Sunday 10 June 2018

ಗಿಳಿ ಬಾಗಿಲು( ಹವ್ಯಕ ಬ್ಲಾಗ್) ಹವ್ಯಕ ನುಡಿಗಟ್ಟು - 50 ತೌಡು‌ ಮುಕ್ಕೇಲ ಹೋಗಿ ಉಮಿ‌ ಮುಕ್ಕೇಲ ಬತ್ತ - ಡಾ.ಲಕ್ಷ್ಮೀ ಜಿ ಪ್ರಸಾದ

ತೌಡು‌ ಮುಕ್ಕೇಲ ಹೋಗಿ ಉಮಿ‌ ಮುಕ್ಕೇಲ ಬತ್ತ - ಡಾ.ಲಕ್ಷ್ಮೀ ಜಿ ಪ್ರಸಾದ

"ತೌಡು‌ ಮುಕ್ಕೇಲ ಹೋಗಿ ಉಮಿ‌ ಮುಕ್ಕೇಲ ಬತ್ತ "
- ಇದೊಂದು ಹವ್ಯಕ ಭಾಷೆಲಿ ಪ್ರಚಲಿತವಾಗಿಪ್ಪ ನುಡಿಗಟ್ಟು ,ಇದು ತುಳು ಮತ್ತೆ ಕನ್ನಡ  ಭಾಷೆಲಿಯೂ ಬಳಕೆಲಿ ಇದ್ದು.
ಮೊದಲಿನ ಕಾಲಲ್ಲಿ ಒಬ್ಬ ರಾಜ ಇತ್ತಿದ ಅಡ.ಅವನ ಊರಿಲಿ ತುಂಬಾ ಬರಗಾಲ ಬಂತು.ಅಂಬಗ ಅವ ಎಲ್ಲೊರಿಂಗೂ ಒಂದೊಂದು ಸೇರು ತೌಡು ಕೊಟ್ಟ ಅಡ.ಅಕ್ಕಿಯ ಹೆರಣ ಚೋಲಿಯ ಹೊಡಿಗೆ ತೌಡು ಹೇಳುತ್ತವು.ದನಗೊಕ್ಕೆ ಇದರ ಹಿಂಡಿ ಒಟ್ಟಿಂಗೆ ಕೊಡುತ್ತವು.ನಂತರ ಆ ರಾಜ ಒಂದು ಸೇರು ತೌಡಿನ ಬದಲು ಒಂದು ಸೇರು ಅಕ್ಕಿಯ ಹಿಂದೆ ಕೊಡಕ್ಕು ಹೇಳಿ‌ ಕಾನೂನು ಮಾಡಿದ ಅಡ‌.ಈ ರಾಜನ ದುರಾಡಳಿತಕ್ಕೆ ಜನ ರೋಸಿ ಹೋಗಿ ಬೇರೊಬ್ಬ ರಾಜ ಬಪ್ಪಲೆ ಕಾಯ್ತಾ ಇರ್ತವು.ಒಂದು ದಿನ ಇನ್ನೊಬ್ಬ ರಾಜ ಬಂದು ಇವನ ಸೋಲಿಸಿ ಆ ಊರಿನ ರಾಜ ಆದ ಅಡ.ಜನಂಗ ರಜ್ಜ ನೆಮ್ಮದಿಯ ಉಸುಲು ಬಿಟ್ಟವು.ಆದರೆ ಅದು ಹೆಚ್ಚು ದಿನ ಇತ್ತಿಲ್ಲೆ‌
ಈ ರಾಜ ಒಂದು ಸೇರು ಉಮಿ ಕೊಟ್ಟು ಒಂದು ಸೇರು ಅಕ್ಕಿ ವಸೂಲು ಮಾಡಿದ ಅಡ‌.
ಈ ಜಾನಪದ ಕಥೆಯ ಅಧರಿಸಿ ತೌಡು‌ ಮುಕ್ಕೇಲ ಹೋಗಿ ಉಮಿ ಮುಕ್ಕೇಲ ಬಂದ / ಬತ್ತ ಹೇಳುವ ಮಾತು ಹುಟ್ಟಿತ್ತು.
ಒಬ್ಬ  ಕೆಟ್ಟ ಅಧಿಕಾರಿ ಹೋಗಿ ಅವಂದಲೂ ಹೆಚ್ಚು ಧೂರ್ತ ಅಧಿಕಾರಿ ಬತ್ತ ಹೇಳುವ ಸಂದರ್ಭಲ್ಲಿ ಈ ಮಾತಿನ ಬಳಕೆ ಅವುತ್ತು.ಇದಕ್ಕೆ ಸಂವಾದಿಯಾಗಿ ಒಬ್ಬಂದೊಬ್ಬ ಅಸಲು ಹೇಳುವ ಮಾತುದೆ ಬಳಕೆಲಿ ಇದ್ದು
© ಡಾ.ಲಕ್ಷ್ಮೀ ಜಿ ಪ್ರಸಾದ

No comments:

Post a Comment