Friday 14 February 2014

ಗಿಳಿ ಬಾಗಿಲು (ಹವ್ಯಕ ಬ್ಲಾಗ್ )-ಕಾಸು ಕೊಟ್ಟು ಹೊಳೆ ನೀಂದುವ ಪಂಚಾಯತಿಗೆ ಆಗ !

'ಕಾಸು ಕೊಟ್ಟು ಹೊಳೆ ನೀಂದುವ ಪಂಚಾಯತಿಗೆ ಆಗ ''ಎಂಗಳ ಹೊಸ ಮನೆ ಅಜ್ಜ ಹೀಂಗೆ ಹೇಳ್ತಾ ಇಪ್ಪದರ ಆನು ಸಣ್ಣಾದಿಪ್ಪಗಲೇ ಕೇಳಿತ್ತಿದೆ.ನೀಂದುದು ಹೇಳಿದರೆ ಈಜುದು ಹೇಳಿ ಎನಗೆ ಗೊಂತಿತ್ತು.ಅಜ್ಜನ ಮನೆಯ ತೋಡಿಲಿ ಎಂಗ ಎಲ್ಲ ಸೊಕ್ಕಿಗೊಂಡು ಇತ್ತಿದೆಯಬೇಸಗೆಲಿ ನೀರು ತುಂಬಾ ಕಮ್ಮಿ ಅಪ್ಪಗ ಅಲ್ಲಿ ನೀಂದುಲೆ ಹೋದರೆ ಕೈಕಾಲಿಂಗೆ ಗೆರಕಿ ತಾಗಿಕೊಂಡು ಇತ್ತು.ಹಾಂಗೆ ಆನು ಅಜ್ಜನ ಮನೆಯ ತೋಡಿನ ಬದಲು ಹೊಳೆ ಇದ್ದರ ಒಳ್ಳೆದಿತ್ತು ಹೇಳಿ ಜ್ಹಾನ್ಸಿಗೊಂಡು ಇತ್ತಿದೆ.ಆ ಸಮಯಲ್ಲಿ“ಅಜ್ಜ ಕಾಸು ಕೊಟ್ಟು ಹೊಳೆ ನೀಂದುವ ಪಂಚಾಯತಿಗೆ ಆಗ”ಹೇಳಿ ಆರತ್ತರೋ ಮಾತಾಡುದು ಅಲ್ಲಿಯೇ ಓಂಗಿಗೊಂಡು ಇದ್ದ ಎನ್ನ ಕೆಮಿಗೆ ಬಿದ್ದದು!
'' ಓ ಹೊಳೇಲಿ ನೀಂದಕ್ಕಾದರೆ ಪೈಸೆ ಕೊಡಕ್ಕು ಅಂಬಗ !ಸದ್ಯ ಅಜ್ಜನ ಮನೆಲಿ ತೋಡು ಇದ್ದದೆ ಪುಣ್ಯ!ಹೊಳೆ ಇರ್ತಿತ್ತರೆ ಈಜುಲೂ ಪೈಸೆ ಕೊಡಕ್ಕಾವುತ್ತಿತ್ತು,ಈಜುಲೂ ಪೈಸೆ ಕೊಟ್ಟರೆ , ಅಜ್ಜಿ ಕೊಟ್ಟ ಹಾಲು ತೆಕ್ಕೊಂಡು ಹೋದ್ದರ ಪೈಸೆ,ಅಜ್ಜ ಅಡಕ್ಕೆ ಹೆರ್ಕಿದ್ದಕ್ಕೆ,ಹೊತ್ತದಕ್ಕೆ,ಹಿಂಡಿ ತಂದದಕ್ಕೆ ಕೊಟ್ಟ ಪೈಸೆ ಎಲ್ಲ ಮುಗುದರೆ ಮತ್ತೆ ಕೋಳ್ಯೂರು ಮಂಡಲ ಪೂಜೆಲಿ ಸಂತೆಗೆ ಬಪ್ಪ ಶೆಟ್ಟಿ ಐಸು ಕ್ರೀಮು ತಿಮ್ಬಲೆ,ದಂಬಾರು ತೊಟ್ಲಿಲಿ ಕೂಪಲೆ ಪೈಸೆ ಒಳಿಯ ಅನ್ನೇ '' ಹೇಳಿ ಆನು ಅಂಬಗ ಜ್ಹಾನ್ಸಿತ್ತಿದೆ !ನಿಂಗೊಗೆ ಎಲ್ಲ ಈಗ ನೆಗೆ ಬಂದಿಕ್ಕು ಅಲ್ಲದ ?ಎನಗೆ ಅಷ್ಟೇ ಬೊಂಡು ಬೆಳದಿತ್ತದು!ಮತ್ತೆದೆ ಅದು ಬೆಳದ್ದೇ ಇಲ್ಲೆ ಹೇಳುದು ಬೇರೆ ವಿಚಾರ!! .
ಇರಲಿ; ಅಜ್ಜ ಹೇಳಿಗೊಂಡು ಇದ್ದ ಕಾಸು ಕೊಟ್ಟು ಹೊಳೆ ನೀಂದುವ ಸಂಗತಿ ಎನಗೆ ನೆನಪಾದ್ದು ಓ ಮೊನ್ನೆ ಎರಡು ಮೂರು ತಿಂಗಳು ಮೊದಲು ಎನ್ನ ಪುಸ್ತಕ ಪ್ರಕಟ ಮಾಡುವ ಸಮಯಲ್ಲಿ .
ರಜ್ಜ ಸಮಯ ಮೊದಲು ಎನ್ನ ಪಿಎಚ್.ಡಿ ಸಂಶೋಧನ ಮಹಾ ಪ್ರಬಂಧ ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ-ಒಂದು ವಿಶ್ಲೇಷಣಾತ್ಮಕ ಅಧ್ಯಯನ ,.ಭೂತಗಳ ಅದ್ಭುತ ಜಗತ್ತು ,ತುಳು ಜಾನಪದ ಕಾವ್ಯಗಳಲ್ಲಿ ಕಾವ್ಯತತ್ವಗಳು ,ಬಂಗ್ಲೆ ಗುಡ್ಡೆ ಸಣ್ಣಕ್ಕನ ಮೌಖಿಕ ಸಾಹಿತ್ಯ ,ಮತ್ತೆ ಶಾರದಾ ಜಿ ಬಂಗೇರರ ಮೌಖಿಕ ಸಾಹಿತ್ಯ ಹೇಳುವ 5 ಪುಸ್ತಕಂಗಳ ಪ್ರಕಟಣೆ ಮಾಡುತ್ತೆಯ ಹೇಳಿ ಒಂದು ಪ್ರಕಾಶನ ಸಂಸ್ಥೆ ಒಪ್ಪಿತ್ತು .ಆನುದೆ ಒಪ್ಪಿ ಎಲ್ಲ ತಯಾರಿ ನಡದು ಅಪ್ಪಗ ಪ್ರಕಾಶಕರ ಕಡೆಂದ ಒಂದು ಮನವಿ ಬಂತು.ಎಂಗೊಗೆ ಈಗ ಪೈಸೆ ಭಾರೀ ಟೈಟ್ ಆಯಿದು.ನಿಂಗ ಒಂದು 30,೦೦೦ ಈಗ ಕೊಟ್ಟಿರಿ.ಬಪ್ಪ ತಿಂಗಳು ಎನಗೆ ಪೈಸೆ ಬಪ್ಪದು ಇದ್ದು ಅಂಬಗ ಕೊಡ್ತೆ ಹೇಳಿ!ಎಂತ ಹೇಳುದು ಹೇಳಿ ಗೊಂತಾತಿಲ್ಲೆ ಒಂದು ಕ್ಷಣ .ಎಂತಕ್ಕೂ ನಾಳೆ ಹೇಳುತ್ತೆ ಹೇಳಿ ಹೇಳಿದೆ.
ಈ 5 ಪುಸ್ತಕಂಗಳ ಆನು ಸ್ವಂತ ಪ್ರಿಂಟ್ ಮಾಡಿ ಪ್ರಕಟಿಸುತ್ತರೆ ಕಮ್ಮಿ ಹೇಳ್ರೂ ನಾಲ್ಕು ಲಕ್ಷ ರೂಪಾಯಿ ಬೇಕು.ಎನ್ನ ಈ ಹಿಂದೆ ಪ್ರಕಟ ಆದ 15 ಪುಸ್ತಕಂಗ ಇಷ್ಟರ ತನಕ ಯಾವುದೂ ಮಾರಾಟ ಆಗದ್ದೆ ಒಳುದ್ದಿಲ್ಲೆ .ಪುಸ್ತಕಂಗ ಮಾರಾಟ ಆದರೆ ಒಳ್ಳೆ ಲಾಭವೂ ಬತ್ತು .ಆನು ಲಾಭದ ದೃಷ್ಟಿಲಿ ಪ್ರಕಟ ಮಾಡಿದ್ದು ಅಲ್ಲ.ಆದರು ಎನಗೆ ನಷ್ಟ ಆಯಿದಿಲ್ಲೆ .ಅಲ್ಪ ಸ್ವಲ್ಪ ಲಾಭವೇ ಅಯಿದು.
ಈಗ ಪ್ರಕಟ ಅಪ್ಪ ಪುಸ್ತಕಂಗಳಲ್ಲಿ 3 ಪುಸ್ತಕಂಗ ಒಳ್ಳೆ ಬೇಡಿಕೆ ಇಪ್ಪ ಕ್ಷೇತ್ರದ ನಾಗಾರಾಧನೆ,ಭೂತಾರಾಧನೆ ಇಪ್ಪ ಪುಸ್ತಕಂಗ.ಇದು ಪ್ರಕಟ ಮಾಡಿರೆ ಒಳ್ಳೆ ಲಾಭ ಬಪ್ಪಂತಹಾದ್ದು.ಹಾಂಗಿಪ್ಪಗ ಪ್ರಕಾಶಕರು ಮೂವತ್ತು ಸಾವಿರ ಕೊಡಿ ಹೇಳಿರೆ !
ನಿದಾನಕ್ಕೆ ಕೂದು ಆಲೋಚನೆ ಮಾಡಿದೆ.ಈಗ ಮೂವತ್ತು ಸಾವಿರ ಕೇಳಿದೋರು ಇದರ ಕೊಟ್ಟಪ್ಪಗ ಮತ್ತೆ ಪುನ ಇಷ್ಟು ಕೊಡಿ ಹೇಳಿರೆ ..!ಇದು ಆಗ! ಕಾಸು ಕೊಟ್ಟು ಹೊಳೆ ನೀಂದುವ ಪಂಚಾಯತಿಕೆ ಆತಿಲ್ಲೆ.ಅದರ ಆನೇ ಬಂಡವಾಳ ಹಾಕಿ ಒಂದೊಂದೇ ಪುಸ್ತಕ ನಿದಾನಕ್ಕೆ ಪ್ರಕಟ ಮಾಡುಲೆ ಅಕ್ಕನ್ನೇ ಹೇಳಿ ಕಂಡತ್ತು!
ಮರು ದಿನ ಫೋನ್ ಮಾಡಿ ಅವಕ್ಕೆ ಖಡಾ ಖಂಡಿತವಾಗಿ ಹೇಳಿದೆ.”ಎನ್ನ ಕಡೆಂದ ಒಂದು ನಯಾ ಪೈಸೆ ಹೂಡಿಕೆ ಇಲ್ಲೆ.ಲಾಭ ನಷ್ಟ ಎರಡೂ ನಿಂಗಳದ್ದೆ.ಒಪ್ಪಿಗೆ ಇದ್ದರೆ ಮಾತ್ರ ಪ್ರಕಟ ಮಾಡಿ ಇಲ್ಲದ್ದರೆ ಬೇಡ” ಹೇಳಿ.”ಅರ್ಧಾಂಶ ನಿಂಗ ಬಂಡವಾಳ ಹಾಕದ್ದರೆ ಎಂಗೊಗೆ ಎಡಿಯ” ಹೇಳಿದವು.(ಇದರ ಅರ್ಥ ಅವು ಎನ್ನ ಕೈಂದ ಎರಡು ಲಕ್ಷ ಪೀಂಕುಸುವ ಅಂದಾಜಿಲಿ ಇತ್ತಿದವು ಹೇಳಿ ಅಲ್ಲದ! )
ಸರಿ ಹೇಳಿದೆ.
ಎರಡು ಪುಸ್ತಕವ ಕೂಡಲೇ ಅನೇ ಪ್ರಕಟಮಾಡುದು ಹೇಳಿ ಆಲೋಚಿಸಿದೆ.ಅಷ್ಟರಲ್ಲಿ ಬೇರೆ ಒಂದು ಪ್ರಕಾಶನದೋರು (ಪ್ರಚೇತ ಬುಕ್ ಹೌಸ್ ಪ್ರಕಾಶಕರು) ಅವ್ವೆ ಪೂರ್ತಿಯಾಗಿ ಬಂಡವಾಳ ಹಾಕಿ ಎನ್ನ ಎಲ್ಲ ಪುಸ್ತಕ ಪ್ರಕಟಮಾಡುಲೆ ಮುಂದೆ ಬಂದವು.ಈಗ ಎಲ್ಲ ಪ್ರಕಟ ಆತುದೆ.
ಆದರೆ ಈ ಪ್ರಕರಣ ಕಾಸು ಕೊಟ್ಟು ಹೊಳೆ ನೀಂದುದು ಹೇಳ್ರೆ ಎಂತದು ಹೇಳಿ ಕಲಿಸಿತ್ತು.ಆನು ಮೋಸ ಹೋಗದ್ದಾಂಗೆ ಎನ್ನ ಸಕಾಲಲ್ಲಿ ಎಚ್ಚರಿಸಿತ್ತು ಕೂಡಾ ಅಜ್ಜನ ಅನುಭವದ ಮಾತು!.
ಮೊದಲೆಲ್ಲ ಈಗಲುದೆ ಕೆಲವೆಡೆ ಹೊಳೆ ದಾಂಟುಲೆ ಸಂಕ ಇತ್ತಿಲ್ಲೆ.ಮಳೆಗಾಲಲ್ಲಿ ಓಡದೋರಿನ್ಗೆ ಪೈಸೆ ಕೊಟ್ಟು ಓಡಲ್ಲಿ ಹೊಳೆ ದಾಂಟಿ ಗೊಂಡು ಇದ್ದದು.ಕೆಲವು ಜನಂಗ ನೀರು ಕಮ್ಮಿ ಇದ್ದರೆ ಈಜಿಕೊಂಡು ಅಥವಾ ಹೀಂಗೆ ನದಕ್ಕೊಂದು ದಾಂಟಿ ಕೊಂಡು ಹೋಗಿಗೊಂಡು ಇತ್ತಿದವು.ಆದರೆ ಕಾಸು ಕೊಟ್ಟು ಹೊಳೆ ನೀಂದುದು ಹೇಳುವ ನುಡಿಗಟ್ಟು ಹೇಂಗೆ ಬಳಕೆಗೆ ಬಂತು ಗೊಂತಿಲ್ಲೆ.ನಮ್ಮ ಭಾಷೆಲಿ ಇಂಥ ಒಂದು ಚೆಂದದ ನುಡಿಗಟ್ಟು ಇದ್ದು.ತುಳುವಿಲಿಯೂ ಕಾಸು ಕೊರ್ದು ಸುದೆ ನೀನ್ದುನೆ ಹೇಳುವ ಬಳಕೆ ಇದ್ದು ಹೇಳಿ ಎನಗೆ ನೆನಪು .ಈ ನುಡಿಗಟ್ಟು ಬಳಕೆಗೆ ಬಪ್ಪಲೆ ಬೇರೆ ಏನಾದರೂ ಕಾರಣ ಇಕ್ಕ ?ಗೊಂತಿಪ್ಪೋರು ತಿಳುಸಿ

2 comments:

  1. ನಿಂಗ ಹೇಳಿದ್ದೇ ಅರ್ಥ ಆಗಿಕ್ಕು ಅಕ್ಕ. ಪೈಸೆ ಕೊಟ್ಟು ಅರ್ಧ ಹೊಳೆ ದಾಂಟುವ ಅರ್ಥ ಆಗಿಕ್ಕು ಅಲ್ಲದ.

    ReplyDelete
    Replies
    1. ಅಪ್ಪು ಹಾಂಗೆ ಆಡಿಪ್ಪ ಸಾಧ್ಯತೆ ಹೆಚ್ಚು ಕಾಣುತ್ತು.ಓದಿ ಅಭಿಪ್ರಾಯಿಸಿ ಬೆಂಬಲಿಸಿದ್ದಕ್ಕೆ ಧನ್ಯವಾದಂಗ ,ನಿಂಗಳ ಎಲ್ಲರ ಪ್ರೋತ್ಸಾಹ ಸದಾ ಇರಲಿ -ಲಕ್ಷ್ಮೀ ಜಿ ಪ್ರಸಾದ

      Delete