Tuesday 7 November 2017

ಗಿಳಿ ಬಾಗಿಲು: ಹವ್ಯಕ ನುಡಿಗಟ್ಟು 45 ಬೆಂದಷ್ಟು ಸಮಯ ತಣಿವಲಿಲ್ಲೆ© ಡಾ.ಲಕ್ಷ್ಮೀ ಜಿ ಪ್ರಸಾದ

ಮೊನ್ನೆ ಅಮ್ಮನ ಹತ್ತರೆ ಮಾತಾಡುವಾಗ ನಮ್ಮ ಹವ್ಯಕ ಮಾಣಿಯಂಗೊಕ್ಕೆ ಕೂಸು ಹುಡುಕುವ ಅಬ್ಬೆ ಅಪ್ಪಂದಿರ ತೊಳಲಾಟದ ಬಗ್ಗೆ ಮಾತು ಬಂತು.ಎರಡು ದಶಕಗಳ ಹಿಂದೆ ನಿರಂತರ ಸ್ತ್ರೀ ಬ್ರೂಣ ಹತ್ಯೆ ಮಾಡಿದ್ದರ ಪರಿಣಾಮ ಈಗ ಕಾಣುತ್ತಾ ಇದ್ದು.ಕೂಸು ಬೇಡ ಹೇಳಿ ಕಾಂಬಲೆ ನಮ್ಮ ಸಮಾಜವೇ ಕಾರಣ ಆಗಿತ್ತು. ಈಗ ಒಂದು ಹದಿನೈದು ಇಪ್ಪತ್ತು ವರ್ಷಂಗಳ ಮೊದಲಿನವರೆಗೂ ಹವ್ಯಕರಲ್ಲಿ ಬದಿ( ವರದಕ್ಷಿಣೆ ) ಇತ್ತು.ಇಪ್ಪತ್ತು ಮೂವತ್ತು ವರ್ಷ ಮೊದಲು ಕೂಸು ರಜ್ಜ ಕಪ್ಪಾದರೆ ಕಲಿಯದ್ದೆ ಇದ್ದರೆ ಅಂತ ಕೂಸುಗೊಕ್ಕೆ ಮಾಣಿ ಸಿಕ್ಕುದು ಕಷ್ಟ ಇತ್ತು‌ಚಂದ ಇದ್ದ ಕೂಸುಗೊಕ್ಕೆ ಕೂಡ ಬದಿ‌ಕೊಡದ್ದೆ ಮದುವೆ ಆಗಿಯೊಂಡು ಇತ್ತಿಲ್ಲೆ. ಇದರ ಪರಿಣಾಮವಾಗಿ ಅಂಬಗ ತುಂಬಾ ಕೂಸುಗ ಮದುವೆ ಆಗದ್ದೆ ಹಾಂಗೆ ಒಳುದ್ದವು.
ಕೂಸು ಹುಟ್ಟುದು ಭಾರ ಹೇಳಿ ಅನ್ಸಿಯಪ್ಪಗ ಸ್ತ್ರೀ ಬ್ರೂಣ ಹತ್ಯೆ ಶುರು ಮಾಡಿದವು.ಇದರ ಪರಿಣಾಮಂದಾಗಿ ಈಗ ಹವ್ಯಕರಲ್ಲಿ  ಮಾಣಿ ಕೂಸು ಅನುಪಾತ ಕುಸುದು ಸಾವಿರ ಮಾಣಿಯಂಗೊಕ್ಕೆ ಎಂಟುನೂರ ಹದಿನಾಲ್ಕು ಕೂಸುಗ ಇಪ್ಪದು ಅಡ( ನಮ್ಮ ಸ್ವಾಮಿಗ ಭಾಷಣ ಮಾಡುವಾಗ ಹೇಳಿದ್ದರ ಕೇಳಿದ ನೆನಪು).ಇದರಂದಾಗಿ ಹಳ್ಳಿಲಿ ಇಪ್ಪ ಕೃಷಿಕ ,ಪೌರೋಹಿತ್ಯ ಮಾಡುವ,ಸಣ್ಣ ಪುಟ್ಟ ಕೆಲಸ ವ್ಯಾಪಾರ ಮಾಡುವ ಮಾಣಿಯಂಗೊಕ್ಕೆ ಕೂಸು ಸಿಕ್ಕುತ್ತಿಲ್ಲೆ.ಬೇಡಿಕೆ ಇಪ್ಪಗ ಪೇಟೆಲಿ ಆರಾಮಿಲಿ ಇಪ್ಪ ಒಳ್ಳೆಯ ಓದಿದ ಕೆಲಸ ಇಪ್ಪ ಮಾಣಿಯಂಗಳ ನೋಡುದು ಸಹಜ.
ಅಂತೂ ಇಂತೂ ಹಿಂದಣೋರು ಮಾಡಿದ ತಪ್ಪಿಂಗೆ ಈಗಣ ಮಾಣಿಯಂಗ ಅನುಭವಿಸಕ್ಕಾಗಿ ಬಂತು‌‌.
ಹವ್ಯಕ ರಲ್ಲಿ ಮಾಣಿ ಕೂಸು ಅನುಪಾತ ಕುಸಿವಲೆ ಸ್ತ್ರೀ ಬ್ರೂಣ ಹತ್ಯೆ ಕಾರಣ ಹೇಳಿ ಆನು ಇತ್ತೀಚೆಗೆ ಫೇಸ್ ಬುಕ್ ಲಿ ಬರದ್ದಕ್ಕೆ ಸುಮಾರು ಜನಂಗ ಆಕ್ಷೇಪ ಮಾಡಿದವು.ಹೇಳುವ ವಿಚಾರವು ಎಂಗಳ ಮಾತಿನ ನಡುವೆ ಬಂತ
ಹಾಂಗೆ ಎಂಗಳ‌ಪೈಕಿ ಮಾಣಿಗೆ ಒಬ್ಬಂಗೆ ಸರಿಯಾದ ಕೂಸು ಸಿಕ್ಕದ್ದ ಬಗ್ಗೆ ಆರೋ ಕುಹಕದ ಮಾತಾಡಿದ್ದರ ಅಮ್ಮ ಹೇಳಿದ.ಆನು ಅಂಬಗ ಅವಕ್ಕೆ ಮಗ ಇಲ್ಲೆಯಾ ಕೇಳಿದೆ.ಇದ್ದ ,ಈಗ ಎಂತದೋ ಓದುತ್ತಾ ಇದ್ದ.ಇನ್ನೊಂದು ನಾಲ್ಕು ಐದು ವರ್ಷಲ್ಲಿ ಅವಕ್ಕುದೆ ಇದೇ ಸಮಸ್ಯೆ ಬತ್ತು‌‌.ಬೆಂದಷ್ಟು ಹೊತ್ತು ತಣಿವಲಿಲ್ಲೆ ಹೇಳಿ ಹೇಳಿದ.
ಈ ನುಡಿಗಟ್ಟಟ್ಟಿನ ಆನು ಸಣ್ಣದಿಪ್ಪಗಳೇ ಕೇಳಿದ್ದೆ.ಮದುವೆ ಆಗಿ ಪೇಚಾಡುವಆರನ್ನಾದರೂ ಕಂಡು ನೆಗೆ ಮಾಡಿರೆ ,ಅಥವಾ ಅಡಿಗೆ ಸರಿ ಅಯಿದಿಲ್ಲೆ ಹೇಳಿ ಕೊಂಕು ತೆಗದರೆ ಎಂಗಳ ಅಜ್ಜಿ  ಅಂಬಗಳೇ ಬೆಂದಷ್ಟು ಸಮಯ ತಣಿವಲಿಲ್ಲೆ, ನೀನು ಎಂತ ಮಾಡ್ತೆ ನೋಡುವಾ ಹೇಳಿ ಹೇಳಿಗೊಂಡು ಇತ್ತಿದ.
ಅಡಿಗೆ ಬೇವಷ್ಟು ಹೊತ್ತು ತಣಿವಲೆ ಬೇಕಾವುತ್ತಿಲ್ಲೆ.ಆ ಕಾಲ ನಿನಗೂ ಹತ್ತರವೇ ಇದ್ದು ಹೇಳುದರ ಈ ಮಾತು ಸೂಚಿಸುತ್ತು.

1 comment:

  1. ಉತ್ತಮ ಲೇಖನ. ಅಂದು ಕೂಸುಗೊ ಕಷ್ಟ ಬಂದಿಪ್ಪಗ ಮಾತಾಡದ್ದೆ ಕೂದ ನಮ್ಮ ಸಮಾಜ, ಈಗ ಮಾಣಿಯಂಗೊಕ್ಕೆ ಅದೇ ಸಮಸ್ಯೆ ಬಂದಪ್ಪಗ ಕೂಸುಗಳನ್ನೇ ದೂಷಿಸಿ ಮಾತಾಡುವುದು ಮಾತ್ರ ವಿಪರ್ಯಾಸವೇ ಸರಿ.

    ReplyDelete