Thursday 31 October 2013

ಗಿಳಿ ಬಾಗಿಲು(ಹವ್ಯಕ ಬ್ಲಾಗ್ ) -ಅವ° ರಜ್ಜ ಸಜ್ಜನ




ಎನ್ನ ಕೋಲೇಜಿಲಿ ಎನ್ನ ಹಾಂಗೆ ಲೆಕ್ಟುರು ಆಗಿಪ್ಪ ಮೇಡಂ ಒಂದಕ್ಕೆ ನಮ್ಮ ಭಾಷೆ ಸುಮಾರಾಗಿ ಮಾತಾಡುಲೆ ಬತ್ತು .ಒಂದಿನ ಎನ್ನತ್ತರೆ ಬಂದು “ಸಜ್ಜನ “ ಹೇಳ್ರೆ ಎಂತ ಅರ್ಥ ಹೇಳಿ ಕೇಳಿತ್ತು .ಇಷ್ಟು ಸುಲಭದ ಪದದ ಅರ್ಥ ಇದಕ್ಕೆ ಗೊಂತಿಲ್ಲೆಯ ಹೇಳಿ ಮನಾಸಿಲಿ ಜ್ಹಾನ್ಸಿಕೊಂಡು “ಸಾಧು ,ಒಳ್ಳೆಯ ವ್ಯಕ್ತಿ” ಹೇಳಿ ಅರ್ಥ ಹೇಳಿದೆ .ಅಷ್ಟಪ್ಪಗ ‘ಸ್ವಲ್ಪ ‘ಹೇಳ್ರೆ ಎಂತ ಕೇಳಿತ್ತು !ಅರೆ !ಹೀಂಗಿಪ್ಪ ಸುಲಭದ ಪದಂಗಳ ಅರ್ಥ ಕೇಳಕ್ಕಾದರೆ ಇದರಲ್ಲಿ ಏನೋ ಇದ್ದು ಹೇಳಿ ವಾಸನೆ ಸಿಕ್ಕಿತ್ತು ಎನಗೆ .ಚೂರು ಜಾಗ್ರತೆಲಿ “ತುಸು ,ಕಡಿಮೆ ,ಅಲ್ಪ” ಇತ್ಯಾದಿ ಅರ್ಥ ಹೇಳಿದೆ .ಸರಿ ಹಾಂಗಾದರೆ “ಸ್ವಲ್ಪ ಸಜ್ಜನ “ಹೇಳ್ರೆ ಎಂತ ಕೇಳಿತ್ತು .ಸ್ವಲ್ಪ ಸಜ್ಜನ ಹೇಳುವ ಪ್ರಯೋಗ ಎನಗೆ ಗೊಂತಿದ್ದಾ೦ಗೆ ಕನ್ನಡಲ್ಲಿ ಇಲ್ಲೆ ಹೇಳಿ ಹೇಳಿದೆ. ಸರಿ ಈ ಬಗ್ಗೆ ನಿನಗೆ ಸಂಶಯ ಹೇಳಿ ಕೇಳಿದೆ .ಅಷ್ಟೊತ್ತಿಂಗೆ ಅದು ಹೇಳಿತ್ತು “.ಅದು ನಿಂಗಳ ಭಾಷೆಲಿ “ಸ್ವಲ್ಪ ಸಜ್ಜನ ” ಹೇಳಿ ಇದ್ದಲ್ಲ ಅದರ ಅರ್ಥ ಬೇಕಾಗಿತ್ತು ಹೇಳಿ ” ಎಂಗಳ ಭಾಷೆಲಿದೆ ಸ್ವಲ್ಪ ಸಜ್ಜನ ಹೇಳಿ ಇಲ್ಲೆ ಹೇಳಿ ಹೇಳಿದೆ .”ಇದ್ದು ಎನ್ನ ಎದುರು ಮನೆಯ ನಿಂಗಳ ಜಾತಿಯ (ಹವ್ಯಕ )ಹೆಮ್ಮಕ್ಕ ಆರನ್ನೋ “ಅವ° ಸ್ವಲ್ಪ ಸಜ್ಜನ ಹೇಳಿ ಹೇಳ್ತಾ ಇತ್ತು “ಹೇಳಿ ಹೇಳಿತ್ತು .ಅಷ್ಟಪ್ಪಗ ಎನಗೆ ರಜ್ಜ ತಲೆಗೆ ಹೋತು !”ರಜ್ಜ ಸಜ್ಜನ “ಹೇಳಿ ಹೇಳಿದ್ದಾ ?ಹೇಳಿ ಕೇಳಿದೆ .ಅಪ್ಪು ಹೇಳಿ ಅದು ಹೇಳಿತ್ತು .ಅದು ನಮ್ಮ ಭಾಷೆಯ ರಜ್ಜ =ಸ್ವಲ್ಪ ಹೇಳುವ ಅರ್ಥವ ತೆಕ್ಕೊಂಡು ರಜ್ಜ ಸಜ್ಜನ ಹೇಳುದರ ಸ್ವಲ್ಪ ಸಜ್ಜನ ಹೇಳಿ ತರ್ಜುಮೆ ಮಾಡಿಗೊಂಡು ಅದರ ಅರ್ಥ ಕೇಳಿತ್ತು !ಸಜ್ಜನ ಹೇಳಿರೆ ಒಳ್ಳೆಯ ಗುಣದೋನು ಹೇಳಿ ಗೊಂತಿತ್ತು ! ರಜ್ಜ ಹೇಳ್ರೆ ಸ್ವಲ್ಪ ಹೇಳುವ ಅರ್ಥವೂ ಅದಕ್ಕೆ ಗೊಂತಿತ್ತು ,ಆದರೆ ರಜ್ಜ ಸಜ್ಜನ =ಸ್ವಲ್ಪ ಸಜ್ಜನ ಹೇಳ್ರೆ ಎಂತ ಹೇಳಿ ಗೊಂತಾಯಿದಿಲ್ಲೆ !
ಅಪ್ಪು ! ಸಾಧು ಸಜ್ಜನ ಹೇಳುವ ಪದಂಗಳ ಅರ್ಥ ಕನ್ನಡ ಗೊಂತಿಪ್ಪ ಎಲ್ಲೋರಿಂಗು ಗೊಂತಿರ್ತು .ಆದರೆ ಆವ° ರಜ್ಜ ಸಜ್ಜನ ,ಅವ° ಬರೀ ಸಜ್ಜನ ಹೇಳ್ರೆ ಎಂತ ಅರ್ಥ ಹೇಳಿ ಗೊಂತಾಯ್ಕಾರೆ ನಮ್ಮ ಭಾಷೆಗೇ ಬರಕ್ಕು .ಆವ° /ಅದು ರಜ್ಜ ಸಾಧು ಹೇಳಿ ನಮ್ಮಲ್ಲಿ ಬಳಕೆ ಇಲ್ಲೆ ; ಆದರೆ ಅದು ಬರೀ ಸಾಧು ಕೂಸು ಹೇಳುದು ಬಳಕೆಲಿದ್ದು .ಇಲ್ಲಿ ಸಾಧು ಹೇಳ್ರೆ ನಿಜವಾಗಿಯೂ ಸಾತ್ವಿಕ ಗುಣದ್ದು ಹೇಳಿ ಅರ್ಥ .ಆದರೆ ಕನ್ನಡಲ್ಲಿ ಸಾಧು ಪದದ ಒಟ್ಟಿಂಗೆ ಬಪ್ಪ ಸಜ್ಜನ ಹೇಳುವ ಪದಕ್ಕೆ ಎಂಗಳ ಕಡೆ ನಮ್ಮ ಭಾಷೆಲಿ ಒಳ್ಳೆಯೋನು ಹೇಳುವ ಅರ್ಥ ಇಲ್ಲೆ .ಅವ° ರಜ್ಜ ಸಜ್ಜನ ,ಅದು ರಜ್ಜ ಸಜ್ಜಂತಿ ಹೇಳ್ರೆ ಅವಕ್ಕೆ ರಜ್ಜ ಬುದ್ಧಿವಂತಿಕೆ ಕಮ್ಮಿ ಹೇಳಿ ಅರ್ಥ . ರಜ್ಜ ಹೆಡ್ಡು ಹೇಳುವ ಬದಲು ರಜ್ಜ ಸಜ್ಜಂತಿ ಹೇಳುದು.ಇನ್ನು ಅವ° ಬರೀ ಸಜ್ಜನ ,ಅದು ಬರೀ ಸಜ್ಜಂತಿ ಹೇಳುವ ಮಾತಿನ ಒಟ್ಟಿಂಗೆ ಅವಂಗೆ /ಅದಕ್ಕೆಬೇರೆಯೋರ ಕುತಂತ್ರಂಗ ಕೊಕ್ಕೆಗ ಎಲ್ಲ ಅರಡಿಯ ಹೇಳುವ ಮಾತುದೆ ಬತ್ತು .ಇಲ್ಲಿ “ಅವಂಗೆ /ಅದಕ್ಕೆ ಇವರ ಕುತಂತ್ರಂಗ ಕೊಕ್ಕೆಗ ಎಲ್ಲ ಅರಡಿಯ” ಹೇಳುವ ಮಾತು, “ಅವ° ಬರೀ ಸಜ್ಜನ ,ಅದು ಬರೀ ಸಜ್ಜಂತಿ ” ಹೇಳುವ ಮಾತಿನ ಅರ್ಥವ ಸ್ಪಷ್ಟ ಪಡುಸುತ್ತು .ಬರೀ ಸಜ್ಜನ /ಸಜ್ಜಂತಿ ಹೇಳುವಲ್ಲಿ ವ್ಯವಹಾರ ಜ್ಞಾನ ಕಮ್ಮಿ ಹೇಳುದರ ಒಟ್ಟಿಂಗೆ ಒಳ್ಳೆಯ ಗುಣದೋರು ಹೇಳುವ ಭಾವ ಎದ್ದು ಕಾಣುತ್ತು .
ಆದರೆ ಎಂಗಳ ಕಡೆ ನಮ್ಮ ಭಾಷೆಲಿ ರಜ್ಜ ಸಜ್ಜನ ,ಅದು ರಜ್ಜ ಸಜ್ಜಂತಿ ಹೇಳುವಲ್ಲಿ ಅದು ಅವ° ಒಳ್ಳೆಯ ಗುಣದೋರು ಹೇಳುವ ಭಾವ ಕಾಣುತ್ತಿಲ್ಲೆ,ಬದಲಿಂಗೆ ರಜ್ಜ ಹೆಡ್ಡು ಹೇಳುವ ಅರ್ಥವೇ ಹೆಚ್ಚು ಕಂಡು ಬತ್ತು .
ಕನ್ನಡಲ್ಲಿ ಸಜ್ಜನ ಹೇಳುವ ಪದಕ್ಕೆ ಸಂವಾದಿಯಾಗಿ ಕೋಳ್ಯೂರು ಸೀಮೆಯ ನಮ್ಮ ಭಾಷೆಲಿ ಅವ° /ಅದು ತುಂಬಾ ಸಾತ್ವಿಕ ಹೇಳುವ ಮಾತು ಬಳಕೆಲಿ ಇದ್ದು .ಅವು ತುಂಬಾ ಒಳ್ಳೆಯೋರು ,ಅದು/ಅವ° ಬಾರೀ ಸಾತ್ವಿಕ ಕೂಸು/ಮಾಣಿ ಹೇಳುವ ಮಾತಿನ ಯಾವಾಗಲು ಬಳಕೆ ಮಾಡುತ್ತವು
ಹೀಂಗಿಪ್ಪ ಸುಮಾರು ನುಡಿಗಟ್ಟುಗ ದಿನ ನಿತ್ಯ ನಮ್ಮ ಮಾತಿನ ನಡುವೆ ಬತ್ತು .ಆದರೆ ನಾವು ಅದರ ಗಮನಿಸುತ್ತಿಲ್ಲೆ.ಎಂತಕೆ ಹೇಳ್ರೆ ಅದು ನಮ್ಮ ಭಾಷೆಲಿ ಸಹಜವಾಗಿ ಇಪ್ಪದು .ಎಂಗಳ ಮೇಡಂ ಈ ಬಗ್ಗೆ ಕೇಳುವ ತನಕ ಎನಗೂ ತಲೆಗೆ ಹೋಗಿತ್ತಿಲ್ಲೆ.ಬೇರೆಯೋರು ಹೇಳಿ ಅಪ್ಪಗ, ಅಪ್ಪಲ್ಲದ ಹೇಳಿ ಅನ್ಸುತ್ತು ಅಲ್ಲದ ?ನಿಂಗ ಎಲ್ಲ ಎಂತ ಹೇಳ್ತೀರಿ ?ನಿಂಗಳ ಅಭಿಪ್ರಾಯ ತಿಳುಸಿ ,

Tuesday 8 October 2013

ಗಿಳಿಬಾಗಿಲು(ಹವ್ಯಕ ಬ್ಲಾಗ್ )-ಎಮ್ಮೆ ಕಂಜಿ ಹಾಂಗೆ


“ಅದು ಮಾಡುದು ನೋಡು ,ನಿದಾನಕ್ಕೆ ಎಮ್ಮೆ ಕಂಜಿ ಹಾಂಗೆ ”

ಹೇಳುವ ಬೈಗಳು ನಿದಾನ ಪ್ರವೃತ್ತಿಯೋರಿ೦ಗೆ ಬಳಕೆ ಮಾಡುತ್ತವು .ಈ ಬೈಗಳಿನ  ಅರ್ಥ ಎಂತದು ಹೇಳಿ ಗೊಂತಾಯಕ್ಕಾದರೆ ಎಮ್ಮೆ ಕಂಜಿಯನ್ನೇ ನೋಡಿರಕ್ಕು .ಅದು ಬಿಟ್ಟು ಬೇರೆ ದಾರಿ ಇಲ್ಲೆ .ಎಂಗ ಸಣ್ಣಾ ದಿಪ್ಪಗ ಅಜ್ಜನ ಮನೇಲಿ ಸುಮಾರು ಎಮ್ಮೆಗಳ, ದನಗಳ ಸಾಂಕಿಗೊಂಡು ಇತ್ತಿದವು .ಅಂಬಗ ಎಮ್ಮೆಗಳ ಕಂಜಿ ಹಾಕುವ ಸಮಯ ಬಂದರೆ ಗುಡ್ಡೆಗೆ ಬಿಟ್ಟುಗೊಂಡು ಇತ್ತಿದವಿಲ್ಲೆ.ದನಗಳ ಕಂಜಿ ಹಾಕುಲೆ ಹತ್ತರೆ ಆದರೂ ಗುಡ್ಡೆಗೆ ಬಿಟ್ಟುಕೊಂಡು ಇತ್ತಿದವು .ಎಷ್ಟೋ ಸರ್ತಿ ದನಗ ಗುಡ್ಡೆಲಿಯೇ ಕಂಜಿ ಹಾಕಿ ಕಂಜಿಗಳ ನಿದಾನಕ್ಕೆ ನಡೆಸಿಗೊಂಡು ಹೊತ್ತಪ್ಪಗ ಮನೆಗೆ ಬತ್ತ ಇತ್ತಿದವು .
ಕೆಲವು ಸರ್ತಿ ಮನೆಯೋರು ಹುಡುಕ್ಕಿ ಗೊಂಡು  ಹೋಗಿ ಕಂಜಿಯನ್ನು ಅದರ ಅಬ್ಬೆಯನ್ನೂ ಎಬ್ಬಿ ಕೊಂಡು  ಬತ್ತಾ ಇತ್ತಿದೆಯ° .ಆದರೆ ಎಮ್ಮೆ ಬಗ್ಗೆ ಹೆಚ್ಚಿನ ಕಾಳಜಿ ಬೇಕಾಗಿತ್ತು .ಅದು ಮನೆಲಿಯೇ ಕಂಜಿ ಹಾಕಿದರೂ ಕೂಡಾ ಕಂಜಿಯ ನೆಗ್ಗಿ ಎಮ್ಮೆಯ ಕೆಚ್ಚಲಿನ ಮೂಸಿಸಿ ಕೆಲವು ಸರ್ತಿ ಅದರ ಬಾಯಿಗೆ ಹಾಲು ಹಿಂಡಿ ರುಚಿ ಹಿಡಿಸಕ್ಕಾಗಿತ್ತು .ದನದ ಕಂಜಿಗ ಅವರಷ್ಟಕ್ಕೆ ಎದ್ದು ನಿಂದುಕೊಂಡು ಇತ್ತಿದವು ( ಈ ಮಾತು ಊರ ದನಗೊಕ್ಕೆ ಮಾತ್ರ ಅನ್ವಯ !).ಅವರಷ್ಟಕ್ಕೆ ಕೆಚ್ಚೆಲುಹುಡುಕಿ ಹಾಲು ಕುಡುಕ್ಕೊಂಡು  ಇತ್ತಿದವು .
ಎಮ್ಮೆ ಕಾಂಜಿಗ ಅಷ್ಟು ಚುರುಕು ಇರ್ತವಿಲ್ಲೆ .ಎಮ್ಮೆ ಕಂಜಿಗ ಅವರಷ್ಟಕ್ಕೆ ಎದ್ದು ನಿಂದು ಹಾಲು ಕುಡಿವಲೆ ಒಂದೆರಡು ಬೇಕಾಗಿ ಕೊಂಡು  ಇತ್ತು .ಅದರ೦ದಾಗಿಯೇ ನಿದಾನ ಪ್ರವೃತ್ತಿಯೋರಿ೦ಗೆ ಎಮ್ಮೆ ಕಂಜಿ ಹಾಂಗೆ ಹೇಳುವ ಮಾತು ಬಂದಿಕ್ಕು ಹೇಳಿ ಎನಗೆ ಅನ್ಸುತ್ತು .ಅದಲ್ಲದ್ದೆ ಚೊಕ್ಕವಾಗಿ ಕೆಲಸ ಮಾಡದ್ದೆ  ತಚಿ ಪಿಚಿ ಮಾಡುವೊರಿಂಗು ಎಮ್ಮೆ ಕಂಜಿ ಹಾಂಗೆ ಹೇಳುವ ಮಾತಿನ ಬಳಕೆ ಮಾಡ್ತವು .ಎಮ್ಮೆ ಕಂಜಿ ಅಲ್ಲಿ ಇಲ್ಲಿ ಬಿದ್ದು ಮನುಗುವ ಕಾರಣ ಈ ಮಾತು ಬಂದಿಕ್ಕು ಹೇಳಿ ಎನಗೆ ಅನ್ಸುತ್ತು .~ಜ್ಎಮ್ಮೆಗಳುದೆ ಪಳ್ಳದ ಕೆಸರು ನೀರಿಲಿ ಬಿದ್ದು ಕೊಂಡರೆ ಅಲ್ಲಿಂದ ಹೆರ ಹೆರಡುಸುದು ಬಾರೀ ಬ೦ಙದ ಕೆಲಸ .ಯಾವಾಗಲು ಮೈಲಿ ಕೆಸರು ಮೆತ್ತಿಗೊಂಡು ಇರ್ತವು .
ಹಾಂಗಾಗಿ ಈ ರೀತಿಯ ತಿರಸ್ಕಾರದ /ನಿಂದನೆಯ ಮಾತು ಬಳಕೆಗೆ ಬಂದಿಕ್ಕು ಹೇಳಿ ಎನಗೆ ಅನ್ಸುತ್ತು ,ನಿಂಗೊ ಎಲ್ಲೊರು ಎಂತ ಹೇಳುತ್ತಿ ?ನಿಂಗಳ ಅಭಿಪ್ರಾಯ ತಿಳಿಸಿ .