Saturday 6 January 2024

ಗಿಳಿ ಬಾಗಿಲು ಹವ್ಯಕ ಕನ್ನಡ ನುಡಿಗಟ್ಟುಗಳು 61ಮೂಗಿಲಿ ಎಷ್ಟು ಉಂಬಲೆಡಿಗು?

 ದೊಡ್ಡ ಕೆಲಸದಲ್ಲಿ ಜವಾಬ್ದಾರಿಲಿ ಇಪ್ಪೋರ ಸಣ್ಣ ಪುಟ್ಟ ವಿಷಯದಲ್ಲಿ ಮಾಡುವ ಮೋಸದ ನಿರರ್ಥಕತೆ ಬಗ್ಗೆ ವಿವರಿಸುವ ಗಾದೆ ಇದು

ಎನ್ನ ಒಬ್ಬ ಹಳೆಯ ಪ್ರತಿಭಾವಂತ ವಿದ್ಯಾರ್ಥಿ ಗೆ ತಿಂಗಳಿಗೆ ಒಂದು ಲಕ್ಷ ಸಂಬಳದ ಕೆಲಸ ಇತ್ತು.ಇವ ಕಂಪೆನಿಗೆ 50,000₹ಮೋಸ ಮಾಡಿ ಲಕ್ಷ ಸಂಬಳದ ಕೆಲಸ ಕಳಕೊಂಡ.

ಇದೇ ರೀತಿ ಖಾಸಗಿ ಸಂಸ್ಥೆಲಿ ಕ್ಲಾರ್ಕ್ ಆಗಿ ಕೆಲಸ ಮಾಡುತ್ತಿದ್ದ ಎನ್ನ ಪರಿಚಯದ ವ್ಯಕ್ತಿ ಕಾಫಿಗೆ ತೋರಿಸಿದ ಬಿಸ್ಕೆಟ್ ಗೆ ಪ್ಯಾಕ್ ಗೆ ಒಂದು ರುಪಾಯಿ ಹೆಚ್ಚು ಬಿಲ್ ಹಾಕಿ ಸಿಕ್ಕಾಕೊಂಡು ಕೆಲಸ ಕಳಕೊಂಡ ಇ

ಹೆಚ್ಚು ದಿನ ಮೋಸ ಮಾಡುಲೆ ಎಡ್ತಿಲ್ಲೆ.. ಹಾಂಗೆ ಇಪ್ಪಗ ಸಣ್ಣ ಪುಟ್ಟ ವಿಷಯಲ್ಲಿ ಮೋಸ ಮಾಡುವುದು ವ್ಯರ್ಥ.ಇದರಂದ ಪೈಸೆ ಮಾಡುಲೆ ಅಸಾಧ್ಯ ಹೇಳಿ ಈ ಗಾದೆ ಮಾತು ತಿಳಿಸುತ್ತು

ಅಂಬಗ ಮೂಗಿಲಿ ಎಷ್ಟು ಉಂಬಲೆಡಿಗು? ನಾಕು ಅಶನ  ಕೂಡ ಎಡಿಯ..ಹಾಂಗೆ ಸಣ್ಣ ಪುಟ್ಟ ಮೋಸ ಮಾಡಿ ಎಷ್ಟು ಗಳಿಸುಲೆಡಿಗು? ಒಂದಲ್ಲ ಒಂದು ದಿನ ಸಿಕ್ಕಾಕೊಂಡು ಹೆಸರು ಜೊತೆಗೆ ಕೆಲಸವ ಕಳಕೊಳ್ಳಕ್ಕಾವುತ್ತು ಖಂಡಿತಾ

ಹಾಂಗಾಗಿ ಯಾವಾಗಲೂ ಪ್ರಾಮಾಣಿಕರಾಗಿ ಇರೆಕ್ಕು.ಆರಿಂಗೂ ಮೋಸ ಮಾಡುಲಾಗ,.ಮಾಡಿರೆ ನಮ್ಮ ವ್ಯಕ್ತಿತ್ವಕ್ಕೆ ದೊಡ್ಡ  ಪೆಟ್ಬು ಬೀಳುತ್ತದೆ ಖಂಡಿತಾ 

Sunday 21 March 2021

ಕೂರಂಡ ಬಗೆ - 60 ಗಿಳಿ ಬಾಗಿಲು( ಹವ್ಯಕ ನುಡಿಗಟ್ಟುಗಳು, ಗಾದೆಗಳು) @ ಡಾ.ಲಕ್ಷ್ಮೀ ಜಿ ಪ್ರಸಾದ್

 ಕೂರಂಡ ಬಗೆ


ಅವಕ್ಕೋ ಇಪ್ಒದರ ಹೇಳಿರೆ ನಮ್ಮತ್ತರೆ ವಿಪರೀಒ ಕೋಪ ಬಕ್ಕು .ನಮ್ಮತ್ತರೆ ಕೂರಂಡ ಬಗೆ ಮಾಡುಗು ಹೇಳಿ ಮೊನ್ನೆ ಅಮ್ಮ ಮಾತಿನ ನಡುವೆ ಹೇಳಿದ.

ಅದು ಸಮ..ಈ ಕೂರಂಡ ಬಗೆ ಹೇಳಿರೆ ಎಂತದು ? 

ಒಬ್ಬರ ಮಗಳು ಹೇಂಗೊ ಹೇಂಗೋ ಡ್ರೆಸ್ ಮಾಡುದು ,ಆರಾರೊಟ್ಟಿಂಗೋ ಫ್ರೆಂಡ್ಸಿಪ್ ಹೇಳಿಯೊಂಡು ಇರುಳು ಒಂಬತ್ತು ಗಂಟೆ ನಂತರದ ಸಿನೆಮಾಕ್ಕೆ ಹೋಪದು ಇತ್ಯಾದಿಗಳ ಬಗ್ಗೆ ಮಾತಾಡ್ತಾ ಇತ್ತಿದೆಯ.ಇದರ ಅವರ ಅಬ್ಬೆ ಅಪ್ಪಂಗೆ ಹೇಳುದು ಹೇಂಗೆ? 

ಹೇಳಿದರೆ ಮಗಳ ಮೇಲೆ ಅತೀವ ನಂಬುಗೆ ಇಪ್ಪೋರು ಹೊಟ್ಡೆಕಿಚ್ಚಿಲಿ ಹೇಳುದು ಹೇಳಿ ನಮಗೇ ತಿರುಗಿ ಬಿದ್ದರೆ ಹೇಳಿ ಹೆದರಿಕೆ ಎನಗೆ.

ಇದರ ಅಮ್ಮನತ್ತರೆ ಮಾತಿನ ನಡುವೆ ಅಮ್ಮನತ್ತರೆ ಹೇಳಿತ್ತಿದೆ.ಅಂಬಗ ಅಮ್ಮ ನಮಗೆ ಅವರ ಸಂಗತಿ ಬೇಡ.ಮತ್ತೆ ಅವು ಕೂರಂಡ ಬಗೆ ಮಾಡುಗು ಹೇಳಿದ.

ಅದಕ್ಕೆ ಸರಿಯಾಗಿ ಎಂಗಳ ಪೈಕಿಲಿ ಒಂದು ಸಂಗತಿ ನಡದ್ದು.

ಒಂದು ಕೂಸು ಸಮ್ಮಂಧಿಕರ ಮನೆಲಿದ್ದುಕೊಂಡು ಓದಿಯೊಂಡು ಇತ್ತು‌.ಅದು ಆರೊಟ್ಟಿಂಗೋ ಲವ್ ಹೇಳಿ ತಿರುಗುದು ಗೊಂತಾಗಿ ಅವು ಅದರ ಅಬ್ಬೆ ಅಪ್ಪಂಗೆ ತಿಳಿಸಿದವು.

ಅಷ್ಟಪ್ಪದ್ದೆ ಅಬ್ಬೆ ಅಪ್ಪ ಈ ಸಂಬಂಧಿಗಳ ಏಕ್ ಧಂ್ ಬೈದ್ದೇ ಬೈದ್ದು.ಬಡಿಯದ್ದದ್ದು ಅವರ ಪುಣ್ಯ.

ನಂತರ ಆ ಕೂಸಿಬ ಹಾಸ್ಟೆಲಿಲಿ ಹಾಕಿದವು..

ನಂತರದ ಕಥೆ ಹೇಳಿ ಸುಖವಿಲ್ಲೆ.

ಅಬ್ಬೆ ಅಪ್ಪನ ವಿರೋಧದ ನಡುವೆದೆ ಬೇರೆ ಧರ್ಮದದ ಹುಡುಗನ ಅದು ಮದುವೆ ಆತು.

ಇದು ನೆಂಪಾಗಿ ನಮಗೆ ಹೇಳುವ ಸಂಗತಿ ಬೇಡ ಹೇಳಿ ಬಿಟ್ಟೆಯ ಎಂಗ


ಆದರೆ ಅಮ್ಮ ಹೇಳಿದ ಕೂರಂಡ ಬಗೆ ಹೇಳುವ ನುಡಿಗಟ್ಟು ಎನ್ನ ಗಮನ ಸೆಳತ್ತು‌ .

ಕೂರಂಡ ಪಗೆ ಹೇಳಿರೆ ಏನಾದಿಕ್ಕು ? ಕ್ರೂರವಾದ ಪಗೆ/ ಹಗೆ ಆದಿಕ್ಕೂ ಹೇಳಿ ಎನಗನಿಸಿತ್ತು.ನಿಂಗಳ ಕಡೆಲಿದೆ ಈ ನುಡಿಗಟ್ಟಿನ ಬಳಕೆ ಇದ್ದಾ? ಇದ್ದರೆ ಅದರ ಅರ್ಥವ ತಿಳಿಸಿ ಆತಾ

@ಡಾ.ಲಕ್ಷ್ಮೀ ಜಿ ಪ್ರಸಾದ್ 

Saturday 22 February 2020

ಹವ್ಯಕ ಗಾದೆಗ:59. ಹಾಲಿಂಗೆ ಹೋದವಂಗೆ ಎಮ್ಮೆಯ ಕ್ರಯ ಎಂತಕೆ ?: ಡಾ.ಲಕ್ಷ್ಮೀ ಜಿ ಪ್ರಸಾದ

ಈ ಗಾದೆಯ ಸಣ್ಣಾದಿಪ್ಪಗ ಎನ್ನ ಸಣ್ಣಜ್ಜ ( ಅಜ್ಜನ ತಮ್ಮ) ಆರಿಮಗೋ ಹೇಳುದರ ಕೇಳಿತ್ತಿದೆ.ಅವು ಹಳ್ಳಿ ಮದ್ದಿನ ಉಚಿತವಾಗಿ ಕೊಟ್ಟು ಗೊಂಡು ಇತ್ತಿದವು.ಅಂಬಗ ಆರಾದರೂ ಮದ್ದಿನ ಮೂಲದ ಬಗ್ಗೆ ಅಥವಾ ಇನ್ನೇನಾದರೂ ಕೇಳಿರೆ ಹಾಲಿಂಗೆ ಬಂದೋನಿಂಗೆ ಎಮ್ಮೆಯ ಕ್ರಯ ಎಂತಕೆ ಹೇಳಿ ಕೇಳುಗು.
ಅಪ್ಪು ನಮಗೆ ಸಂಬಂಧ ಪಡದ್ದ ವಿಚಾರಗಳಲ್ಲಿ ತಲೆ ಹಾಕುಲಾಗ.ನಮಗೆ ಬೇಕಾದ್ದು ಎಂತರ,ನಮ್ಮ ಕೆಲಸ ಎಂತದು ಅಷ್ಟನೇ ಮಾಡಕ್ಕುಬೇರೆಯೋರ ವೈಯಕ್ತಿಕ ವಿಚಾರಕ್ಕೆ ತಲೆ ಹಾಕುಲಾಗ ಹೇಳುದು ಇದರ ಅರ್ಥ.
ಎಂಗಳ ಮನೆ ಹತ್ರಣ ಅಜ್ಜಿ ಅಲ್ಲೇ ಇನ್ನೊಂದು ಮನೆಯ ಪಾತ್ರತೊಳವಲೆ ಉಡುಗುಲೆ ಉದ್ದುಲೆ ಹೋವುತ್ತು‌.ಯಾವಾಗಾದರೂ ಎಂಗಳ ಮನೆಗೆ ಬಂದು ಕಾಫಿ ಕುಡುದು ಸೊಸೆಯ ಕಾಟವ ಮಗ ಕುಡುದು ಆಸ್ತೆ ಎಲ್ಲಾ ಹಾಳು ಮಾಡಿ ಈ ಸ್ಥಿತಿಗೆ ತಂದದು ಇತ್ಯಾದಿ ಅದರ ಕಷ್ಟವ ಹೇಳಿಕ್ಕಿ ಹೋವುತ್ತು.ಇಂದು ಹಾಂಗೆ ಬಂದಿತ್ತು ‌ಮಾತಿನ ನಡುವೆ ಅದು ಕೆಲಸಕ್ಕೆ ಹೋಪ ಮನೆಲಿ ಸೊಸೆ ಆರು ಗಂಟೆಗೆ ಎದ್ದು ಅದರ ಊಟ ತಿಂಡಿ ತಿಂದು ಕೆಲಸಕ್ಕೆ ಹೋವುತ್ತು‌.ಮಗ ಎಂಟು ಗಂಟೆಗೆ ಏಳುದು‌.ಅವನ ಹೆಂಡತಿ ಎಬ್ಬುಸಡದಾ ? ಹಾಂಗೆ ಹೋಪದು ಸರಿಯಾ ಕೇಳಿತ್ತು‌.
ಅಂಬಗ ಈ ಗಾದೆ ನೆಂಪಾಗಿ ಅದಕ್ಕೆ ಹೇಳಿದೆ.ನೋಡಜ್ಜಿ ನೀನು ಹೋದ್ದು ಅವರ ಮನೆ ಕೆಲಸಕ್ಕೆ.ಬೇರೆ ವಿಚಾರ ನಿನಗೆಂತಕೆ? ಸಂಬಳ ಕೊಡ್ತವನ್ನೆ, ಅವರ ಮನೆಯ ಶಿಸ್ತಿನ ವಿಚಾರ ನೋಡಿಗೊಂಬಲೆ ನಿನ್ನ ದೆನಿಗೇಳಿದ್ದಲ್ಲಾ? ಅವರ ಮನೆ ವಿಚಾರಕ್ಕೆ ಬಾಯಿ ಹಾಕಿರೆ ನಿನ್ನ ಕೆಲಸಕ್ಕೆ ಬರಡ ಹೇಳ್ತವಷ್ಟೇ ಹೇಳಿ,ಹಾಲಿಮಗೆ ಹೋದೋನಿಂಗೆ ಎಮ್ಮೆಯ ಕ್ರಯ ಎಂತಕೆ ಹೇಳುವ ಗಾದೆಯೇ ಇದ್ದು ಹೇಳಿ ವಿವರಿಸಿದೆ.
ಕೆಲಸಕ್ಕೆ ಹೋಪ ಮನೆಯ ಬಗ್ಗೆ ಬೇರೆ ಕಡೆಲಿ ಮಾತನಾಡುಲಾಗ ಅವರ ವೈಯಕ್ತಿಕ ವಿಚಾರಕ್ಕೆ ತಲೆ ಹಾಕುಲಾಗ ಹೇಳಿದೆ.ಆಯ್ತವ್ವಾ ನನಗೆ ಅದು ಗೊತ್ತಾಗಿಲ್ಲ ಹೇಳಿ ಒಪ್ಪಿಕ್ಕಿ ಹೋತು‌.
ಇದೊಂದು ಉದಾಹರಣೆ ಅಷ್ಟೇ, ತುಂಬಾ ಜನ ಕೆಲಸ ಮಾಡು ಲ್ಲಿ ಅಜ್ಜಿ ಮಾಡುವ ತಪ್ಪಿನ ಮಾಡ್ತವು.ತಮ್ಮದಲ್ಲದ ಕೆಲಸಲ್ಲಿ ಬಾಯಿ ಹಾಕಿ ಅಧಿಕ ಪ್ರಸಂಗ ಮಾಡಿ ಕೆಲಸ ಕಳಕೊಂಬೋರು ಕೂಡ ಇದ್ದವು.
ಹಾಂಗಾಗಿ ಯಾವಾಗಲೂ ಈ ಗಾದೆಯ ನೆನಪಿಲಿ ಮಡಿಕ್ಕೊಂಬದು ಒಳ್ಳೆದು ಹೇಳಿ ಎನಗೆ ಅನ್ಸುತ್ತು
ಡಾ‌‌.ಲಕ್ಷ್ಮೀ ಜಿ ಪ್ರಸಾದ.
ಕನ್ನಡ ಉಪನ್ಯಾಸಕರು
ಸರ್ಕಾರಿ ಪಿಯು ಕಾಲೇಜು.
ಬ್ಯಾಟರಾಯನಪುರ
ಬೆಂಗಳೂರು

ಹವ್ಯಕ ಗಾದೆಗಳು:60 ಆಲದ ಮರ ಬೇರೆ ಸೆಸಿಗಳ ಕೊಡಿಪ್ಪುಲೆ ಬಿಡ್ತಿಲ್ಲೆ

ಹವ್ಯಕ ಗಾದೆಗಳು:60 ಆಲದ ಮರ ಬೇರೆ ಸೆಸಿಗಳ ಕೊಡಿಪ್ಪುಲೆ ಬಿಡ್ತಿಲ್ಲೆ- ಡಾ.ಲಕ್ಷ್ಮೀ ಜಿ ಪ್ರಸಾದ
ಇದೊಂದು ಹವ್ಯಕ  ಗಾದೆ ಮಾತಿನಸಣ್ಣಾಪಿದ್ದಗಳೇ ಕೇಳಿತ್ತಿದೆ.
ಆದರೆ ಅದೆಂತದು ಹೇಳಿ‌ಮನವರಿಕೆ ಆಗಿತ್ತಿಲ್ಲೆ.
ಆಲದ ದಟ್ಟವಾಗಿ ವಿಸ್ತಾರವಾಗಿ ಬೆಳದು ಕೊಂಡು ಹೋವುತ್ತು.ಬಂದೋರಿಂಗೆ ಕೂಪಲೆ ನೆರಳು ಕೊಡ್ತು ,ಜಾಗೆ ಕೊಡ್ತು.ಅದರ ಗೆಲ್ಲುಗಳಲ್ಲಿ ಪಕ್ಷಿಗ ಗೂಡು ಕಟ್ಟಿ ಬದುಕುತ್ತವು.ಎಲ್ಲ ಸಮ,ಆದರೆ ಆಲದ ಮರ ಬೇರೆ ಸೆಸಿಗಳ ಬೆಳವಲೆ ಬಿಡ್ತಿಲ್ಲೆ .ತಾನು ಮಾತ್ರ ಬೆಳೆತ್ತಾ ಹೋವುತ್ತು.ಬೇರೆ ಗಿಡ ಮರಂಗೊಕ್ಕೆ ಬೆಳವಲೆ ಅವಕಾಶ ಕೊಡ್ತಿಲ್ಲೆ.
ಇದು ದೊಡ್ಡೋರ ಸಣ್ಣತನವ ವಿವರಿಸುಲೆ ಗಾದೆಯಾಗಿ ಬಳಕೆ ಅವುತ್ತು.
ಬೇರೆ ಬೇರೆ ಕ್ಷೇತ್ರಲ್ಲಿ ಸಾಧನೆ ಮಾಡಿದ ದೊಡ್ಡ ದೊಡ್ಡ ಹೆಸರು ಮಾಎಇದ ವಿದ್ವಾಂಸರುಗ ಇದ್ದವು.ಇವಕ್ಕೆ ಇವರ ಹೆರಿಯೋರು ಬೆಂಬಲ ಕೊಟ್ಟಿದವು ಹಾಂಗಾಗಿ ಇವಕ್ಕೆ ಸಾಧನೆ ಮಾಡುಲೆ ಎಡಿಗಾತು.ಆದರೆ ಈ ವಿದ್ವಾಂಸುಗ ತನ್ನಂದ ಸಣ್ಣ ಪ್ರಾಯದ ಸಾಧನೆಯ ಹಾದಿಲಿ ನಡವೋರ ಸಂಪೂರ್ಣ ವಾಗಿ  ಅಲ್ಲೇ ಚಿವುಟಿ ಹಾಕುತ್ತವು.ಇವಕ್ಕೆ ಹೆಸರಿಕೆ ..ಸಣ್ಣೋವು ಬೆಳದು ಇವರ ಸಮಕ್ಕೆ ನಿಂದರೆ ಹೇಳಿ.ಬೇರೆಯೋರ ಗೆಲುವಿನ ತನ್ನ ಸೋಲು ಹೇಳಿ ಭಾವಿದುವ ಮಂದಿದೆ ಇದ್ದವು.
ಅದಕ್ಕಾಗಿ ಬೇರೆಯೋರ ಹತ್ತರೆ ಬಹಳ ಸಂಭಾವಿತರ ಹಾಂಗೆ ತೋರ್ಸಗೊಂಬ ಇಂತೋವು ಬೆಳವ ಯತ್ನ ಮಾಡುವೋರ ಬುಡ ಸಮೇತ ಪೊರ್ಪಿ ನಾಶ ಮಾಡುಲೆ ಯತ್ನ ಮಾಡುತ್ತವು.
ಇಂತೋರ ಬಗ್ಗೆ ಹೇಳುವಗ ಆಲದರ ಬೇರೆ ಸೆಸಿಗಳ ಕೊಡಿಪ್ಪುಲೆ ಬಿಡ್ತಿಲ್ಲೆ ಹೇಳುವ ಗಾದೆಯ ಬಳಕೆ ಮಾಡುತ್ತವು.
ನಿಂಗಳ ಕಡೆಲಿದೆ ಈ ರೀತಿಯ ಗಾದೆ ಬಳಕೆಲಿ ಇಕ್ಕು ಅಲ್ಲದಾ ? ಇದ್ದರೆ ತಿಳುಸಿ ಅತಾ
ಡಾ.ಲಕ್ಷ್ಮೀ ಜಿ ಪ್ರಸಾದ
ಕನ್ನಡ ಉಪನ್ಯಾಸಕಿ
ಸರ್ಕಾರಿ ಪಿಯು ಕಾಲೇಜು
ಬ್ಯಾಟರಾಯನಪುರ
ಬೆಂಗಳೂರು

Sunday 14 July 2019

ಗಿಳಿಬಾಗಿಲು :ಹವ್ಯಕ ನುಡಿಗಟ್ಟು 58 ಹೆಜ್ಜೆಲಿ ಬಿದ್ದ ನೆಳವಿನ ಹಾಂಗೆ © ಡಾ.ಲಕ್ಷ್ಮೀ ಜಿ ಪ್ರಸಾದ

ಹೆಜ್ಜೆಲಿ ಬಿದ್ದ ನೆಳವಿನ ಹಾಂಗೆ
ಇದೊಂದು ಹವ್ಯಕ ಭಾಷೆಲಿ ಬಳಕೆಲಿ ಇಪ್ಪ ಅಪರೂಪದ ನುಡಿಗಟ್ಟು. ತುಂಬಾ ನಿದಾನವಾಗಿ ಕೆಲಸ ಮಾಡುವೋರ ಬಗ್ಗೆ ,ಆಸಕ್ತಿ ಇಲ್ಲದ್ದೆ ಬೇಕಾ ಬೇಡವಾ ಹೇಳುವ ಹಾಂಗೆ ಇಪ್ಪೋರ ಬಗ್ಗೆ ಬಳಸುವ ಮಾತಿದು.
ಯಾವುದೇ ಕೆಲಸ ಮಾಡುವಗಲೂ ನಮಗೆ ಆಸಕ್ತಿ ಶ್ರದ್ಧ  ಬೇಕು.ಅದಿಲ್ಲದ್ದರೆ ಆ ಕೆಲಸವ ಮಾಡುವವ ನಿದಾನಕ್ಕೆ ಬೇಜವಾಬ್ದಾರಿಲಿ ಮಾಡುತ್ತ.ಅದರ ಬೇಗ ಮುಗಿಸಕ್ಕು ಹೇಳುವ ಉದ್ದೇಶ ಇದ್ದ ಹಾಂಗೆ ಕಾಣ್ತಿಲ್ಲೆ. ನಿದಾನಕ್ಕೆ ಆ ಕಡೆ ಈ ಕಡೆ ಗೆಬ್ಬಾಯಿಸಿಕೊಂಡು ಮಾಡುತ್ತಾ ಇರ್ತವು‌.ಅಂತೋರ ಬಗ್ಗೆ ವಿವರುಸುವಗ ಅದು ಎಂತ ಚುರುಕಿಲ್ಲೆ ಯಾವ ಕೆಲಸಲ್ಲೂ ಹಿಡಿತ ಇಲ್ಲೆ ಶ್ರದ್ಧೆ ಇಲ್ಲೆ.ಹೆಜ್ಜೆಲಿ ಬಿದ್ದ ನೆಳವಿನ ಹಾಂಗೆ ಇದ್ದು ಹೇಳಿ ಹೇಳ್ತವು.
ಹೆಜ್ಜೆ ಅಂಟು ಅಂಟಾಗಿ ಇಪ್ಪ ಕಾರಣ ನೆಳವು ಹೆಜ್ಜೆಗೆ ಬಿದ್ದರೆ ಅದಕ್ಕೆ ಬೇಗ ಬೇಗ ಹೋಪಲೆ ಎಡ್ತಿಲ್ಲೆ ಅಲ್ಲದ್ದೆ ನಡು ನಡುವೆ ಅದು ಹೆಜ್ಜೆ ತಿಂತುದೆ ಹಾಂಗಾಗಿ ಅದಕ್ಕೆ ಬೇಗ ಹೆರ ಬಪ್ಪ ಗುರಿ ಇದ್ದ ಹಾಂಗೂ ಕಾಣ್ತಿಲ್ಲೆ ಅಲ್ಲದ್ದೆ ಬೇಗ ಹೋಪಲೆ ಎಡ್ತಿಲ್ಲೆ ಹಾಂಗಾಗಿ ಚುರುಕು ಇಲ್ಲದ್ದೋರ ಬಗ್ಗೆ ಈ ಮಾತಿನ ಬಳಕೆ ಮಾಡುತ್ತವು.
© ಡಾ.ಲಕ್ಷ್ಮೀ ಜಿ ಪ್ರಸಾದ

ಗಿಳಿಬಾಗಿಲು : ಹವ್ಯಕ ನುಡಿಗಟ್ಟು 57 ಬೀಲ‌ ಮಡ್ಚಿ ಕೂಪದು - ಡಾ.ಲಕ್ಷ್ಮೀ ಜಿ ಪ್ರಸಾದ

ಬೀಲ‌ ಮಡ್ಚಿ ಕೂಪದು
ಮಾತಿನ ನಡುವೆ ನಾವು ಇಂತ ಸುಮಾರು ಉಪಮೆಗಳ ಗಾದೆಗಳ ಬಳಸುತ್ತು.ಅಂಬಗಳೇ ಗಮನಿಸಿ ಬರದು ಮಡುಗಿರೆ ಆತು .ಇಲ್ಲದ್ದರೆ ಮರತ್ತೇ ಹೋವುತ್ತು.ಹಾಂಗೆ ಯಾವಗಳೋ ಮಾತಿನ ನಡುವೆ ಗಳಸಿದ ಬೀಲ ಮಡ್ಚಿ ಕೂದ ಹೇಳುವ ಮಾತಿನ ಬರದು ಮಡುಗಿತ್ತಿದೆ.
ಎಂತದು ಇದು ಬೀಲ ಮಡ್ಚಿ ಕೂಪದು ಹೇಳಿರೆ ? ಸಾಮಾನ್ಯವಾಗಿ ಅಧಿಕ ಪ್ರಸಂಗಿಗಳ ಬಗ್ಗೆ ಈ ಮಾತಿನ ಗಳಸುತ್ತವು.
ಯಾವುದೂ ಒಳ್ಳೆಯ ಕೆಲಸಕ್ಕೆ ಹೆರಟಪ್ಪಗ ಕೆಲವು ಜನಂಗ ಅಧಿಕ ಪ್ರಸಂಗಿಗ ಅಡ್ಡಕಾಲು ಹಾಕುಲೆ ಹೆರಡುತ್ತವು.ತಾವು ಏನೋ ಮಹಾ ಹೇಳುವ ಹಾಂಗೆ ಏನೋ ತಕರಾರು ಮಾಡುತ್ತವು.ಅಷ್ಟೊತ್ತಿಂಗೆ ಅಲ್ಲಿಪ್ಪೋರು ಆರಾದರೂ ಸರಿಯಾದ ಆಧಾರ ಹಿಡಿದು ರಜ್ಜ ಗಟ್ಟಿಯಾಗಿ ಖಂಡಿಸಿದರೆ ಇಂತೋವು ಬಾಯಿಮುಚ್ಚಿ ಕೂರ್ತವು.ಇಂತಹ ಸಂದರ್ಭವ ವಿವರುಸುವಗ ಮತ್ತೆ ಅವ ಬೀಲ ಮಡ್ಚಿ ಕೂದ ಹೇಳಿ ಹೇಳುತ್ತವು.
ನಾಯಿಗ ಇನ್ನೊಂದು ನಾಯಿಯ ಕಂಡಪ್ಪಗ ಶುರುವಿಂಗೆ ಕೊರದು ಜಗಳಕ್ಕೆ ಹೋವುತ್ತವು.ಎದುರಣ ನಾಯಿ ಜೋರಿಂದು ಹೇಳಿ ಆದರೆ ಮತ್ತೆ ಜಗಳಕ್ಕೆ ಹೋದ ನಾಯಿ ಬೀಲ ಮಡ್ಚಿ ಒಳಂಗೆ ಹಾಕಿ ಹೋವುತ್ತು.ಸುಮ್ಮ ಸುಮ್ಮನೇ ಕಾಲು ಕೆರದು ಜಗಳಕ್ಕೆ ನಿಂದೋವು ,ಅಧಿಕ ಪ್ರಸಂಗ ಮಾಡುವೋವು ಎದುರಣೋವು ಹೆಚ್ಚು ಬಲಿಷ್ಠರು ಹೇಳಿ ಗೊಂತಪ್ಪದ್ದೆ ಬಾಯಿ ಮುಚ್ಚಿ ಕೂರ್ತವು.ಅದಯ ನಾಯಿಗ ಬೀಲ‌ ಮಡಚ್ಚಿ ಕೂಪದಕ್ಕೆ ಸಮಾನವಾದ್ದು .ಹಾಂಗಾಗಿ ಇಂತಹ ಸಂದರ್ಭಲ್ಲಿ ಬೀಲ‌ಮಡ್ಚಿ ಕೂದ ಹೇಳುವ ಮಾತಿನ ಬಳಸುತ್ತವು.ಈ ಬಗ್ಗೆ ನಿಂಗಳ ಅಭಿಪ್ರಾಯಕ್ಕೆ ಸ್ವಾಗತ‌
- ಡಾ.ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕರು, ಸರ್ಕಾರಿ ಪಿಯು ಕಾಲೇಜು,ನೆಲಮಂಗಲ ,ಬೆಂಗಳೂರು ಗ್ರಾಮಾಂತರ ಜಿಲ್ಲೆ

ಗಿಳಿ ಬಾಗಿಲು ಹವ್ಯಕ ನುಡಿಗಟ್ಟು 56 ಮೇಲೆ ಕಂಡಷ್ಟು ಅಡೀಲೂ ಇದ್ದು © ಡಾ.ಲಕ್ಷ್ಮೀ ಜಿ ಪ್ರಸಾದ

ಗಿಳಿ ಬಾಗಿಲು ಹವ್ಯಕ ನುಡಿಗಟ್ಟು 56
ಮೇಲೆ ಕಂಡಷ್ಟು ಅಡೀಲೂ ಇದ್ದು
ಇಂದು ಅಮ್ಮನತ್ತರೆ ಮಾತಾಡುತ್ತಾ ಇಪ್ಪಗ ಒಬ್ಬರ ವಿಚಾರ ಬಂತು.ಅವರ ಬಗ್ಗೆ ಮಾತಾಡುತ್ತಾ ಇಪ್ಪಗ ಅವು ಕಂಡಾಂಗೆ ಅಲ್ಲ ,ಸಾಮಾನ್ಯಲ್ಲಿ‌ಇಲ್ಲೆ .ಎದುರಂದ ಇಪ್ಪ ಹಾಂಗೆ ಎಲ್ಲೊರು ಹಿಂದಂದದೆ ಇರ್ತವಿಲ್ಲೆ .ಮೇಲೆ ಕಂಡಷ್ಟು ಅಡೀಲೂ‌ ಇರ್ತು ಹೇಳುದು ಸತ್ಯ ಹೇಳುವ ಮಾತು ಬಂತು.ಅಂಬಗ ಇದೊಂದು ನಮ್ಮ ಭಾಷೆಯ ಅಪರೂಪದ ಪ್ರಯೋಗ ಹೇಳುದು ಎನ್ನ ಗಮನಕ್ಕೆ ಬಂತು.
ಮೇಲೆ ಕಂಡಷ್ಟು ಅಡೀಲೂ ಇದ್ದು ಹೇಳಿರೆ ಮನುಷ್ಯರು ಮೇಲ್ನೋಟಕ್ಕೆ ಕಂಡ ಹಾಂಗೆ ಇರ್ತವೂ ಹೇಳಿ‌ ಇಲ್ಲೆ,ಕೆಲವು ಜೆನಂಗಳ ಒಳ ಮನಸ್ಸು ಬೇರೆಯೇ ಇರ್ತು .ಮೇಲಂದ ಕಾಂಬಗ ಒಳ್ಳೆಯ ನಯ ವಿನಯ ಉದಾರತೆಯ , ಒಳ್ಳೆತನದ ಮಾತು ನಡತೆಗ ಇದ್ದರೂ  ಕೆಲವು ಜೆನಂಗ ಒಳಂದ ಬೇರೆಯೇ ಇರ್ತವು ಹೇಳುವ ಅರ್ಥ.
ಅದರೆ ಅಕ್ಷರಶಃ ಅರ್ಥ ಎಂತ ಆದಿಕ್ಕು ? ಯಾವುದರ ಹೋಲಿಸಿ ಈ ಮಾತು ಬಂದಿಕ್ಕು ?
ಹಡಗು ಮೇಲ್ಭಾಗಲ್ಲಿ ಕಂಡಷ್ಟೇ ನೀರಿನ ಒಳದೆ ಇರ್ತು.ಅದರ ಮೇಲ್ಭಾಗ ಮಾತ್ರ ನೋಡಿ ಅದರ ಗಾತ್ರವ ನಿರ್ಣಯಿಸುಲೆ ಸಾಧ್ಯ ಇಲ್ಲೆ.ಮೇಲೆ ಕಂಡಷ್ಟು ಅಡಿಲಿದೆ ಇದ್ದು ಹಾಂಗೆಯೇ ಮನುಷ್ಯನ ವ್ಯಕ್ತಿತ್ವವ ಕೂಡ ಸುಲಭಕ್ಕೆ ನಿರ್ಣಯಿಸುಲೆ ಸಾಧ್ಯ ಇಲ್ಲೆ, ಹೇಳುವ ಅರ್ಥಲ್ಲಿ ಈ ಮಾತು ಬಳಕೆಗೆ ಬಂದಿಕ್ಕು ಹೇಳಿ ಎನಗೆ ಅನ್ಸಿತ್ತು ,ನಿಂಗಳ ಅಭಿಪ್ರಾಯಂಗೊಕ್ಕೆ ಸ್ವಾಗತ
© ಡಾ. ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕರು, ಸರ್ಕಾರಿ ಪದವಿ ಪೂರ್ವ ಕಾಲೇಜು ,ನೆಲಮಂಗಲ