Tuesday 23 May 2017

ಹವ್ಯಕ ನುಡಿಗಟ್ಟು 39 ಬೆಲ್ಲಲ್ಲಿ ಕಡೆ ಕೊಡಿ ಇಲ್ಲೆ © ಡಾ ಲಕ್ಷ್ಮೀ ಜಿ ಪ್ರಸಾದ


ಸಾಮಾನ್ಯವಾಗಿ ಕೆಟ್ಟ ಜನರ ಬೈವಗ ಅಥವಾ ಒಂದು ಗುಂಇನ ಜನರ ಬಗ್ಗೆ ಹೇಳುವಾಗ ಪ್ರಯೋಗ ಮಾಡುವ ಹವ್ಯಕ ಮಾತಿದು
ಉದಾಹರಣೆಗೆ ಹೇಳುದಾದರೆ ದು ಕುಟುಂಬ ಇದ್ದು ಹೇಳಿ ಮಡಿಕೊಂಬ .ಅದರಲ್ಲಿ ಎಲ್ಲರೂ ಕೋಪಿಷ್ಟಂಗ ,ಸಂಸ್ಕರ ಇಲ್ಲದ್ದೋವು.ಅದರಲ್ಲಿ ಒಬ್ಬ ರಜ ವಾಸಿ ಹೇಳಿ ಆರಿಗಾದರೂ ಅನಿಸಿ ಅವ ತೊಂದರೆ ಇಲ್ಲೆ ಅಲ್ಲದಾ ? ರಜ್ಜ ಮನುಷ್ಯತ್ವ ಇದ್ದು ಅವನ ಅಣ್ಣ ತಮ್ಮಂದಿರ ಹಾಂಗ ಅಲ್ಲ ಹೇಳಿರೆ ಅವಂದೆ ಅದೇ ಸ್ವಭಾವ ಹೇಳಿ ಗೊಂತಿಪ್ಪೋರು ಎಂಥದೂ ಇಲ್ಲೆ ಬೆಲ್ಲಲ್ಲಿ ಕಡೆ ಕೊಡಿ ಇದ್ದಾ ? ಹಾಂಗೆ ಅವೆಲ್ಲ ಒಂದೇ ಹೇಳಿ ಹೇಳುತ್ತವು
ಕಬ್ಬಿಂದ ಬೆಲ್ಲ ತಯಾರು ಮಾಡುದು .ಕಬ್ಬಿಲಿ ಕಡೆ ಕೊಡಿ ತುಂಡು ಗಳಲ್ಲಿ ರುಚಿಲಿ ವ್ಯತ್ಯಾಸ ಇದ್ದು ಆದರೆ ಅದರಿದಲೇ  ತಯಾರಾದ
ಬೆ ಲ್ಲದ ಯಾವ ಕಡೆಲಿ ತಿಂದು ನೋಡಿರೂ ಒಂದೇ ರೀತಿಯ ರುಚಿ ಇರ್ತು ಅದರಲ್ಲಿ ಕಡೆ ತುಂಡು ಹೇಳಿ ಹೆಚ್ಚು ಸೀವು ಕೊಡಿ ತುಂಡು ಹೇಳಿ ಕಮ್ಮಿ ಸೀವು ಇರ್ತಿಲ್ಲೆ ( ಬೇಕಾರೆ ಈ ನೆಪಲ್ಲಿ ಆದರೂ ಅಚ್ಚು ಬೆಲ್ಲ ತಿಂದು ರುಚಿಯ ಸವಿಯಿರಿ ಆನು ಅದೇ ಮಾಡುತ್ತಾ ಇದ್ದೆ ಈಗ)  ಹಾಂಗೆ ದುಷ್ಟರ ಗುಂಪಿನ ಎಲ್ಲರೂ ಒಂದೇ ಅವರಲ್ಲಿ ಎಂತ ವ್ಯತ್ಯಾಸ ದೆ ಇಲ್ಲೆ ಹೇಳುವ ಸಂದರ್ಭಲ್ಲಿ ಬೆಲ್ಲಲ್ಲಿ ಕಡೆ ಕೊಡಿ ಇಲ್ಲೆ ಹೇಳುವ ನುಡಿಗಟ್ಟಿನ ನಮ್ಮ ಹಿರಿಯರು ಬಳಕೆ ಮಾಡಿಕೊಂಡು ಬೈಂದವು ಅದು ಎಷ್ಟು ಚಂದ ಇದ್ದು ಅಲ್ಲದಾ ? ಓದಿ ನಿಂಗಳ ಅಭಿಪ್ರಾಯ ತಿಳಿಸಿ ಇನ್ನೊಂದರಿ ಕಾಂಬ ಧನ್ಯವಾದಂಗ
ಡಾ ಲಕ್ಷ್ಮೀ ಜಿ ಪ್ರಸಾದ ಕನ್ನಡ ಉಪನ್ಯಾಸಕಿ ಮತ್ತು ತುಳು ಸಂಶೋಧಕಿ ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ ಬೆಂಗಳೂರು ಗ್ರಾಮಾಂತರ ಜಿಲ್ಲೆ

Tuesday 16 May 2017

ಗಿಳಿ ಬಾಗಿಲು ಹವ್ಯಕ‌ನುಡಿಗಟ್ಟು 38 ಕೇರೆ ತಿಂಬ ರಾಜ್ಯಕ್ಕೆ ಹೋದರೆ ನಡು ತುಂಡು ತಿನ್ನಕ್ಕು © ಡಾ ಲಕ್ಷ್ಮೀ ಜಿ ಪ್ರಸಾದ

ಕಳುದ ಸರ್ತಿ ಊರಿಂಗೆ ಹೋದಿಪ್ಪಗ ಅಕ್ಕಂದೆ ಭಾವಂದೆ ಅಮೇರಿಕಲ್ಲಿ ಇಪ್ಪ ಮಗಳು ಅಳಿಯ ಮಗ ಸೊಸೆ ಮನೆಗೆ ಹೋಪ‌ ಸುದ್ಧಿ ಬಂತು.ಅಮ್ಮಂದೆ ಒಟ್ಟಂಗೆ ಹೋಪ ಅಂದಾಜು ಎನ್ನ ಅಣ್ಣಂದೆ ಒಬ್ಬ ತಮ್ಮಂದೆ ಅಮೇರಿಕಲ್ಲಿ ಇಪ್ಪದು ಈಗ ಅಕ್ಕನ‌ಮಗಳ‌ಅಳಿಉ‌ಮಗ ಸೊಸೆದೆ ಅಲ್ಲಿ ಇಪ್ಪದು ಇವು ಅಮ್ಮಂಗೆ ಪುಳ್ಳಿಯಕ್ಕ ಅನ್ನೇ ಹಾಂಗೆ ಎಲ್ಲರ ಮನೆಗೆ ಹೋಗಿ ಊರು ನೋಡಿ ಬಪ್ಪ ಪ್ಲಾನ್ ಲಿ ಇದ್ದವು ಎನ್ನ ಅಮ್ಮ ಇದಕ್ಕೆ ಮೊದಲೇ ಒಂದು ಸರ್ತಿ ಹೋಗಿ‌ಮಗಂದಿರ ಮನೆಲಿ ಆರು ತಿಂಗಳು ಇದ್ದು ಬೈಂದ .ಎನ್ನ ಅಕ್ಕ ಶುರು ಹೋಪದು  .ಅಕ್ಕಂಗೆ ರಜ್ಜ ಶುಧ್ಧ ಕ್ಲೀನ್ ಮಡಿ ಮೈಲಿಗೆ ಜಾಸ್ತಿ.ಹಾಂಗೆ ವಿಮಾನಲ್ಲಿ ಅಲ್ಲಿಯಣ ಹೋಟೆಲ್ ಗಳಲ್ಲಿ ಇದು ಎಂತ ಮಾಡುಗಪ್ಪ ಹೇಳಿ ಆನು ಯೋಚನೆ ಮಾಡಿದೆ .ಅಮ್ಮನತ್ತರೆ ಅದನ್ನೇ ಹೇಳಿದೆ.ನಾವು ಹೆರ ಹೋದಿಪ್ಪಗ ಅದೆಲ್ಲ ನೋಡುಲಾಗ ನಮ್ಮ ಊರಿಲಿ ಇಪ್ಪಗ ಇಲ್ಲಿ ಇಪ್ಪ ಹಾಂಗೆ ಇರಕ್ಕು .ಬೇರೆ ಊರಿಂಗೆ ಹೋದರೆ ಅಲ್ಲಿ ಇಪ್ಪ ಹಾಂಗೆ ಇರಕ್ಕು .ಕೇರೆ ತಿಂಬ ಊರಿಂಗೆ ಹೋದರೆ ನಡು ತುಂಡು ತಿನ್ನಕ್ಕು ಹೇಳುವ ಹವ್ಯಕ ನುಡಿಗಟ್ಟಿನ ಮಾತಿನ‌ನಡುವೆ ಹೇಳಿದ .ಅಪ್ಪಲ್ಲದ ? ಎಷ್ಟು ಒಳ್ಳೆಯ ಮಾತು.ಹೇಂಗೂ ಕೇರೆ ಮಾತ್ರ ತಿಂಬೋರ ಊರಿಂಗೆ ಹೋವುತ್ತು ಹೇಳಿ ಆದರೆ ಮತ್ತೆ ಅಂಜಿಕೆ ಮಾಡಿಕೊಂಡು ಕಡೆ ಕೊಡಿ ತಿಂಬದಲ್ಲ ನಡು ತುಂಡು ತಿಂದು ಖುಷಿ ಪಡಕ್ಕು ! ಹಾಂಗೆ ಬೇರೆ ಊರಿಂಗೆ ಹೋದಿಪ್ಪಗ ನಮ್ಮಮೂಲಭೂತ ಆಹಾರ ಸಂಸ್ಕೃತಿ ಸಸ್ಯಾಹಾರ ಹೇಳುದರ ಮಾತ್ರ ಮಡುಕ್ಕೊಂಡು ಒಳುದ ಮಡಿ ಮೈಲಿಗೆ ಎಲ್ಲ ಬಿಟ್ಟು ಸಂತೋಷ ಪಡಕ್ಕು .ಹುಟ್ಟಿನಿಂದ ಸಸ್ಯಾಹಾರಿ ಗೊಕ್ಕೆ ಅದರ ಯಾವ ಊರಿಂಗೆ ಹೋದರೂ ಬಿಡುಲೆ ಎಡಿಯ ಬ್ರಾಹ್ಮಣಾಗಿ ಹುಟ್ಟಿದ ಮೇಲೆ ಅಸರ ಬಿಡುಲೂ ಆಗ ಅಲ್ಲದ ? ಉಳಿದಂತೆ ವೇಷಭೂಷಣ, ಮಡಿ ಮೈಲಿಗೆ ಸಂಪ್ರದಾಯ ವ ಇಲ್ಲಿ ಬಿಟ್ಟು ಹೋಗಿ‌ಮತ್ತೆ ಪುನಃ ಬಂದ ಮೇಲೆ ಶುರು ಮಾಡಿದರೆ ಸಾಕು ಇಲ್ಲದ್ದರೆ ಅಲ್ಲಿ ಹೋಗಿ ಖುಷಿಯಾಗಿ ಇಪ್ಪಲೆ ಎಡಿಯ ಅಲ್ಲದ ? ನಿಂಗ ಎಲ್ಲ ಎಂಥ ಹೇಳ್ತೀರಿ ? ತುಂಬಾ ದಿನದ ನಂತರ ಗಿಳಿಬಾಗಿಲು ತೆರದ್ದೆ ಧನ್ಯವಾದಂಗ ©ಡಾ ಲಕ್ಷ್ಮೀ ಜಿ ಪ್ರಸಾದ ಕನ್ನಡ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ ಬೆಂಗಳೂರು ಗ್ರಾಮಾಂತರ ಜಿಲ್ಲೆ.