Tuesday 23 May 2017

ಹವ್ಯಕ ನುಡಿಗಟ್ಟು 39 ಬೆಲ್ಲಲ್ಲಿ ಕಡೆ ಕೊಡಿ ಇಲ್ಲೆ © ಡಾ ಲಕ್ಷ್ಮೀ ಜಿ ಪ್ರಸಾದ


ಸಾಮಾನ್ಯವಾಗಿ ಕೆಟ್ಟ ಜನರ ಬೈವಗ ಅಥವಾ ಒಂದು ಗುಂಇನ ಜನರ ಬಗ್ಗೆ ಹೇಳುವಾಗ ಪ್ರಯೋಗ ಮಾಡುವ ಹವ್ಯಕ ಮಾತಿದು
ಉದಾಹರಣೆಗೆ ಹೇಳುದಾದರೆ ದು ಕುಟುಂಬ ಇದ್ದು ಹೇಳಿ ಮಡಿಕೊಂಬ .ಅದರಲ್ಲಿ ಎಲ್ಲರೂ ಕೋಪಿಷ್ಟಂಗ ,ಸಂಸ್ಕರ ಇಲ್ಲದ್ದೋವು.ಅದರಲ್ಲಿ ಒಬ್ಬ ರಜ ವಾಸಿ ಹೇಳಿ ಆರಿಗಾದರೂ ಅನಿಸಿ ಅವ ತೊಂದರೆ ಇಲ್ಲೆ ಅಲ್ಲದಾ ? ರಜ್ಜ ಮನುಷ್ಯತ್ವ ಇದ್ದು ಅವನ ಅಣ್ಣ ತಮ್ಮಂದಿರ ಹಾಂಗ ಅಲ್ಲ ಹೇಳಿರೆ ಅವಂದೆ ಅದೇ ಸ್ವಭಾವ ಹೇಳಿ ಗೊಂತಿಪ್ಪೋರು ಎಂಥದೂ ಇಲ್ಲೆ ಬೆಲ್ಲಲ್ಲಿ ಕಡೆ ಕೊಡಿ ಇದ್ದಾ ? ಹಾಂಗೆ ಅವೆಲ್ಲ ಒಂದೇ ಹೇಳಿ ಹೇಳುತ್ತವು
ಕಬ್ಬಿಂದ ಬೆಲ್ಲ ತಯಾರು ಮಾಡುದು .ಕಬ್ಬಿಲಿ ಕಡೆ ಕೊಡಿ ತುಂಡು ಗಳಲ್ಲಿ ರುಚಿಲಿ ವ್ಯತ್ಯಾಸ ಇದ್ದು ಆದರೆ ಅದರಿದಲೇ  ತಯಾರಾದ
ಬೆ ಲ್ಲದ ಯಾವ ಕಡೆಲಿ ತಿಂದು ನೋಡಿರೂ ಒಂದೇ ರೀತಿಯ ರುಚಿ ಇರ್ತು ಅದರಲ್ಲಿ ಕಡೆ ತುಂಡು ಹೇಳಿ ಹೆಚ್ಚು ಸೀವು ಕೊಡಿ ತುಂಡು ಹೇಳಿ ಕಮ್ಮಿ ಸೀವು ಇರ್ತಿಲ್ಲೆ ( ಬೇಕಾರೆ ಈ ನೆಪಲ್ಲಿ ಆದರೂ ಅಚ್ಚು ಬೆಲ್ಲ ತಿಂದು ರುಚಿಯ ಸವಿಯಿರಿ ಆನು ಅದೇ ಮಾಡುತ್ತಾ ಇದ್ದೆ ಈಗ)  ಹಾಂಗೆ ದುಷ್ಟರ ಗುಂಪಿನ ಎಲ್ಲರೂ ಒಂದೇ ಅವರಲ್ಲಿ ಎಂತ ವ್ಯತ್ಯಾಸ ದೆ ಇಲ್ಲೆ ಹೇಳುವ ಸಂದರ್ಭಲ್ಲಿ ಬೆಲ್ಲಲ್ಲಿ ಕಡೆ ಕೊಡಿ ಇಲ್ಲೆ ಹೇಳುವ ನುಡಿಗಟ್ಟಿನ ನಮ್ಮ ಹಿರಿಯರು ಬಳಕೆ ಮಾಡಿಕೊಂಡು ಬೈಂದವು ಅದು ಎಷ್ಟು ಚಂದ ಇದ್ದು ಅಲ್ಲದಾ ? ಓದಿ ನಿಂಗಳ ಅಭಿಪ್ರಾಯ ತಿಳಿಸಿ ಇನ್ನೊಂದರಿ ಕಾಂಬ ಧನ್ಯವಾದಂಗ
ಡಾ ಲಕ್ಷ್ಮೀ ಜಿ ಪ್ರಸಾದ ಕನ್ನಡ ಉಪನ್ಯಾಸಕಿ ಮತ್ತು ತುಳು ಸಂಶೋಧಕಿ ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ ಬೆಂಗಳೂರು ಗ್ರಾಮಾಂತರ ಜಿಲ್ಲೆ

No comments:

Post a Comment