Wednesday 21 May 2014

ಗಿಳಿಬಾಗಿಲು (ಹವ್ಯಕ ಬ್ಲಾಗ್ )-ಆನೆ ಹೋಪಲ್ಲಿ ಬಿಟ್ಟು ಸೂಜಿ ಹೋಪಲ್ಲಿ ಅಡೆಪ್ಪುದು -ಡಾ.ಲಕ್ಷ್ಮೀ ಜಿ ಪ್ರಸಾದ

ಮನುಷ್ಯರ ಸ್ವಭಾವವೇ ವಿಚಿತ್ರ .ಒಬ್ಬ ಇನ್ನೊಬ್ಬನ ಹಾಂಗೆ ಇರ್ತವಿಲ್ಲೆ.
.ಕೆಲವು ಜನಂಗ ತುಂಬಾ ಉದಾರಿಗ .ಕೆಲವು ಜನಂಗ ಎಂಜೆಲು ಕೈಲಿ ಕಾಕೆ ಓಡ್ಸದ್ದಷ್ಟು ಪಿಟ್ಟಾಸಿಗ,ಕೆಲವು ಜನಂಗ ತುಂಬಾ ಸರಳವಾಗಿಪ್ಪಲೆ ಬಯಸುವೋರು ,ಕೆಲವು ಜನಂಗ ತುಂಬಾ ಧಂ ಧೂಮ್ ಆಗಿ ಖರ್ಚು ಮಾಡುವೋರು .ಮನೆಲಿ ಇದ್ದ ಇಲ್ಲೆಯ ಹೇಳಿ ಕೂಡಾ ನೋಡದ್ದೆ ಖರ್ಚು ಮಾಡುವೋರು,ಮನೇಲಿ ಕೊಳವಷ್ಟು ಇದ್ದರೂ ಬೇರೆಯೋರಿಂಗೆ ಒಂದು ತುಂಡು ಕೊಡದ್ದೋರು ,ಹೆಸರಿನ್ಗಾಗಿಯಾ ಅಥವಾ ಇನ್ನೇನಾದರೂ ಕಾರಣಕ್ಕೋ ಸಂಘ ಸಂಸ್ಥೆಗೊಕ್ಕೆ ಧಾರಾಳ ಕೊಡುವೋರು ,ಮನೆ ಬಾಗಿಲಿಂಗೆ ಬಂದ ಬಡವಂಗೆ ಅಶನ ಹಾಕುಲೂ ಕುರೆ ಮಾಡುವೋರು,ದೇವಸ್ಥಾನಕ್ಕೆ ,ಮಠ-ಮಂದಿರಂಗೊಕ್ಕೆ ಧಾರಾಳ ಕೊಡುವೋರುದೆ ಪಕ್ಕದ ಮನೆಯ ಬಡ ಮಾಣಿಗೆ ಕಿಡ್ನಿ ಜೋಡಣೆಗೆ ಪೈಸೆ ಕೊಡುಲೆ ಮನಸ್ಸು ಮಾಡದ್ದೆ ಇಪ್ಪೋರು ..ಹೀಂಗೆ ಪ್ರತಿಯೊಬ್ಬರಿಂಗು ಅವರದೇ ಆದ ಸ್ವಭಾವ ರೀತಿ ನೀತಿಗ ಇರ್ತು

ಆದರೂ ಸಮಾಜದ ಸಾಮಾನ್ಯವಾಗಿಪ್ಪ  ರೀತಿ ನೀತಿಗೊಕ್ಕೆ   ತೀರಾ ಭಿನ್ನವಾಗಿಪ್ಪೋರ ಬಗ್ಗೆ ಜನಂಗ ಮಾತಾಡಿಗೊಂಬದುದೆ ಸಾಮಾನ್ಯವಾದ ವಿಚಾರ. ಮನುಷ್ಯರ ಇಂಥ ಕೆಲವು ವಿಶಿಷ್ಟ ಸ್ವಭಾವಂಗಳ ಬಗ್ಗೆ ಹೇಳುವಾಗ ಹೆಚ್ಚಾಗಿ ನುಡಿಗಟ್ಟುಗಳ ಬಳಕೆ ಇರುತ್ತು .

ಇಂಥ ಒಂದು ವಿಶಿಷ್ಟ ನುಡಿಗಟ್ಟು "ಆನೆ ಹೋಪಲ್ಲಿ ಬಿಟ್ಟು ಸೂಜಿ ಹೋಪಲ್ಲಿ ಅಡೆಪ್ಪುದು "ಹೇಳುದು .ಒಂದು ಕಡೆ ಬೇಜವಾಬ್ದಾರಿ ಉದಾಸೀನ ಅವ್ಯವಸ್ಥೆಯ ಕಾರಣಂದಾಗಿ ಸಾವಿರ ಗಟ್ಲೆ ನಷ್ಟ ಆವುತ್ತಾ ಇರುತ್ತು .ಅದರ ಸರಿ ಪಡಿಸುಲೆ ಹೋಗದ್ದೆ ಸಣ್ಣ ಪುಟ್ಟ ವಿಚಾರಗಳ ಬಗ್ಗೆ ಹೆಚ್ಚು ಗಮನ ಕೊಟ್ಟು ಸರಿ ಪಡಿಸುಲೆ ಹೋಪ ಜನಂಗಳನ್ನು ನಾವು ಸುತ್ತ ಮುತ್ತ ನೋಡುತ್ತು .
ಉದಾ ಹರಣೆಗೆ ಹೇಳುತ್ತರೆ ತೋಟಕ್ಕೆ ವಾರಕ್ಕೆ ಒಂದರಿದೆ ಕಾಲು ಮಡುಗದ್ದೆ ಅಡಕೆ ತೆಂಗು ಕದ್ದು ಹೊವುತ್ತಾ ಇರ್ತು .ದನಗ ಬಂದು ಬೆಳೆ ಸಪ್ಪಾಯಿ ಆಗಿರ್ತು .ಅದರ ಬಗ್ಗೆ ಕಾಳಜಿ ಮಾಡದ್ದೆ ಮನೆ ಹತ್ರಣ ಮಾವಿನ ಮರಂದ ಬಿದ್ದ ನಾಲ್ಕು ಮಾವಿನ ಹಣ್ಣಿನ ಆರೋ ಹೆರ್ಕಿಕೊಂಡು ಹೋಪಗ ಅದರ ಬಗ್ಗೆ ಭಾರೀ ಜಾಗ್ರತೆ ಮಾಡುದು !

 ತೋಟಂದ ಹಾಡು ಹಗಲೇ  ಕದ್ದು ಹೋಪ ಬಗ್ಗೆ ಜಾಗ್ರತೆ ಮಾಡುಲೆ ಇಲ್ಲೇ .ಬದಲಿಂಗೆ ಮನೆ ಕೆಲಸದೋವಕ್ಕೆ ಬಳುಸುವಗ ಕೈ ಕುಂಟು ಮಾಡುದು ,ಅವಕ್ಕೆ ಬರೀ ಕಳಪೆ ಊಟ ತಿಂಡಿ ಕೊಡುದು ಇತ್ಯಾದಿ ಮಾಡುವ ಅನೇಕ ಜನರ ನಾವು ಕಾಣುತ್ತಾ ಇರುತ್ತು .

ಇಂಥೋರ ಬಗ್ಗೆ ಹೇಳುವಾಗ ಬಳಕೆ ಅಪ್ಪ ನುಡಿಗಟ್ಟು ಇದು
ಆನೆ ಹೋಪಲ್ಲಿ ಬಿಟ್ಟು ಸೂಜಿ ಹೋಪಲ್ಲಿ ಅಡೆಪ್ಪುದು ಹೇಳಿರೆ ಆನೆ ಹೊಪಷ್ಟು ದೊಡ್ಡ ಮಾರ್ಗಲ್ಲಿ ದೊಡ್ಡ ಮಟ್ಟಲ್ಲಿ ನಷ್ಟ ಅಪ್ಪದರ ತಡೆಯದ್ದೆ ಅದರ ಹಾಂಗೆ ಬಿಟ್ಟು ಸೂಜಿ ಹೊಪಷ್ಟು ಸಣ್ಣ ಮಾರ್ಗಲ್ಲಿ ಅಪ್ಪ ಸಣ್ಣ ಪುಟ್ಟ ನಷ್ಟವ ತಡವ ನಿರರ್ಥಕ ಯತ್ನ  ಹೇಳಿ ಅರ್ಥ .
ಸೂಜಿ ಹೊಪಷ್ಟು ಸಣ್ಣಕ್ಕೆ ನಷ್ಟ ಆದರೆ ಎಷ್ಟು ಅಕ್ಕು ?ಉಂಬಲೆ ತಿಂಬಲೆ ಕೊಡುದರಲ್ಲಿ  ಸಣ್ಣ ಮಾಡಿ ಎಷ್ಟು ಒಳಿಸುಲೆ ಎಡಿಗು ?

ಅಂತಹ   ಪ್ರಯತ್ನ ನಿರರ್ಥಕ ಹೇಳಿ ಈ ನುಡಿಗಟ್ಟು ತಿಳಿಸುತ್ತು.

No comments:

Post a Comment