Tuesday 7 November 2017

ಗಿಳಿ ಬಾಗಿಲು : ಹವ್ಯಕ ನುಡಿಗಟ್ಟು - 44 ಬೆಳಿ ನೆಗೆ©ಡಾ.ಲಕ್ಷ್ಮೀ ಜಿ ಪ್ರಸಾದ

ಬೆಳಿ ಹೇಳುದು ಶುದ್ಧದ ನಿಷ್ಕಳಂಕದ ಸಂಕೇತ
ನೆಗೆ ಹೇಳುದುದೆ ಹಾಸ್ಯ ತಮಾಷೆಯ ಅಭಿವ್ಯಕ್ತಿ. ಆದರೆ ಬೆಳಿ ನೆಗೆ ಹೇಳುದು ಶುದ್ಧ ಹೃದಯದ ಸೂಚಿಸುವ ಮಾತಲ್ಲ.ಇದು ನಯವಂಚಕರ ಬಗ್ಗೆ ಹೇಳುವ ಮಾತು. ನಮ್ಮತ್ತರೆ ಎದುರಂದ ಚಂದ ಮಾತಾಡಿಕೊಂಡೇ ಹಿಂದದ್ದ ಕತ್ತಿ ಹಾಕುವ ಜನಂಗ ನಮ್ಮ ಸುತ್ತ ಮುತ್ತ ಇರ್ತವು.ನಮ್ಮತ್ತರೆ ಎದುರಿಂದ ನಮ್ಮ ಭಾರೀ ಹಿತ ಬಯಸುವೋರ ಹಾಂಗೆ ನಮ್ಮ ಕಷ್ಟ ಸುಖವ ವಿಚಾರ್ಸುತ್ತವು.ಅಯ್ಯೋ ಅದಕ್ಕೆ ಹಾಂಗಾತನ್ನೆ  ಹಾಂಗಪ್ಪಲಾಗಿತ್ತೂ ಇತ್ಯಾದಿ ಬಣ್ಣದ ಮಾತುಗಳ ಹೇಳುತ್ತವು‌ಭಾರೀ ಒಳ್ಳೆಯೋರ ಹಾಂಗೆ ಪ್ರದರ್ಶನ ಮಾಡುತ್ತವು.ಒಣ ಉಪಚಾರ ಮಾಡುತ್ತವು.
ಹಿಂದಂದ ನಮಗೆ ಎಷ್ಟು ಎಡಿಗು ಅಷ್ಟು ದ್ರೋಹ ಮಾಡುತ್ತವು‌.ಅವು ನಮಗಮತ್ತರೆ ವ್ಯವಹರಿಸುವ ರೀತಿ ನೋಡಿದರೆ ಅವು ಹೀಂಗೆ ಹಿಂದಂದ ಮಾಡುಗಾ ಹೇಳಿ ಸಂಶಯ ಆವುತ್ತು. ಅಷ್ಟರ ಮಟ್ಟಿಂಗೆ ಅವರ ಒಳ್ಳೆಯತನದ ಪ್ರದರ್ಶನ ಇರ್ತು.ಹಾಂಗಾಗಿ ಇಂತೋರು ಹಿಂದಂದ ಹೀಂಗೆ ಮಾಡಿದ್ದವು ಹೇಳಿರೆ ಆರಿಂಗೂ ನಂಬಿಕೆ ಬಾರ.ಅವರ ಬಗ್ಗೆ ಹೇಳಿದ ನಮ್ಮ ಬಗ್ಗೆಯೇ ಸಂಶಯ ಕಾಣುಗು.ಅಂತೋರ ಬಗ್ಗೆ ಅವರದ್ದೆಲ್ಲ ಎದುರಂಗೆ ಬೆಳೆ ನೆಗೆ ಅಷ್ಟೇ, ಹಿಂದಂದ ಮಾಡುದೇ ಅನಾಚಾರ ಹೇಳುವ‌ಮಾತಿನ ಹವ್ಯಕ ಭಾಷೆಲಿ ಬಳಕೆ ಮಾಡುತ್ತವು.
ಕನ್ನಡದ ನಯವಂಚಕತನ ಹೇಳುದು ಇದಕ್ಕೆ ಸಂವಾದಿಯಾಗಿ ಇದ್ದು .ಕನ್ನಡಲ್ಲಿ ಬಿಳಿ ನಗು ಹೇಳುವುದು ಮುಗ್ಧತೆಯ ಸರಳತೆಯ ಪ್ರಾಮಾಣಿಕತೆಯ ಸಂಕೇತ.ಆದರೆ ಹವ್ಯಕ ಭಾಷೆಲಿ ಬೆಳೆ ನೆಗೆ ಹೇಳುದು ನಯವಂಚಕರ ಬಗ್ಗೆ ಹೇಳುವ ಮಾತು‌.ನಯ ವಂಚಕರ ಬಗ್ಗೆ ಬೆಳಿ ನೆಗೆ ಹೇಳುವ ಮಾತು ತುಂಬಾ ಅರ್ಥಪೂರ್ಣವಾಗಿ ಇದ್ದು 

No comments:

Post a Comment