Monday 9 October 2017

ಗಿಳಿಬಾಗಿಲು - ಹವ್ಯಕ ನುಡಿಗಟ್ಟು 41 ವಾಸನೆ ಬರಲೇಳಿ ಸಗಣನೀರು ಹಾಕಿದ್ದು ಶುದ್ದಾತು©ಡಾ.ಲಕ್ಷ್ಮೀ ಜಿ ಪ್ರಸಾದ

ವಾಸನೆ ಬರಲೇಳಿ ಸಗಣನೀರು ಹಾಕಿದ್ದು ಶುದ್ದಾತು
ನಿನ್ನೆ ಅಮ್ಮನತ್ತರೆ ಮಾತಾಡುವಾಗ ಒಂದು ವಿಷಯ ಬಂತು.ಈ ಹಿಂದೆ ಎಂಗೊಗೆ ಒಬ್ರು ಉಪದ್ರ ಆಯಕ್ಕು ಹೇಳಿ ಏನೋ ಮಾಡಿತ್ತಿದವು.ಆದರೆ ಎಂಗೊಗೆ ಅದರಂದ ಉಪಕಾರ ಆಯಿದು ಇದರ ಮಾತಿನ ನಡುವೆ ಅಮ್ಮನ ಹತ್ತರೆ ಅನು ಹೇಳಿದೆ.ಅಂಬಗ ಅಮ್ಮ " ನಿನ್ನ ಅಪ್ಪ ಯಾವಾಗಲೂ ಹೇಳುಗು ವಾಸನೆ ಬಪ್ಪಲೆ ಹೇಳಿ ಸಗಣ ನೀರು ಹಾಕಿದರೆ ಶುಧ್ದ ಆತು ಹೇಳಿ.ಇದು ಹಾಂಗೆ ಆತು ಹೇಳಿ ಅಮ್ಮ ಹೇಳಿದ. ಅದರ ಕೇಳಿ ಎನ್ನ‌ಕೆಮಿ ಕುತ್ತ ಆತು.ಪುನಃ ಅಪ್ಪ ಎಂತ ಹೇಳಿಗೊಂಡಿತ್ತದು ಹೇಳಿ ಕೇಳಿದೆ. ಅಮ್ಮ ಈ ಮಾತಿನ ಹೇಳಿ ಅದರ ಅರ್ಥವ ವಿವರಿಸಿದ.
ನಮ್ಮ ಕಡೆ ಹವ್ಯಕ ಭಾಷೆಲಿ ಬಳಕೆಲಿ ಇಪ್ಪ ಒಂದು ನುಡಿಗಟ್ಟು ಇದು.ವಾಸನೆ ಬರಕ್ಕು ಹೇಳಿ ಆರೋ ಮನೆ ಜಾಲಿಂಗೆ ಸಗಣ ನೀರು ಹಾಕಿದವು.ಆದರೆ ಅದು ಯಜಮಾನಂಗೆ ಅದರಂದ ಉಪದ್ರ ಅಪ್ಪ ಬದಲು ಉಪಕಾರವೇ ಆತು.ಜಾಲು ಶುದ್ಧ ಆತು ಹೇಳಿದು ಈ ಮಾತಿನ ಅರ್ಥ.
ಆರಾದರೂ ನಮಗೆ ತೊಂದರೆ ಆಯಕ್ಕು  ಹೇಳಿ ಕುತಂತ್ರ ಮಾಡಿದರೂ ಅದುರಂದ  ಕೆಲವು ಸರ್ತಿ ನಮಗೆ ಉಪಕಾರವೇ ಆವುತ್ತು.ಅಂತಹ ಸಂದರ್ಭವ ವಿವರುಸುವಾಗ ಬಳಕೆಗೆ ಬಂದ ನುಡಿಗಟ್ಟು ಇದು.
© ಡಾ.ಲಕ್ಷ್ಮೀ ಜಿ ಪ್ರಸಾದ
ಕನ್ನಡ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ

No comments:

Post a Comment