Friday 6 June 2014

ಗಿಳಿ ಬಾಗಿಲು (ಹವ್ಯಕ ಬ್ಲಾಗ್ )-28 ಉಡುಗಿ ಇಡ್ಕಿದ ಕುಂಟು ಹಿಡಿಸೂಡಿದೆ ಪ್ರಯೋಜನಕ್ಕೆ ಬತ್ತು .ಡಾ.ಲಕ್ಷ್ಮೀ ಜಿ ಪ್ರಸಾದ

ಎಂಗ ಜಾಲಿಂಗೆ ಸಿಮೆಂಟ್ ಹಾಕಿದ್ದಿಲ್ಲೆ,ಮನೆ ಮುಂದೆ 30x 25 ಅಡಿ ಯಷ್ಟು ಜಾಗೆಲಿ ರಜ್ಜ ಹೂಗಿನ ಸೆಸಿ ,ಒಂದೆರಡು ಬದನೆ ಸೆಸಿ ,ಬಸಳೆ ಬಳ್ಳಿ ಒಟ್ಟಿಂಗೆ ಒಂದು ಪಾರಿಜಾತ ,ಎರಡು ಮೂರು ಮೀಸೆ ಹೂಗಿನ ಎತ್ತರದ ಸೇಸಿಗ,ಒಂದು ಬೇನ್ಸೊಪ್ಪಿನ ಸಣ್ಣ ಮರ  ಇದ್ದು . ಸಿಮೆಂಟ್ ಹಾಕಿದರೆ ನೀರು ಇಂಗುತ್ತಿಲ್ಲೆ ,ಸೇಸಿಗ ಬೆಳೆತ್ತಿಲ್ಲೆ ,ಹಕ್ಕಿಗ ಕುಂಡೆಚ್ಚಂಗ ಗಮ್ಮತ್ತು ಮಾಡಿಕೊಂಡು ಇರಲಿ ಹೇಳಿ ಸೇಸಿಗಳ  ಹಾಂಗೆ ಬಿಟ್ಟಿದೆಯ .ನಡುಗೆ ಒಂದು ಬೋರ್ ವೆಲ್,ಅದಕ್ಕೆ ಟೆರೇಸಿನ ನೀರು ಮತ್ತು ಜಾಲಿಂಗೆ ಬಿದ್ದ ನೀರಿನ ಇಂಗುವ ಹಾಂಗೆ ಮಾಡಿದ್ದೆಯ .
ನಡಕ್ಕೊಂದು ಹೋಪ ದಾರಿಗೆ ಮಾತ್ರ ಕಲ್ಲು ಹಾಸಿದ್ದೆಯ .
ಎರಡು ದಿನಂದ ಮಳೆಯೂ ಬತ್ತಾ ಇದ್ದು .ಒಟ್ಟಿಂಗೆ ಹೆಗ್ಳಂಗಳುದೆ ಮಣ್ಣು ಎಳದು ಹಾಕಿದ್ದವು .ಹಾಂಗೆ ಮಣ್ಣು  ಎದ್ದು ಹೋಪ ದಾರಿಗೆ ಬಿದ್ದು ಕಾಲಿನ್ಗೆ ಹಿಡ್ಕೊಂಡು ಇತ್ತು .ಮನೆ ಒಳಂಗೆ ಮಣ್ಣು ಬತ್ತು ಹೇಳಿ ದಾರಿಯ  ಉಡುಗುವ ಹೇಳಿ ಹೆರಟೆ.ಅದು ಈ ಮೆದು ಕಡ್ಡಿಯ ಆಧುನಿಕ ಹಿಡಿಸೂಡಿಲಿ ಹೊವುತ್ತಾ?
ಅಂಬಗ ಎನಗೆ ಊರಿನ ಮನೆ ಒಳ ಉಡುಗಿ ಕುಂಟು ಆದ ಹಿಡಿ ಸೂಡಿಯ ಇಡುಕ್ಕದ್ದೆ ಜಾಳು ಉಡುಗುಲೆ ಹೇಳಿ ಮಡಿಕ್ಕೊಂಡು ಇದ್ದದು ನೆನಪಾತು .ಒಟ್ಟಿಂಗೆ ಉಡುಗಿ ಇಡ್ಕಿದ ಕುಂಟು ಹಿಡಿಸೂಡಿದೆ ಪ್ರಯೋಜನಕ್ಕೆ ಬತ್ತು ಹೇಳುವ ನುಡಿಗಟ್ಟುದೆ ನೆಂಪಾತು.

ಯಾವ ವಸ್ತು ಕೂಡಾ ನಿಷ್ಪ್ರಯೋಜಕ ಅಲ್ಲ .ಒಂದಲ್ಲ ಒಂದು ಪ್ರಯೋಜನ ಇದ್ದೆ ಇರುತ್ತು,ಹಾಂಗಾಗಿ ಆರ ಬಗ್ಗೆದೆ ತಾತ್ಸಾರ ಭಾವನೆ ಇಪ್ಪಲಾಗ ಹೇಳುವ ಅರ್ಥವ ಇದು ತಿಳಿಸುತ್ತು .

ಯಶಸ್ಸು ಹೇಳುದು ಯಾವಾಗಲೂ ಒಬ್ಬನ ಯತ್ನಂದ ಮಾತ್ರ ಸಿಕ್ಕುತ್ತಿಲ್ಲೆ.ಅದಕ್ಕೆ ತುಂಬಾ ಜನಂಗ ಪ್ರತ್ಯಕ್ಷವಾಗಿ ಅಪ್ರತ್ಯಕ್ಷವಾಗಿ ಸಹ ಕರಿಸಿರುತ್ತವು .ಆದರೆ ಯಾವಾಗಲು ಯಶಸ್ಸು ಮುಂಚೂಣಿಲಿ ಇದ್ದ ಅಥವಾ ಆ ಕಾರ್ಯವ ಸುರುಮಾಡಿದ ,ಕೊನೆ ಎತ್ತಿಸಿದ ಒಬ್ಬನ ಹೆಸರಿಲಿ ದಾಖಲಾವುತ್ತು.ಅಂತ ಸಂದರ್ಭಗಳಲ್ಲಿ ತನ್ನ ಕಾರ್ಯದ ಯಶಸ್ಸಿಂಗೆಸಹಕರಿಸಿದ ಎಲ್ಲರನ್ನೂ ಮರ್ತುಬಿಡುವ ಪ್ರವೃತ್ತಿ ಅನೇಕ ಜೆನಂಗಳಲ್ಲಿ ನಾವು ಕಾಣುತ್ತು.
ಇಂಥ ಸಂದರ್ಭಲ್ಲಿದೆ "ಈಗ ಅವಂಗೆ ಉಪಕಾರ ಮಾಡಿದೋರ ನೆನಪಿಲ್ಲೆ,ಉಡುಗಿ ಇಡ್ಕಿದ ಕುಂಟು ಹಿಡಿಸೂಡಿದೆ ಬೇಕಾವುತ್ತು ,ಒಂದಿನ ನಮ್ಮ ಸಹಾಯ ಬೇಕಕ್ಕು,ಅಂಬಗ ನೆನಪಕ್ಕು, ನೋಡುವ ಹೇಳಿ ಕೋಳ್ಯೂರು ಕಡೆಲಿ ನಮ್ಮ ಭಾಷೆಲಿಈ ಮಾತಿನ ಬಳಕೆ ಮಾಡುತ್ತವು,
ಬೇರೆ ಕಡೆಲಿದೆ ಈ ಪಡೆನುಡಿ ಬಳಕೆಲಿ ಇಕ್ಕು .ಇದಕ್ಕೆ ಸಮಾನಾಂತರವಾದ ಮಾತುಗಳೂ ಇಕ್ಕು ,ಗೊಂತಿಪ್ಪೋರು ತಿಳುಸಿ .

No comments:

Post a Comment