Monday 13 November 2017

ಗಿಳಿ ಬಾಗಿಲು ಹವ್ಯಕ ನುಡಿಗಟ್ಟು 45 ಆನೆ ಹೋಪಗಳೂ ಗಂಟೆ ಕಟ್ಟಕ್ಕಾವುತ್ತು© ಡಾ.ಲಕ್ಷ್ಮೀ ಜಿ ಪ್ರಸಾದ


ಗಿಳಿ ಬಾಗಿಲು ಹವ್ಯಕ ನುಡಿಗಟ್ಟು 45 ಆನೆ ಹೋಪಗಳೂ ಗಂಟೆ ಕಟ್ಟಕ್ಕಾವುತ್ತು© ಡಾ.ಲಕ್ಷ್ಮೀ ಜಿ ಪ್ರಸಾದ
ನಾವು ಮಾಡುದು ಒಳ್ಳೆಯ ಮಹತ್ವದ ಕೆಲಸವೇ ಆಗಿದ್ದರೂ ಅದಕ್ಕೆ ಪ್ರಚಾರದ ಅವಶ್ಯಕತೆ ಇರುತ್ತು.ಇಲ್ಲದ್ದರೆ ಅದು ಬೇರೆಯೋರಿಂಗೆ ಮುಟ್ಟುತ್ತಿಲ್ಲೆ ಹೇಳುವ ಅರ್ಥ ಕೊಡುವ ಮಾತಿದು.
ಆನೆ ತುಂಬಾ ದೊಡ್ಡ ಪ್ರಾಣಿ ಆದರೂ ಅದು ಹೋಪಗ ಅದರ ಕೊರಳಿಂಗೆ ಗಂಟೆ ಕಟ್ಟಕ್ಕಾವುತ್ತು.ಇಲ್ಲದ್ದರೆ ಅದು ಬಂದದು ಗೊಂತಾವುತ್ತಿಲ್ಲೆ ಹೇಳುದು ಇದರ ಅರ್ಥ.
ಮೊನ್ನೆ ಶನಿವಾರ ಬೆಂಗಳೂರಿನ ಹವ್ಯಕ ಸಭೆಲಿ ಯಕ್ಷಗಾನ ತರಗತಿಗಳ ಉದ್ಘಾಟಣೆಯ ನಂತರ ಅಧ್ಯಕ್ಷೀಯ ಭಾಷಣ ಮಾಡುವಾಗ ಡಾ.ಗಿರಿಧರ ಕಜೆ ಈ ನುಡಿಗಟ್ಟಿನ ಮಾತಿನ ನಡುವೆ ಹೇಳಿದವು.ಹವ್ಯಕ ಸಭಾಂಗಣಲ್ಲಿ ಪ್ರತಿ ಆದಿತ್ಯವಾರ ಉದಿಯಪ್ಪಗ ಎಲ್ಲಾ ಜಾತಿ ವರ್ಗ ಧರ್ಮದ ಆಸಕ್ತಿ ಇಪ್ಪ ಜನಂಗೊಕ್ಕೆ ಉಚಿತವಾಗಿ ಹೇಳಿಕೊಡುವ ವಿಚಾರವ ಫೇಸ್ ಬುಕ್, ವಾಟ್ಸಪ್ ಗಳಲ್ಲಿ ಹರಡಕ್ಕು.ಇಲ್ಲದ್ದರೆ ಜನಂಗೊಕ್ಕೆ ಗೊಂತಾವುತ್ತಿಲ್ಲೆ ಹೇಳಿ ಹೇಳುತ್ತಾ ಆನೆ ಹೋಪಗಳುದೆ ಗಂಟೆ ಕಟ್ಟಕ್ಕಾವುತ್ತು ಹೇಳುವ ಮಾತಿನ ಬಳಕೆ ಮಾಡಿದವು‌
ಒಳ್ಳೆಯ  ವಿಚಾರ ಗೊಂತಾಯಕ್ಕಾದರೂ ಅದಕ್ಕೆ ಪ್ರಚಾರ ಬೇಕಾವುತ್ತು ಹೇಳುದರ ಹೇಳುವ  ಚಂದದ ನುಡಿಗಟ್ಟು ಇದು.ಇದರ ಸಣ್ಣಾದಿಪ್ಪಗಲೇ ಆನು ಕೇಳಿತ್ತಿದೆ.ಅದರ ಅರ್ಥ ಸ್ಪಷ್ಟವಾಗಿ ಗೊಂತಾದ್ದು ಮೊನ್ನೆಯೇ ಎನಗೆ.
ಇಂದು ಮತ್ತೆ ಇದು ನೆನಪಾತು.ಇಂದು ಕಾಲೇಜಿಂದ ಬಪ್ಪಗ ಬಸ್ಸಿಲಿ  ಮುನಿಯಮ್ಮ ಹೇಳುವ  ಅಜ್ಜಿಯ ಪರಿಚಯ ಆತು.ಗೆಂಡ ಮಕ್ಕ ಆರೂ ಇಲ್ಲೆ.ಇದ್ದ ರಜ್ಜ ಗೆದ್ದೆಯ ದಾಯಾದಿಗ ಒಳಹಾಕಿಕೊಂಡಿದವು.ಈ ಅಜ್ಜಿ ಎಡಿಗಾದಷ್ಟು ಸಮಯ ಕೂಲಿ ಕೆಲಸಕ್ಕೆ ಹೋಗಿ ಬದುಕಿತ್ತು.ಈಗ ಕೆಲಸ ಮಾಡುಲೆ ಎಡಿಯದ್ದೆ ಭಿಕ್ಷೆ ಬೇಡಿ ಬದುಕುವ ವಿಚಾರವ ಕೇಳಿ ಬೇಜರಾಗಿ ಎನ್ನ ಕೈಲಿದ್ದ ಐನೂರು ರುಪಾಯಿ ಕೊಟ್ಟು ಎನ್ನ ಮೊಬೈಲ್ ನಂಬರ್ ‌ಮತ್ತೆ ಕಾಲೇಜು ವಿಳಾಸ ಕೊಟ್ಟು ಅಲ್ಲಿಗೆ ಬಪ್ಪಲೆ ಹೇಳಿದೆ‌.ಬಂದರೆ ಅ ಅಜ್ಜಿಯ ಯಾವುದಾದರೂ ವೃದ್ಧಾಶ್ರಮಕ್ಕೆ ಸೇರಿಸಿ ಒಂದು ವ್ಯವಸ್ಥೆ ಮಾಡುವ ಉದ್ದೇಶ ಎನ್ನದು.
ಇದರ ಫೇಸ್ ಬುಕ್ ಲಿ ಹಾಕಕ್ಕಾ ಬೇಡದಾ ಹೇಳಿ ದ್ವಂದ್ವ ಆತೆನಗೆ.ಆ ಮೇಲೆ ಹಾಕಿದೆ‌ಎಂತಕೆ ಹೇಳಿರೆ ಪ್ರಾಯದೋರಿಂಗೆ ಆಶಕ್ತರಿಂಗೆ ಸಹಾಯ ಮಾಡುಲೆ ಪ್ರೇರಣೆ ಆಗಲಿ ಹೇಳಿ ಅನ್ಸಿತ್ತು.ಅಷ್ಟಪ್ಪಗ ಆನೆ ಹೋಪಗಳುದೆ ಗಂಟೆ ಕಟ್ಟಕ್ಕು ಹೇಳುವ ಮಾತು ನೆಂಪಾತು
© ಡಾ.ಲಕ್ಷ್ಮೀ ಜಿ ಪ್ರಸಾದ

No comments:

Post a Comment