ಬೇಕನ್ನೇ ..ಸುರುವಿಲಿ ರಜ್ಜ ಗಡಿ ಬಿಡಿ ಆತು ಅದು ಬಿಟ್ರೆ ಒಳುದ್ದೆಲ್ಲ ಸರಿ ಹೇಳಿದ್ದಿಲ್ಲೆಯ ಆನು ?
ಸುಬ್ಬ :ಅಯ್ಯೋ ರಾಮ ದೇವರೇ !ನೀನಿ ಸುರುವಿಂಗೆ ಥ್ಯಾಂಕ್ಸ್ ಹೇಳಿದ್ದು ನೋಡಿ ತಲೆ ಕೆಟ್ಟು ಹಣೆ ಹಣೆ ಬಡ್ಕೊಂಡ್ರೆ ಅದರ ಹಣೆ ಮುಟ್ಟಿದ್ದು ಹೇಳಿ ಭಾವಿಸುದ ?ಅಷ್ಟು ಗೊಂತವುತ್ತಿಲ್ಲೆಯ ?ನಿನ್ನ ಹೆಡ್ಡು ಹೆಡ್ಡು ಬುದ್ಧಿಗೆ ನಾಚಿಕೆ ಆಗಿ ಕಣ್ಣು ಮುಚ್ಚಿದರೆ ಅದರ ಕಣ್ಣು ಮುಚ್ಚುದು ಹೇಳಿ ತಿಳಿವದ ..?! ಛೆ ..ಎಲ್ಲ ಎನ್ನ ಕರ್ಮ ! ಹಣೆ ಬರ ,,ಅಲ್ಲ ಸುಬ್ಬಿ ಅವು ನಿನ್ನ mad ಹೇಳಿ ಕೇಳಿದವು ಗೊಂತಿದ್ದಾ ?
ಸುಬ್ಬಿ :ಅದೆಂತದು ಮೇ ಮೇ ಹೇಳ್ರೆ ?
(ಅಪ್ಪ ಅಮ್ಮ ದೂರಲ್ಲಿ ನಿಂದು ನೋಡುತ್ತಾ ಇದ್ದವು )
ಸುಬ್ಬ : ಇಲ್ಲೆಪ್ಪಾ ಇಲ್ಲೆ ಇನ್ನು ನಿನಗೆ ಆನು ಇಂಗ್ಲೀಷು ಹೇಳಿ ಕೊಡುಲೆ ಎನ್ನಂದ ಎಡಿಯ !ನಿನಗೆ ಆ ಬ್ರಹ್ಮನೇ ಬರಕ್ಕಷ್ಟೇ ..ನಿನ್ನಂತೋವಕ್ಕೆ ಇಂಗ್ಲೀಷು ಹೇಳಿ ಕೊಟ್ಟದಕ್ಕೆ ಮೆಟ್ಟಿಲಿ ಬಡ್ಕೊಳ್ಳಕ್ಕು ಆನು
ಸುಬ್ಬಿ : (ಕೈಲಿ ಇದ್ದ ಮೆಟ್ಟು ತೋರ್ಸಿ ) ಬಡಿಯಕ್ಕಾ ?
ಅಮ್ಮ : (ಮುಂದೆ ಬಂದು ) ಎಂಥ ಸುಬ್ಬಿ ನಿನ್ನದು ಅವತಾರ ?ಗೆಂಡಂಗೆ ಬಡಿವಲೆ  ಮೆಟ್ಟು ತೋರ್ಸುತ್ತೆಯ ?ನಾಚಿಕೆ ಅವುತ್ತಿಲ್ಲೆಯ ನಿನಗೆ ?ತಪ್ಪಾತು ಹೇಳು ಹೋಗು !
ಸುಬ್ಬ : ಅದರ ತಪ್ಪಾತು ಬೇಡ ಏನೂ ಬೇಡ ..ಆನಿನ್ನು ಒಂದು ಕ್ಷಣವು ಇದರೊಟ್ಟಿಂಗೆ ಇರ್ತಿಲ್ಲೆ ,ಆನು ಈಗಲೇ ಮನೆ ಬಿಟ್ಟು ಹೋವುತ್ತೆ .. (ಕೋಪಲ್ಲಿ ಹೆರ ಹೋಪಲೆ ಹೆರಟ  )
                                (ಸುಬ್ಬಿ ಕೂಗುತ್ತು)
ಅಪ್ಪ : ನಿಲ್ಲು ಸುಬ್ಬ ನಿಲ್ಲು ..(ಹೆಗಲಿಂಗೆ  ಕೈ ಹಾಕಿ ) ಎಂಥ ಸುಬ್ಬ ಇದು ಮಕ್ಕಳಾಟಿಕೆ ! ಇಷ್ಟು ಸಣ್ಣ ಕಾರಣಕ್ಕೆಲ್ಲ  ಕೋಪ ಮಾಡಿಗೊಂಡು ಮನೆ ಬಿಟ್ಟು ಹೋಪದ ?ಸುಬ್ಬಿ ರಜ್ಜ ಹಠ ಮಾರಿ ಹೇಳುದು ಬಿಟ್ರೆ ಒಳ್ಳೆ ಗುಣದ ಕೂಸು ಅಲ್ಲದ ?ಇಷ್ಟಕ್ಕೂ ಇಂಗ್ಲೀಷು ಕಲಿಸುಲೆ ಹೆರಟದು ನೀನೇ ಅನ್ನೆ ?ಇಂಗ್ಲೀಷು ಗೊಂತಿಲ್ಲದ್ದ ಅದು ನಿನ್ನ ನೋಡಿ ಉತ್ತರ ಕೊಟ್ಟತ್ತು..ಏನೋ ರಜ್ಜ ತಪ್ಪಾತು ಅದರಲ್ಲಿ ತಲೆ ಹೋಪಂತಾದ್ದು ಎಂತ ಇದ್ದು ?ಎಷ್ಟಾದರೂ ಸುಬ್ಬಿ ನಿನಗಾಗಿಯೇ ಹುಟ್ಟಿದ ಕೂಸು ಅಲ್ಲದ ?ಅದಕ್ಕೆ ಈಗ ಇನ್ನೂ 16-17  ವರ್ಷ ಅನ್ನೇ ,ಅಜ್ಜಿಯ ಆಸೆ ತೀರುಸುಲೆ ಬೇಕಾಗಿ ಕಳುದ  ತುಂಬಾ ಸಣ್ಣ ಪ್ರಾಯದ ಅದಕ್ಕೂ ನಿನಗೂ ಮದುವೆ ಮಾಡಿದ್ದು ಅನ್ನೇ ನಿನಗೂ 25 -26 ವರ್ಷ ,,ಸಣ್ಣವೇ..ಆದರೆ ಅದು ಇನ್ನೂ ಸಣ್ಣ ಅಲ್ಲದ ? ಅದರ ಸಣ್ಣ ಪ್ರಾಯಲ್ಲಿ ಎಂಗ ಮದುವೆ ಮಾಡಿದ್ದು ಎಂಗಳ ತಪ್ಪು ..ಆದರೆ ಆಗಿ ಆತು ಅಲ್ಲದ ? ಕ್ಷಮಿಸಿ ಬಿಡು ,ಎಷ್ಟಾದರೂ ಅದು ನಿನ್ನ ಪ್ರೀತಿಯ ಹೆಂಡತಿ ಅಲ್ಲದ ? ಅಲ್ಲಿ ನೋಡು .ಹೇಂಗೆ ಕೂಗುತ್ತಾ ಇದ್ದು ? ಹೋಗು ಅದರ ಸಮಾಧಾನ ಮಾಡು
ಸುಬ್ಬ : ಎನ್ನದೇ ತಪ್ಪು ಸುಬ್ಬಿ ಕೂಗಡ .ಇನ್ನು ನಿನ್ನ ಯಾವತ್ತಿಂಗು ಇಂಗ್ಲೀಷು ಬತ್ತಿಲ್ಲೆ ಹೇಳಿ ಹಂಗುಸುತ್ತಿಲ್ಲೆ,ಬೈತ್ತಿಲ್ಲೆ ,,ಖಂಡಿತಾ ..ಇಂಗ್ಲೀಷು ಭಾಷೆಯ ಭ್ರಮೆ ಬಿಟ್ಟು ಹೋತು ಎನಗೆ ,ಎನ್ನ ಕ್ಷಮಿಸು ಚಿನ್ನ ..ಇನ್ನು ಕೂಗಡ .
ಸುಬ್ಬಿ : ಇಲ್ಲೆ ಎನ್ನದು ತಪ್ಪು ಇದ್ದು. ನಿಂಗ ತುಂಬಾ ಸರ್ತಿ ಹೇಳಿದರೂ ಇಂಗ್ಲೀಷು ಮಾತಾಡುಲೆ ಕಲಿಸುವ ಕ್ಲಾಸ್ ಗೆ ಹೋಗಿ ಕಲಿಯದ್ದದು ಎನ್ನ ತಪ್ಪು .ನಾಳೆನ್ದಲೇ ಆನು ಕ್ಲಾಸಿಂಗೆ ಹೋಗಿ ಕಲಿತ್ತೆ...
ಸುಬ್ಬ : ಬೇಡ ಸುಬ್ಬಿ ಎನಗೆ ಈಗ ಇಂಗ್ಲೀಷಿನ ಭ್ರಮೆ ಪೂರ ಬಿಟ್ಟು ಹೋತು ,ಇಂಗ್ಲೀಷು ಬಾರದ್ದರೆ ಏನೂ ತೊಂದರೆ ಇಲ್ಲೆ ,  ಅದು ನಾಚಿಕೆ ಹೇಳುವ ಭ್ರಮೆ ಬೇಡ .ಚಂದದ ನಮ್ಮ ಭಾಷೆ ಕನ್ನಡ ಕಸ್ತೂರಿ ಇಪ್ಪಗ ನಮಗೆ ಇಂಗ್ಲೀಷಿನ ಹಂಗು ನಮಗೆಂತಕೆ?ನಮ್ಮ ಜಗಳ ನೋಡಿ ಅತ್ತೆ ಮಾವ ಎಂತ ಭಾವಿಸಿದವೋ  ಏನ ?
ಸುಬ್ಬಿ : ಎಲ್ಲ ನಿಂಗಳೇ ಮಾಡಿದ್ದು ..
ಸುಬ್ಬ : ಪುನಃ ಜಗಳ ಸುರು ಮಾಡಿದೆಯ ?ಜಗಳ ಸಾಕು ಇಲ್ಲಿ ಬಾ .


ಅಪ್ಪ : (ಅಮ್ಮನ ಹತ್ತರೆ ) ; ಅಬ್ಬ ..ಅವು ರಾಜಿ ಆದವು ..ತಪ್ಪು ಅವರದ್ದಲ್ಲ ನಮ್ಮದೇ .ಈಗ ಕಾನೂನೇ ಇದ್ದು 18 ವರ್ಷಕ್ಕೆ ಮೊದಲು ಮದುವೆ ಮಾಡುಲಾಗ ಹೇಳಿ ,ಇದು ಆರಿಂಗಾದರು ಗೊಂತಾದರೆ ನಮಗೆ ಜೈಲು ಅವುತ್ತು .ಹಿರಿಯರ ಆಸೆ  ತೀರ್ಸುಲೆ ಹೇಳಿ ನಾವು ಇದರ ಇಷ್ಟು ಸಣ್ಣ ಪ್ರಾಯಲ್ಲಿ ಆಡಿ ಕೊಣಿವ ಕಾಲಲ್ಲಿ ಮದುವೆ ಮಾಡ್ರೆ ಹೀಂಗೆ ಆವುತ್ತಿದ.ಒಂದು ಕೆಲಸ ಮಾಡುವ ,ಸುಬ್ಬ ಹೇಂಗೂ ಬಪ್ಪ ತಿಂಗಳು ಅಮೆರಿಕಕ್ಕೆ ಹೊವುತ್ತ ಅಲ್ಲದ ?ಅವಂಗೆ ಈಗ ಇದರ ಒಟ್ಟಿಂಗೆ ಕರಕೊಂಡು ಹೋಪಲೆ ಆವುತ್ತಿಲ್ಲೆ ಅಲ್ಲದ ? ಅವ ಬಪ್ಪಗ ಎರಡು ಮೂರು ವರ್ಷ ಅವುತ್ತು,ಅಷ್ಟು ಸಮಯ ಇನ್ನು ಸುಬ್ಬಿ ಶಾಲೆಗೆ ಹೋಗಿ ಕಲಿಯಲಿ ,ಮುಂದೆದೆ ಅದು ಓದಲಿ,ನಾವು ಮಾಡಿದ ತಪ್ಪಿನ ರಜ್ಜ ಆದರೂ ಸಮ ಮಾಡುವ
ಅಮ್ಮ :ಅಕ್ಕು ಹಾಂಗೆ ಮಾಡುವ   
ಅಪ್ಪ : (ಸಭಿಕರ ಹತ್ತರೆ )..ಎಂಗಳ   ನೋಡಿ ಆದರೂ ಇನ್ನು ಬೇರೆ ಆರೂ ಕೂಸುಗೊಕ್ಕೆ  18 ವರ್ಷಕ್ಕೆ ಮೊದಲು ಮದುವೆ ಮಾಡುಲಾಗ ಹೇಳಿ ಅರ್ಥ ಮಾಡಿಗೊಳ್ಳಲಿ ,ಇನ್ನು ನಿಂಗ ಆರೂ ಕೂಡಾ ಎಂಗ ಮಾಡಿದ ತಪ್ಪಿನ ಮಾಡಡಿ  ಆತಾ ?

                                     ಶುಭಂ









 17 ವರ್ಷಗಳ ನಂತರ ಭೇಟಿಯಾದ ನಮ್ಮ ಸುಬ್ಬಿ ಇಂಗ್ಲೀಷು ಕಲ್ತದು ನಾಟಕ ತಂಡದ ಶ್ರೀಮತಿ ರಾಜೇಶ್ವರಿ ,ಶ್ರೀಮತಿ ರಾಜಿ ಬಾಲಕೃಷ್ಣ ಕಾಕುಂಜೆ ,ನಾನು ಮತ್ತು ಶ್ರೀಮತಿ ಪುಷ್ಪ ಖಂಡಿಗೆ
  ನಾಟಕದಲ್ಲಿ ನಾನು(ಸುಬ್ಬ ರಾಜ -ಎಸ್ .ರಾಜ ) ಮತ್ತು ಪುಷ್ಪಾ ಖಂಡಿಗೆ (ಸುಬ್ಬಿ -ಸುಬ್ಬ ಲಕ್ಷ್ಮಮ್ಮ )

ಈ ನಾಟಕವನ್ನು ೧೯೮೪ರಲ್ಲಿ ನಾನು ರಚಿಸಿದ್ದು ಇದು 1984 ರ ಮೊದಲು ಅಥವಾ ಅನಂತರ ಬೇರೆ ಯಾರದಾದರೂ ಹೆಸರಲ್ಲಿ ಪ್ರಕಟವಾಗಿದ್ದು ತಮ್ಮ ಗಮನಕ್ಕೆಬಂದರೆ  ಕೂಡಲೇ ಒಂದು ವಾರದ  ಒಳಗೆ  ತಿಳಿಸಬೇಕಾಗಿ ವಿನಂತಿ -ಡಾ.ಲಕ್ಷ್ಮೀ ಜಿ ಪ್ರಸಾದ