Friday 8 August 2014

ಗಿಳಿ ಬಾಗಿಲು (ಹವ್ಯಕ ಬ್ಲಾಗ್ )- ಕಣ್ಣು ನೆತ್ತಿಗೆ ಹಾರಿದ್ದು

ಒಂದು ಡೆಡ್ ಲ್ಯಾಂಗ್ವೇಜ್ ನ ( ?! )ಕಲ್ತು   ಲೈವ್ ಬರಹಗಾರ್ತಿಯಾದೆ.ಅಪ್ಪು ಎನ್ನ ಬರವಣಿಗೆಗೆ ಮೂಲ ಪ್ರೇರಣೆ ಸಂಸ್ಕ್ರತದ್ದೆ ,ಎಂತಕೆ ಹೇಳಿ ಇನ್ನೊಂದು ದಿನ ಹೇಳುತ್ತೆ .ಸಂಸ್ಕೃತ ಮೃತ ಭಾಷೆ ಅಲ್ಲ ,ಆದರೆ ಅಭಿಮಾನ ಹೀನರು .ಪೂರ್ವಾಗ್ರಹ ಪೀಡಿತರು ಬದುಕಿಯೂ ಮೃತ ಆವುತ್ತವು ಅಷ್ಟೇ !

ಮೊನ್ನೆಯಷ್ಟೇ ಸಂಸ್ಕೃತ ದಿನ ಕಳುತ್ತು ಅಂಬಗ ಎನಗೆನೆನಪಾದ ಒಂದು ಮಾತು ಮತ್ತು ಅದಕ್ಕೆ ಸಂಬಂಧಿಸಿದ ಅನುಭವಕ್ಕೆ ಬಂದ  ಒಂದು ನುಡಿಗಟ್ಟು "ಕಣ್ಣು ನೆತ್ತಿಗೆ ಹಾರಿದ್ದು"
ಕಣ್ಣು ನೆತ್ತಿಗೆ ಹಾರಿದ್ದು ಹೇಳುವ ಮಾತಿನ ಆನು ಸುಮಾರು ಸರ್ತಿ ಅವು ಇವು ಹೇಳುದರ ಕೇಳಿತ್ತಿದೆ.ಆದರೆ ನಿಜಕ್ಕೂ ಕಣ್ಣು ನೆತ್ತಿಗೆ ಹಾರುದುಹೇಳಿರೆ ಎಂತ ಹೇಳಿ ಎನಗೆ ನೋಡಿ ಗೊಂತಿತ್ತಿಲ್ಲೆ.
ಕಳುದ ವರ್ಷ ಒಂದು ವಿದ್ಯಾ ಸಂಸ್ಥೆಗೆ ವಿಶೇಷ ಉಪನ್ಯಾಸ ಕೊಡುಲೆ ಹೋಗಿತ್ತಿದೆ. ಕಾರ್ಯಕ್ರಮಕ್ಕೆ ಮೊದಲು ಬಂದ ಅತಿಥಿಗೊಕ್ಕೆ ಸಣ್ಣ ಉಪಹಾರ ವ್ಯವಸ್ಥೆ ಮಾಡಿತ್ತಿದವು .ಅಲ್ಲಿ ಒಬ್ಬ ಊಟೋಪಚಾರ ವ್ಯವಸ್ಥೆಯ ವಹಿಸಿಕೊಂಡಿದ್ದ ವ್ಯಕ್ತಿಯ ನೋಡುವಾಗ ಅವಂಗೆ ಏನೋ ಗೊಂದಲ ಇದ್ದ ಹಾಂಗೆ ಅನಿಸಿಕೊಂಡು ಇತ್ತು .ಅವನ ಎಲ್ಲಿಯೋ ನೋಡಿದ್ದೆ ಹೇಳಿ ಅನುಸ್ತಾ ಇತ್ತು ಎನಗೆ.ಅವ ಹತ್ತರೆ ಬಂದು ಮುಖ್ಯಸ್ಥರಿಂಗೆ ನಮಸ್ಕಾರ ಮಾಡಿದ.

ಅಷ್ಟಪ್ಪಗ ಎನ್ನ "ಇವರು ಡಾ.ಲಕ್ಷ್ಮೀ ಜಿ ಪ್ರಸಾದ್ ಗೊತ್ತಲ್ವ ಬರಹಗಾರಾರು ,ಸಂಶೋಧಕರು.ಇವತ್ತಿನ ಅಥಿತಿಗಳು ಹೇಳಿ ಪರಿಚಯಿಸಿಕ್ಕಿ ಅವನ ಆ ಕಾಲೇಜ್ ಲಿ ಅವ ಎಲೆಕ್ಟ್ರಾನಿಕ್ಸ್ ಲೆಕ್ಚರರ್ ಆಗಿದ್ದ ಹೇಳಿ ಪರಿಚಯ ಮಾಡಿ ಕೊಟ್ಟವು ಅಲ್ಲಿ .ನಂತರ ಆನು ಕಾರ್ಯಕ್ರಮ ಆಗಿ ಹೆರಡುವಾಗ ಅವ ಬಂದು ಎನ್ನತ್ತರೆ ಬಂದು ನೀವು ದಕ್ಷಿಣ ಕನ್ನಡದವರ ? ಹವ್ಯಕರ ?ಹೇಳಿ ಕೇಳಿದ.ಅಪ್ಪ್ಪು ಹೇಳಿ ಹೇಳಿದೆ .ನಿಂಗಳ ಎಲ್ಲಿಯೋ ನೋಡಿದ್ದೆ ಹೇಳಿ ಅನ್ಸುತ್ತು ಹೇಳಿದ.ಈ ಮಾತಿನ ಎನಗೆ ತುಂಬಾ ಜನಂಗ ಹೇಳುತ್ತವು .ಪತ್ರಿಕೆಗಳಲ್ಲಿ ಲೇಖನ ಬಪ್ಪಗ ಕೆಲವು ಸರ್ತಿ ಎನ್ನ ಫೋಟೋವೂ ಬತ್ತನ್ನೇ!ಅದರ ನೋಡಿದೊರಿಂಗೆ ಎನ್ನ ಕಾಂಬಗ ಎಲ್ಲೋ ನೋಡಿದ ಹಾಂಗೆ ಅನ್ಸುದು ಸಹಜ .ಹಾಂಗೆ ಇವಂಗೆ ಎನ್ನ ನೋಡಿದ ಹಾಂಗೆ ಅನ್ಸುದು ಆಡಿಕ್ಕು ಹೇಳಿ ಭಾವಿಸಿದೆ ಆನು.

ಮತ್ತೆ ನಿಂಗಳ ಸ್ವಂತ ಊರು ಯಾವುದು ಕೇಳಿದ .ಹೇಳಿದೆ ಆನು .ಅಷ್ಟಪ್ಪಗ ಅವಂಗೆ ಆನು ಆರು ಹೇಳಿ ಅವಂಗೆ ಗೊಂತಾತು.ಅವ ಆರು ಹೇಳಿ ಪರಿಚಯ ಹೇಳಿದ ಎನಗೂ ಅವನ ಈ ಹಿಂದೆ ಎಲ್ಲಿ ನೋಡಿದ್ದು ಹೇಳಿ ನೆನಪಾತು.

ಎಂಗಳ ಮನೆ (ಪ್ರಸಾದ್ ನ ಮನೆ) .ಹತ್ರ ಅವನ ಮನೆ ಇತ್ತು .ಮದುವೆ ಆದ ಹೊಸತರಲ್ಲಿ ಎಂಗಳ ಒಂದು ಊಟಕ್ಕೆ/ ಸಮ್ಮಾನಕ್ಕೆ ದೆನಿಗೇಳಿತ್ತಿದವು ಇವನ ಅಬ್ಬೆ ಅಪ್ಪ .ಹಾಂಗೆ ಅಲ್ಲಿಗೆ ಆನು ಹೋದಿಪ್ಪಗ ಇವನತ್ರೆ ಮಾತಾಡಿದ್ದೆ .ಆ ಸಮಯಲ್ಲಿ ಆನು ಮದುವೆಯ ನಂತರ ಕಲಿತ್ತಾ ಇಪ್ಪದು ಒಂದು ಊರಿಂಗೆ ಒಂದು ಮಾತನಾಡಿಕೊಂಬ ಸುದ್ದಿ ಆಗಿತ್ತು .ಅಂಬಗ ಇವ ಜಸ್ಟ್ ಇಂಜಿನೀರಿಂಗ್ ಗೆ ಸೇರಿದ್ದಷ್ಟೇ .ಇನ್ನು ಕ್ಲಾಸ್ ಸುರು ಆಗಿತ್ತಿಲ್ಲೆ .ಎನ್ನ ಡಿಗ್ರಿ ಮುಗುದು ಆನು ಸಂಸ್ಕೃತ ಎಂ. ಎ ಗೆ ಸೇರುವ ಅಂದಾಜಿಲಿ ಇತ್ತಿದೆ.(ಆನು ಬಿಎಸ್ಸಿ ಮಾಡಿದ್ದು ಆದರೆ ಎನಗೆ ಲ್ಯಾಬ್ ಅಲರ್ಜಿ ಸಮಸ್ಯೆ ಕಾಣಿಸಿಕೊಂಡ ಕಾರಣ ಎನಗೆ ಕೆಮಿಸ್ಟ್ರಿ ಎಂ.ಎಸ್ಸಿ ಮಾಡುಲೆ ಸಾಧ್ಯ ಇತ್ತಿಲ್ಲೆ.ಫಿಸಿಕ್ಸ್ ಮತ್ತೆ ಮಾಥ್ಸ್ ಎನಗೆ ಇಂಟರೆಸ್ಟ್ ಇತ್ತಿಲ್ಲೆ.ಸಂಸ್ಕೃತಲ್ಲಿ ಆಸಕ್ತಿ ಇತ್ತು .ಹಾಂಗಾಗಿ ಆನು ಸಂಸ್ಕೃತ ಎಂ.ಎ ಮಾಡಿದ್ದು ಆನು)
ಆ ಸಮಯಲ್ಲಿ ಇವನ ಅಬ್ಬೆ ಎನ್ನತ್ರೆ ಮುಂದೆ ಓದುಲೆ ಇದ್ದ ಕೇಳಿದವು .ಇದ್ದು ಹೇಳಿದೆ ಅಂಬಗ ಎಂತರ ಓದುದು ಹೇಳಿ ಅಲ್ಲಿ ಕೇಳಿದವು .ಆನು ಕಟೀಲಿಲಿ ಸಂಸ್ಕೃತ ಎಂ ಎ ಗೆ ಸೇರುದು ಹೇಳಿದೆ

ಅಂಬಗ ಅಲ್ಲಿಯೇ ಇದ್ದ ಇವ ಎನ್ನತ್ರೆ ಕೇಳಿತ್ತಿದ.ಒಂದು ಡೆಡ್ ಲ್ಯಾಂಗ್ವೇಜ್ ನ ಓದಿ ಎಂಥ ಪ್ರಯೋಜನ ಹೇಳಿ .ಅಷ್ಟಪ್ಪಗ ಆನು ನೀನು ಇಂಜಿನೀರಿಂಗ್ ಓದಿರೆ ಎಂತ ಪ್ರಯೋಜನ ಕೇಳಿದೆ .ಅಂಬಗ ಅವ ಒಳ್ಳೆ ಕೆಲಸ ಸಿಕ್ಕುತ್ತು ಹೇಳಿದ ,ಆನು ಹೇಳಿದೆ ಅಂಬಗ ಪರಿಶ್ರಮ ಪ್ರತಿಭೆ ಪ್ರಾಮಾಣಿಕತೆ ಇದ್ದರೆ ಎಂತ ಓದಿದರೂ ಕೆಲಸ ಸಿಕ್ಕುತ್ತು ಹೇಳಿ .ಎಂ ಎ ಓದಿದೋರು ನಾಯಿ ಸಂತೆ ಇದ್ದವು ಹೇಳುವ ಮಾತಿನ ಎನಗೆ ಸುಮಾರು ಜನಂಗ ಹೇಳಿತ್ತಿದವು.ದೊಡ್ಡೋರ ಇಂಥ ಮಾತಿನ ಕೇಳಿ ಎನ್ನತ್ತರೆ ಇವಂದೆ ಎನಗೆ ಹೇಳಿತ್ತಿದ .ಈ ಬಗ್ಗೆ ಎಂಗೊಗೆ ತುಂಬಾ ಚರ್ಚೆ ಆಗಿತ್ತು ಕೂಡಾ!
ಆದರೆ ಎನಗೆ ಅವನ ಗುರ್ತ ಸಿಕ್ಕಿತ್ತಿಲ್ಲೆ ಸುರುವಿಂಗೆ

ಆನು ಆರು ಹೇಳಿ ಗೊಂತಾಗಿ ಅಪ್ಪಗಲೇ ಅವನ ಮೋರೆಲಿ ತುಂಬಾ ಆಶ್ಚರ್ಯ ಕಂಡತ್ತು.ಮತ್ತೆ ಪುನಃ ಕೇಳಿದ ಅಂಬಗ

ಪತ್ರಿಕೆಗಳಲ್ಲಿ ಲೇಖನ ಬರವ ಲಕ್ಷ್ಮೀ ಜಿ ಪ್ರಸಾದ ನಿಂಗಳೆಯಾ ಹೇಳಿ ಕೇಳಿದ.ಅಪ್ಪು ಹೇಳಿ ಹೇಳಿದೆ.ಅಂಬಗ ಅಪ್ಪ ?! ಹೇಳಿ ಆಶ್ಚರ್ಯಲ್ಲಿ ಕೇಳಿದ "ಎಂ ಎ ಓದಿದೋರು ನಾಯಿ ಸಂತೆ ಇದ್ದು ಹೇಳಿದೋನು ಕೆಲಸ ಮಾಡುವ ಕಾಲೇಜಿಂಗೆ ಇದ್ದಕಿದ್ದ ಹಾಂಗೆ ಅತಿಥಿಯಾಗಿ ಆಹ್ವಾನಿಸಲ್ಪಟ್ಟು ಸಂಸ್ಥೆ ಯ ಹಿರಿಯ ಅಧಿಕಾರಿಗಳಿಂದ ಪರಿಚಯಿಸಲ್ಪಟ್ಟರೆ ನಂಬುಲೆ ಅಸಾಧ್ಯವಾಗಿ ಆಶ್ಚರ್ಯ ಅಪ್ಪದು ಸಹಜ ಕೂಡ !.ಅವನ ಕಣ್ಣು ಅರಳಿ ದೊಡ್ಡ ಆಗಿಹೆರ ಬಪ್ಪ ಹಾಂಗೆ ಆತು .ಅವಂಗೆ ಅದರ ಜೀರ್ಣಿಸಿಕೊಂಬಲೆ ಅಸಾಧ್ಯವಾಗಿತ್ತು! ಅಂಬಗ ಎನಗೆ ಕಣ್ಣುಗೆ ಹಾರುದು ಹೇಳುದು ಎಂತರ ಹೇಳಿ ಎನಗೆ ಗೊಂತಾತು.
ನಂತರ ಅವ "ಲಕ್ಷ್ಮ್ಯಕ್ಕ sorry ಅಂದು ಎನಗೆ ಅಷ್ಟು ತಿಳುವಳಿಕೆ ಇತ್ತಿಲ್ಲೇ .ಎಲ್ಲರು ದೊಡ್ಡೋರು ಹಾಂಗೆ ಮಾತಾಡಿಗೊಂಡು ಇತ್ತಿದವು ನಿಂಗ ಮದುವೆ ಆದ ಮೇಲೆ ಕಲಿವ ಬಗ್ಗೆ ಹಾಂಗೆ ಆನುದೇ ಬುದ್ದಿ ಇಲ್ಲದ್ದೆ ಮಾತಾಡಿದ್ದೆ ಎಂಗಳ ಮನೆಗೆ ಸಮ್ಮಾನಕ್ಕೆ ದೆನಿಗಗೇಳಿಕ್ಕಿ ಹಾಂಗೆ ಮಾತಾಡಿದ್ದು ತಪ್ಪು ಕ್ಷಮಿಸಿ" ಹೇಳಿದ.ಅದು ಅವನ ದೊಡ್ಡ ತನ ಅದು ಇರಲಿ
ಎನಗೆ ಮಾತ್ರ ಅಂಬಗ ಕಣ್ಣು ನೆತ್ತಿಗೆ ಹಾರಿದ್ದು /ಹೊಯಿದು ಹೇಳುವ ನುಡಿಗಟ್ಟು ನೆನಪಾಗಿ ಅದರ ಅರ್ಥ ಕೂಡಾ ಸರಿಯಾಗಿ ತಲೆಗೆ ಹೋತು .
ಆರಿಂಗಾದರೂ ನಂಬುಲೆ ಅಸಾಧ್ಯವಾದರೂ ವಾಸ್ತವ ಸತ್ಯ ಎದುರಾಗಿ ಅಪ್ಪಗ ಅಪ್ಪ ಆಶ್ಚರ್ಯವ ವಿವರ್ಸುವ ಸಂದರ್ಭಲ್ಲಿ ಅವನ /ಅದರ ಕಣ್ಣು ನೆತ್ತಿಗೆ ಹಾರಿದ್ದು ಹೇಳುವ ಮಾತಿನ ಬಳಕೆ ಮಾಡುತ್ತವು
ಅಂತೂ ಇಂತೂ ಅಭಿಮಾನ ಶೂನ್ಯ ಅವಿವೇಕಿಗಳ ಪಾಲಿಗೆ ಮೃತ ಭಾಷೆ ಆಗಿಪ್ಪ ಜೀವಂತ ಭಾಷೆ  ಸಂಸ್ಕೃತವ ಕಲ್ತು ಆನಂತೂ ಜೀವಂತ ಬರಹಗಾರ್ತಿ ಆಯ್ದೆಪ್ಪ /
ನಮ್ಮ ಸಮಾಜಲ್ಲಿ ತಪ್ಪು ಮಾಡಿದೋರ ಬಗ್ಗೆ ಉದಾರತೆ    ಇದ್ದಪ್ಪ  ಎಷ್ಟು ಉದಾರತೆ ಹೇಳಿರೆ ಅದರ ಹೇಳಿದರೆ ದೊಡ್ಡ ತಪ್ಪು ಹೇಳುವಷ್ಟು  !ಎಂತಕೆ ಹೇಳಿ ಗೊಂತಿಲ್ಲೆ ಎನಗೆ .
ಬಹುಶ ಆನು ಹೆಂಗಸು ಅನ್ನೇ  ತಮ್ಮ ಮೇಲೆ ಅಪ್ಪ ಅನ್ಯಾಯವ ಎಲ್ಲೂ ಹೇಳದ್ದೆ ಬಾಯಿ ಮುಚ್ಚಿ ಕ್ಷಮಯಾ ಧರಿತ್ರಿ ಆಗಿದ್ದರೇ  ಹೆಣ್ಣು ದೇವತೆ ,ಇಲ್ಲೆ ಅದರ ಪ್ರಶ್ನಿಸಿತ್ತೋ ಅನ್ಯಾಯವ ಹೇಳಿತ್ತೋ ಅಂಬಗ ಅದು ಕೂಡಲೇ ರಾಕ್ಷಸಿ ಆಗಿ ಬಿಡುತ್ತು ನಮ್ಮ ಪುರುಷ ಪ್ರಧಾನ ಸಮಾಜಲ್ಲಿ !.

3 comments:

  1. ಹೇಳುತ್ತವು) | ಆ ಸಮಯಲ್ಲಿ ಸಂಸ್ಕೃತ ವಿಷಯಲ್ಲಿ ನಮ್ಮ ದೇಶಲ್ಲಿಯೇ ಅಸಡ್ಡೆ ಇದ್ದದು ಅಪ್ಪು | ಎನ್ನ ಅಪ್ಪ ನೀರ್ಚಾಲಿಲಿ ಸಂಸ್ಕೃತ ಕಲ್ತದು -- ಅವು ಹೇಳಿದ್ದವು -- ಅವರ ಕಲಿವಿಕೆ ಸಮಯಲ್ಲಿ ಭಾರತಕ್ಕೆ ಸ್ವತಂತ್ರ ಬಂತು -- ಎಲ್ಲರೂ ಖುಷಿ ಪಟ್ಟವು -- ಇನ್ನಾದರೂ ಸಂಸ್ಕೃತಕ್ಕೆ ಹೆಚ್ಚಿನ ಬೆಲೆ ಬಕ್ಕು ಹೇಳಿ | ಆದರೆ ನೆಹರೂ ಸರಕಾರ ಮಾಡಿದ್ದೆ ಬೇರೆ- ಆ ಶಾಲಗೆ ಇದ್ದ ಸರಕಾರೀ ನೆರವನ್ನೂ ರದ್ದು ಮಾಡಿದ್ದು | ಸ್ವಾತಂತ್ರಾಣಾಂತರ ಸಂಸ್ಕೃತ ವ -- " ಡೆಡ್ ಲ್ಯಾಂಗ್ವೇಜ್" ಮಾದಿದ್ದೇ ನಮ್ಮ ಕಾಂಗ್ರೆಸ್ಸ್ ಸರಕಾರ | ಆದರೆ ಅದು (ಸಂಸ್ಕೃತ) " ಅಮರ " - ನಿಜ ಸ್ಥಿತಿಲಿ - ಸಂಸ್ಕೃತ ಎಂದೂ ಅಳಿದುಹೋಗ, ಆದರೆ ಕೆಲವು ದೇಶದ್ರೋಹಿಗೊ ಸಂಸ್ಕೃತ ದ ಮಟ್ಟಿಂಗೆ ಸಂಪೂರ್ಣ ಸತ್ತು ಹೋಯಿದವು ಅಷ್ಟೇ | -- ಅದಲ್ಲದ್ದೆ ಸಂಸ್ಕೃತ ವಿಜ್ಞಾನವೂ ಸೇರಿ ಈಗ ಇಪ್ಪ ಪ್ರಪಂಚದ ಎಲ್ಲಾ ಜ್ಞಾದ ಮೂಲ ಹೇಳಿ ಎಷ್ಟೋ ಜನಕ್ಕೆ ಅರಿವಿದ್ದು | ನೋಂಗೊ ಸಂಸ್ಕೃತ ಎಂ. ಎ ಮಾಡಿದ ಕಾರಣ ನಿಂಗೊಗೆ ಅದು ತಿಳಿದಿಕ್ಕು |

    ReplyDelete
  2. ಅಪ್ಪು .ಧನ್ಯವಾದಂಗ

    ReplyDelete
  3. ಅಪ್ಪು .ಧನ್ಯವಾದಂಗ

    ReplyDelete