Wednesday 23 July 2014

ಗಿಳಿ ಬಾಗಿಲು (ಹವ್ಯಕ ಬ್ಲಾಗ್ )-30 ಕಾಡ ಸೊಪ್ಪು ತೋಡ ನೀರು -ಡಾ.ಲಕ್ಷ್ಮೀ ಜಿ ಪ್ರಸಾದ

ಮೊನ್ನೆ ಒಂದಿನ ಪೇಪರ್ ಓದುವಾಗ ಒಂದು ವಿಷಯ ಗಮನಕ್ಕೆ ಬಂತು .ಅದರಲ್ಲಿ ಒಂದಷ್ಟು ವಿಜ್ಞಾನಿಗಳ ಸಂಶೋಧನೆ ಬಗ್ಗೆ ಮಾಹಿತಿ ಇತ್ತು .
ನಾವು ಇಷ್ಟರತನಕ ಶುದ್ಧಗೊಳಿಸಿದ ಆಹಾರ ತಿನ್ನಕ್ಕು ,ಆಹಾರಲ್ಲಿ ಬ್ಯಾಕ್ಟೀರಿಯಂಗ ಇದ್ದರೆ ಆರೋಗ್ಯಕ್ಕೆ ಹಾನಿ ಹೇಳುದರ ಕೇಳಿಗೊಂಡು ಬಂದದು ಅನ್ನೇ.ಆದರೆ ಅದರಲ್ಲಿ ವಿಜ್ಞಾನಿಗ ಆಹಾರಲ್ಲಿ ಒಂದಷ್ಟು ಜೀವಿಗಳ ಸೇರಿಸಿ ತಿಮ್ಬದು ಒಳ್ಳೇದು ,ಆರೋಗ್ಯಕ್ಕೆ ಸಣ್ಣ ಪ್ರಮಾಣದ ಬ್ಯಾಕ್ಟೀರಿಯಂಗ ಬೇಕು .ಅದರಂದಾಗಿ ರೋಗ ನಿರೋಧಕ ಶಕ್ತಿ ಹೆಚ್ಚಾವುತ್ತು ಇತ್ಯಾದಿ ಮಾಹಿತಿಗಳ ಸಂಶೋಧನೆಯ ಆಧಾರಲ್ಲಿ ಕೊಟ್ಟಿದವು .ಅದಕ್ಕೆ ಸಾಕ್ಷಿಯಾಗಿ ಯೋಗರ್ಟ್ (ಹಾಲಿನ ಕಿಣ್ವನಕ್ಕೆ ಒಳಪಡಿಸಿದ ಪೇಯ ) ಇಂದಾಗಿ ಆರೋಗ್ಯದ ಮತ್ತ ಹೆಚ್ಚು ಅಪ್ಪದರ ಬಗ್ಗೆ ವಿವರಿಸಿದ್ದವು .ಇದರ ಓದುವಗ  ಎಂಗಳ ಭಾರೀ ಪ್ರೀತಿಯ ಪೆಲತ್ತಡ್ಕ ಅಜ್ಜಿ (ಎನ್ನ ಅಪ್ಪನ ಕಿರಿಯಬ್ಬೆ,ಅಮ್ಮನ ಸೋದರತ್ತೆ ಕೂಡಾ )  ಹೇಳುತ್ತಾ ಇದ್ದ ಒಂದು ಮಾತು ನೆನಪ್ಪಾತು .

ಎನ್ನ ಅಜ್ಜಂಗೆ ಅಮ್ಮಂದೆ ದೊಡ್ದಮ್ಮಂದೆ ಇಬ್ರು ಕೂಸುಗ ಮಾತ್ರ.ಹಾಂಗಾಗಿ  ಅಜ್ಜನ ಮನೆಲಿ ಹತ್ತು ಜನ (ದೊಡ್ಡಮ್ಮನ ಮಕ್ಕ ಐದು ಜನ ,ಎಂಗ ಐದು ಜನ) ಪುಳ್ಳಿಯಕ್ಕಳದ್ದೆ ಕಾರ್ಬಾರು .ಎಂಗ ಕಲ್ಲು ಇಡ್ಕದ್ದ ಬೀಜದ ಮರ/ಮಾವಿನ ಮರಂಗ  ಆ ಊರಿಲಿ ಒಂದುದೆ ಇತ್ತಿಲ್ಲೆ.ಬೇಸಗೆ ರಜೆಲಿ ಉದಿಯಪ್ಪಗ ಅಜ್ಜಿ ಮಾಡಿದ  ದೋಸೆಯೋ ಸೆಖೆಗೆರದ್ದೋ ತಿಂದಿಕ್ಕಿ ಕೊಕ್ಕೆದೆ ಬಟ್ಟಿದೆ ಹಿಡ್ಕೊಂಡು ಬೀಜ ಕೊಯ್ವ ನೆಪಲ್ಲಿ ಮನೆಂದ ಎಲ್ಲರೂ ಪರಾರಿ ಅಪ್ಪದು ,ನಾಲ್ಕು ಬೀಜ ಕೊಯ್ದ ಹಾಂಗೆ ಮಾಡಿಕ್ಕಿ ಎಂಗಳ ಕಲ್ಲು ಇಡ್ಕುವ ಗುರಿಯ ಪ್ರದರ್ಶನ ,ಕಲ್ಲು ಇಡ್ಕಿ ಬೀಜ ಹಣ್ಣಿನ ಬೀಳ್ಸುದು,ಮತ್ತೆ ಹತ್ತರೆ ಇಪ್ಪ ಮಾವಿನ ಮರಕ್ಕೆ ಕಲ್ಲು ಇಡುಕ್ಕಿ ಮಾವಿನಕಾಯಿ ಬೀಳ್ಸುದು,ಮನೆಂದ ಬಪ್ಪಗಳೇ ಉಪ್ಪು ಖಾರ ಅಜ್ಜಿಯ  ಕಣ್ಣಿಂಗೆ ಬೀಳದ್ದ ಹಾಂಗೆ ತಂದುಗೊಂಡು ಇತ್ತಿದೆಯ .ಅದರ ಹಾಕಿ ಮಾವ್ನಕಾಯಿ ತಿಂದು ಬೀಜ ಹಣ್ಣು ತಿಂದು ,ಬೆಟ್ಟು ಗೆದ್ದೆಲಿ ಪಿಲೆ(ಚಿನ್ನಿ ದಾಂಡು ?)ಆಡಿಕ್ಕಿ  ಮಧ್ಯಾಹ್ನ ಎರಡು ಗಂಟೆಗೆ ಮನೆಗೆ ಬಪ್ಪದು.ಹೋಪಗಳೇ ಅಜ್ಜಿ ಬೇಗ ಬನ್ನಿ ಹೊತ್ತು ಮಾಡ್ದಿ ಹೇಳುತ್ತ.ಆದರೂ ಎಂಗ ಬಪ್ಪದು ಎರಡು ಗಂಟೆ ಮೇಲೆಯೇ !ಎನ್ನ ಅಜ್ಜನ ಮನೆಲಿ ಪುಳ್ಳಿಯಕ್ಕಳಲ್ಲಿ ಕೂಸು ಮಾಣಿ ಹೇಳಿ ಬೇಧ ಇತ್ತಿಲ್ಲೆ,ಹಾಂಗಾಗಿ ಈ ಗುಂಪಿಲಿ ಆನುದೆ ಇತ್ತಿದೆ .

ಬೆಶಿಲಿಂಗೆ ಮನೆಗೆ ಬಂದು ಮೀವಲೆ ಹೋಪದು ರಜ್ಜವೇ ರಜ್ಜ ಹೊತ್ತು ಹೇಳಿ ಅಜ್ಜಿಯ ಪುಸಲಾಯಿಸಿ ತೋಡಿನ್ಗೆ ಈಜುಲೆ ಹೋಗಿಕೊಂಡು ಇತ್ತಿದೆಯ.(ಅಂಬಗ ಬೇಸಗೆಲಿ ಕೂಡಾ ಆ ತೋಡಿನ ಗುಂಡಿಲಿ ಈಜುವಷ್ಟು ನೀರು ಇತ್ತು ,ಈಗ ಮಾರ್ಚ್ ಬರಕ್ಕಾದರೆ ನೀರು ಹರಿವದು ನಿಲ್ಲುತ್ತು )ಅಷ್ಟೊತ್ತಿಂಗೆ ಎನ್ನ ಅಜ್ಜಿ ಎಂಗೊಗೆ ವಿಶೇಷವಾಗಿ ಎನಗೂ ದೊಡ್ಡಮ್ಮನ ಮಗಳು ತಂಗೆಗೂ ತಲೆ ಚೆಂಡಿ ಮಾಡಡಿ ಹೇಳಿ ಹೇಳಿಗೊಂದು ಇತ್ತಿದ.ಎಂಗ ಹೂ0ಕುಟ್ಟಿಕ್ಕಿ ಆಚೊಡೆ ಹೋಗಿ ಈಜುವ ಮೀವ ನೆಪಲ್ಲಿ ನೀರಿಲಿ ಮುಳುಗಿಕೊಂಡು ಇತ್ತಿದೆಯ.

ಎಂಗ ಗಂಟೆ ಮೂರು ಆದರೂ ಮಿಂದು ಬಾರದ್ದೆ ಅಪ್ಪಗ ಅಜ್ಜಿ ಕೋಲು ಹಿಡುಕ್ಕೊಂಡು ಬಂದಪ್ಪಗ ಓಡಿ  ಹೋಗಿ ಮನೆ ಸೇರಿ ಕೊಂಡು ಇತ್ತಿದೆಯ .

ಕೆಲವು ಸರ್ತಿ ಎಂಗೊಗೆ ಶೀತ ಜ್ವರ ಎಲ್ಲ ಬಂದುಕೊಂಡು ಇತ್ತಿದು. ಎನ್ನ ಪೆಲತ್ತಡ್ಕ ಅಜ್ಜಿ ಬಂದಿಪ್ಪಗಳುದೆ ಹೀಂಗೆ ಆಗಿಕೊಂಡು ಇತ್ತು.ಒಂದು ಸರ್ತಿ ಎಂಗೊಗೆ ಎಲ್ಲೊರಿಂಗೂ ಜ್ವರ ಬಂತು .ಅಂಬಗ ಎನ್ನ ಅಜ್ಜಿ ಪೆಲತ್ತಡಕ ಅಜ್ಜಿ ಹತ್ರೆ ಈ ಮಕ್ಕ ಒಂದುದೆ ಹೇಳಿದ್ದು ಕೇಳ್ತವಿಲ್ಲೇ,ಬೆಶಿಲಿಂಗೆ ಸೊಕ್ಕಿಕ್ಕಿ ಬಂದು ತೋಡ ನೀರಿಲಿ ಆಡುತ್ತವು .ಅಜ್ಜ ನೋಡಿಯೂ ನೋಡದ್ದ ಹಾಂಗೆ ಸುಮ್ಮನಿದ್ದವು (ಅಜ್ಜಂದು ಅಪರೊಕ್ಷವಾಗಿ ಎಂಗೊಗೆ ಬೆಂಬಲ ಇತ್ತು !)ಇತ್ಯಾದಿಯಾಗಿ ದೂರು ಹೇಳಿಗೊಂಡು ಇತ್ತಿದ.ಅಂಬಗ ಪೆಲತ್ತಡ್ಕ ಅಜ್ಜಿ "ಮಕ್ಕ ಹಾಂಗೆ ಇರಕ್ಕು ಲಕ್ಷ್ಮೀ   (ಎನ್ನ ಅಜ್ಜಿಯ ಹೆಸರು ಲಕ್ಷ್ಮೀ ಹೇಳಿ ,ಹಾಂಗಾಗಿಯೇ ಎನ್ನ ಹೆಸರು ಕೂಡ ಅದೇ)ಮಕ್ಕ ಕಾಡ ಸೊಪ್ಪು ತೋಡ ನೀರು ಹೇಳಿ ಬೆಳೆಯಕ್ಕು.ಹಾಂಗೆ ಬೆಳದರೆ ಅವಕ್ಕೆ ಎಲ್ಲವನ್ನು ತಡಕ್ಕೊಂಬ ಶಕ್ತಿ ಬಪ್ಪದು .ಮಕ್ಕಳ ಅತೀ ಜಾಗ್ರತೆ ಮಾಡುಲಾಗ ,ರಜ್ಜ ಮಳೆಲಿ ನೆನೆಯಕ್ಕು ,ಬೆಶಿಲಿಂಗೆ ಹೊಯಕ್ಕು ಸಿಕ್ಕಿದ್ದು ತಿನ್ನಕ್ಕು ಒಂದೆರಡು ಸರ್ತಿ ರಜ್ಜ ಶೀತ ಅಕ್ಕು .ಆದರೆ ಅವು ಗಟ್ಟಿ ಮುಟ್ಟಾಗಿ ಬೆಳೆತ್ತವು,ಶೀತ ಆದರೆ ಕುಂಕುಮ ಬೆಶಿ ಮಾಡಿ ನೆತ್ತಿಗೆ ಹಾಕಿ,ಮತ್ತೆ ಬೆಶಿ ಹಾಲಿನಗೆ ಒಂದು ಚಿಟಿಕೆ ಅರಿಶಿನ ಹಾಕಿ ಕುಡಿವಲೆ ಕೊಡು .ಅರ್ಧ ಗಂಟೆಲಿ ಕಮ್ಮಿ ಅವುತ್ತಿದ  ಹೇಳಿ" ಅಜ್ಜಿಗೆ ಸಮಾಧಾನ ಮಾಡಿಕೊಂಡು ಇತ್ತಿದವು .

ನಮ್ಮ ಹಿರಿಯರು  ಶಾಲೆ ಮೆಟ್ಲು ಹತ್ತದ್ದರೂ ,ಯಾವ ಸಂಶೋಧನೆ ಮಾಡದ್ದರೂ ಅವರಲ್ಲಿ ತುಂಬಾ ಅನುಭವ ಇತ್ತು ,ಜ್ಞಾನ ಇತ್ತು ,ಹಾಂಗಾಗಿ  ಈಗ ವಿಜ್ಞಾನಿಗ ಹೇಳಿದ ವಿಚಾರ ಅವಕ್ಕೆ ಅಂದೇ ಗೊಂತಿತ್ತು ,ಹಾಂಗಾಗಿಯೇ ಕಾಡ ಸೊಪ್ಪು ತೋಡ ನೀರು ಹೇಳುವ ಮಾತು ಬಳಕೆಗೆ ಬಂದಿರೆಕ್ಕು ಅಲ್ಲದ ?

ಗಿಳಿ ಬಾಗಿಲು(ಹವ್ಯಕ ಬ್ಲಾಗ್ )-29 ಬೇಳೆಗೆ ಮಣ್ಣು ಉದ್ದಿದ ಹಾಂಗೆ -ಡಾ.ಲಕ್ಷ್ಮೀ ಜಿ ಪ್ರಸಾದ

ಆನು ಇಂದು ಅಮ್ಮಂಗೆ ಫೋನ್ ಮಾಡಿ ಅಪ್ಪಗ ಅಭಿ ಓಡಿ ಬಂದು ಫೋನ್ ನೆಗ್ಗಿತ್ತು ,ಅದರದ್ದು ಮನೆಲಿ “ಆನು ಫೋನ್ ನೆಗ್ಗುದು ಹೇಳಿ “ಯಾವಾಗಲು ಗಲಾಟೆ !ಅಭಿ ಹೇಳಿರೆ ಎನ್ನ ತಮ್ಮನ ಮಗಳು ,ಮೂರು ವರ್ಷದ ಸಣ್ಣ ಕೂಸು ,ಮಾತಿನ ಮಲ್ಲಿ .ಫೋನ್ ನೆಗ್ಗಿ ಹಲೋ ಹೇಳಿತ್ತು .ಎಂತ ಮಾಡುತ್ತಾ ಇದ್ದೆ ಅಭಿ,ಉಂಡಾತ ?ಹೇಳಿ ಕೊಂಡಾಟಲ್ಲಿ ಕೇಳಿದೆ .
ಆನು ತುಂಬಾ ಉಂಡಿದೆ ಹೇಳಿತ್ತು .,ಅದು ಎಂತದುದೆ ಸರಿಯಾಗಿ ಉಂಡು ತಿಂದು ಮಾಡುತ್ತಿಲ್ಲೆ (ಈಗಣ ಎಲ್ಲ ಮಕ್ಕಳದ್ದೂ ಇದೇ ಕಥೆ ಅನ್ನೇ ) ಹಾಂಗೆ ಸಪೂರಕ್ಕೆ ಸಣ್ಣಕ್ಕೆ ಇದ್ದು ನೋಡುಲೆ ,ಕಾರ್ಬಾರು ಮಾತ್ರ ಗುಡ್ಡೆ ಅಷ್ಟು ಇದ್ದು ,ಅದು ಬೇರೆ ವಿಚಾರ .ಎಂತದೂ ಉಂಡು ತಿಂದು ಮಾಡದ್ದೆ ಅದರಮ್ಮನ ಬೊಡಿಸುವ ಜೆನ ತುಂಬಾ ಉಂಡಿದೆ ಹೇಳುವಗ ನೆಗೆ ಬಂತು ಎನಗೆ .
ಮತ್ತೆ ಅಮ್ಮ ಫೋನ್ ತೆಕ್ಕೊಂಡ .ಹೀಂಗೆ ಮಾತಾಡುವಾಗ ಅಮ್ಮನತ್ರೆ ಹೇಳಿದೆ ಅಭಿ ತುಂಬಾ ಉಂಡಿದೆ ಹೇಳಿತ್ತು ,ಉಂಡು ತಿಂದು ಮಾಡುತ್ತಾ ?ಗೆನ ಆಯಿದ ಈಗ ?ಹೇಳಿ ಕೇಳಿದೆ .”ಉಂಬ ಕಥೆ ಹೇಳಿ ಪ್ರಯೋಜನ ಇಲ್ಲೆ .ಆದರೆ ರಜ್ಜ ಗೆನ ಆಗಿತ್ತು ”ಬೇಳೆಗೆ ಮಣ್ಣು ಉದ್ದಿದ ಹಾಂಗೆ” ,ಮತ್ತೆ ಮೊನ್ನೆ ಎರಡು ದಿನ ಶೀತ ಜ್ವರ ಬಂತು ಮತ್ತೆ ಪುನ ಹಾಂಗೆ ಬಚ್ಚಿದ್ದು” ಹೇಳಿ ಹೇಳಿದ ಅಮ್ಮ .
ಅಷ್ಟಪ್ಪಗ ಅಮ್ಮ ಮಾತಿನ ನಡುಗೆ ಉಪಯೋಗಿಸಿದ ಬೇಳೆಗೆ ಮಣ್ಣು ಉದ್ದಿದ ಹಾಂಗೆ ಹೇಳುವ ನುಡಿಗಟ್ಟು ಎನ್ನ ಗಮನಕ್ಕೆ ಬಂತು .ಆನು ಸಣ್ಣಾದಿಪ್ಪಗಲೇ ಈ ಮಾತಿನ ಕೇಳಿದ್ದೆ .ಎಂತ ಅದರ ಅರ್ಥ ಹೇಳಿ ಗಮನಿಸಿತ್ತಿಲ್ಲೆ.
ಸಣ್ಣಾದಿಪ್ಪಗ ಎನ್ನ ಅಜ್ಜನ ಮನೆಲಿ ಬೇಸಗೆಲಿ ಹಲಸಿನ ಹಣ್ಣು ತಿಂದ ಮೇಲೆ ಹೊದುಂಕುಳಿಂದ ಬೇಳೆಯ ಪೀಂಕಿಸಿ ತೆಗದು ,ಒಳ್ಳೆ ಬೇಳೆಗಳ ಬೇರೆ ಮಡುಗಿ ಕೊಂಡು ಇತ್ತಿದವು .ನಂತರ ಒಂದು ಅಳಗೆಲಿ ರಜ್ಜ ಲಾಯ್ಕ ಮಣ್ಣು ತಂದು ನೀರು ಹಾಕಿ ಮಣ್ಣು ನೀರು ತಯಾರು ಮಾಡಿಕೊಂಡು ,ಅದಕ್ಕೆ ಬೇಳೆಗಳ ಹಾಕಿ ಅದರ ಕೊಟ್ಟಗೆಯ ಮೂಲೆಲಿ ಸೊರುಗಿಕೊಂಡು ಇತ್ತಿದವು ,ಬೇಸಗೆಯ ಬೆಶಿಗೆ ನೀರು ಆವಿಯಾಗಿ ಬೇಳೆ ಹಾಂಗೆ ಒಳುಕ್ಕೊಂದು ಇತ್ತು , ಬೇಳೆಗಳ ಮೇಲೆ ತೆಳುವಾಗಿ ಕಂಡೂ ಕಾಣದ್ದ ಹಾಂಗೆ ಮಣ್ಣು ಹಿಡಿತ್ತು.
ಹಾಂಗೆ ಜತನ ಮಾಡಿದ ಹಲಸಿನ ಕಾಯಿಯ ಬೇಳೆ ಹುಟ್ಟಿಗೊಂಡು ಹಾಳಾವುತ್ತಿಲ್ಲೆ,ಮತ್ತೆ ಪೂನ್ಕೆ ಬಂದು ದೆ ಹಾಳಾವುತ್ತಿಲ್ಲೆ .ಅದರ ನಂತ್ರಣ ಬೇಸಗೆ ಬಪ್ಪಲ್ಲಿಯವರೆಗೂ ಉಪಯೋಗಿಸುಲೆ ಆಗಿಯೊಂಡು ಇತ್ತು. ನಮ್ಮ ಹೆರಿಯೋರತ್ತರೆ ಇಂಥ ಹಲವು ಉಪಾಯಂಗ ಕೌಶಲ್ಯಂಗ ಇತ್ತು .
ತೀರಾ ಬಚ್ಚಿ ಎಲ್ಕೋಟೆ ಕಟ್ಟಿದೋರು ರಜ “ಅಪ್ಪಾ ಅಲ್ಲದ ಹೇಳುವ ಹಾಂಗೆ” ಗೆನ ಆದರೆ,ಅದರ ರಜ ಗೆನ ಆಯಿದು ಬೇಳೆಗೆ ಮಣ್ಣು ಉದ್ದಿದ ಹಾಂಗೆ ಹೇಳಿ ಹೋಲಿಕೆ ಮಾಡಿ ಹೇಳುತ್ತವು .ಬೇಳೆಗೆ ತುಂಬಾ ತೆಳುವಾಗಿ ಮಣ್ಣು ಹಿಡಿವದು ಹಾಂಗೆ .ರಜ ಗೆನ ಆಗಿ, ಚೋಲಿ ಹಸಿ ಆಯಿದು ಹೇಳುದರ ಹೇಳುವಾಗ ಬೇಳೆಗೆ ಮಣ್ಣು ಉದ್ದಿದ ಹಾಂಗೆ ಹೇಳುವ ಮಾತಿನ ನಮ್ಮಲ್ಲಿ ಬಳಕೆ ಮಾಡುತ್ತವು .